ಮೈಸೂರು: ಮಗನಿಗೆ ಹೆಣ್ಣು ತೋರಿಸುವ ನೆಪದಲ್ಲಿ ಮಹಿಳೆ ಕರೆದೊಯ್ದು ಮಾರ್ಗಮಧ್ಯೆ ಚಾಕು ತೋರಿಸಿ ಆಕೆಯಿಂದ 45 ಗ್ರಾಂ ಚಿನ್ನದ ಆಭರಣ ಹಾಗೂ 600 ರೂ. ನಗದು ಸುಲಿಗೆ ಮಾಡಿದ್ದ ಖತರ್ನಾಕ್ ಖದೀಮನಿಗೆ ಮೈಸೂರು ನ್ಯಾಯಾಲಯವು 7 ವರ್ಷ ಜೈಲು ಶಿಕ್ಷೆ ವಿಧಿಸಿ ಗುರುವಾರ (ಜ.30) ತೀರ್ಪು ನೀಡಿದೆ. ಮೈಸೂರು ತಾಲೂಕು ತುಮ್ಮನೇರಳೆ ಗ್ರಾಮದ ನಾಗೆಂದ್ರ ಜೈಲು ಶಿಕ್ಷೆಗೊಳಗಾದ ಸುಲಿಗೆಕೋರ. 2014ರ ಮೇ 23ರಂದು ಸಂಜೆ 5.15 ಗಂಟೆ ವೇಳೆಗೆ ಮೈಸೂರಿನ ದಟ್ಟಗಳ್ಳಿ ನಿವಾಸಿ ಮಲ್ಲಾಜಮ್ಮ ಎಂಬುವರನ್ನು ಆಕೆಯ…
ಗಾಂಜಾ ಮಾರುತ್ತಿದ್ದ ಖದೀಮನ ಬಂಧನ: 1 ಕೆ.ಜಿ 223 ಗ್ರಾಂ ಗಾಂಜಾ ವಶ
January 31, 2020ಮೈಸೂರು: ಗಾಂಜಾ ಮಾರಾಟ ಮಾಡು ತ್ತಿದ್ದ ಖದೀಮನನ್ನು ಬಂಧಿಸಿರುವ ಮಂಡಿ ಠಾಣೆ ಪೊಲೀಸರು 1 ಕೆ.ಜಿ 223 ಗ್ರಾಂ ಗಾಂಜಾ, 2750 ರೂ. ನಗದು ಹಣವನ್ನು ವಶಪಡಿಸಿಕೊಂಡಿದ್ದಾರೆ. ಮಂಡಿಮೊಹಲ್ಲಾದ ಸೈಯ್ಯದ್ ಇರ್ಫಾನ್ (33) ಬಂಧಿತ ಆರೋಪಿ. ಈತ ಜನವರಿ 29ರಂದು ಮಧ್ಯಾಹ್ನ ಕೆ.ಟಿ. ರಸ್ತೆಯಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ವೇಳೆ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ. ಬಂಧಿತ ಆರೋಪಿಯಿಂದ 1 ಕೆ.ಜಿ 223 ಗ್ರಾಂ ಗಾಂಜಾ, 2750 ರೂ. ಹಣವನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಮಂಡಿ…
ಸ್ವಾಮಿ ವಿವೇಕಾನಂದ ಸದ್ಭಾವನಾ ರಾಜ್ಯ ಪ್ರಶಸ್ತಿಗೆ ಡಾ.ಕಾವೇರಿ ಪ್ರಕಾಶ್ ಆಯ್ಕೆ
January 31, 2020ಮೈಸೂರು: ಕೊಡವರ ಆಚಾರ-ವಿಚಾರ, ಜನಪದ ಕಲೆ, ಸಂಸ್ಕಾರ ಸಂಸ್ಕøತಿಗಳ ಸಂಶೋಧನೆಗಾಗಿ ಕೊಡಗು ಜಿಲ್ಲೆಯ ನಾಪೋಕ್ಲುವಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶು ಪಾಲರಾದ ಡಾ.ಕಾವೇರಿ ಪ್ರಕಾಶ್ ಅವರನ್ನು ಆಯ್ಕೆ ಮಾಡಲಾ ಗಿದೆ. ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟ, ಬೆಂಗಳೂರು ಹಾಗೂ ಮುದ್ದೆಬಿಹಾಳ ತಾಲೂಕು ಯುವ ಸಂಘಗಳ ಒಕ್ಕೂಟಗಳ ಸಂಯುಕ್ತಾಶ್ರಯದಲ್ಲಿ ವಿಜಯಪುರ ಜಿಲ್ಲೆಯ ಮುದ್ದೆಬಿಹಾಳದ ವಿಬಿಸಿ ಮೈದಾನದಲ್ಲಿ ಫೆ.1ರಂದು ಸಂಜೆ 5 ಗಂಟೆಗೆ ನಡೆಯುವ ಸ್ವಾಮಿ ವಿವೇಕಾನಂದರ 157ನೇ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು…
