ಮೈಮುಟ್ಟಿದ ಅಭಿಮಾನಿ ಕೆನ್ನೆಗೆ ಬಾರಿಸಿದ ಡಿ.ಕೆ.ಶಿವಕುಮಾರ್
ಮಂಡ್ಯ

ಮೈಮುಟ್ಟಿದ ಅಭಿಮಾನಿ ಕೆನ್ನೆಗೆ ಬಾರಿಸಿದ ಡಿ.ಕೆ.ಶಿವಕುಮಾರ್

July 11, 2021

ಮಂಡ್ಯ, ಜು.10-ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ತಮ್ಮ ಮೈ ಮುಟ್ಟಿದ ಅಭಿಮಾನಿಯ ಕೆನ್ನೆಗೆ ಬಾರಿಸಿದ ಘಟನೆ ಭಾರತೀನಗರದ ಜಿ.ಮಾದೇಗೌಡ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಆವರಣದಲ್ಲಿ ಶುಕ್ರ ವಾರ ನಡೆದಿದ್ದು, ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಜೆಡಿಎಸ್ ಕಾರ್ಯಕರ್ತನಾಗಿದ್ದು, ಶಾಸಕ ಡಿ.ಸಿ.ತಮ್ಮಣ್ಣ ಅವರ ಕಟ್ಟಾ ಅಭಿ ಮಾನಿ ಆಗಿರುವ ತೊರೆಬೊಮ್ಮನಹಳ್ಳಿ ಕೃಷಿ ಪತ್ತಿನ ಸಹಕಾರ ಸಂಘದ ಮಾಜಿ ಅಧ್ಯಕ್ಷ ಟಿ.ಬಿ.ಉಮೇಶ್ ಅವರೇ ಡಿ.ಕೆ. ಶಿವಕುಮಾರ್ ಅವರಿಂದ ಹೊಡೆಸಿಕೊಂಡ ವರಾಗಿದ್ದಾರೆ. ಇವರು ಜೆಡಿಎಸ್ ಕಾರ್ಯ ಕರ್ತರಾದರೂ, ಡಿಕೆಶಿ ಅಭಿಮಾನಿಯಾ ಗಿದ್ದು, ಅವರೊಂದಿಗೆ ಫೋಟೋ ತೆಗೆಸಿ ಕೊಳ್ಳಲು ಯತ್ನಿಸಿದಾಗ ಈ ಘಟನೆ ನಡೆದಿದೆ.

ವಿವರ: ಹಿರಿಯ ರಾಜಕೀಯ ಮುತ್ಸದ್ಧಿ ಜಿ.ಮಾದೇಗೌಡರು ಅನಾರೋಗ್ಯದಿಂದ ಭಾರತೀನಗರದ ಜಿ.ಮಾದೇಗೌಡ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯು ತ್ತಿದ್ದಾರೆ. ಅವರ ಆರೋಗ್ಯ ವಿಚಾರಿಸಲು ಡಿ.ಕೆ.ಶಿವಕುಮಾರ್ ಶುಕ್ರವಾರ ಆಗ ಮಿಸಿದ್ದರು. ಈ ವೇಳೆ ಟಿ.ಬಿ.ಉಮೇಶ್ ಅವರು ಶಿವಕುಮಾರ್ ಅವರ ಹಿಂದೆಯೇ ಬರುತ್ತಿದ್ದರು. ಒಂದು ಹಂತದಲ್ಲಿ ಸ್ವಲ್ಪ ಬಲಕ್ಕೆ ಚಲಿಸಿದ ಉಮೇಶ್, ಡಿ.ಕೆ.ಶಿವ ಕುಮಾರ್ ಅವರ ಸೊಂಟಕ್ಕೆ ಕೈ ಸೋಕಿಸಿ ದ್ದಾರೆ. ತಕ್ಷಣವೇ ಕೆರಳಿ ಹಿಂದೆ ತಿರುಗಿದ ಶಿವಕುಮಾರ್ ಹಠಾತ್ತನೆ ಉಮೇಶ್ ಕೆನ್ನೆಗೆ ಕೈಯ್ಯಿಂದ ಒಂದು ಏಟು ಬಾರಿಸಿ, `ಜವಾಬ್ದಾರಿ ಇದೆಯಾ ನಿನಗೆ? ಏನೋ ಹೋಗಲಿ ಅಂತ ಸಲಿಗೆ ಕೊಟ್ಟರೆ ಹೆಗಲ ಮೇಲೆ ಕೈ ಹಾಕ್ತೀಯಾ? ನೋಡಿದವರು ಏನ್ ಅನ್ಕೋಬೇಕು? ಕಾಮನ್‍ಸೆನ್ಸ್ ಇಲ್ಲವೇ?’ ಎಂದು ಹರಿಹಾಯುತ್ತಾ, ಮುನ್ನಡೆದರು. ಸ್ವಲ್ಪ ದೂರ ಸರಿದ ಉಮೇಶ್, `ಸಾರಿ ಅಣ್ಣ, ತಪ್ಪಾಯ್ತು ಎಂದು ಹೇಳಿ ದೂರ ಸರಿಯು ತ್ತಿರುವಾಗ ಮತ್ತೆ ಕರೆದು ಎಲ್ಲಿ ಹೇಗೆ ನಡೆದು ಕೊಳ್ಳಬೇಕು ಅಂತ ಗೊತ್ತಾಗೋದಿಲ್ವೇ? ನಮ್ಮ ಪಕ್ಷದ ಕಾರ್ಯಕರ್ತರು ಹೇಗಿರಬೇಕು? ಎಂದು ಪ್ರಶ್ನಿಸಿದಾಗ ಉಮೇಶ್ ಮತ್ತೆ ತಪ್ಪಾಯ್ತು ಅಣ್ಣ ಎಂದು ಹೇಳಿದರು.

ಈ ಘಟನೆಯನ್ನು ಚಿತ್ರೀಕರಣ ಮಾಡು ತ್ತಿದ್ದ ಮಾಧ್ಯಮದ ಕ್ಯಾಮರಾಮನ್ ಕಡೆ ತಿರುಗಿದ ಶಿವಕುಮಾರ್, `ಇದನ್ನೆಲ್ಲಾ ಟೆಲಿಕಾಸ್ಟ್ ಮಾಡಬೇಡಿ. ನಮ್ಮ ಪಕ್ಷದ ಕಾರ್ಯಕರ್ತರಿಗೆ ಬುದ್ಧಿ ಹೇಳಿದ್ದೀನಿ ಅಷ್ಟೇ. ವೀಡಿಯೋ ಡಿಲೀಟ್ ಮಾಡಿ’ ಎಂದು ಮನವಿ ಮಾಡಿದರು.
ಆದರೆ ಈ ದೃಶ್ಯಾವಳಿ ಇಂದು ಬೆಳಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿ, ನಂತರ ಸುದ್ದಿವಾಹಿನಿಗಳಲ್ಲೂ ಬಿತ್ತರ ಗೊಂಡಿದ್ದು, ಶಿವಕುಮಾರ್ ಅವರ ಈ ವರ್ತನೆ ತೀವ್ರ ಆಕ್ಷೇಪಕ್ಕೆ ಕಾರಣವಾಗಿದೆ.

Translate »