ಮೈಸೂರು,ಫೆ.13(ಎಂಟಿವೈ)- `ಮೀಸ ಲಾತಿ ಮೂಲಭೂತ ಹಕ್ಕಲ್ಲ’ ಎಂದು ಸುಪ್ರೀಂ ಕೋರ್ಟ್ ನೀಡಿರುವ ತೀರ್ಪಿನ ವ್ಯಾಖ್ಯಾನದ ಮರು ಪರಿಶೀಲನೆಗೆ ಕೇಂದ್ರ ಸರ್ಕಾರ ಕೂಡಲೇ ಅರ್ಜಿ ಸಲ್ಲಿಸ ಬೇಕೆಂದು ಮಾಜಿ ಸಂಸದ ಆರ್.ಧ್ರುವ ನಾರಾಯಣ್ ಒತ್ತಾಯಿಸಿದ್ದಾರೆ. ಮೈಸೂರಿನ ಕಾಂಗ್ರೆಸ್ ಭವನದಲ್ಲಿ ಗುರು ವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸುಪ್ರೀಂ ಕೋರ್ಟ್ ಮೀಸಲಾತಿ ವಿಚಾರದಲ್ಲಿ ನೀಡಿದ ಆದೇಶದ ವ್ಯಾಖ್ಯಾನ ಆಘಾತಕಾರಿಯಾಗಿದೆ. ಕೂಡಲೇ ಪ್ರಧಾನಿ ಮೋದಿ, ಸರ್ವಪಕ್ಷಗಳ ಸಭೆ ಕರೆದು ಸಮಾ ಲೋಚಿಸಿ ಮರುಪರಿಶೀಲನಾ ಅರ್ಜಿ ಸಲ್ಲಿಸ ಬೇಕು. ಈ ಹಿಂದೆ ಎಸ್ಸಿ-ಎಸ್ಟಿ…
ಕೃಷಿ ಸಾಲ ಮನ್ನಾ ಸಂಬಂಧ ಅಧಿಕಾರಿಗಳಿಂದ ಮಾಹಿತಿ ಸಂಗ್ರಹ ಸಹಕಾರ ಸಚಿವ ಎಸ್.ಟಿ.ಸೋಮಶೇಖರ್
February 14, 2020ಬೆಂಗಳೂರು, ಫೆ.13(ಕೆಎಂಶಿ)- ಕೃಷಿ ಸಾಲ ಮನ್ನಾ ಸಂಬಂಧ ಇಲಾಖಾ ಅಧಿಕಾರಿಗಳಿಂದ ಮಾಹಿತಿ ಪಡೆದು ತೀರ್ಮಾನ ಕೈಗೊಳ್ಳ ಲಾಗುವುದು ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಇಂದಿಲ್ಲಿ ತಿಳಿಸಿದ್ದಾರೆ. ವಿಕಾಸ ಸೌಧದಲ್ಲಿ ನೂತನ ಕಚೇರಿಯಲ್ಲಿ ಪೂಜೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಮಗೆ ಇಷ್ಟವಾದ ಸಹಕಾರ ಖಾತೆ ನೀಡಿದ್ದಾರೆ. ಸಹಕಾರ ಇಲಾಖೆಯಲ್ಲಿ ಸುಧಾ ರಣೆ ಹಾಗೂ ಅಗತ್ಯ ಬದಲಾವಣೆ ತರುವಲ್ಲಿ ಹಿರಿಯ ಸಹ ಕಾರಿಗಳ ಸಲಹೆ ಪಡೆಯಲಾಗುವುದು ಎಂದರು. ಸಹಕಾರಿಗಳ ಯಶಸ್ವಿನಿ ಆರೋಗ್ಯ ವಿಮಾ ಯೋಜನೆ ಸ್ಥಗಿತ…
ಕಂದಾಯ, ಪಿಂಚಣಿ ಅದಾಲತ್ಗೆ ತಹಸೀಲ್ದಾರ್ ರಕ್ಷಿತ್ ಚಾಲನೆ
