ಕೆ.ಆರ್.ಪೇಟೆಯಲ್ಲಿ ಕೋವಿಡ್ ನಿಯಂತ್ರಣ ಸಮಿತಿ ಸಭೆ
ಮಂಡ್ಯ

ಕೆ.ಆರ್.ಪೇಟೆಯಲ್ಲಿ ಕೋವಿಡ್ ನಿಯಂತ್ರಣ ಸಮಿತಿ ಸಭೆ

May 5, 2021

ಕೆ.ಆರ್.ಪೇಟೆ, ಮೇ 4(ಶ್ರೀನಿವಾಸ್)- ಪಟ್ಟಣದ ಶಹರಿ ರೋಜ್‍ಗಾರ್ ಭವನದಲ್ಲಿ ಪುರಸಭೆ ಅಧ್ಯಕ್ಷರಾದ ಮಹಾದೇವಿ ನಂಜುಂಡ ಅಧ್ಯಕ್ಷತೆಯಲ್ಲಿ ಕೋವಿಡ್ ನಿಯಂತ್ರಣಾ ಸಮಿತಿಯ ಸಭೆಯು ನಡೆಯಿತು.

ಪಟ್ಟಣದ ಸ್ವಚ್ಚತೆಗೆ ಪ್ರಥಮ ಆದ್ಯತೆ ನೀಡಬೇಕು. ಶುದ್ದ ಕುಡಿಯುವ ನೀರಿನ ಪೂರೈಕೆಗೆ ಕ್ರಮ ವಹಿಸಬೇಕು. ಕಫ್ರ್ಯೂನಿಂದ ಕೆಲಸವಿಲ್ಲದೇ ಮನೆ ಯಲ್ಲಿಯೇ ಇರುವ ಎಲ್ಲಾ ವಾರ್ಡುಗಳ ಕಾರ್ಮಿಕರು ಹಾಗೂ ಬಡವರಿಗೆ ಪುರಸಭೆಯ ವತಿ ಯಿಂದ ಪುಢ್‍ಕಿಟ್ ನೀಡಲು ಕ್ರಮ ತೆಗೆದು ಕೊಳ್ಳಬೇಕು. ಈ ಮೂಲಕ ಬಡವರಿಗೆ ಊಟಕ್ಕೆ ತೊಂದರೆಯಾಗದಂತೆ ನೋಡಿ ಕೊಳ್ಳಬೇಕು ಎಂದು ಪುರಸಭಾ ಸದಸ್ಯರು ಅಧ್ಯಕ್ಷರು ಮತ್ತು ಮುಖ್ಯಾಧಿಕಾರಿಗಳನ್ನು ಒತ್ತಾಯ ಮಾಡಿದರು.

ಪುರಸಭೆಯ ಸದಸ್ಯರನ್ನು ಒಳಗೊಂಡಂತೆ ಕೋವಿಡ್ ನಿಯಂತ್ರಣಾ ಸಮಿತಿ ರಚನೆ ಮಾಡಿ ಕೋವಿಡ್ ನಿಯಂತ್ರಣಕ್ಕೆ ಎಲ್ಲಾ ಸದಸ್ಯರು ಸಹಕಾರ ನೀಡಬೇಕು. ತಮ್ಮ ವಾರ್ಡ್‍ಗಳಲ್ಲಿರುವ ಕೋವಿಡ್ ಸೋಂಕಿತರ ಬಗ್ಗೆ ಮಾಹಿತಿ ನೀಡಬೇಕು. ಕೋವಿಡ್ ಪಾಸಿಟಿವ್ ಬಂದಿರುವವರನ್ನು ಕಡ್ಡಾಯ ವಾಗಿ ಕೋವಿಡ್ ಕೇರ್ ಕೇಂದ್ರಗಳಲ್ಲಿ ದಾಖಲು ಮಾಡುವಂತೆ ಮನವರಿಕೆ ಮಾಡಿಕೊಡಬೇಕು. ಯಾವುದೇ ಕಾರಣಕ್ಕೂ ಮನೆಯಲ್ಲಿ ಪ್ರತ್ಯೇಕ ರೂಮುಗಳ ವ್ಯವಸ್ಥೆ ಇಲ್ಲದಿದ್ದರೆ ಹೋಂ ಐಸೋಲೇಷÀನ್ ಇರಲು ಅವಕಾಶ ಮಾಡಿಕೊಡಬಾರದು. ಈ ಮೂಲಕ ಕೋವಿಡ್ ಬೇರೆಯವರಿಗೆ ಹರಡದಂತೆ ನೋಡಿಕೊಳ್ಳಬೇಕು ಎಂದು ಅಧ್ಯಕ್ಷೆ ಮಹಾ ದೇವಿ ನಂಜುಂಡ ಮನವಿ ಮಾಡಿದರು.

