ಮೈಸೂರು,ಫೆ.14(ಆರ್ಕೆ)- ಮೈಸೂ ರಿನ ಜೆಕೆ ಮೈದಾನದಲ್ಲಿರುವ ಮೈಸೂರು ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ಪ್ಲಾಟಿನಂ ಜುಬಿಲಿ ಹಾಲ್ನಲ್ಲಿ ಮೆಡಿಕಲ್ ಮತ್ತು ಸೇಲ್ಸ್ ರೆಪ್ರೆಸೆಂಟೇಟಿವ್ ಗಳ ಮೂರು ದಿನಗಳ ಸಮ್ಮೇಳನ ಇಂದಿ ನಿಂದ ಆರಂಭವಾಯಿತು. ಫೆಡರೇಷನ್ ಆಫ್ ಮೆಡಿಕಲ್ ಅಂಡ್ ಸೇಲ್ಸ್ ರೆಪ್ರೆಸೆಂಟೇಟಿವ್ಸ್ ಅಸೋಸಿಯೇ ಷನ್ ಆಫ್ ಇಂಡಿಯಾ (ಈಒಖಂI) ಆಯೋ ಜಿಸಿರುವ ಜನರಲ್ ಕೌನ್ಸಿಲ್ ಸಭೆಯನ್ನು ಸಿಐಟಿಯು ಅಖಿಲ ಭಾರತ ಉಪಾಧ್ಯಕ್ಷ ಎ.ಕೆ.ಪದ್ಮನಾಭನ್ ಅವರು ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ರಾಜ್ಯ ಉಚ್ಛ ನ್ಯಾಯಾಲಯದ ನಿವೃತ್ತ…
ಆಹಾರ ನಂತರ ಅರಣ್ಯ ಆಯ್ತು ಈಗ ಮತ್ತಾವುದೋ…!
February 15, 2020ಬೆಂಗಳೂರು, ಫೆ. 14(ಕೆಎಂಶಿ)- ಆಹಾರ ಮತ್ತು ನಾಗರಿಕ ಪೂರೈಕೆ ಆಯಿತು, ಈಗ ಅರಣ್ಯ ಖಾತೆ, ಮುಂದೆ ಯಾವ ಖಾತೆ ಎಂಬ ಪೇಚಿಗೆ ಸಚಿವ ಆನಂದ್ ಸಿಂಗ್ ಸಿಲುಕಿದ್ದು, ಸದ್ಯದಲ್ಲೇ ಅವರ ಖಾತೆ ಮತ್ತೆ ಬದಲಾಗ ಲಿದೆ. ಅಕ್ರಮ ಗಣಿಗಾರಿಕೆ ಆರೋಪ ಪ್ರಕರಣಗಳನ್ನು ಎದುರಿಸುತ್ತಿರುವ ಆನಂದ್ ಸಿಂಗ್ ಅವರಿಗೆ ಅರಣ್ಯ ಖಾತೆ ನೀಡಿರುವುದನ್ನೇ ದಾಳ ಮಾಡಿಕೊಂಡು ಕಾಂಗ್ರೆಸ್ ಈಗಾಗಲೇ ರಾಜಕೀಯ ದಾಳಿ ಆರಂಭಿಸಿದೆ. ಈ ಹಿನ್ನೆಲೆಯಲ್ಲಿ ಬೇರೊಂದು ಖಾತೆ ನೀಡಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಗಂಭೀರ ಚಿಂತನೆ ನಡೆಸಿದ್ದಾರೆ. ಆನಂದ್…
ಪ್ರಕೃತಿ ಸಂಪನ್ಮೂಲ ರಕ್ಷಣೆಗೆ `ಕಾವೇರಿ ಕೂಗು’ ರೀತಿಯ ಅಭಿಯಾನ ಅಗತ್ಯ