February 14, 2020ಮೈಸೂರು,ಫೆ.13-ಮೈಸೂರು ಜಿಲ್ಲೆಯ ಜಯಪುರ ಹೋಬ ಳಿಯ ಎಲ್ಲಾ ಗ್ರಾಮಗಳ ರೈತರಿಗಾಗಿ ಗುರುವಾರ ಜಯಪುರ ಹೋಬಳಿ ಉಪ ತಹಸೀಲ್ದಾರ್ ಕಚೇರಿಯ ಆವರಣದಲ್ಲಿ ಆಯೋಜಿಸಿದ್ದ ಹೋಬಳಿ ಮಟ್ಟದ ಕಂದಾಯ ಮತ್ತು ಪಿಂಚಣಿ ಅದಾಲತ್ ಕಾರ್ಯಕ್ರಮಕ್ಕೆ ಮೈಸೂರು ತಾಲೂಕು ತಹಸೀಲ್ದಾರ್ ಕೆ.ಆರ್.ರಕ್ಷಿತ್ ಚಾಲನೆ ನೀಡಿದರು. ರಾಜ್ಯ ಸರ್ಕಾರವು ಕಂದಾಯ ಇಲಾಖೆಯನ್ನು ರೈತರ ಮನೆ ಬಾಗಿಲಿಗೆ ತರುವ ಉದ್ದೇಶದಿಂದ ರೂಪಿಸಿರುವ ಕಂದಾಯ ಮತ್ತು ಪಿಂಚಣಿ ಅದಾಲತ್ ಕಾರ್ಯಕ್ರಮದಲ್ಲಿ ಪೌತಿ ಖಾತೆ, ಪಿಂಚಣಿ, ಆರ್ಟಿಸಿ ತಿದ್ದುಪಡಿ, ರೇಷನ್ ಕಾರ್ಡ್, ಹಳೇ ಕ್ರಯ ಪತ್ರದಂತೆ ಖಾತೆ…
ಇಂದು ಪ್ರೇಮಿಗಳ ದಿನ: ಯುವ ಮನಸ್ಸಿನಲ್ಲಿ ಸಂಭ್ರಮ
February 14, 2020ಮೈಸೂರು, ಫೆ.13- ಸಂತ ವ್ಯಾಲೆಂಟೈನ್ಸ್ ನೆನಪಿನಾರ್ಥವಾಗಿ ಜಗತ್ತಿನೆಲ್ಲೆಡೆ ಇಂದು (ಫೆ.14) ಪ್ರೇಮಿಗಳ ದಿನವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ. ಯುವ ಪ್ರೇಮಿಗಳು ತಮ್ಮ ಸಂಗಾತಿಗೆ ಪ್ರೇಮ ನಿವೇ ದನೆ ಮಾಡಿಕೊಳ್ಳಲು ಸಿದ್ಧರಾಗಿದ್ದಾರೆ. ಪ್ರೀತಿ ಪಾತ್ರರಿಗೆ ಇಂದು ಉಡುಗೊರೆ ಕೊಟ್ಟು ತಮ್ಮ ಪ್ರೀತಿಯನ್ನು ಬಿನ್ನವಿಸುತ್ತಾರೆ. ಇದನ್ನೇ ಬಂಡವಾಳ ಮಾಡಿ ಕೊಂಡಿರುವ ವ್ಯಾಪಾರಿಗಳು ಪ್ರೇಮಿಗಳಿಗಾಗಿ ವಿಶೇಷ ತಯಾರಿಗಳನ್ನು ನಡೆಸಿದ್ದಾರೆ. ಮೈಸೂರು ಸೇರಿದಂತೆ ವಿವಿಧೆಡೆ ಮಾರುಕಟ್ಟೆಯಲ್ಲಿ ವಿಶೇಷ ಬಗೆಯ ಕೇಕ್, ಚಾಕೊಲೇಟ್, ಗಿಫ್ಟ್, ಹೂ-ಗುಚ್ಛಗಳ ಭರ್ಜರಿ ವ್ಯಾಪಾರದಲ್ಲಿ ತೊಡಗಿದ್ದಾರೆ. ಪ್ರೇಮಿಗಳಿಗಳಿಗಷ್ಟೇ ಅಲ್ಲದೆ ಪ್ರೀತಿಯನ್ನು ಬಯಸುವ,…
ಬಹುರೂಪಿಯ ಜನಪದೋತ್ಸವಕ್ಕೆ ಮಂಜಮ್ಮ ಜೋಗತಿ ಚಾಲನೆ