ಸಬ್‍ಇನ್ಸ್‍ಪೆಕ್ಟರ್ ಬಿ.ಪಿ.ಬ್ಯಾಟರಾಯ ಗೌಡ ಮಾತನಾಡಿ, ಪಟ್ಟಣದಲ್ಲಿ ಸಾಮಾ ಜಿಕ ಅಂತರ ಕಾಪಾಡಿಕೊಳ್ಳಬೇಕು. ಅನಗತ್ಯವಾಗಿ ಹೊರಗಡೆ ಹೋಗಬಾರದು. ಹೋಗಲೇ ಬೇಕೆಂದರೆ ಕಡ್ಡಾಯವಾಗಿ ಮಾಸ್ಕ್ ಹಾಕಿ, ಸಾಮಾಜಿಕ ಅಂತರ ಕಾಯ್ದು ಕೊಂಡು ಅಗತ್ಯ ವಸ್ತುಗಳನ್ನು ಕೊಳ್ಳಬೇಕು. ಪುರಸಭೆಯ ಸದಸ್ಯರು ತಮ್ಮ ತಮ್ಮ ವಾರ್ಡ್ ಗಳಲ್ಲಿ ಕರಪತ್ರ ಮುದ್ರಿಸಿ ಮತದಾರರಿಗೆ ಕೊರೊನಾ ಬಗ್ಗೆ ಜಾಗೃತಿ ಮೂಡಿ ಸಬೇಕು ಎಂದು ಮನವಿ ಮಾಡಿದರು.

ಸಭೆಯಲ್ಲಿ ತಾಲೂಕು ಆರೋಗ್ಯಾ ಧಿಕಾರಿ ಡಾ.ಮಧುಸೂಧನ್, ಪುರಸಭೆಯ ಹಿರಿಯ ಸದಸ್ಯರಾದ ಕೆ.ಸಿ.ಮಂಜು ನಾಥ್, ಡಿ.ಪ್ರೇಮಕುಮಾರ್, ಕೆ.ಬಿ. ಮಹೇಶ್ ಕುಮಾರ್, ಕೆ.ಆರ್.ರವೀಂದ್ರ ಬಾಬು, ಬಿ.ಜಿ. ಗಿರೀಶ್, ಹೆಚ್.ಎನ್.ಪ್ರವೀಣ್, ಹೆಚ್.ಆರ್. ಲೋಕೇಶ್, ಸುಗುಣರಮೇಶ್, ಖಮ್ಮರ್ ಬೇಗಂ, ತಿಮ್ಮೇಗೌಡ, ದಿನೇಶ್, ಹೆಚ್.ಡಿ. ಅಶೋಕ್, ಇಂದ್ರಾಣಿ, ವಿಶ್ವನಾಥ್, ಕೇಸರಿ ಶ್ರೀನಿವಾಸ್ ಮತ್ತಿತರರು ಉಪಸ್ಥಿತರಿದ್ದರು.

Translate »