ಜೆಎಸ್ಎಸ್ ಮೈಸೂರು ಅರ್ಬನ್ ಹಾತ್ನಲ್ಲಿ ನಾಳೆಯಿಂದ ಫೆ.9ರವರೆಗೆ `ಗಾಂಧಿ ಶಿಲ್ಪ ಬಜಾರ್’
January 30, 2020ಮೈಸೂರು, ಜ.29(ಪಿಎಂ)- ಕೇಂದ್ರ ಸರ್ಕಾರದ ಜವಳಿ ಮಂತ್ರಾಲಯದ ಅಭಿ ವೃದ್ಧಿ ಆಯುಕ್ತರ ಕಚೇರಿ, ಜೆಎಸ್ಎಸ್ ಮೈಸೂರು ಅರ್ಬನ್ ಹಾತ್ ಜಂಟಿ ಆಶ್ರಯ ದಲ್ಲಿ ಜ.31ರಿಂದ ಫೆ.9ರವರೆಗೆ ಕರಕುಶಲ ವಸ್ತುಗಳ ಬೃಹತ್ ಪ್ರದರ್ಶನ ಹಾಗೂ ಮಾರಾಟದ `ಗಾಂಧಿ ಶಿಲ್ಪ ಬಜಾರ್’ ಅನ್ನು ಅರ್ಬನ್ ಹಾತ್ನಲ್ಲಿ ಏರ್ಪಡಿಸಲಾಗಿದೆ ಎಂದು ಜೆಎಸ್ಎಸ್ ತಾಂತ್ರಿಕ ಶಿಕ್ಷಣ ವಿಭಾ ಗದ ನಿರ್ದೇಶಕ (ಯೋಜನೆಗಳು ಮತ್ತು ಅಭಿವೃದ್ಧಿ) ಡಾ.ಸಿ.ರಂಗನಾಥಯ್ಯ ತಿಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನ ದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತ ನಾಡಿದ ಅವರು, ಪರಿಶಿಷ್ಟ…
ಪಾಲಿಕೆ 18ನೇ ವಾರ್ಡ್ ಉಪ ಚುನಾವಣೆ ನಾಲ್ಕೂ ಅಭ್ಯರ್ಥಿಗಳ ನಾಮಪತ್ರ ಕ್ರಮಬದ್ಧ
January 30, 2020ಉಮೇದುವಾರಿಕೆ ವಾಪಸ್ ಪಡೆಯಲು ನಾಳೆ ಕಡೇ ದಿನ ಮೈಸೂರು, ಜ. 29(ಆರ್ಕೆ)- ಫೆಬ್ರವರಿ 9 ರಂದು ನಡೆಯಲಿರುವ ಮೈಸೂರು ಮಹಾನಗರಪಾಲಿಕೆ 18ನೇ ವಾರ್ಡಿನ ಉಪ ಚುನಾವಣೆಗೆ ಸ್ಪರ್ಧೆ ಬಯಸಿ ಸಲ್ಲಿಸಿರುವ ನಾಲ್ಕೂ ಅಭ್ಯರ್ಥಿಗಳ ನಾಮಪತ್ರಗಳೂ ಕ್ರಮಬದ್ಧವಾಗಿವೆ ಎಂದು ಚುನಾವಣಾ ಧಿಕಾರಿ ಹೆಚ್.ಎನ್.ಶಿವೇಗೌಡ ತಿಳಿಸಿದ್ದಾರೆ. ಮೈಸೂರಿನ ಆಕಾಶವಾಣಿ ಸರ್ಕಲ್ನಲ್ಲಿರುವ ಪಾಲಿಕೆ ವಲಯ ಕಚೇರಿ-4ರಲ್ಲಿ ಇಂದು ಬೆಳಿಗ್ಗೆ ನಾಮಪತ್ರಗಳನ್ನು ಪರಿಶೀಲಿಸಲಾಯಿತು ಎಂದು ತಿಳಿಸಿದರು. ನಾಮಪತ್ರ ವಾಪಸ್ ಪಡೆಯಲು ಜ.31 ಕಡೇ ದಿನವಾಗಿದ್ದು, ಶುಕ್ರವಾರ ಮಧ್ಯಾಹ್ನ 3 ಗಂಟೆವರೆಗೆ ಅವಕಾಶವಿದೆ. ಬಿಜೆಪಿಯ…
ಫೆ.9ರಂದು `ಸ್ವರಾನುಭೂತಿ’ ಸಂಗೀತ ಕಾರ್ಯಕ್ರಮ
