ಚುನಾವಣೆಯಲ್ಲಿ ಗೆದ್ದ ನಂತರವೇ ಮುಖ್ಯಮಂತ್ರಿ ಬಗ್ಗೆ ನಿರ್ಧಾರ
ಮೈಸೂರು

ಚುನಾವಣೆಯಲ್ಲಿ ಗೆದ್ದ ನಂತರವೇ ಮುಖ್ಯಮಂತ್ರಿ ಬಗ್ಗೆ ನಿರ್ಧಾರ

October 9, 2022

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸ್ಪಷ್ಟನೆ

ಭಾರತ ಒಗ್ಗೂಡಿಸುವುದು ಯಾತ್ರೆಯ ಉದ್ದೇಶವೇ ಹೊರತು ಚುನಾವಣೆ ಗೆಲ್ಲುವುದಲ್ಲ…

ತುಮಕೂರು, ಅ.೮- ರಾಜ್ಯದಲ್ಲಿ ಮುಂದಿನ ವರ್ಷ ನಮ್ಮದೇ ಪಕ್ಷದ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿಶ್ವಾಸ ವ್ಯಕ್ತಪಡಿ ಸಿದರು. ಭಾರತ ಐಕ್ಯತಾ ಯಾತ್ರೆ ಶನಿವಾರ ಜಿಲ್ಲೆ ಪ್ರವೇಶಿ ಸಿತು. ತುರುವೇಕೆರೆ ತಾಲೂಕಿನ ಅರಳೀಕೆರೆಪಾಳ್ಯದಲ್ಲಿ ಪತ್ರಿಕಾಗೋಷ್ಠಿಯಲ್ಲಿ ರಾಹುಲ್ ಗಾಂಧಿ ಮಾತನಾಡಿದರು.
ರಾಜ್ಯದ ನಾಯಕರ ನಡುವೆ ಯಾವುದೇ ತಿಕ್ಕಾಟ, ಭಿನ್ನಮತವಿಲ್ಲ. ನಮ್ಮದು ಸರ್ವಾಧಿಕಾರಿ ಮನಸ್ಥಿತಿಯ ಪಕ್ಷವಲ್ಲ. ಎಲ್ಲರ ಭಾವನೆ, ಅಭಿಪ್ರಾಯಗಳಿಗೆ ಮನ್ನಣೆ ಇದೆ. ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲು ಎಲ್ಲಾ ನಾಯಕರು ಒಟ್ಟಾಗಿ ಕೆಲಸ ಮಾಡುತ್ತಿದ್ದಾರೆ. ಚುನಾವಣೆ ಯಲ್ಲಿ ಗೆದ್ದ ನಂತರ ಪಕ್ಷದ ವೇದಿಕೆಯಲ್ಲಿ ಮುಖ್ಯ ಮಂತ್ರಿ ಯಾರಾಗಬೇಕು ಎಂಬು ದನ್ನು ನಿರ್ಧರಿಸಲಾಗುತ್ತದೆ. ಸಮರ್ಥರೊಬ್ಬರು ಮುಖ್ಯ ಮಂತ್ರಿ ಆಗುತ್ತಾರೆ ಎಂದು ಹೇಳಿದರು. ಬಿಜೆಪಿ ಸರ್ಕಾರದಲ್ಲಿ ಶೇ.೪೦ರಷ್ಟು ಕಮಿಷನ್ ಪಡೆದುಕೊಳ್ಳುವ ಭ್ರಷ್ಟ ವ್ಯವಸ್ಥೆ ಇದೆ. ಬೆಲೆ ಏರಿಕೆ, ನಿರುದ್ಯೋಗ ಸಮಸ್ಯೆಗಳನ್ನು ಜನರ ಮುಂದಿಟ್ಟು ಚುನಾವಣೆ ಎದುರಿಸುತ್ತೇವೆ. ಈ ಮೂರು ಪ್ರಮುಖ ಸಮಸ್ಯೆಗಳಿಂದ ಬೇಸತ್ತಿರುವುದು ಯಾತ್ರೆ ಸಮಯದಲ್ಲಿ ಜನರನ್ನು ಭೇಟಿ ಮಾಡಿದಾಗ ಮನದಟ್ಟಾಗಿದೆ. ಹಾಗಾಗಿಯೇ ನಾವು ರಾಜ್ಯದಲ್ಲಿ ಅಧಿಕಾರಕ್ಕೆ ಬರುತ್ತೇವೆ ಎಂದು ಹೇಳುತ್ತಿರುವುದು ಎಂದರು.

