ಬೆಂಗಳೂರಲ್ಲಿ ಇನ್ಮುಂದೆ ಕೊರೊನಾ ಜವಾಬ್ದಾರಿ ಆಯಾ ವಾರ್ಡ್ ಕಾರ್ಪೊರೇಟರ್ ಹೆಗಲಿಗೆ
ಮೈಸೂರು

ಬೆಂಗಳೂರಲ್ಲಿ ಇನ್ಮುಂದೆ ಕೊರೊನಾ ಜವಾಬ್ದಾರಿ ಆಯಾ ವಾರ್ಡ್ ಕಾರ್ಪೊರೇಟರ್ ಹೆಗಲಿಗೆ

July 7, 2020

ಬೆಂಗಳೂರು, ಜು. 6- ಬೆಂಗಳೂರಿನಲ್ಲಿ ಇನ್ಮುಂದೆ ಕೊರೊನಾ ಸಂಬಂಧಿಸಿದ ಜವಾಬ್ದಾರಿ ಆಯಾ ವಾರ್ಡ್ ಕಾಪೆರ್Çರೇಟರ್ ನೋಡಿಕೊಳ್ಳು ತ್ತಾರೆ. ಅವರಿಗೆ ಅನುದಾನ ನೀಡುತ್ತಿದ್ದು, ಅಧಿಕಾರಿಗಳ ಸಹಕಾರ ದೊಂದಿಗೆ ಕೊರೊನಾಗೆ 24 ಗಂಟೆ ಕೆಲಸ ಮಾಡಿ ನಿಮ್ಮ ವಾರ್ಡ್ ಸುರಕ್ಷಿತವಾಗಿಟ್ಟುಕೊಳ್ಳಿ ಎಂದು ಸಚಿವ ಆರ್.ಅಶೋಕ್ ತಿಳಿಸಿದರು.

ಪ್ರತಿ ವಾರ್ಡ್‍ನಲ್ಲಿ ಕೊರೊನಾ ಕುರಿತು ಮಾಹಿತಿ ನೀಡಿ. ಪಾಸಿಟಿವ್ ಕೇಸ್ ಬಂದರೆ ಆಯಾ ವಾರ್ಡ್ ಕಾಪೆರ್Çೀರೇಟರ್ ಸಹಯೋಗದಲ್ಲಿ ಕೆಲಸ ಮಾಡಬೇಕು. ಸೀಲ್‍ಡೌನ್ ಆಗುವ ಏರಿಯಾದಲ್ಲಿ ಒಂದು ವಾರ್ಡ್‍ಗೆ 20 ಲಕ್ಷ ನೀಡಲಾಗುವುದು. ರೋಗಿಗೆ ಆಂಬುಲೆನ್ಸ್, ಡಯಾಲಿಸಿಸ್, ವೈದ್ಯಕೀಯ ವೆಚ್ಚಕ್ಕೆ ಕಾಪೆರ್Çರೇಟರ್ ಬಳಸಬಹುದು. ಮೆಡಿಕಲ್ ಫಂಡ್ ಪ್ರತಿ ವಾರ್ಡ್‍ಗೆ 10 ಲಕ್ಷ ಇದೆ. ಇದರಲ್ಲಿ ಮೊದಲ ಆದ್ಯತೆ ಮೇರೆಗೆ ಮಹಿಳೆಯರ ಹೆರಿಗೆಗೆ ಅನುದಾನ ತೆಗೆದಿರಿಸಲಾಗಿದೆ. ಇದರ ಸದ್ಬಳಕೆಯಾಗಲಿ ಎಂದರು.

ಪ್ರತಿ ವಾರ್ಡ್‍ನಲ್ಲಿ ಕಾಪೆರ್Çರೇಟರ್ ನೇತೃತ್ವದಲ್ಲಿ ಆಟೋದಲ್ಲಿ ಜಾಗೃತಿ ಮೂಡಿಸ ಬೇಕು. ಭಯ ಬೇಡ, ಜಾಗೃತಿ ಇರಲಿ ಎಂಬ ಘೋಷವಾಕ್ಯವಿರಬೇಕು. ಆಟೋದಲ್ಲಿ ಅನೌನ್ಸ್ ಮಾಡುವವರು ಸಂಬಂಧಿಸಿದವರ ಫೆÇೀನ್ ನಂಬರ್ ಹೇಳಬೇಕು. ಪಕ್ಷಾ ತೀತವಾಗಿ ತಮ್ಮ ವಾರ್ಡ್‍ಗಳನ್ನು ರಕ್ಷಣೆ ಮಾಡುವ ಕೆಲಸ ಕಾಪೆರ್Çರೇಟರ್ ಮಾಡಬೇಕು. 24 ಗಂಟೆ ಕಾಪೆರ್Çರೇಟರ್ ಮೊಬೈಲ್‍ನಲ್ಲಿ ಸಿಗಬೇಕು ಎಂದು ಕೇಳಿಕೊಂಡಿದ್ದೇವೆ. ಅದಕ್ಕೆ ಎಲ್ಲ ಕಾಪೆರ್Çರೇಟರ್ ಸಹಮತ ವ್ಯಕ್ತಪಡಿಸಿದ್ದಾರೆ ಎಂದರು.