February 15, 2020ಮೈಸೂರು, ಫೆ.14(ಎಂಟಿವೈ)- ಅರಣ್ಯ, ನದಿ ಸೇರಿದಂತೆ ಪ್ರಕೃತಿದತ್ತ ಸಂಪನ್ಮೂಲಗಳನ್ನು ಸಂರ ಕ್ಷಿಸುವ ನಿಟ್ಟಿನಲ್ಲಿ `ಕಾವೇರಿ ಕೂಗು’ ಮಾದರಿಯ ಅಭಿಯಾನ ಅಗತ್ಯವಾಗಿದೆ ಎಂದು ಮೈಸೂರು ಜಿಲ್ಲೆಯ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಟಿ. ಹೀರಾಲಾಲ್ ಅಭಿಪ್ರಾಯಪಟ್ಟಿದ್ದಾರೆ. ಮೈಸೂರಿನ ವಿದ್ಯಾರಣ್ಯಪುರಂನಲ್ಲಿ ರುವ ವಿದ್ಯಾ ರಣ್ಯ ಕನ್ವೆನ್ಷನ್ ಹಾಲ್ನಲ್ಲಿ `ಈಶಾ ಫೌಂಡೇಷನ್ನ ಕಾವೇರಿ ಕೂಗು’ ಅಭಿಯಾನ ವತಿಯಿಂದ ಶುಕ್ರವಾರ ಆಯೋಜಿಸಿದ್ದ `ಲಕ್ಷ, ಲಕ್ಷ ಆದಾಯ ಪಡೆಯುವ ಅರಣ್ಯ ಕೃಷಿ ಸಂವಾದ’ ಉದ್ಘಾಟಿಸಿ, ಮಾತನಾಡಿದರು. ಕಾವೇರಿ ನದಿ 50 ವರ್ಷಗಳ ಹಿಂದೆ ಹೇಗೆ ಸಂಪ…
ಪುತ್ರನ ನಂತರ ತಂದೆ ಪೇದೆಯೂ ಸಾವು, ಐಸಿಯುನಲ್ಲಿ ತಾಯಿಗೆ ಚಿಕಿತ್ಸೆ
February 15, 2020ಹುಟ್ಟೂರು ಗಂಧನಹಳ್ಳಿಯಲ್ಲಿ ಅಂತ್ಯಕ್ರಿಯೆ ಮೈಸೂರು, ಫೆ. 14(ಆರ್ಕೆ, ಕೆಟಿಆರ್)- ನೀರಿನ ಒಲೆ ಹೊತ್ತಿಸುವಾಗ ಬೆಂಕಿ ಅವಘಡ ಸಂಭವಿಸಿದ ಪರಿಣಾಮ ಪುತ್ರ ಸಾವನ್ನಪ್ಪಿದ ಬೆನ್ನಲ್ಲೇ ಇಂದು ಸುಟ್ಟ ಗಾಯಗಳಾಗಿದ್ದ ತಂದೆಯೂ ಸಾವನ್ನಪ್ಪಿದ್ದು, ತಾಯಿ ಮೈಸೂರಿನ ಜೆಎಸ್ಎಸ್ ಆಸ್ಪತ್ರೆ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೈಸೂರಿನ ಸಿಎಆರ್ ಮುಖ್ಯಪೇದೆ ರೇಣುಕಾಸ್ವಾಮಿ (46) ಇಂದು ಬೆಳಿಗ್ಗೆ ಆಸ್ಪತ್ರೆಯಲ್ಲಿ ಕೊನೆಯು ಸಿರೆಳೆದರು. ಪತ್ನಿ ಶ್ರೀಮತಿ ಪುಷ್ಪಲತಾ ಅವರು ಚಿಕಿತ್ಸೆ ಪಡೆಯು ತ್ತಿದ್ದಾರೆ. ಕೆ.ಆರ್.ನಗರದ ಈಶ್ವರ ಬಡಾವಣೆಯ ನಿವಾಸದಲ್ಲಿ ಸ್ನಾನಕ್ಕೆ ನೀರು ಕಾಯಿಸಲೆಂದು ಒಲೆ ಹೊತ್ತಿಸುವಾಗ…
ಸೈಬರ್ ಕಾನೂನಲ್ಲಿ ಸುಧಾರಣೆಗೆ ನಿರ್ಧಾರ ಡಿಸಿಎಂ ಡಾ. ಅಶ್ವತ್ಥನಾರಾಯಣ ಇಂಗಿತ