ಯಾತ್ರೆ ಅನುಭವ: ಪಾದಯಾತ್ರೆಯನ್ನೇ ಏಕೆ ಆಯ್ಕೆ ಮಾಡಿಕೊಂಡಿದ್ದೀರಿ ಎಂಬ ಪ್ರಶ್ನೆಗೆ ಉತ್ತರಿಸಿ, ನನ್ನ ಬಗ್ಗೆ ತಪುö್ಪ ಅಭಿಪ್ರಾಯ ಮೂಡಿಸಲು ಬಿಜೆಪಿಯವರು ಹಣ ಖರ್ಚು ಮಾಡಿ ಮಾಧ್ಯಮಗಳನ್ನು ಬಳಸಿಕೊಳ್ಳುತ್ತಿದ್ದಾರೆ. ಆದರೆ ಜನರಿಂದ ಸತ್ಯ ತಿಳಿದುಕೊಳ್ಳಲು ಪಾದಯಾತ್ರೆ ಆಯ್ಕೆ ಮಾಡಿಕೊಂಡಿದ್ದೇನೆ. ಅವರ ಜತೆಗೆ ಹೆಚ್ಚು ಆಪ್ತವಾಗಿ ಮಾತನಾಡಬಹುದು, ನೋವು, ಸಂಕಷ್ಟಗಳನ್ನು ಅರಿಯಬಹುದಾಗಿದೆ. ಇದು ನನಗೆ ದೊಡ್ಡ ಅನುಭವವಾಗಿದೆ. ನಾನೂ ಎಲ್ಲರಂತೆ ಕಾರು, ವಿಮಾನದಲ್ಲಿ ಸಂಚರಿಸಿದ್ದರೆ ಸಾರ್ವಜನಿಕರ ಸಮಸ್ಯೆ, ಅಭಿಪ್ರಾಯ ಗೊತ್ತಾಗುತ್ತಿರಲಿಲ್ಲ ಎಂದು ಯಾತ್ರೆಯ ಅನುಭವಗಳನ್ನು ಬಿಚ್ಚಿಟ್ಟರು. ಯಾತ್ರೆ ಪ್ರಾರಂಭವಾಗಿ ೩೧ ದಿನಗಳಷ್ಟೇ ಕಳೆದಿದ್ದು, ಇನ್ನೂ ಇದು ಆರಂಭಿಕ ಹಂತವಾಗಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಅನುಭವಗಳು ಪಾಠವಾಗುತ್ತವೆ. ಜನರ ಜತೆಗೆ ಮಾತನಾಡದಿದ್ದರೆ ಅವರ ಪರವಾಗಿ ಕೆಲಸ ಮಾಡುವುದು ಕಷ್ಟಕರ. ಅದಕ್ಕಾಗಿಯೇ ಇಂತಹದೊAದು ಪ್ರಯತ್ನಕ್ಕೆ ಕೈ ಹಾಕಿದ್ದೇನೆ ಎಂದರು. ಭಾರತವನ್ನು ಒಗ್ಗೂಡಿಸುವುದು ಯಾತ್ರೆಯ ಉದ್ದೇಶವೇ ಹೊರತು ೨೦೨೪ರ ಚುನಾವಣೆ ಗೆಲ್ಲುವುದಷ್ಟೇ ನಮ್ಮ ಗುರಿಯಲ್ಲ. ಹಿಂಸಾಚಾರ, ಕೋಮು ದ್ವೇಷದಿಂದ ದೇಶವನ್ನು ವಿಭಜಿಸಲಾಗುತ್ತಿದೆ. ಆರ್ಥಿಕ ಅಸಮಾನತೆ ತಾಂಡವವಾಡುತ್ತಿದ್ದು, ಕೆಲವರಷ್ಟೇ ಶ್ರೀಮಂತರಾಗುತ್ತಿದ್ದಾರೆ. ಒಬ್ಬಿಬ್ಬರ ಬಳಿ ದೇಶದ ಸಂಪತ್ತು ಕ್ರೋಢೀಕರಣವಾಗುತ್ತಿದೆ. ಬೆಲೆ ಏರಿಕೆ, ಆರ್ಥಿಕ ಕುಸಿತದಿಂದ ಜನರು ಜರ್ಜರಿತರಾಗಿದ್ದು, ಆ ಬಗ್ಗೆ ಮಾತನಾಡುವುದು ಯಾತ್ರೆಯ ಉದ್ದೇಶವಾಗಿದೆ ಎಂದು ವಿವರಿಸಿದರು. ಬಿಜೆಪಿ, ಆರ್‌ಎಸ್‌ಎಸ್ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಕಾಂಗ್ರೆಸ್ ರಾಷ್ಟçವನ್ನು ಒಗ್ಗೂಡಿಸಿ, ಅಭಿವೃದ್ಧಿ ಮಾಡಿದೆಯೇ ಹೊರತು ಎಂದೂ ವಿಭಜನೆ ಮಾಡಿಲ್ಲ. ದೇಶ ವಿಭಜನೆ ಮಾಡುತ್ತಿರುವವರೇ ನಮ್ಮ ವಿರುದ್ಧ ಮಾತನಾ ಡುತ್ತಿದ್ದಾರೆ. ಪಿಎಫ್‌ಐ ಸೇರಿದಂತೆ ಯಾರೇ ಅಶಾಂತಿ ಮೂಡಿಸಿದರೂ ಅಂತಹವರನ್ನು ನಾವು ವಿರೋಧಿಸುತ್ತೇವೆ ಎಂದರು. ರಾಜ್ಯದಲ್ಲಿ ಭಾರತ ಐಕ್ಯತಾ ಯಾತ್ರೆ ನಡೆಯುತ್ತಿರು ವಂತೆಯೇ ನನ್ನ ವಿರುದ್ಧ ಅಪಪ್ರಚಾರಕ್ಕಾಗಿ ಕೋಟ್ಯಾಂತರ ರೂ. ವೆಚ್ಚ ಮಾಡಲಾಗಿದೆ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಶನಿವಾರ ದೂರಿದರು.

