ಮಡಿಕೇರಿ,ಆ.8-ಕೊಡಗಿನಲ್ಲಿ ರಣ ಭೀಕರ ಮಳೆ ಮುಂದುವರಿದಿದ್ದು, ಕಾವೇರಿ ಮತ್ತು ಲಕ್ಷ್ಮಣ ತೀರ್ಥ ನದಿಗಳು ರೌದ್ರ ರೂಪ ತಾಳಿವೆ. ಜಿಲ್ಲೆಯ ಹತ್ತು ಹಲವು ಗ್ರಾಮಗಳು ಜಲ ಪ್ರಳಯಕ್ಕೆ ತುತ್ತಾ ಗಿವೆ. ನೂರಾರು ಮಂದಿ ಇಂದಿಗೂ ನದಿ ಪ್ರವಾಹದಲ್ಲಿ ಸಿಲುಕಿದ್ದು, ರಕ್ಷಣಾ ಕಾರ್ಯ ಕ್ಕಾಗಿ ಭಾರತೀಯ ಸೈನ್ಯದ ಯೋಧರ ಒಂದು ತಂಡ ಜಿಲ್ಲೆಗೆ ಆಗ ಮಿಸಿದ್ದು, ವಿವಿಧೆಡೆ ಸಿಲುಕಿರುವ ನಾಗರಿ ಕರ ಜೀವ ರಕ್ಷಣೆಯಲ್ಲಿ ತೊಡಗಿವೆ. ಜಿಲ್ಲೆಯಾದ್ಯಂತ ಆ.9ರ ಮಧ್ಯರಾತ್ರಿಯವ ರೆಗೂ “ರೆಡ್ ಅಲರ್ಟ್” ಘೋಷಿಸಲಾ ಗಿದ್ದು, ಕೊಡಗು ಮತ್ತೊಮ್ಮೆ…
ಸಂವಿಧಾನದ 370ನೇ ವಿಧಿ ರದ್ದತಿಯಿಂದ ಜಮ್ಮು-ಕಾಶ್ಮೀರ ಅಭಿವೃದ್ಧಿಗೆ ನಾಂದಿ
August 9, 2019ಜಮ್ಮು-ಕಾಶ್ಮೀರ ನಮ್ಮ ದೇಶದ ಮುಕುಟ. ಇಂತಹ ರಾಜ್ಯದಲ್ಲಿ ಉಗ್ರವಾದ ಹಾಗೂ ಭಯೋತ್ಪಾದನೆ ತಲೆ ಎತ್ತಲು, ರಾಜ್ಯ ಅಭಿವೃದ್ಧಿಯಿಂದ ವಂಚಿತವಾಗಲು ಕಲಂ 370 ಮತ್ತು 35ಎ ಕಾರಣವಾಗಿತ್ತು. ಹೀಗಾಗಿ ಕಣಿವೆ ರಾಜ್ಯದ ಅಭಿವೃದ್ಧಿಗಾಗಿ ಈ ವಿಧಿಗಳನ್ನು ರದ್ದು ಮಾಡಿ ಕಾಶ್ಮೀರವನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಪರಿ ವರ್ತಿಸಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಕಲಂ 370 ರದ್ದು ಮಾಡಿರುವ ತಮ್ಮ ಸರ್ಕಾರದ ನಿರ್ಣಯವನ್ನು ಸಮರ್ಥಿಸಿಕೊಂಡಿದ್ದಾರೆ. ಕೇಂದ್ರ ಸರ್ಕಾರದ ಗೃಹಮಂತ್ರಿ ಅಮಿತ್ ಶಾ ಕಳೆದ ಸೋಮವಾರ ರಾಜ್ಯಸಭೆ ಯಲ್ಲಿ ಜಮ್ಮು ಮತ್ತು…
ಜಿಟಿ ಜಿಟಿ ಮಳೆ ನಡುವೆಯೂ ಹೂವು, ಹಣ್ಣು, ತರಕಾರಿ ಮಾರಾಟ ಬಲು ಜೋರು
August 9, 2019ಮೈಸೂರು, ಆ.8(ಆರ್ಕೆಬಿ)- ಶುಕ್ರವಾರ (ಆ.9)ದ ವರಮಹಾಲಕ್ಷ್ಮಿ ಹಬ್ಬದ ಹಿನ್ನೆಲೆಯಲ್ಲಿ ಗುರುವಾರ ಮೈಸೂ ರಿನ ದೇವರಾಜ ಮಾರುಕಟ್ಟೆ, ಚಿಕ್ಕ ಗಡಿಯಾರ ಇನ್ನಿತರ ಕಡೆಗಳಲ್ಲಿ ಭಾರೀ ಜನಸಂದಣಿ. ಜಿಟಿ ಜಿಟಿ ಮಳೆಯ ನಡುವೆಯೂ ಹಬ್ಬಕ್ಕೆ ಹಣ್ಣು, ಹೂವು ತರಕಾರಿ, ಪೂಜಾ ಸಾಮಗ್ರಿಗಳ ಖರೀದಿ ಜೋರಾಗಿಯೇ ನಡೆದಿತ್ತು. ಹಬ್ಬದ ಹಿನ್ನೆಲೆಯಲ್ಲಿ ಹೂವು ಮತ್ತು ಹಣ್ಣುಗಳ ಬೆಲೆ ಗಗನ ಕ್ಕೇರಿತ್ತು. ಆದರೆ ತರಕಾರಿ ಬೆಲೆ ಸ್ವಲ್ಪ ಸ್ಥಿರವಾಗಿತ್ತು. ಸೇವಂತಿಗೆ ಹೂವು ಪ್ರತಿ ಮಾರಿಗೆ ರೂ.100ರಿಂದ 120 ರೂ.ಗಳಿಗೆ ಮಾರಾಟವಾಗುತ್ತಿತ್ತು. ಬಟನ್ ಗುಲಾಬಿ ಕಾಲು…
