ಅವಸರದ ಅನ್‍ಲಾಕ್ ಬೇಡ
News

ಅವಸರದ ಅನ್‍ಲಾಕ್ ಬೇಡ

June 28, 2021

ಬೆಂಗಳೂರು, ಜೂ.27- ಕೋವಿಡ್ ಡೆಲ್ಟಾ-ಪ್ಲಸ್ ಪ್ರಕ ರಣಗಳ ಸಂಖ್ಯೆ ಹೆಚ್ಚಳ ಮತ್ತು ಮಹಾರಾಷ್ಟ್ರ ಅನ್‍ಲಾಕ್ ನಿಂದಾಗಿ ರಾಜ್ಯದಲ್ಲಿ ಮತ್ತೆ ನಿಧಾನವಾಗಿ ಪರಿಸ್ಥಿತಿ ಗಂಭೀರ ವಾಗುತ್ತಿದ್ದು, ಈ ನಿಟ್ಟಿನಲ್ಲಿ ಕರ್ನಾಟಕದ ತಾಂತ್ರಿಕ ಸಲಹಾ ಸಮಿತಿ (ಟಿಎಸಿ)ರಾಜ್ಯ ಸರ್ಕಾರ ತಕ್ಷಣ ತೆಗೆದುಕೊಳ್ಳ ಬೇಕಾದ ಕ್ರಮಗಳ ಪಟ್ಟಿಯನ್ನು ಭಾನುವಾರ ಬಿಡುಗಡೆ ಮಾಡಿದೆ. ಲಾಕ್‍ಡೌನ್ ಮಾರ್ಗಸೂಚಿಗಳನ್ನು ಸಡಿಲಿಸು ವುದು ಬೇಡ ಎಂದು ಸರ್ಕಾರಕ್ಕೆ ಸೂಚಿಸಿದೆ.

ಡೆಲ್ಟಾ-ಪ್ಲಸ್‍ನ ಎರಡು ಪ್ರಕರಣಗಳು ರಾಜ್ಯದಲ್ಲಿ ಕಾಣಿಸಿದ್ದು ರಾಜ್ಯಕ್ಕೆ ಕೇಂದ್ರ ಕೂಡ ಜಾಗೃತವಾಗಿರು ವುದಕ್ಕೆ ಒತ್ತಾಯಿಸಿದೆ. ತಕ್ಷಣ ನಿಯಂತ್ರಣ ಕ್ರಮಗಳನ್ನು ತೆಗೆದುಕೊಳ್ಳಬೇಕು, ಜನಸಂದಣಿಯನ್ನು ತಡೆಯಬೇಕು, ವ್ಯಾಪಕ ಪರೀಕ್ಷೆ ನಡೆಸಬೇಕು ಮತ್ತು ರೂಪಾಂತರ ಪತ್ತೆಯಾದ ಜಿಲ್ಲೆಗಳಲ್ಲಿ ಆದ್ಯತೆಯ ಮೇಲೆ ಲಸಿಕೆ ಹೆಚ್ಚಿಸಬೇಕು ಎಂದು ಕೇಂದ್ರ ಸೂಚಿಸಿದೆ.

ಡೆಲ್ಟಾ-ಪ್ಲಸ್‍ಗಾಗಿ ಕ್ರಮಗಳ ಕುರಿತು ಚರ್ಚಿಸಲು ಶನಿ ವಾರ ಸಭೆ ನಡೆಸಿದ ಟಿಎಸಿ, ಜಿಲ್ಲೆಗಳಲ್ಲಿ ಕ್ರಮ ಕೈಗೊಳ್ಳು ವಂತೆ ಸರ್ಕಾರಕ್ಕೆ ಸೂಚಿಸಿದೆ ಎಂದು ಮೂಲಗಳು ತಿಳಿ ಸಿವೆ. ರೂಪಾಂತರ ದೃಢವಾದ ನಂತರ, ಜಿಲ್ಲಾ ಕಣ್ಗಾ ವಲು ಅಧಿಕಾರಿ (ಡಿಎಸ್‍ಒ) ಅಡಿಯಲ್ಲಿ ಜಿಲ್ಲಾ ಕ್ಷಿಪ್ರ ಪ್ರತಿ ಕ್ರಿಯೆ ತಂಡ (ಆರ್‍ಆರ್‍ಟಿ)ದಿಂದ ವಿವರವಾದ ಸಾಂಕ್ರಾ ಮಿಕ ರೋಗಶಾಸ್ತ್ರೀಯ ತನಿಖೆ ನಡೆಸಲಾಗುವುದು ಮತ್ತು ವರದಿಗಳನ್ನು ಜಿಲ್ಲಾಧಿಕಾರಿ, ಜಿಲ್ಲಾ ತಜ್ಞರ ಸಮಿತಿ ಮತ್ತು ರಾಜ್ಯ ಕೋವಿಡ್ ವಾರ್ ರೂಮಿನೊಂದಿಗೆ ಹಂಚಿಕೊಳ್ಳಬೇಕು ಎಂದು ಟಿಎಸಿ ಸೂಚಿಸಿದೆ.

