ಆಶಾ ಕಾರ್ಯಕರ್ತೆಯರಿಗೆ ಆರೋಗ್ಯ ರಕ್ಷಣಾ ಪರಿಕರ ಕಿಟ್ ವಿತರಣೆ
ಮೈಸೂರು

ಆಶಾ ಕಾರ್ಯಕರ್ತೆಯರಿಗೆ ಆರೋಗ್ಯ ರಕ್ಷಣಾ ಪರಿಕರ ಕಿಟ್ ವಿತರಣೆ

March 18, 2021

ಮೈಸೂರು, ಮಾ.17(ಎಸ್‍ಪಿಎನ್)- ಮೈಸೂರು ಜಿಲ್ಲೆ ಆಶಾ ಕಾರ್ಯಕರ್ತೆಯರಿಗೆ ಆರೋಗ್ಯ ರಕ್ಷಣಾ ಪರಿಕರಗಳನ್ನು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ತಮ್ಮ ಕಚೇರಿ ಆವರಣದಲ್ಲಿ ಬುಧವಾರ ವಿತರಣೆ ಮಾಡಿದರು.

`ಸಮರ್ಥನಂ’ ವಿಶೇಷಚೇತನರ ಸಂಸ್ಥೆ ಮತ್ತು ಓರಾಕಲ್ ಕಂಪನಿ ಜತೆಗೂಡಿ ನೀಡಿದ ಆರೋಗ್ಯ ರಕ್ಷಣೆ ಪರಿಕರಗಳ ಕಿಟ್‍ಗಳನ್ನು ರಾಜ್ಯಾದ್ಯಂತ 36 ಸಾವಿರ ಆಶಾ ಕಾರ್ಯಕರ್ತೆಯರಿಗೆ ವಿತರಿಸುವ ಬೃಹತ್ ಕಾರ್ಯಕ್ರಮಕ್ಕೆ ವೈದ್ಯಕೀಯ ಶಿಕ್ಷಣ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಕೆ.ಸುಧಾಕರ್ ಚಾಲನೆ ನೀಡಿದ್ದು, ಮೈಸೂರು ಜಿಲ್ಲೆಯಲ್ಲಿ 1822, ಮಂಡ್ಯ 1367, ಕೊಡಗು 476 ಹಾಗೂ ಚಾಮರಾಜನಗರ ಜಿಲ್ಲೆಯಲ್ಲಿ 769 ಆಶಾ ಕಾರ್ಯಕರ್ತೆಯರಿಗೆ ವಿತರಿಸಲಾಗುವುದು ಎಂದು ಸಂಯೋಜಕ ಎಂ.ಶಿವರಾಜು ಮಾಧ್ಯಮಗಳಿಗೆ ಮಾಹಿತಿ ನೀಡಿದರು. ಈ ವೇಳೆ ಜಿಪಂ ಸಿಇಓ ಎ.ಎಂ.ಯೋಗೀಶ್, ಡಿಹೆಚ್‍ಓ ಡಾ.ಟಿ.ಅಮರನಾಥ್, ಸಮರ್ಥನಂ ಸಂಸ್ಥೆಯ ಟ್ರಸ್ಟಿಗಳಾದ ವಾಸಂತಿ ಸವಣೂರು, ಜಿ.ಕೆ.ಮಹಾಂತೇಶ್ ಮತ್ತಿತರರಿದ್ದರು.

Translate »