ಅನುದಾನದ ಕೊರತೆ: ಗ್ರಂಥಾಲಯ ಬೃಹತ್ ಕಟ್ಟಡದ ಕಾಮಗಾರಿ ಸ್ಥಗಿತ
August 9, 2019ಮೈಸೂರು, ಆ.8(ಆರ್ಕೆಬಿ)- ಮೈಸೂ ರಿನ ಪೀಪಲ್ಸ್ ಪಾರ್ಕ್ ಆವರಣದಲ್ಲಿ ನಿರ್ಮಿಸಲಾಗುತ್ತಿರುವ ಗ್ರಂಥಾಲಯದ ಬೃಹತ್ ಕಟ್ಟಡದ ಕಾಮಗಾರಿ ಅನುದಾನದ ಕೊರತೆಯಿಂದ ಸ್ಥಗಿತಗೊಂಡಿದೆ. 5 ಕೋಟಿ ರೂ. ಅಂದಾಜು ವೆಚ್ಚದ ಎರಡು ಅಂತ ಸ್ತಿನ ಕಟ್ಟಡಕ್ಕೆ ಸರ್ಕಾರ 4 ಕೋಟಿ ರೂ ಹಾಗೂ ಗ್ರಂಥಾಲಯ ಇಲಾಖೆ 25 ಲಕ್ಷ ರೂ. ನೀಡಿತ್ತು. ಆದರೆ ಉಳಿದ ಕಾಮಗಾರಿ ಗಳಿಗೆ ಅನುದಾನದ ಕೊರತೆ ಉಂಟಾಗಿದೆ. ಪೀಪಲ್ಸ್ ಪಾರ್ಕ್ನ 340 ಘಿ 400 ಅಡಿ ಅಳತೆ ನಿವೇಶನದಲ್ಲಿ ಗ್ರಂಥಾಲಯ ಕಟ್ಟಡದ ನಿರ್ಮಾಣ ಕಾಮಗಾರಿ ಶೇ.75…
ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಭೇಟಿ, ಗ್ರಂಥಾಲಯ ಕಟ್ಟಡ ಪರಿಶೀಲನೆ
August 9, 2019ಮೈಸೂರು, ಆ.8(ಆರ್ಕೆಬಿ)- ಮೈಸೂ ರಿನ ಪೀಪಲ್ಸ್ ಪಾರ್ಕ್ನಲ್ಲಿ ನಿರ್ಮಾಣದ ಅಂತಿಮ ಹಂತದಲ್ಲಿರುವ ಎರಡು ಅಂತ ಸ್ತಿನ ಬೃಹತ್ ಗ್ರಂಥಾಲಯ ಕಟ್ಟಡವನ್ನು ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯ ದರ್ಶಿ ಉಮಾಶಂಕರ್ ಅವರು ಬುಧವಾರ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಕಟ್ಟಡ ಉತ್ತಮ ಗುಣಮಟ್ಟದಿಂದ ನಿರ್ಮಾಣ ಗೊಂಡಿರುವ ಬಗ್ಗೆ ಶ್ಲಾಘಿಸಿದರು. ಉಳಿದ ಕಾಮಗಾರಿ ಶೀಘ್ರ ಪೂರ್ಣಗೊಳಿಸು ವಂತೆ ಮೈಸೂರು ಜಿಲ್ಲಾ ಗ್ರಂಥಾಲಯ ಉಪನಿರ್ದೇಶಕರಿಗೆ ಸೂಚಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಉಪ ನಿರ್ದೇಶಕ ಬಿ.ಮಂಜುನಾಥ್, ಸರ್ಕಾರ ಮತ್ತು ಇಲಾಖೆ ನೀಡಿದ ಅನುದಾನದಲ್ಲಿ ಮೊದಲ…
‘ಬಿ’ ಖರಾಬು ನಿರ್ಬಂಧ ತೆರವುಗೊಳಿಸಲು ಶಾಸಕರು, ಸಿಎಂಗೆ ಸರ್ವೇ ನಂ.4ರ ನಿವಾಸಿಗಳ ಆಗ್ರಹ