ಮಾದರಿಗಳನ್ನು ಜೀನೋಮ್‍ಗೆ ಅನುಕ್ರಮಗೊಳಿಸಲು ಒಂದರಿಂದ 2 ವಾರಗಳು ಬೇಕೆನ್ನುವುದನ್ನು ನೆನಪಿನಲ್ಲಿಟ್ಟು ಕೊಂಡು, ಟಿಎಸಿಆರ್‍ಆರ್‍ಟಿಗಳಿಗೆ “ಕೋವಿಡ್-ಪಾಸಿ ಟಿವ್ ವ್ಯಕ್ತಿಯ ವೈದ್ಯಕೀಯ ಸ್ಥಿತಿ, ಅವನು / ಅವಳು ಹೋಂ ಐಸೋಲೇಷನ್ ಅಡಿಯಲ್ಲಿ ಚೇತರಿಸಿಕೊಂಡಿದ್ದಾನೋ ಅಥವಾ ಮರಣ ಹೊಂದಿದ್ದಾನೋ ಇತ್ಯಾದಿಗಳನ್ನು ತನಿಖೆ ಮಾಡಲು ಸಲಹೆ ನೀಡಿದೆ. ಅಲ್ಲದೆ, ಚೇತರಿಕೆಯ 14 ದಿನಗಳ ಬಳಿಕ ಅಂತಹ ಜನರಿಗೆ ಕೋವಿಡ್- ನೆಗೆಟಿವ್ ಪರೀಕ್ಷೆ ಅಗತ್ಯವಿದೆಯೇ ಎಂದು ಖಚಿತಪಡಿಸಿಕೊಳ್ಳಬೇಕು ಎಂದು ಟಿಎಸಿ ಸಲಹೆ ಕೊಟ್ಟಿದೆ. ರೂಪಾಂತರಕ್ಕೆ ಪಾಸಿಟಿವ್ ಆಗಿ ವರದಿ ಪಡೆದ ವ್ಯಕ್ತಿಯ ಎಲ್ಲಾ ಸಂಪರ್ಕಗಳನ್ನು ಗುರು ತಿಸಲಾಗಿದೆಯೇ ಮತ್ತು 7 ದಿನಗಳ ಕಾಲ ಪರೀಕ್ಷಿಸಲಾ ಗಿದೆಯೇ ಎಂದು ತಂಡಗಳು ಪರಿಶೀಲಿಸುವ ನಿರೀಕ್ಷೆಯಿದೆ.

