ರಾಜ್ಯದಲ್ಲಿ ಕೊರೊನಾ ಇಳಿಮುಖ ಮೈಸೂರು ಜಿಲ್ಲೆಯಲ್ಲಿ ೨೧ ಮಂದಿಗೆ ಸೋಂಕು
ಮೈಸೂರು

ರಾಜ್ಯದಲ್ಲಿ ಕೊರೊನಾ ಇಳಿಮುಖ ಮೈಸೂರು ಜಿಲ್ಲೆಯಲ್ಲಿ ೨೧ ಮಂದಿಗೆ ಸೋಂಕು

October 17, 2021

ಮೈಸೂರು,ಅ.೧೬(ವೈಡಿಎಸ್)- ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಇಳಿಮುಖವಾಗುತ್ತಿದೆ. ಶನಿವಾರ ೨೬೪ ಮಂದಿಗೆ ಸೋಂಕು ತಗುಲಿದ್ದು, ೪೨೧ ಮಂದಿ ಗುಣಮುಖರಾಗಿದ್ದಾರೆ. ಮೈಸೂರಿನ ಓರ್ವ ಸೇರಿದಂತೆ ರಾಜ್ಯದಲ್ಲಿ ೬ ಮಂದಿ ಸಾವನ್ನಪ್ಪಿದ್ದಾರೆ. ಮೈಸೂರು ಜಿಲ್ಲೆಯಲ್ಲಿ ಶನಿವಾರ ೨೧ ಮಂದಿಗೆ ಸೋಂಕು ದೃಢಪಟ್ಟಿದ್ದು, ಓರ್ವ ಸಾವನ್ನಪ್ಪಿದ್ದಾರೆ. ಜಿಲ್ಲೆಯಲ್ಲಿ ಶನಿವಾರÀ ೫೬ ಮಂದಿ ಸೇರಿದಂತೆ ಇದುವರೆಗೆ ೧,೭೫,೯೧೧ ಮಂದಿ ಗುಣಮುಖರಾಗಿದ್ದಾರೆ. ಜಿಲ್ಲೆಯಲ್ಲಿ ಈವರೆಗೆ ೧,೭೮,೬೯೬ ಮಂದಿಗೆ ಸೋಂಕು ತಗುಲಿದಂತಾಗಿದೆ. ಇದುವರೆಗೆ ೨,೪೦೩ ಮಂದಿ ಸಾವನ್ನಪ್ಪಿದ್ದು, ಜಿಲ್ಲೆಯಲ್ಲಿನ್ನೂ ೩೮೨ ಸಕ್ರಿಯ ಪ್ರಕರಣಗಳಿವೆ. ಹೆಚ್.ಡಿ.ಕೋಟೆ ತಾಲೂಕಿನ ಸರಗೂರಿನ ೬೫ ವರ್ಷದ ವೃದ್ಧ ಸಾವನ್ನಪ್ಪಿದ್ದಾರೆ.

ರಾಜ್ಯ: ಬೆಂಗಳೂರು ಗ್ರಾಮಾಂತರ ೫, ಬೆಂಗಳೂರು ನಗರ ೧೨೧, ಚಾಮರಾಜನಗರ ೧, ಚಿಕ್ಕಬಳ್ಳಾಪುರ ೧, ಚಿಕ್ಕಮಗಳೂರು ೯, ದಕ್ಷಿಣಕನ್ನಡ ೩೪, ಹಾಸನ ೧೬, ಹಾವೇರಿ ೧, ಕಲಬುರಗಿ ೧, ಕೊಡಗು ೧೨, ಕೋಲಾರ ೭, ಮಂಡ್ಯ ೭, ಮೈಸೂರು ೨೧, ರಾಯಚೂರು ೧, ರಾಮನಗರ ೨, ಶಿವಮೊಗ್ಗ ೫, ತುಮಕೂರು ೬, ಉಡುಪಿ ೧೦, ಉತ್ತರಕನ್ನಡ ೩, ಯಾದಗಿರಿ ೧ ಸೇರಿ ರಾಜ್ಯದಲ್ಲಿ ಶನಿವಾರ ೨೬೪ ಪಾಸಿಟಿವ್ ಪ್ರಕರಣ ಪತ್ತೆಯಾಗಿವೆ. ಬಾಗಲಕೋಟೆ, ಬಳ್ಳಾರಿ, ಬೆಳಗಾವಿ, ಬೀದರ್, ಚಿತ್ರದುರ್ಗ, ದಾವಣಗೆರೆ, ಧಾರವಾಡ, ಗದಗ, ಕೊಪ್ಪಳ, ವಿಜಯಪುರ ಜಿಲ್ಲೆಯಲ್ಲಿ ಶನಿವಾರ ಒಂದೂ ಪ್ರಕರಣವಿಲ್ಲ. ಇದರೊಂದಿಗೆ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ ೨೯,೮೩,೧೩೩ಕ್ಕೆ ಏರಿಕೆಯಾಗಿದೆ. ಇಂದು ಗುಣಮುಖರಾದ ೪೨೧ ಮಂದಿ ಸೇರಿ ಇದುವರೆಗೆ ೨೯,೩೫,೬೫೯ ಸೋಂಕಿತರು ಗುಣಮುಖವಾಗಿದ್ದಾರೆ. ಶನಿವಾರ ರಾಜ್ಯದಲ್ಲಿ ೬ ಸೋಂಕಿತರು ಮೃತಪಟ್ಟಿದ್ದು, ಒಟ್ಟು ಸಾವಿನ ಸಂಖ್ಯೆ ೩೭,೯೩೭ಕ್ಕೆ ಏರಿಕೆಯಾಗಿದೆ. ಇನ್ನು ೯,೫೦೮ ಸಕ್ರಿಯ ಪ್ರಕರಣಗಳಿವೆ.

Translate »