February 15, 2020ಬೆಂಗಳೂರು, ಫೆ. 14(ಕೆಎಂಶಿ)- ಸೈಬರ್ ಕಾನೂನಿನಲ್ಲಿ ಸಾಕಷ್ಟು ಸುಧಾರಣೆಗಳು ಮುಂದಿನ ದಿನಗಳಲ್ಲಿ ಬರಲಿವೆ ಎಂದು ಉಪಮುಖ್ಯ ಮಂತ್ರಿ ಡಾ.ಸಿ.ಎನ್.ಅಶ್ವತ್ಥ್ ನಾರಾಯಣ್ ತಿಳಿಸಿದ್ದಾರೆ. ಕರ್ನಾಟಕ ಪತ್ರಕರ್ತರ ಸಹಕಾರ ಸಂಘದ 70ನೇ ವಾರ್ಷಿಕ ಸಮಾರಂಭದಲ್ಲಿ ಮಾತನಾಡಿದ ಅವರು, ದೊಡ್ಡ ಮಟ್ಟದಲ್ಲಿ ಇರುವ ಸೈಬರ್ ಕ್ರೈಂ ನಿಯಂತ್ರಣಕ್ಕೆ ಇರುವ ಕಾನೂನುಗಳಲ್ಲಿ ಸುಧಾರಣೆಗಳನ್ನು ತರಬೇಕಿದೆ ಎಂದರು. ಮುಂದಿನ ದಿನಗಳಲ್ಲಿ ಆನ್ಲೈನ್ ಮಾಧ್ಯಮಕ್ಕೆ ಹೆಚ್ಚು ಆದ್ಯತೆ ದೊರೆಯಲಿದೆ. ಡಿಜಿಟಲ್ ಮಾಧ್ಯಮ ಎಲ್ಲರಿಗೂ ಮುಕ್ತವಾಗಿದೆ, ದೊಡ್ಡ ಮಟ್ಟದಲ್ಲಿ ಬೆಳೆದು ನಿಂತಿದೆ ಅಲ್ಲದೆ, ಸಮಾಜಕ್ಕೆ ಶಕ್ತಿ ತುಂಬುತ್ತಿದೆ….
ಭಾಷೆಯೇ ಭವಿಷ್ಯಕ್ಕೆ ದಾರಿ ಎಂಬುದನ್ನು ಸರ್ಕಾರ ಅರಿಯಲಿ
February 15, 2020ಮೈಸೂರು,ಫೆ.14(ಆರ್ಕೆಬಿ)- ಶಿಕ್ಷಣದಲ್ಲಿ ಭಾಷೆಯೇ ಭವಿಷ್ಯಕ್ಕೆ ದಾರಿ ಎಂಬು ದನ್ನು ಸರ್ಕಾರಗಳು ಅರಿತುಕೊಳ್ಳಬೇಕು ಎಂದು ರಂಗಭೂಮಿ ಮತ್ತು ಚಲನಚಿತ್ರ ನಟ `ಮುಖ್ಯಮಂತ್ರಿ’ ಚಂದ್ರು ಅಭಿಪ್ರಾಯಪಟ್ಟರು. ಮೈಸೂರು ಜಿಲ್ಲಾ ಪತ್ರಕರ್ತರ ಸಂಘವು ಪತ್ರಕರ್ತರ ಭವನದಲ್ಲಿ ಶುಕ್ರವಾರ ಆಯೋ ಜಿಸಿದ್ದ ಸಂವಾದದಲ್ಲಿ ಮನದಾಳದ ಮಾತು ಗಳನ್ನಾಡಿದ ಅವರು, ಭಾಷೆ ಬೆಳವಣಿಗೆ ಯಲ್ಲಿ ಸರ್ಕಾರಗಳು ಬೇಜವಾಬ್ದಾರಿತನ ದಿಂದ ನಡೆದುಕೊಂಡಿವೆ. ನಿರ್ದಿಷ್ಟ ಮತ್ತು ಕಠಿಣ ಕ್ರಮಗಳನ್ನು ಸರ್ಕಾರ ತೆಗೆದುಕೊಳ್ಳು ತ್ತಿಲ್ಲ. ಭಾಷೆ ಬಗೆಗೆ ಅಧಿಕಾರಿಗಳದ್ದು ನಿರ್ಲಕ್ಷ್ಯ ಧೋರಣೆ ಎಂದು ಬೇಸರದಿಂದ ನುಡಿದರು. ಸರೋಜಿನಿ ಮಹಿಷಿ…
ಎಸ್ಟಿಗೆ ಪರಿವಾರ, ತಳವಾರ ಸೇರ್ಪಡೆ ನುಡಿದಂತೆ ನಡೆದ ಮೋದಿ, ಶಾ: ಜಿಲ್ಲಾ ನಾಯಕರ ಕ್ಷೇಮಾಭಿವೃದ್ಧಿ ಸಂಘ ಹರ್ಷ