August 9, 2019ಮೈಸೂರು,ಆ.8(ಪಿಎಂ)-ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನ ಸರ್ವೇ ನಂ.4ರ ಸಿದ್ಧಾರ್ಥನಗರ, ಕೆ.ಸಿ.ನಗರ, ಜೆ.ಸಿ.ನಗರ ಬಡಾವಣೆಗಳಿಗೆ ವಿಧಿಸಿರುವ `ಬಿ’ ಖರಾಬು ನಿರ್ಬಂಧ ತೆರವುಗೊಳಿಸಲು ಶೀಘ್ರ ಕ್ರಮ ವಹಿಸುವಂತೆ ಶಾಸಕ ಎಸ್.ಎ.ರಾಮದಾಸ್ ಹಾಗೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಲ್ಲಿ ಸಿದ್ಧಾರ್ಥನಗರ ಶೋಷಿತರ ಸಂಘ ಮನವಿ ಮಾಡಿದೆ. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಘದ ಸದಸ್ಯ ಹೆಚ್.ಆರ್.ಮಂಜುನಾಥ್, ಸರ್ಕಾರಿ ಅಧೀನದ ಹಿಂದಿನ ಸಿಐಟಿಬಿ ಹಾಗೂ ಈಗಿನ ಮುಡಾ ನಿರ್ಮಿಸಿರುವ ಈ ಬಡಾವಣೆಗಳಿಗೆ `ಬಿ’ ಖರಾಬು ಎಂದು ನಿರ್ಬಂಧ ವಿಧಿಸಿರುವ ಹಿನ್ನೆಲೆಯಲ್ಲಿ…
ಮೈಸೂರು ವಿವಿ ಕ್ರಾಫರ್ಡ್ ಭವನದ ಮುಂದೆ ಪ್ರತಿಭಟನೆ
August 9, 2019ಮೈಸೂರು,ಆ.8(ಎಂಟಿವೈ)- ಮೈಸೂರು ವಿಶ್ವವಿದ್ಯಾ ನಿಲಯದಲ್ಲಿ ನಿಯಮ ಬಾಹಿರವಾಗಿ ನೇಮಕಾತಿ ನಡೆಸುತ್ತಿದ್ದು, ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಮೈಸೂರು ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯ ಕರ್ತರು ಕ್ರಾಫರ್ಡ್ ಭವನದ ಮುಂದೆ ಪ್ರತಿಭಟಿಸಿದರು. ಇತ್ತೀಚಿನ ದಿನಗಳಲ್ಲಿ ಮೈಸೂರು ವಿವಿಯು ನಿಯಮವನ್ನು ಗಾಳಿಗೆ ತೂರಲಾಗುತ್ತಿದೆ. ಅಧಿಕಾರಿಗಳು, ಕುಲಪತಿಗಳು ಅಕ್ರಮ ನೇಮಕಾತಿಗೆ ಕುಮ್ಮಕ್ಕು ನೀಡುತ್ತಿದ್ದಾರೆ. ಇದರಿಂದ ಮೈಸೂರು ವಿವಿಗೆ ಕೆಟ್ಟ ಹೆಸರು ಬರುತ್ತಿದ್ದು, ನಗೆಪಾಟಲಿಗೀಡಾಗುತ್ತಿದೆ. ರಾಜ್ಯಪಾಲರ ಆದೇಶವನ್ನು ಧಿಕ್ಕರಿಸಿ ನೇಮಕಾತಿ ಪ್ರಕ್ರಿಯೆ ನಡೆಸಲಾಗುತ್ತಿದೆ. ಈ ಬಾರಿ ಕೊರತೆಯ…
ಮೈಸೂರು ಜಿಲ್ಲೆಯಲ್ಲಿ 2 ಲಕ್ಷ ಮಂದಿ ನೋಂದಾಯಿಸುವ ಗುರಿ
August 9, 2019ಮೈಸೂರು, ಆ.8(ಪಿಎಂ)- ಮೈಸೂರು ಜಿಲ್ಲೆ ಗ್ರಾಮಾಂತರ ಪ್ರದೇಶದಲ್ಲಿ ಬಿಜೆಪಿ ಸದಸ್ಯತ್ವ ನೋಂದಣಿ ಅಭಿಯಾನ ಆರಂ ಭಿಸಿದ್ದು, ಎರಡು ಲಕ್ಷ ಸದಸ್ಯರನ್ನು ನೋಂದಾ ಯಿಸಲು ಉದ್ದೇಶಿಸಲಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷರೂ ಆದ ಮಾಜಿ ಸಚಿವ ಕೋಟೆ ಎಂ.ಶಿವಣ್ಣ ತಿಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನ ದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತ ನಾಡಿದ ಅವರು, ಬಿಜೆಪಿ ದೇಶದಾದ್ಯಂತ ಸದಸ್ಯತ್ವ ನೋಂದಣಿ ಅಭಿಯಾನ ಆರಂ ಭಿಸಿದ್ದು, ದೆಹಲಿಯಲ್ಲಿ ಜು.7ರಂದು ಪ್ರಧಾನಿ ನರೇಂದ್ರ ಮೋದಿ ಸದಸ್ಯತ್ವ ನೋಂದಣಿ ಅಭಿಯಾನಕ್ಕೆ ಚಾಲನೆ ನೀಡಿದರು. ಅದೇ…