February 14, 2020ಮೈಸೂರು,ಫೆ.13(ವೈಡಿಎಸ್)-ಮೈಸೂರು ರಂಗಾಯಣದಲ್ಲಿ `ಗಾಂಧಿ ಪಥ’ ಶೀರ್ಷಿಕೆಯಡಿ ಆಯೋಜಿಸಿರುವ `ಬಹು ರೂಪಿ’ ರಾಷ್ಟ್ರೀಯ ನಾಟಕೋತ್ಸವದ ಭಾಗ ವಾದ `ಬಹುರೂಪಿ ಜನಪದೋತ್ಸವ’ಕ್ಕೆ ಗುರುವಾರ ಸಂಜೆ ಚಾಲನೆ ನೀಡಲಾಯಿತು. ಕಲಾಮಂದಿರದ ಕಿಂದರಜೋಗಿ ವೇದಿಕೆ ಯಲ್ಲಿ ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷರಾದ ಮಂಜಮ್ಮ ಜೋಗತಿ ಅವರು ಜೋಗತಿಗೆ ಹುಡಿ ಹಾಗೂ ಗೊರವನಿಗೆ ಜೋಳಿಗೆ ತುಂಬುವ ಮೂಲಕ ಜನಪ ದೋತ್ಸವಕ್ಕೆ ವಿಶಿಷ್ಟ ರೀತಿ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, ಇಷ್ಟು ದಿನ ಟಿವಿಗಳು ರಂಗಭೂಮಿ, ಸಿನಿಮಾ ಗಳನ್ನು ನುಂಗಿ ಹಾಕಿದವು ಎನ್ನುತ್ತಿದ್ದರು. ಆದರೆ,…
ರಂಗಾಸಕ್ತರಿಗೆ ಇಂದಿನಿಂದ `ಬಹುರೂಪಿ’ ರಸದೌತಣ
February 14, 2020ಮೈಸೂರು,ಫೆ.13(ಎಂಟಿವೈ)- ಗಾಂಧಿ ಪಥ ಶೀರ್ಷಿಕೆಯ `ಬಹುರೂಪಿ ರಾಷ್ಟ್ರೀಯ ನಾಟ ಕೋತ್ಸವ’ವು ರಂಗಾಸಕ್ತರಿಗೆ ಬಹುರೂಪದ ರಂಗ ವೈಭವದ ರಸದೌತಣ ಉಣಬಡಿಸಲು ಸಜ್ಜಾಗಿದೆ. 4 ವೇದಿಕೆಗಳಲ್ಲಿ 25 ನಾಟಕಗಳು, 18 ಸಿನಿಮಾಗಳ ಪ್ರದರ್ಶನದೊಂದಿಗೆ ಜಾನ ಪದ ಸೊಗಡಿನ ಪರಿಚಯವನ್ನೂ ಮಾಡಿ ಕೊಡಲು ಬಹುರೂಪಿ ಸಜ್ಜಾಗಿದೆ. ವಿವಿಧ ಕಾರಣಗಳಿಂದಾಗಿ 1 ತಿಂಗಳು ತಡ ವಾಗಿ ನಡೆಯುತ್ತಿರುವ `ಬಹುರೂಪಿ’ ನಾಟಕೋ ತ್ಸವ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ವಿಚಾರಧಾರೆಯ ಮುನ್ನೆಲೆಯೊಂದಿಗೆ ಫೆ.14 ರಂದು ಆರಂಭಗೊಳ್ಳುತ್ತಿದೆ. ನಾಟಕೋತ್ಸವ ಫೆ.19ರವರೆಗೂ ನಡೆಯಲಿದೆ. ಸಿದ್ಧತೆಗಳೆಲ್ಲವೂ ಪೂರ್ಣಗೊಂಡಿದ್ದು, ಶುಕ್ರವಾರ…
ಬಹುರೂಪ ರಂಗಪ್ರತಿಭೆ ಅಡ್ಡಂಡ ಕಾರ್ಯಪ್ಪ ಸಾರಥ್ಯದಲ್ಲಿ ಬಹುರೂಪಿ
