ಎಸ್‍ಎಂಟಿ ಕೋವಿಡ್ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸಿದ ವೈದ್ಯರು, ಸಿಬ್ಬಂದಿಗೆ ಸನ್ಮಾನ
ಮೈಸೂರು

ಎಸ್‍ಎಂಟಿ ಕೋವಿಡ್ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸಿದ ವೈದ್ಯರು, ಸಿಬ್ಬಂದಿಗೆ ಸನ್ಮಾನ

June 29, 2021

ಮೈಸೂರು,ಜೂ.28(ಆರ್‍ಕೆ)- ಕೊರೊನಾ ಸೋಂಕು ತೀವ್ರವಾಗಿದ್ದ ಸಂದರ್ಭ ರೋಗಿ ಗಳ ಆರೈಕೆ ಮಾಡಿದ ಮೈಸೂರಿನ ಸೇಟ್ ಮೋಹನ್‍ದಾಸ್ ಕೋವಿಡ್ ಆಸ್ಪತ್ರೆ ವೈದ್ಯರು ಹಾಗೂ ಸಿಬ್ಬಂದಿಯನ್ನು ಮುಡಾ ಅಧ್ಯಕ್ಷ ಹೆಚ್.ವಿ. ರಾಜೀವ್ ಸನ್ಮಾನಿಸಿದರು.

ತುರ್ತು ಸಂದರ್ಭದಲ್ಲಿ ಪ್ರಾಣಭಯ ವನ್ನೂ ಲೆಕ್ಕಿಸದೇ ಸೇವೆ ಸಲ್ಲಿಸಿದ ವೈದ್ಯರು, ಸಿಬ್ಬಂದಿ, ಊಟೋಪಚಾರ ಒದಗಿಸಿದವರ ಸೇವೆಯನ್ನು ಸ್ಮರಿಸಿ ಅಭಿನಂದಿಸುವ ಮೂಲಕ ಕೃತಜ್ಞತೆ ಸಲ್ಲಿಸಲಾಯಿತು. ಮುಡಾ ಸದಸ್ಯ ರಾದ ಜಿ.ಲಿಂಗಯ್ಯ, ಲಕ್ಷ್ಮೀದೇವಿ, ಆಯುಕ್ತ ಡಾ.ಡಿ.ಬಿ.ನಟೇಶ್, ನಗರ ಯೋಜಕ ಸದಸ್ಯ ಜಯಸಿಂಹ, ಕಾರ್ಯದರ್ಶಿ ಎಂ.ಕೆ.ಸವಿತಾ, ಕಾವೇರಿ ಆಸ್ಪತ್ರೆ ಮುಖ್ಯಸ್ಥ ಡಾ.ಚಂದ್ರ ಶೇಖರ್, ವೈದ್ಯ ಡಾ.ಭಾರ್ಗವ ಉಪಸ್ಥಿತರಿ ದ್ದರು. ಮೈಸೂರು ನಗರಾಭಿವೃದ್ಧಿ ಪ್ರಾಧಿ ಕಾರವು ಸೇಟ್ ಮೋಹನ್‍ದಾಸ್ ತುಳಸಿ ದಾಸ್ ಹೆರಿಗೆ ಆಸ್ಪತ್ರೆಯನ್ನು ಕಾವೇರಿ ಆಸ್ಪತ್ರೆ ಸಹಯೋಗ ದೊಂದಿಗೆ ಕೋವಿಡ್ ಕೇರ್ ಸೆಂಟರ್ ಆಗಿ ಮಾರ್ಪಡಿಸಿ 110 ಆಮ್ಲಜನಕ ಯುಕ್ತ ಹಾಸಿಗೆಗಳನ್ನು ಒದಗಿಸಿ, ಸೋಂಕಿತ ರಿಗೆ ಅಗತ್ಯ ಚಿಕಿತ್ಸಾ ಸೌಲಭ್ಯ ನೀಡುತ್ತಿರುವು ದನ್ನು ಅಧ್ಯಕ್ಷರು ಇದೇ ವೇಳೆ ಸ್ಮರಿಸಿದರು.

Translate »