`ದಾಸೋಹ ಕಂಟ್ರೋಲ್ ರೂಂ’ ಕಾರ್ಮಿಕರಿಗೆ ಆಹಾರ ಒದಗಿಸುವ ಪಾರದರ್ಶಕ ವ್ಯವಸ್ಥೆ: ಉಪಮುಖ್ಯಮಂತ್ರಿ ಡಾ.ಅಶ್ವತ್ಥ ನಾರಾಯಣ
ಮೈಸೂರು

`ದಾಸೋಹ ಕಂಟ್ರೋಲ್ ರೂಂ’ ಕಾರ್ಮಿಕರಿಗೆ ಆಹಾರ ಒದಗಿಸುವ ಪಾರದರ್ಶಕ ವ್ಯವಸ್ಥೆ: ಉಪಮುಖ್ಯಮಂತ್ರಿ ಡಾ.ಅಶ್ವತ್ಥ ನಾರಾಯಣ

April 4, 2020

ಬೆಂಗಳೂರು: ಲಾಕ್‍ಡೌನ್ ಹಿನ್ನೆಲೆಯಲ್ಲಿ ಬಡ ಕಾರ್ಮಿಕರಿಗೆ ಆಹಾರ ಒದಗಿಸುವ ‘ದಾಸೋಹ’ ಕಾರ್ಯಕ್ರಮ ತಂತ್ರಜ್ಞಾನದ ಉತ್ತಮ ಬಳಕೆಗೆ ಉದಾಹರಣೆ. ಇಂಥ ಪಾರದರ್ಶಕ ವ್ಯವಸ್ಥೆ ಎಲ್ಲ ಇಲಾಖೆ ಗಳಿಗೂ ಮಾದರಿ ಎಂದು ಉಪಮುಖ್ಯಮಂತ್ರಿ ಡಾ. ಅಶ್ವತ್ಥನಾರಾಯಣ ಇಂದಿಲ್ಲಿ ತಿಳಿಸಿದ್ದಾರೆ.

ವಾರ್ತಾ ಭವನದ ಮಹಾತ್ಮ ಗಾಂಧಿ ಮಾಧ್ಯಮ ಕೇಂದ್ರ ದಲ್ಲಿ ನೂತನವಾಗಿ ರೂಪಿಸಲಾಗಿರುವ `ದಾಸೋಹ ಕಂಟ್ರೋಲ್ ರೂಂ’ಗೆ ಶುಕ್ರವಾರ ಚಾಲನೆ ನೀಡಿದ ನಂತರ ಡಾ. ಅಶ್ವತ್ಥ ನಾರಾಯಣ ಮಾಧ್ಯಮಗಳ ಜತೆ ಮಾತನಾಡಿದರು.

ಕೊರೊನಾ ತಂದೊಡ್ಡಿರುವ ಸಂಕಷ್ಟದ ಸಮಯದಲ್ಲಿ ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ಅವರು ಸಮಾಜಕ್ಕೆ ಒಂದು ಉತ್ತಮ ಸಂದೇಶ ನೀಡಿದ್ದಾರೆ. ಸ್ವಿಗ್ಗಿ ಹಾಗೂ ವಾರ್ತಾ ಇಲಾಖೆಯ ಮೂಲ ಸೌಕರ್ಯ ಬಳಸಿಕೊಂಡು ಬಡ ಕೂಲಿ ಕಾರ್ಮಿಕರು ಇರುವಲ್ಲಿಗೆ ಆಹಾರ ಪದಾರ್ಥಗಳನ್ನು ಸರಬರಾಜು ಮಾಡುವ ವ್ಯವಸ್ಥೆ ಮಾಡಲಾಗು ತ್ತಿದೆ. ಆಹಾರ ಪಡೆದವರ ಸಂಖ್ಯೆ ಹಾಗೂ ಅದರ ಲೆಕ್ಕ ಎಲ್ಲವನ್ನೂ ಪಾರದರ್ಶಕವಾಗಿ ಜನರ ಮುಂದಿ ಡುವ ಕೆಲಸವನ್ನು ಕಾರ್ಮಿಕ ಇಲಾಖೆ ಮಾಡುತ್ತಿದೆ. ಈ ಕೆಲಸ ಬೇರೆ ಇಲಾಖೆಗಳಿಗೂ ಮಾದರಿ ಎಂದು ಸಚಿವ ಅಶ್ವತ್ಥ ನಾರಾಯಣ ಹೇಳಿದರು.

ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್, ಸಹ ಕಾರ ಸಚಿವ ಎಸ್.ಟಿ.ಸೋಮ ಶೇಖರ್, ತೋಟ ಗಾರಿಕೆ ಸಚಿವ ನಾರಾಯಣಗೌಡ ಅವರ ಸಹಕಾರದಿಂದ ಈ ದಾಸೋಹ ಕಂಟ್ರೋಲ್ ರೂಂ ಯಶಸ್ವಿಯಾಗಿ ಕಾರ್ಯನಿರ್ವಹಿಸುವ ವಿಶ್ವಾಸ ಇದೆ. ಎಲ್ಲ ಸಚಿವರು ಈ ಸವಾಲನ್ನು ಅತ್ಯಂತ ಸಮರ್ಥವಾಗಿ ಎದುರಿಸುತ್ತಿದ್ದಾರೆ. ಸಮಾ ಜದ ಕಟ್ಟ ಕಡೆಯ ವ್ಯಕ್ತಿಗೂ ಆಹಾರ ತಲುಪಿಸುವ ಕಾಯಕ ಒಂದರೆಡು ದಿನಕ್ಕೆ ಸೀಮಿತ ಅಲ್ಲ. ಲಾಕ್ ಡೌನ್ ಅವಧಿ ಮುಗಿಯುವರೆಗೂ ನಿರಂತರವಾಗಿ ಆಗಬೇಕಾದ ಕೆಲಸ. ಅಸಹಾಯ ಕರು, ನಿರಾಶ್ರಿತರು ಹಾಗೂ ಬಡ ಕೂಲಿಕಾರ್ಮಿಕರಿಗೆ ಆಹಾರದ ಸಮಸ್ಯೆ ಉಂಟಾ ಗದಂತೆ ನೋಡಿಕೊಳ್ಳಲಾಗುವುದು ಎಂದು ಸಚಿವರು ಹೇಳಿದರು.

Translate »