February 14, 2020ಮೈಸೂರು, ಫೆ. 13- ಈ ಬಾರಿ `ಗಾಂಧಿ ಪಥ’ದಲ್ಲಿ ಸಾಗುವ `ಬಹುರೂಪಿ’ ನಾಟಕೋತ್ಸವ ರಂಗಾಸಕ್ತರ ಕುತೂ ಹಲ ಹೆಚ್ಚಿಸಿದೆ. ರಂಗಭೀಷ್ಮ ಬಿ.ವಿ.ಕಾರಂತ್, ಬಸವ ಲಿಂಗಯ್ಯ, ಪ್ರಸನ್ನ, ಚಿದಂಬರರಾವ್ ಜಂಬೆ ಅವರಂತಹ ರಂಗಶಕ್ತಿ ಮಾದರಿಯಲ್ಲೇ ಹಾಲಿ ರಂಗಾಯಣ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಜವಾಬ್ದಾರಿ ನಿರ್ವಹಿಸಿ, `ಬಹು ರೂಪಿ’ಯನ್ನು ಯಶಸ್ವಿಗೊಳಿಸುತ್ತಾರೆಂಬ ವಿಶ್ವಾಸ ರಂಗಾ ಸಕ್ತರು ಹಾಗೂ ರಂಗಕರ್ಮಿಗಳಲ್ಲಿದೆ. ವಿದ್ಯಾರ್ಥಿದೆಸೆಯಿಂದಲೇ ರಂಗಭೂಮಿಗೆ ಅಂಟಿಕೊಂಡು, ಕನ್ನಡ-ಕೊಡವ ರಂಗಭೂಮಿ, ಜಾನಪದ, ಸಾಹಿತ್ಯಕ್ಕೆ ತಮ್ಮದೇ ಕಾಣಿಕೆ ನೀಡುವುದರ ಜೊತೆಗೆ ಆಕಾಶವಾಣಿ, ದೂರದರ್ಶನ, ಕಿರುಚಿತ್ರ, ಚಲನಚಿತ್ರ, ಪತ್ರಿಕೆ…
ಜಿಲ್ಲಾ ಉಸ್ತುವಾರಿ ಸಚಿವರ ಪ್ರವಾಸ
February 14, 2020ಮೈಸೂರು, ಫೆ.13- ವಸತಿ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಫೆ.14, 15 ಮತ್ತು 16ರಂದು ಮೈಸೂರು ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ. ಶುಕ್ರವಾರ ಬೆಳಿಗ್ಗೆ 11.30 ಗಂಟೆಗೆ ತಿ. ನರಸೀಪುರ ತಾಲೂಕಿನ ಮೂಗೂರಿಗೆ ಆಗಮಿಸಿ ಸಾರ್ವಜನಿಕ ರನ್ನು ಭೇಟಿ ಮಾಡುವರು. ಮಧ್ಯಾಹ್ನ 12 ಗಂಟೆಗೆ ಮೂಗೂರಿನ ತ್ರಿಪುರಸುಂದರಿ ಅಮ್ಮನವರ ದೇವಾಲಯದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಪರಿವೀಕ್ಷಣೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳೊಂ ದಿಗೆ ಚರ್ಚಿಸಲಿದ್ದಾರೆ. ಮಧ್ಯಾಹ್ನ 2 ಗಂಟೆಗೆ ಟಿ.ನರಸೀಪುರಕ್ಕೆ ಆಗಮಿಸಿ ಸಾರ್ವಜನಿಕರನ್ನು ಭೇಟಿ ಮಾಡಿದ ನಂತರ…
ಶುಚಿತ್ವ ಕಾಯ್ದುಕೊಳ್ಳದ ಮಾಂಸದಂಗಡಿಗಳಿಗೆ ಬೀಗಮುದ್ರೆ