ಸಂಪರ್ಕ ಪತ್ತೆ ಹಚ್ಚುವಿಕೆಯನ್ನು ಮಾಡಬೇಕು ಮತ್ತು ಅಂತಹ ಎಲ್ಲಾ ರೋಗಿಗಳ ಸಂಪರ್ಕಗಳಲ್ಲಿ ಆರ್‍ಟಿ-ಪಿಸಿಆರ್ ನಡೆಸಬೇಕು. ಪಾಸಿಟಿವ್ ವರದಿ ಬಂದರೆ ಅವುಗಳ ಮಾದರಿಗಳನ್ನು ಜೀನೋಮ್ ಅನುಕ್ರಮಕ್ಕೆ ಒಳಪಡಿಸ ಬೇಕು. ಟಿಎಸಿ ಸದಸ್ಯರು ಸೂಕ್ಷ್ಮ ಯೋಜನೆ ಮತ್ತು ವರದಿ ಸ್ವರೂಪಗಳನ್ನು ರಾಜ್ಯ ಮಟ್ಟದಲ್ಲಿ ಕಟ್ಟುನಿಟ್ಟಾಗಿ ಮಾಡುವ ಅಗತ್ಯವನ್ನು ಒತ್ತಿಹೇಳಿದ್ದು ಕಟ್ಟುನಿಟ್ಟಾದ ಕ್ವಾರಂಟೈನ್ ಪೆÇ್ರೀಟೋಕಾಲ್‍ಗಳನ್ನು ಜಾರಿಗೆ ತರಬೇಕು ಎಂದು ಹೇಳಿ ದರು. ಪ್ರತಿ ಜಿಲ್ಲೆಯ ಕ್ಷಿಪ್ರ ಪ್ರತಿಕ್ರಿಯೆ ತಂಡಗಳು ರೂಪಾಂ ತರಗಳಿಗಾಗಿ ಸಾಂಕ್ರಾಮಿಕ ರೋಗಗಳ ಕಣ್ಗಾವಲು ಬಲ ಪಡಿಸುವ ಇತ್ತೀಚಿನ ಮಾರ್ಗಸೂಚಿಗಳನ್ನು ಜಾರಿಗೆ ತರಬೇಕು ಎಂದು ಸಾಂಕ್ರಾಮಿಕ ರೋಗಶಾಸ್ತ್ರಜ್ಞ ಮತ್ತು ಟಿಎಸಿ ಸದಸ್ಯ ಡಾ. ಗಿರಿಧರ ಆರ್. ಬಾಬು ಹೇಳಿದರು.

ರಾಜ್ಯವು 1 ದಿನದಲ್ಲಿ 4 ಸಾವಿರ ಪ್ರಕರಣಗಳನ್ನು ದಾಖ ಲಿಸಿದ್ದು, ಜನರು ಕೋವಿಡ್ ನಿಯಮಗಳನ್ನು ಮೀರು ತ್ತಿದ್ದಾರೆ ಎಂಬ ಸ್ಪಷ್ಟ ಸೂಚನೆಯಂತೆ ಕಂಡುಬರುತ್ತಿದೆ. ಕರ್ನಾಟಕವು ಶುಕ್ರವಾರ ದಾಖಲಾದ ಪ್ರಕರಣಗಳಿಗಿಂತ 1,000 ಹೆಚ್ಚುವರಿ ಪ್ರಕರಣಗಳನ್ನು ವರದಿ ಮಾಡಿದೆ. ಹಿಂದಿನ ದಿನ 3,310 ಪ್ರಕರಣಗಳಿಗೆ ಹೋಲಿಸಿ ದರೆ ರಾಜ್ಯವು ಶನಿವಾರ 4,272 ಹೊಸ ಪ್ರಕರಣಗಳನ್ನು ದಾಖಲಿಸಿದೆ. ಆದಾಗ್ಯೂ, ಪಾಸಿಟಿವ್ ಪ್ರಮಾಣವು ಶುಕ್ರವಾರ 8.43%ರಿಂದ ಶನಿವಾರ 8.40%ಕ್ಕೆ ಇಳಿದಿದೆ.

ಗಡಿಗಳಲ್ಲಿ ಕಟ್ಟುನಿಟ್ಟಿನ ತಪಾಸಣೆ: ಕೋವಿಡ್ ನೆಗೆಟಿವ್ ವರದಿ ಪಡೆಯದೆ ರಾಜ್ಯಕ್ಕೆ ಪ್ರವೇಶಿಸುವ ಜನರ ತಡೆಯಲು ಸರ್ಕಾರ ಚಿಂತಿಸುತ್ತಿದೆ ಎಂದು ಡಿಸಿಎಂ ಲಕ್ಷ್ಮಣ ಸವದಿ ಹೇಳಿದ್ದಾರೆ. ಮಹಾರಾಷ್ಟ್ರದಲ್ಲಿ ಹೆಚ್ಚುತ್ತಿರುವ ಡೆಲ್ಟಾ ಪ್ಲಸ್ ಪ್ರಕರಣಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ ಅವರು, ಕರ್ನಾ ಟಕ-ಮಹಾರಾಷ್ಟ್ರ ಗಡಿಯಲ್ಲಿರುವ ಎಲ್ಲಾ ಚೆಕ್‍ಪೆÇೀಸ್ಟ್ ಗಳಲ್ಲಿ ಕಟ್ಟುನಿಟ್ಟಿನ ಪರೀಕ್ಷೆ ನಡೆಸಲಾಗುತ್ತಿದೆ ಎಂದರು.

Translate »