February 15, 2020ಮೈಸೂರು, ಫೆ.14 (ಆರ್ಕೆಬಿ)- ಕಳೆದ ವಿಧಾನಸಭಾ ಚುನಾವಣೆ ವೇಳೆ ಮೈಸೂರಿಗೆ ಭೇಟಿ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರು ವಾಗ್ದಾನ ನೀಡಿದಂತೆ ಪರಿವಾರ-ತಳವಾರ ಪದಗಳನ್ನು ಪರಿಶಿಷ್ಟ ವರ್ಗದ ಪಟ್ಟಿಯಲ್ಲಿ ಸೇರಿಸಿದ್ದು, ಸಹಕರಿಸಿದ ಎಲ್ಲರಿಗೂ ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸುವುದಾಗಿ ಮೈಸೂರು-ಚಾಮರಾಜನಗರ ಜಿಲ್ಲಾ ನಾಯಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಚಿಕ್ಕಣ್ಣ ತಿಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಶುಕ್ರವಾರ ಕರೆದಿದ್ದ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿ, ಸಿಎಂ ಯಡಿಯೂರಪ್ಪನವರು ಪರಿವಾರ-ತಳವಾರ ಎಂಬ ಕುಲಶಾಸ್ತ್ರೀಯ ಅಧ್ಯಯನಕ್ಕೆ…
ಇಂದು ಸೆಸ್ಕ್ ಗ್ರಾಹಕರ ಕುಂದು ಕೊರತೆ ಸಭೆ
February 15, 2020ಮೈಸೂರು, ಫೆ.14- ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ ವತಿಯಿಂದ ಮೈಸೂರು ತಾಲೂಕು ವ್ಯಾಪ್ತಿಯ ವಿ.ವಿ.ಮೊಹಲ್ಲಾ, ಹೂಟಗಳ್ಳಿ, ಕುವೆಂಪು ನಗರ ಮತ್ತು ರಾಮಕೃಷ್ಣನಗರ ಕಚೇರಿಗಳ ಸಹಾಯಕ ಕಾರ್ಯ ನಿರ್ವಾಹಕ ಇಂಜಿನಿಯರ್(ವಿ) ಅಧ್ಯಕ್ಷತೆಯಲ್ಲಿ ಪ್ರತಿ ಮಾಹೆಯ 3ನೇ ಶನಿವಾರ ದÀಂದು ವಿದ್ಯುತ್ ಗ್ರಾಹಕರ ಸಂವಾದ ಸಭೆ ಹಮ್ಮಿಕೊಳ್ಳಲು ಉದ್ದೇಶಿಸಲಾಗಿರುತ್ತದೆ. ಫೆ.15ರಂದು ಬೆಳಿಗ್ಗೆ 11ರಿಂದ 1 ಗಂಟೆಗೆ ವಿ.ವಿ.ಮೊಹಲ್ಲಾ ಉಪವಿಭಾಗ ವ್ಯಾಪ್ತಿಯ ಜಯಲಕ್ಷ್ಮೀಪುರಂ, ಎಂ.ಜಿ.ಕೊಪ್ಪಲು, ಒಂಟಿಕೊಪ್ಪಲು ಮತ್ತು ಮೇಟ ಗಳ್ಳಿ ಶಾಖೆಯ ಗ್ರಾಹಕರಿಗೆ ವಿ.ವಿ ಮೊಹಲ್ಲಾ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್…
ಗರ್ಭಸ್ಥಶಿಶುವಿನಲ್ಲಿ ಶ್ರವಣಶಕ್ತಿ ಬೆಳವಣಿಗೆ; ಗರ್ಭಿಣಿಯರಿಗೆ ಫೆ.16ರಂದು ತಿಳುವಳಿಕೆ