ಕೊರೊನಾದಿಂದ ಚೇತರಿಕೆಯಾದವರ ವೀಡಿಯೋ ಮಾಡಿ ಎಲ್ಲರಿಗೂ ಕಳುಹಿಸ ಬೇಕು. ಕರಪತ್ರ ಹಂಚಿ ಇದರಲ್ಲಿ ಕೇವಲ ಕಾಪೆರ್Çರೇಟರ್ ಮಾತ್ರವಲ್ಲ, ಆರು ಸಿಬ್ಬಂದಿ ಗಳ ನಂಬರ್ ಹಾಕಬೇಕು. ಕೋವಿಡ್ ಹಾಗೂ ನಾನ್ ಕೋವಿಡ್‍ಗೆ ಪ್ರತ್ಯೇಕ ಆಂಬುಲೆನ್ಸ್ ಬಳಕೆಯಾಗಬೇಕು ಎಂದು ತಿಳಿಸಿದರು. ಯಾವುದೇ ವಿಚಾರವಾದರೂ ಕಾಪೆರ್Çರೇಟರ್‍ಗೆ ಗೊತ್ತಾಗಬೇಕು. ಯಾವುದೇ ರೋಗಿಗಾದರೂ ಕಾಪೆರ್Çರೇಟರ್ ಧೈರ್ಯ ತುಂಬಿ. ಎಲ್ಲಾ ಪಾಲಿಕೆ ಸದಸ್ಯರು ಆರೋಗ್ಯ ಸೇತು ಆಪ್ ಹಾಕಿಕೊಳ್ಳಿ. ಒಟ್ಟು 8 ಕೆಎಎಸ್ ಅಧಿಕಾರಿಗಳನ್ನು ನೇಮಕ ಮಾಡುತ್ತೇವೆ, ಜಂಟಿ ಆಯುಕ್ತರುಗಳಿಗೆ ಕೊಂಚ ರಿಲೀಫ್ ಕೊಡೋಣ. 20 ಲಕ್ಷವನ್ನು ಸೀಲ್‍ಡೌನ್ ಆದ ಪ್ರದೇಶಗಳ ಖರ್ಚು ವೆಚ್ಚಕ್ಕೆ ಇಡಿ. 2 ಕೋವಿಡ್ ಹೆರಿಗೆ ಆಸ್ಪತ್ರೆಯನ್ನು ನೋಟಿಫೈ ಮಾಡಿ. ಉತ್ತರ ಹಾಗೂ ದಕ್ಷಿಣದಲ್ಲಿ ಒಂದೊಂದು ಆಸ್ಪತ್ರೆ ಮಾಡಲಾಗುವುದು. ಆಯಾ ವಾರ್ಡ್‍ನ ಎಲ್ಲಾ ಕೋವಿಡ್ ನಾನ್ ಕೋವಿಡ್ ಜನರ ಮಾಹಿತಿ ನಿಮ್ಮ ಮೊಬೈಲ್‍ನಲ್ಲಿ ಇರಬೇಕು. ಫೆÇೀನ್‍ನಲ್ಲಿ ಮಾತನಾಡಿದರೆ ಕೊರೊನಾ ಬರಲ್ಲ. ಅವರಿಗೆ ಧೈರ್ಯ ತುಂಬಿ. ನಾನು ರಿಯಾಲಿಟಿ ಚೆಕ್ ಮಾಡ್ತಿನಿ. ಹೆಚ್ಚುವರಿ ಆಂಬುಲೆನ್ಸ್ ಇನ್ನೆರಡು ದಿನದಲ್ಲಿ ರೆಡಿ ಇರುತ್ತದೆ. ಶವಸಂಸ್ಕಾರವನ್ನು ಗೌರವಪೂರ್ವಕವಾಗಿ ಮಾಡುವ ಜವಾಬ್ದಾರಿ ಇನ್ಮೇಲೆ ಕಾಪೆರ್Çರೇಟರ್‍ಗಳದ್ದು. ಅದಕ್ಕೆ ಬೇಕಾದ ಪಿಪಿಇ ಕಿಟ್, ಮುಂತಾದ ಎಲ್ಲಾ ಸೌಕರ್ಯಗಳನ್ನು ಅವರೇ ಮಾಡ್ಬೇಕು. ಆಯಾ ವಾರ್ಡ್‍ಗಳ ಕೋವಿಡ್, ನಾನ್ ಕೋವಿಡ್ ಎಲ್ಲಾ ಪ್ರಕರಣಗಳ ಜವಾಬ್ದಾರಿ ಅಲ್ಲಿನ ಕಾಪೆರ್Çರೇಟರ್‍ದು. ಇನ್ಮೇಲೆ ರೋಗಿಯ ಕೊರೊನಾ ರಿಪೆÇೀರ್ಟ್ ರೋಗಿಗೆ ಕೊಡುವಂತಿಲ್ಲ. ನೇರವಾಗಿ ಬಿಬಿಎಂಪಿ, ಸರ್ಕಾರಕ್ಕೆ ತಿಳಿಸಬೇಕು. ಅವರು ಚಿಕಿತ್ಸೆ ವ್ಯವಸ್ಥೆ ಮಾಡುತ್ತಾರೆ ಎಂದರು. ಸಾಮಾಜಿಕ ಅಂತರ ಹಿನ್ನೆಲೆ ಇಂದು ಅರ್ಧದಷ್ಟು ಕಾಪೆರ್Çರೇಟರ್ ಭಾಗವಹಿಸಿದ್ದು, ನಾಳೆಯೂ ಕಮಿ ಷನರ್ ಅನಿಲ್‍ಕುಮಾರ್, ಮೇಯರ್ ಗೌತಮ್ ಕುಮಾರ್ ಭಾಗವಹಿಸಲಿದ್ದಾರೆ.

Translate »