ಯುವ ಸಮೂಹ ನಾಯಕತ್ವದ ಗುಣ ಬೆಳೆಸಿಕೊಳ್ಳಬೇಕು
August 9, 2019ಮೈಸೂರು, ಆ.8- ನಗರದ ದಟ್ಟಗಳ್ಳಿ ಯಲ್ಲಿರುವ ಎಸ್ವಿಜಿ ವಿಶ್ವಪ್ರಜ್ಞ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಭಾರತ್ ಸ್ಕೌಟ್ ಮತ್ತು ಗೈಡ್ಸ್ನ ರೋವರ್ ಹಾಗೂ ರೇಂಜರ್ ಘಟಕದ ಉದ್ಘಾಟನಾ ಸಮಾ ರಂಭವನ್ನು ಇತ್ತೀಚೆಗೆ ಹಮ್ಮಿಕೊಳ್ಳಲಾ ಗಿತ್ತು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಮೈಸೂರಿನ ಭಾರತ್ ಸ್ಕೌಟ್ ಮತ್ತು ಗೈಡ್ಸ್ನ ಜಿಲ್ಲಾ ಸಂಘಟಕರಾದ ಕೆ.ರಾಮಪ್ರಸಾದ್ ಜ್ಯೋತಿ ಬೆಳಗಿಸುವುದರ ಮೂಲಕ ಕಾರ್ಯ ಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಯುವ ಜನರು ಸ್ವತಂತ್ರಮತ್ತು ಸ್ವಾವಲಂಬಿಯಾಗಿ ತಮ್ಮ ಬದುಕು ಕಟ್ಟಿಕೊಳ್ಳಲು ಹಾಗೂ ನಾಯ ಕತ್ವದ ಗುಣಗಳನ್ನು ಮೈಗೂಡಿಸಿಕೊಳ್ಳಲು…
ಆ.11ಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯರ ಆಡಳಿತ ಕುರಿತ ಕೃತಿ ಬಿಡುಗಡೆ
August 9, 2019ಮೈಸೂರು, ಆ.8(ಪಿಎಂ)- ಬೆಂಗಳೂರಿನ ಜನಮನ ಪ್ರಕಾಶನದ ವತಿಯಿಂದ `ಸಿದ್ದರಾಮಯ್ಯ ಆಡಳಿತ-ಅಂತರಂಗ-ಬಹಿರಂಗ : ವರ್ತ ಮಾನದ ಇತಿಹಾಸ’ ಕೃತಿ ಬಿಡುಗಡೆ ಸಮಾರಂಭವನ್ನು ಬೆಂಗ ಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಆ.11ರಂದು ಹಮ್ಮಿಕೊಳ್ಳ ಲಾಗಿದೆ ಎಂದು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಅಧ್ಯಕ್ಷ ಕೆ.ಎಸ್.ಶಿವರಾಮು ತಿಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಗುರುವಾರ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ನೀಡಿದ ಆಡಳಿತ ನಿರ್ವಹಣೆಯನ್ನು ಕೇಂದ್ರವಾಗಿಸಿಕೊಂಡು ಈ ಕೃತಿ ಹೊರತರಲಾಗಿದೆ. ಅಂದು ಬೆಳಿಗ್ಗೆ 11ಕ್ಕೆ ಹಿರಿಯ…