ಕೆಲವೊಂದು ಸಿದ್ದಾಂತಗಳಿಗೆ ನಾನು ಯಾವಾಗಲೂ ಬದ್ಧನಾಗಿರುತ್ತೇನೆ ಎಂಬುದು ಅರ್ಥವಾಗಿದೆ. ಹೀಗಾಗಿ ಬಿಜೆಪಿ, ಆರ್ ಎಸ್ ಎಸ್ ಮತ್ತಿತರ ಶಕ್ತಿಗಳು ಗೊಂದಲ ಸೃಷ್ಟಿಸುತ್ತಿವೆ. ನನ್ನ ವಿರುದ್ಧ ಅಪಪ್ರಚಾರಕ್ಕಾಗಿ ಮಾಧ್ಯಮಗಳಿಗೆ ಕೋಟ್ಯಾಂತರ ರೂ. ವೆಚ್ಚ ಮಾಡಲಾಗಿದೆ ಎಂದರು. ಕಾಂಗ್ರೆಸ್ ಮುಖಂಡರು ಜಾಮೀನಿನ ಮೇಲೆ ಹೊರಗಿದ್ದಾರೆ ಎಂಬ ಬಿಜೆಪಿ ಟೀಕೆ ಕುರಿತು ಮಾತನಾಡಿದ ರಾಹುಲ್ ಗಾಂಧಿ, ಬಿಜೆಪಿ ಸರ್ಕಾರ ವಿಪಕ್ಷಗಳ ನಾಯಕರ ಮೇಲೆ ದಾಳಿ ಮಾಡಲು ಸಾಂವಿಧಾನಿಕ ಸಂಸ್ಥೆಗಳನ್ನು ಬಳಸಿಕೊಳ್ಳುತ್ತಿರುವುದು ಎಲ್ಲರಿಗೂ ಗೊತ್ತಿದೆ. ಇತರೆ ಪಕ್ಷಗಳ ಸರ್ಕಾರ ಪತನಗೊಳಿಸಲು, ಕಿರುಕುಳ ನೀಡಲು ಅವುಗಳನ್ನು ಹೇಗೆಲ್ಲಾ ಬಳಸಿಕೊಳ್ಳುತ್ತಿದೆ ಎಂಬುದು ಪ್ರತಿಯೊಬ್ಬರಿಗೂ ಅರ್ಥವಾಗುತ್ತಿದೆ ಎಂದರು.

 

Translate »