ನವದೆಹಲಿ,ಸೆ.6- ಕಳೆದ 24 ಗಂಟೆಗಳಲ್ಲಿ ಕರ್ನಾಟಕ, ಆಂಧ್ರ ಪ್ರದೇಶ ಮತ್ತು ಮಹಾರಾಷ್ಟ್ರಗಳಲ್ಲಿ ಶೇ.46ರಷ್ಟು ಕೋವಿಡ್-19 ಸಕ್ರಿಯ ಕೇಸುಗಳು ಮತ್ತು ಶೇ.52ರಷ್ಟು ಸಾವು ಸಂಭವಿಸಿದೆ. ಕೊರೊನಾ ಪ್ರಸರಣ ನಿಯಂತ್ರಿಸಲು ಮತ್ತು ಸಾವು ಸಂಭವಿಸುವು ದನ್ನು ತಪ್ಪಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು, ಜನರು ಎಚ್ಚೆತ್ತುಕೊಳ್ಳ ಬೇಕು ಎಂದು ಕೇಂದ್ರ ಸರ್ಕಾರ ಹೇಳಿದೆ. ಅಧಿಕ ತಪಾಸಣೆ, ಪರಿ ಣಾಮಕಾರಿ ಕ್ಲಿನಿಕಲ್ ನಿರ್ವಹಣೆ, ದಕ್ಷತೆಯಿಂದ ವಿವಿಧ ಹಂತ ಗಳಲ್ಲಿ ನಿಗಾವಹಿಸಿ ಕೊರೊನಾದಿಂದ ಸಾವು ಸಂಭವಿಸುವುದನ್ನು ತಡೆಗಟ್ಟಬೇಕೆಂದು ಕೇಂದ್ರ ಆರೋಗ್ಯ ಸಚಿವಾಲಯ ರಾಜ್ಯಗಳಿಗೆ ಸಲಹೆ ನೀಡಿದೆ. ದೇಶದ ಒಟ್ಟಾರೆ ಕೋವಿಡ್-19 ಕೇಸುಗಳನ್ನು ನೋಡಿದರೆ ಕರ್ನಾಟಕ, ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರಗಳಲ್ಲಿ ಶೇ.46 ಇವೆ. ಮಹಾರಾಷ್ಟ್ರ ಒಂದೇ ರಾಜ್ಯದಲ್ಲಿ ಶೇ.22 ಇದ್ದು, ಈ 3 ರಾಜ್ಯಗಳಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಕರ್ನಾಟಕದ ಕೊಪ್ಪಳ, ಮೈಸೂರು, ದಾವಣಗೆರೆ, ಬಳ್ಳಾರಿ ಜಿಲ್ಲೆಗಳನ್ನು ವಿಶೇಷ ವಾಗಿ ಉಲ್ಲೇಖ ಮಾಡಿದ್ದು ಆರ್ಟಿ-ಪಿಸಿಆರ್ ತಪಾಸಣಾ ವ್ಯವಸ್ಥೆ ಗಳನ್ನು ಬಳಸಿಕೊಳ್ಳುವಂತೆ, ಮನೆ ಮನೆಗೆ ಹೋಗಿ ತಪಾಸಣೆ ಮಾಡು ವಂತೆ, ಆರೋಗ್ಯಸೇವೆ ಕಾರ್ಯಕರ್ತರನ್ನು ಸೋಂಕಿನಿಂದ ರಕ್ಷಿಸುವಲ್ಲಿ ಸರ್ಕಾರಗಳು ವಿಶೇಷ ನಿಗಾವಹಿಸುವಂತೆ ಹೇಳಲಾಗಿದೆ. ದೇಶದಲ್ಲಿ ಕೊರೊನಾದಿಂದ ಮೃತಪಟ್ಟವರ ಪೈಕಿ ಕರ್ನಾಟಕ, ತಮಿಳು ನಾಡು, ಮಹಾರಾಷ್ಟ್ರ, ಆಂಧ್ರಪ್ರದೇಶ, ದೆಹಲಿಗಳಲ್ಲಿ ಶೇ.70ರಷ್ಟಾಗಿದೆ.

ಮೈಸೂರು