ಲಡಾಖ್ ಸಂಘರ್ಷ ಬೆನ್ನಲ್ಲೇ ಚೀನಾಗೆ ಮೊದಲ ಪೆಟ್ಟು:  471 ಕೋಟಿ ರೂ. ವೆಚ್ಚದ ರೈಲ್ವೆ ಯೋಜನೆಗಳು ರದ್ದು
ಮೈಸೂರು

ಲಡಾಖ್ ಸಂಘರ್ಷ ಬೆನ್ನಲ್ಲೇ ಚೀನಾಗೆ ಮೊದಲ ಪೆಟ್ಟು: 471 ಕೋಟಿ ರೂ. ವೆಚ್ಚದ ರೈಲ್ವೆ ಯೋಜನೆಗಳು ರದ್ದು

June 19, 2020

ನವದೆಹಲಿ, ಜೂ.18- 20 ಭಾರತೀಯ ಯೋಧರ ಬಲಿದಾನ ವ್ಯರ್ಥವಾಗಲು ಬಿಡುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿಕೆ ಬೆನ್ನಲ್ಲೇ ಇದೀಗ ಕೇಂದ್ರ ಸರ್ಕಾರ ಚೀನಾ ಕಂಪನಿಗೆ ನೀಡಿದ್ದ 471 ಕೋಟಿ ರೂ. ವೆಚ್ಚದ ರೈಲ್ವೆ ಯೋಜನೆಯನ್ನು ರದ್ದುಪಡಿಸಿದೆ. ಕಾನ್ಪುರ್-ದೀನ್ ದಯಾಳ್ ಉಪಾಧ್ಯಾಯ ವಿಭಾಗದಲ್ಲಿ ಸಿಗ್ನಲಿಂಗ್ ಮತ್ತು ದೂರಸಂಪರ್ಕ ಕಲ್ಪಿಸುವ ಯೋಜನೆಯನ್ನು ಬೀಜಿಂಗ್ ನ್ಯಾಷನಲ್ ರೈಲ್ವೆ ರಿಸರ್ಚ್ ಅಂಡ್ ಡಿಸೈನ್ ಇನ್ಸಿಟ್ಯೂಷನ್ ಆಫ್ ಸಿಗ್ನಲ್ ಅಂಡ್ ಕಮ್ಯೂನಿಕೇಷನ್ ಗ್ರೂಪ್ ಕಂಪನಿಗೆ ಜೂನ್ 2016ರಲ್ಲಿ ಗುತ್ತಿಗೆ ನೀಡಲಾಗಿತ್ತು. ವಿಶ್ವಬ್ಯಾಂಕ್‍ನಿಂದ 471 ಕೋಟಿ ಸಾಲ ಪಡೆದು ಗುತ್ತಿಗೆ ನೀಡಲಾಗಿತ್ತು. 4 ವರ್ಷ ದಲ್ಲಿ ಕೇವಲ 20ರಷ್ಟು ಕೆಲಸ ಮಾತ್ರ ಪೂರ್ಣಗೊಂಡಿದ್ದು ಕಳಪೆ ಸಾಧನೆ ಎಂಬ ಕಾರಣ ನೀಡಿ ಒಪ್ಪಂದವನ್ನು ಕೇಂದ್ರ ರೈಲ್ವೆ ಸಚಿವಾಲಯ ರದ್ದು ಮಾಡಿದೆ. ಡೆಡಿಕೇಟೆಡ್ ಫ್ರೀಟ್ ಕಾರಿಡಾರ್ ಕಾಪೆರ್Çೀರೇಶನ್ ಇಂಡಿಯಾ(ಡಿಎಫ್ಸಿಸಿಐಎಲ್) ಸಂಸ್ಥೆಯು ಬೀಜಿಂಗ್ ನ್ಯಾಷನಲ್ ರೈಲ್ವೆ ರೀಸರ್ಚ್ ಅಂಡ್ ಡಿಸೈನ್ (ಬಿಎನ್ ಆರ್‍ಆರ್ಡಿಡಿಐ) ಸಂಸ್ಥೆ ಜೊತೆಗಿನ ಒಪ್ಪಂದವನ್ನು ರದ್ದು ಮಾಡಿದೆ.

 

 

Translate »