January 30, 2020ಮೈಸೂರು, ಜ.29(ಪಿಎಂ)- ಮಾರಣಾಂತಿಕ ಕಾಯಿಲೆಯಿಂದ ನರಳುವವರ ಆರೈಕೆಗಾಗಿ ಸ್ವಾಮಿ ವಿವೇಕಾನಂದ ಯೂತ್ ಮೂವ್ ಮೆಂಟ್ (ಎಸ್ವಿವೈಎಂ) `ಉಪಶಮನ ಆರೈಕೆ ಯೋಜನೆ’ ನಡೆಸು ತ್ತಿದೆ. ಈ ಯೋಜನೆಗೆ ಅಗತ್ಯವಿರುವ ಆರ್ಥಿಕ ಸಂಪನ್ಮೂಲ ಕ್ರೋಢೀಕರಿಸಲು ಖ್ಯಾತ ಗಾಯಕ ಡಾ.ಎಸ್.ಪಿ.ಬಾಲಸುಬ್ರಹ್ಮಣ್ಯಂ ಹಾಗೂ ಗಾಯಕಿ ದಿವ್ಯಾ ರಾಘವನ್ ಉಪಸ್ಥಿತಿಯಲ್ಲಿ ಫೆ.9ರಂದು `ಸ್ವರಾನುಭೂತಿ’ ಸಂಗೀತ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಯೋಜನೆ ನಿರ್ದೇಶಕ ರಾಮಕೃಷ್ಣ ಮುದ್ರೆ ತಿಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಬುಧವಾರ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಉಪಶಮನ ಆರೈಕೆ ಬಗ್ಗೆ ಸಮುದಾಯದಲ್ಲಿ…
ಚೆನ್ನೈ-ಬೆಂಗಳೂರು-ಮೈಸೂರು ಹೈಸ್ಪೀಡ್ ರೈಲ್ವೆ ಕಾರಿಡಾರ್ ನಿರ್ಮಾಣ ಮತ್ತೆ ಚಾಲ್ತಿಗೆ
January 30, 2020ದೇಶದ 6 ಹೈಸ್ಪೀಡ್ ರೈಲ್ವೆ ಕಾರಿಡಾರ್, ಸೆಮಿ, ಮೀಸಲು ಸರಕು ಕಾರಿಡಾರ್ ಪ್ರಸ್ತಾಪ ಮುಂದಿನ 2 ವರ್ಷದಲ್ಲಿ ಯೋಜನೆ ಪೂರ್ಣಗೊಳ್ಳುವ ವಿಶ್ವಾಸ ನವದೆಹಲಿ: ಚೆನ್ನೈ-ಬೆಂಗಳೂರು-ಮೈಸೂರು ಮಾರ್ಗ ಸೇರಿ ಇತರ 6 ಹೈಸ್ಪೀಡ್ ರೈಲ್ವೆ ಕಾರಿಡಾರ್, ಸೆಮಿ ಹಾಗೂ 4 ಮೀಸಲು ಸರಕು ಕಾರಿಡಾರ್ಗಳನ್ನು ಗುರುತಿಸಲಾ ಗಿದೆ. ರೈಲ್ವೆ ಮಂಡಳಿ ಮುಖ್ಯಸ್ಥ ವಿ.ಕೆ.ಯಾದವ್ ಮಾತನಾಡಿ, ರೈಲ್ವೆಯು 6 ಹೈಸ್ಪೀಡ್ ಮತ್ತು ಸೆಮಿ ಸ್ಪೀಡ್ ರೈಲು ಕಾರಿಡಾರ್ಗಳನ್ನು ಗುರುತಿಸಲಾಗಿದೆ. ಎಲ್ಲ ಕಾರಿಡಾರ್ಗಳ ಸಮಗ್ರ ಯೋಜನಾ ವರದಿಯು ಒಂದೆರಡು ವರ್ಷಗಳಲ್ಲಿ ಸಿದ್ಧವಾಗಲಿದೆ…
ಖಾಸಗಿ ಬ್ಯಾಂಕ್ ಮಾಜಿ ಅಧಿಕಾರಿ ನಿಗೂಢ ಸಾವು
January 30, 2020ಮೈಸೂರು, ಜ.29(ಆರ್ಕೆ)-ಖಾಸಗಿ ಬ್ಯಾಂಕಿನ ಮಾಜಿ ಅಧಿಕಾರಿಯೋರ್ವರು ನಿಗೂಢವಾಗಿ ಸಾವನ್ನಪ್ಪಿದ್ದು, ಅವರ ಪತ್ನಿ ಮತ್ತು ಆಕೆಯ ಸಹೋದರನನ್ನು ವಶಕ್ಕೆ ಪಡೆ ದಿರುವ ಮೈಸೂರಿನ ವಿಜಯನಗರ ಠಾಣೆ ಪೊಲೀಸರು ವಿಚಾರಣೆಗೊಳಪಡಿಸಿದ್ದಾರೆ. ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲದ ಮುಡಿಗುಂಡಂ ನಿವಾಸಿ ನಾಗೇಂದ್ರ ಮೂರ್ತಿ ಎಂಬುವರ ಪುತ್ರ ಸುಬ್ರಹ್ಮಣ್ಯ(35) ನಿಗೂಢ ವಾಗಿ ಸಾವನ್ನಪ್ಪಿದವರಾಗಿದ್ದು, ಇವರು ಈ ಹಿಂದೆ ಬೆಂಗಳೂರಿನ ಬಹುರಾಷ್ಟ್ರೀಯ ಖಾಸಗಿ ಬ್ಯಾಂಕ್ವೊಂದರ ಅಸಿಸ್ಟೆಂಟ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದರು. ಅನಾರೋಗ್ಯ ಪೀಡಿತರಾಗಿದ್ದ ಸುಬ್ರಹ್ಮಣ್ಯ ತಮ್ಮ ಪತ್ನಿಗೆ ಸೇರಿದ 87 ಲಕ್ಷ ರೂ. ಗಳನ್ನು…
ಮಹಿಳಾ ಪೊಲೀಸ್ ಪ್ರಶಿಕ್ಷಣಾರ್ಥಿಗಳ ಪಥ ಸಂಚಲನ
January 30, 2020ಮೈಸೂರು,ಜ.29(ಎಂಕೆ)- ಪೊಲೀಸ್ ತರಬೇತಿ ಶಾಲೆ ವತಿಯಿಂದ 4ನೇ ತಂಡದ ಮಹಿಳಾ ನಾಗರಿಕ ಪೊಲೀಸ್ ಕಾನ್ಸ್ಟೇಬಲ್, ರೈಲ್ವೇಸ್ ಮತ್ತು ಕೆಎಸ್ಐಎಸ್ಎಫ್ನ 239 ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥ ಸಂಚಲನ ಬುಧವಾರ ನಡೆಯಿತು. ಮೈಸೂರಿನ ಜ್ಯೋತಿನಗರದಲ್ಲಿರುವ ಡಿಎಆರ್ ಕವಾಯತು ಮೈದಾನದಲ್ಲಿ ಆಯೋ ಜಿಸಿದ್ದ ನಿರ್ಗಮನ ಪಥ ಸಂಚಲನ ಕಾರ್ಯ ಕ್ರಮದಲ್ಲಿ ತರಬೇತಿ ವಿಭಾಗದ ಪೊಲೀಸ್ ಮಹಾ ನಿರೀಕ್ಷಕ ಎಸ್.ರವಿ ಪ್ರಶಿಕ್ಷಣಾರ್ಥಿ ಗಳಿಂದ ಗೌರವ ವಂದನೆ ಸ್ವೀಕರಿಸಿದರು. ಬಳಿಕ ತರಬೇತಿಯಲ್ಲಿ ವಿವಿಧ ವಿಭಾಗ ಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತ ರಣೆ ಮಾಡಿದರು. ಸರ್ವೋತ್ತಮ…
ರತನ್ ಟಾಟಾ ಕಾಲಿಗೆ ನಮಸ್ಕರಿಸಿದ ನಾರಾಯಣಮೂರ್ತಿ
January 30, 2020ಮುಂಬೈ, ಜ.29- 72 ವರ್ಷದ ಇನ್ಫೋಸಿಸ್ ಸಹ- ಸಂಸ್ಥಾಪಕ ಎನ್.ಆರ್.ನಾರಾಯಣಮೂರ್ತಿ ಅವರು 82 ವರ್ಷದ ಭಾರತದ ಖ್ಯಾತ ಕೈಗಾರಿಕೋದ್ಯಮಿ ರತನ್ ಟಾಟಾ ಅವರ ಕಾಲಿಗೆ ನಮಸ್ಕರಿಸಿದ ವಿಡಿಯೋ, ಫೋಟೋಗಳು ಸಾಮಾಜಿಕ ಜಾಲತಾಣ ದಲ್ಲಿ ವೈರಲ್ ಆಗಿದ್ದು, ನಾರಾಯಣಮೂರ್ತಿ ಅವರ ಬಗ್ಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಮುಂಬೈನಲ್ಲಿ ಮಂಗಳವಾರ ನಡೆದ ಟೈಕಾನ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ರತನ್ ಟಾಟಾ ಅವರಿಗೆ ಟೈಕಾನ್ ಮುಂಬೈ 2020 ಜೀವಿತಾವಧಿ ಸಾಧನೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಈ ಪ್ರಶಸ್ತಿಯನ್ನು ಇನ್ಫೋಸಿಸ್ ಸಹ-ಸಂಸ್ಥಾಪಕ ಎನ್.ಆರ್….










