ಕಾಂಗ್ರೆಸ್ ಸೇವಾದಳ ಪದಾಧಿಕಾರಿಗಳು,  ಮಂಗಳಮುಖಿಯರಿಗೆ ದಿನಸಿ ಕಿಟ್ ವಿತರಣೆ
ಮೈಸೂರು

ಕಾಂಗ್ರೆಸ್ ಸೇವಾದಳ ಪದಾಧಿಕಾರಿಗಳು, ಮಂಗಳಮುಖಿಯರಿಗೆ ದಿನಸಿ ಕಿಟ್ ವಿತರಣೆ

July 12, 2021

ಮೈಸೂರು,ಜು.11(ಆರ್‍ಕೆಬಿ)-ಮಾಜಿ ಮುಖ್ಯಮಂತ್ರಿ ಡಿ.ದೇವ ರಾಜು ಅರಸು ಅವರ ಒಡನಾಡಿ ಕಾಂಗ್ರೆಸ್ ಸುಬ್ಬಣ್ಣ (ಬಾಲಸುಬ್ರ ಹ್ಮಣ್ಯಂ) ಅವರು ಕಾಂಗ್ರೆಸ್ ಭವನದಲ್ಲಿ ಕೋವಿಡ್ ಲಾಕ್‍ಡೌನ್ ನಿಂದಾಗಿ ಸಂಕಷ್ಟಕ್ಕೆ ಸಿಲುಕಿದ್ದ ಕಾಂಗ್ರೆಸ್ ಸೇವಾದಳ ಪದಾಧಿಕಾರಿ ಗಳು, ಮಂಗಳಮುಖಿಯರಿಗೆ ದಿನಸಿ ಕಿಟ್‍ಗಳನ್ನು ವಿತರಿಸಿದರು.

ಈ ವೇಳೆ ಮಾತನಾಡಿದ ಅವರು, ನೂರಾರು ವರ್ಷಗಳ ಇತಿ ಹಾಸವಿರುವ ಕಾಂಗ್ರೆಸ್ ಚರಿತ್ರೆಯನ್ನು ಅಳಿಸಲು ಇತ್ತೀಚೆಗೆ ಬಿಜೆಪಿ ಪ್ರಯತ್ನಿಸುತ್ತಿದೆ. ಕಾಂಗ್ರೆಸ್ ಚರಿತ್ರೆಯನ್ನು ಯಾರಿಂದಲೂ ಅಳಿ ಸಲು ಸಾಧ್ಯವಿಲ್ಲ. ಬಡವರು, ಹಿಂದುಳಿದವರು, ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ ಕಾಂಗ್ರೆಸ್ ಶ್ರಮಿಸಿದೆ. ಜವಾಹರ್‍ಲಾಲ್ ನೆಹರು, ಇಂದಿರಾಗಾಂಧಿ, ರಾಜೀವ್‍ಗಾಂಧಿ ಅವರು ಹಲವು ಜನಪರ ಕಾರ್ಯಕ್ರಮಗಳ ಮೂಲಕ ಕಾಂಗ್ರೆಸ್ ಅನ್ನು ಮುನ್ನೆ ಲೆಗೆ ತಂದಿದ್ದಾರೆ. ಆದರೆ ಇಂದು ಮಹಾತ್ಮಾಗಾಂಧಿಯನ್ನು ಕೊಂದ ಗೋಡ್ಸೆಯ ಜನ್ಮದಿನವನ್ನು ಬಿಜೆಪಿಯವರು ಆಚರಿಸುತ್ತಿದ್ದಾರೆ. ಇದು ಈ ದೇಶದ ದುರ್ದೈವ ಎಂದು ಬೇಸರ ವ್ಯಕ್ತಪಡಿಸಿದರು.

ಇಂದು ಕೊರೊನಾ ಸಾಂಕ್ರಾಮಿಕ ರೋಗಕ್ಕೆ ಸಾವಿರಾರು ಜನರು ಬಲಿಯಾಗಲು ಬಿಜೆಪಿಯೇ ಕಾರಣ ಎಂದು ಆರೋ ಪಿಸಿದ ಅವರು, ಇಂದು ದೇಶ ರಕ್ಷಿಸುವ ಜವಾಬ್ದಾರಿ ಯುವಕರ ಮೇಲಿದೆ. ಇದನ್ನು ಅರಿತು ಯುವಕರು ಕಾಂಗ್ರೆಸ್‍ನೊಂದಿಗೆ ಕೈಜೋಡಿಸಿ ದೇಶ ರಕ್ಷಣೆಗೆ ನಿಲ್ಲಬೇಕಾಗಿದೆ ಎಂದರು.

ಮೈಸೂರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಬಿ.ಜೆ.ವಿಜಯ ಕುಮಾರ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಹಿರಿಯ ಕಾಂಗ್ರೆಸಿನ ಸುಬ್ಬಣ್ಣ, 6 ದಶಕಗಳಿಂದ ಕಾಂಗ್ರೆಸ್ ಸಿದ್ಧಾಂತದೊಂದಿಗೆ ಪಕ್ಷಕ್ಕೆ ದುಡಿದಿದ್ದಾರೆ ಎಂದರು. ಇದೇ ವೇಳೆ ಕಾಂಗ್ರೆಸ್ ಸೇವಾದಳ ರಾಜ್ಯಾಧ್ಯಕ್ಷೆ ಪ್ಯಾರಿಜಾನ್, ಮಂಗಳಮುಖಿಯರ ಜಿಲ್ಲಾ ಪ್ರತಿನಿಧಿ ಮಂಜುಳಾ, ಸೇವಾದಳ ಜಿಲ್ಲಾಧ್ಯಕ್ಷೆ ಗೀತಾ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಯಡತಲೆ ಮಂಜುನಾಥ್, ಹಿರಿಯ ಪ್ರಧಾನ ಕಾರ್ಯದರ್ಶಿ ಉತ್ತನಹಳ್ಳಿ ಶಿವಣ್ಣ ಇನ್ನಿತರರು ಉಪಸ್ಥಿತರಿದ್ದರು.

Translate »