February 15, 2020ಮೈಸೂರು, ಫೆ.14(ಪಿಎಂ)- ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆ (ಆಯಿಷ್)ಯಿಂದ `ವಿಶ್ವ ಶ್ರವಣಶಕ್ತಿ ದಿನ’ದಂಗವಾಗಿ ಫೆ.16ರಂದು ಮಕ್ಕಳಲ್ಲಿ ಶ್ರವಣಶಕ್ತಿ ನಷ್ಟವನ್ನು ನಿಯಂ ತ್ರಿಸುವ ಕುರಿತು ಗರ್ಭಿಣಿಯರಿಗೆ ತಿಳಿವಳಿಕೆ ಕಾರ್ಯಕ್ರಮ ಆಯೋಜಿಸಲಾಗಿದೆ. ಮಾ.3 `ವಿಶ್ವ ಶ್ರವಣಶಕ್ತಿ’ ದಿನವಾ ಗಿದ್ದು, ಅದರ ಅಂಗವಾಗಿ ಈ ಕಾರ್ಯಕ್ರಮ ಹಮ್ಮಿಕೊಳ್ಳ ಲಾಗಿದೆ. ಮೈಸೂರು ಹಾಗೂ ಸುತ್ತಮುತ್ತಲ ಗ್ರಾಮಗಳ ಗರ್ಭಿಣಿಯರು ಭಾಗವಹಿಸಬಹುದು. ಅಂದು ಬೆಳಿಗ್ಗೆ 10.30ರಿಂದ ಮಧ್ಯಾಹ್ನ 12ರವರೆಗೆ `ಶಿಶು ಗಳಲ್ಲಿ ಶ್ರವಣಶಕ್ತಿಯ ಸಹಜ ಬೆಳವಣಿಗೆ’ ಕುರಿತು ಸಂಸ್ಥೆಯ ವೈದ್ಯರು ಸಲಹೆ ನೀಡಲಿದ್ದಾರೆ….
ಜೆಎಸ್ಎಸ್ ಕಾಲೇಜಿನಲ್ಲಿ ‘ಟೀಚರ್ಸ್ ಕೆಪಾಸಿಟಿ ಬಿಲ್ಡಿಂಗ್’ ಕಾರ್ಯಾಗಾರ
February 15, 2020ಮೈಸೂರು, ಫೆ. 14- ಮೌಲ್ಯಗಳ ಬಗ್ಗೆ ಮಾತನಾಡುವ ಬದಲು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಬೆಂಗಳೂರಿನ ಅಕಾಡೆಮಿ ಆಫ್ ಕ್ರಿಯೇಟಿವ್ ಟೀಚಿಂಗ್ನ ಅಧ್ಯಕ್ಷ ಗುರುರಾಜ ಕರ್ಜಗಿ ಹೇಳಿದರು. ಮೈಸೂರಿನ ಊಟಿ ರಸ್ತೆಯ ಜೆಎಸ್ಎಸ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನಲ್ಲಿ ಆಯೋಜಿಸಿದ್ದ ‘ಟೀಚರ್ಸ್ ಕೆಪಾಸಿಟಿ ಬಿಲ್ಡಿಂಗ್’ ಕುರಿತ ರಾಜ್ಯಮಟ್ಟದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು. ಅಧ್ಯಾಪಕರಿಗೆ ಜ್ಞಾನದ ಜೊತೆಗೆ ಬೋಧನಾ ಕೌಶಲವೂ ಇರಬೇಕು. ಮಕ್ಕಳ ಕಲಿಕಾ ಮಟ್ಟ ಒಂದೇ ರೀತಿಯಲ್ಲಿರುವುದಿಲ್ಲ. ಒಂದು ಕೊಠಡಿಯ ಎಲ್ಲಾ ಮಕ್ಕಳಿಗೂ ಒಂದೇ ರೀತಿಯ…