February 13, 2020ಮೈಸೂರು: ಚೀನಾದಲ್ಲಿ ಮರಣ ಮೃದಂಗ ಬಾರಿಸಿ ವಿಶ್ವಾದ್ಯಂತ ಭೀತಿ ಸೃಷ್ಟಿಸಿರುವ ಕೊರೋನಾ ವೈರಸ್ಗೆ ಚೀನಾದ ಮಾಂಸ ಮಾರು ಕಟ್ಟೆಯೇ ಮೂಲ ಎಂಬ ಶಂಕೆ ಹಿನ್ನೆಲೆಯಲ್ಲಿ ಮುನ್ನೆ ಚ್ಚರಿಕೆ ಕ್ರಮವಾಗಿ ಜಿಲ್ಲಾದ್ಯಂತ ಮಾಂಸ ಮಾರಾಟ ಸ್ಥಳಗಳಲ್ಲಿ ಕಡ್ಡಾಯವಾಗಿ ಶುಚಿತ್ವ ಕಾಯ್ದುಕೊಳ್ಳು ವಂತೆ ಸೂಚಿಸಬೇಕು. ಸೂಚನೆ ಪಾಲಿಸದ ಮಾಂಸ ದಂಗಡಿಗಳಿಗೆ ಬೀಗಮುದ್ರೆ ಹಾಕುವಂತೆ ಜಿಲ್ಲಾ ಪಂಚಾಯಿತಿ ಕೆಡಿಪಿ ಸಭೆಯಲ್ಲಿ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಯಿತು. ಮೈಸೂರಿನ ಜಿಪಂ ಸಭಾಂಗಣದಲ್ಲಿ ಅಧ್ಯಕ್ಷೆ ಬಿ.ಸಿ. ಪರಿಮಳಾ ಶ್ಯಾಮ್ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಕೆಡಿಪಿ…
ಕೇಂದ್ರ ಬಜೆಟ್ನಲ್ಲಿ ತೆರಿಗೆ ವ್ಯವಸ್ಥೆಗೆ ಆಧುನಿಕ ಸ್ಪರ್ಶ
February 13, 2020ಮೈಸೂರು: ಕೇಂದ್ರ ಸರ್ಕಾರ ಮಂಡಿಸಿರುವ ಪ್ರಸಕ್ತ ಸಾಲಿನ ಬಜೆಟ್ನಲ್ಲಿ ಆಧುನೀಕರಣದ ಸ್ಪರ್ಶ ನೀಡಲಾಗಿದೆ ಎಂದು ಎಫ್ಕೆಸಿ ಸಿಐ ನಿಕಟಪೂರ್ವ ಅಧ್ಯಕ್ಷ ಸುಧಾಕರ ಎಸ್. ಶೆಟ್ಟಿ ವಿಶ್ಲೇಷಿಸಿದ್ದಾರೆ. ಮೈಸೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ (ಒಅಅI), ಪೂಜಾ ಭಾಗವತ ಮೆಮೋರಿಯಲ್ ಮಹಾಜನ ಎಜುಕೇಷನ್ ಸೆಂಟರ್ ಹಾಗೂ ಪ್ರಜಾವಾಣಿ ಮತ್ತು ಡೆಕ್ಕನ್ ಹೆರಾಲ್ಡ್ ಸಂಯುಕ್ತಾಶ್ರಯದಲ್ಲಿ ಕೆಆರ್ಎಸ್ ರಸ್ತೆಯ ಕಾಲೇಜು ಸಭಾಂಗಣದಲ್ಲಿ ಏರ್ಪಡಿಸಿದ್ದ ‘ಕೇಂದ್ರ ಬಜೆಟ್-2020’ ಕುರಿತ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು. ಹಣಕಾಸು ಮತ್ತು ಬ್ಯಾಂಕಿಂಗ್ ವಲಯದ ಸುಧಾರಣೆಗೆ…










