ಮೈಸೂರಲ್ಲಿ ಭಕ್ತಿ ಭಾವದ ಈದ್ ಮಿಲಾದ್ ಉನ್ ನಬಿ ಮೆರವಣಿಗೆ
ಮೈಸೂರು

ಮೈಸೂರಲ್ಲಿ ಭಕ್ತಿ ಭಾವದ ಈದ್ ಮಿಲಾದ್ ಉನ್ ನಬಿ ಮೆರವಣಿಗೆ

November 22, 2018

ಮೈಸೂರು: ದಾವತೆ-ಇಸ್ಲಾಮಿ ಹಿಂದ್ ಕರ್ನಾಟಕದ ವತಿಯಿಂದ ಪ್ರತಿ ವರ್ಷದಂತೆ ಜುಲೂಸ್ ಮೊಹಮದಿ ಈದ್ ಮಿಲಾದ್ ಉನ್ ನಬಿ ಮೆರವಣಿಗೆ ಬುಧವಾರ ಮಧ್ಯಾಹ್ನ 2.12 ಗಂಟೆಗೆ ಮೈಸೂರಿನ ಲಷ್ಕರ್ ಮೊಹಲ್ಲಾ, ಅಶೋಕ ರಸ್ತೆ ಯಲ್ಲಿರುವ ಮಸೀದಿ ಅಜಾóಮ್ ಮರ್‍ಕಾಜ್ó ಅಹಲ ಸುನ್ನತೋ ಜಮಾತ್‍ನಿಂದ ಹೊರಟು, ಸಾಡೆ ರಸ್ತೆ, ಈದ್ಗಾ ಮಸೀದಿ ರಸ್ತೆ, ಪುಲ ಕೇಶಿ ರಸ್ತೆ, ಮಂಡಿ ಮೊಹಲ್ಲಾ, ಲಷ್ಕರ್ ಮೊಹಲ್ಲಾ ರಸ್ತೆಗಳಲ್ಲಿ ಸಾಗಿತು.

ಜಮೀಲ್ ಅಹಮದ್ ಅಶ್ರಫಿ, ಉಪಾಧ್ಯಕ್ಷರು, ಮೈಸೂರು ಜಿಲ್ಲಾ ವಕ್ಫ್ ಬೋರ್ಡ್ ಸಲಹಾ ಸಮಿತಿ, ಮಸೀದಿ-ಇ-ಅಜಮ್ ವ್ಯವಸ್ಥಾ ಪಕ ಸಮಿತಿ ಅಧ್ಯಕ್ಷ ಅಹಮದ್ ಖಾನ್ ಅಮೀರಿ, ಕಾರ್ಯದರ್ಶಿ ಎಸ್.ಎಂ.ಸೈಯದ್ ಷಫೀಕ್, ಸದಸ್ಯ ಸೈಯದ್ ಶೌಕತ್ ಪೀರಾನ್, ಮೌಲ್ವಿ ಅಮಾನುಲ್ಲಾ ಅತ್ತಾರಿ, ನಾಸಿರ್ ಖುಶಾಲಿ, ನವೀದ್ ಅತ್ತಾರಿ, ನಯಾಜ್ ಖಲಂದರಿ, ಅಸ್ಲಂ ಅತ್ತಾರಿ, ಮೌಲಾನಾ ಅಬ್ದುಲ್ಲಾ ನಯೀಮಿ, ಮೌಲಾನಾ ಫಸೀವುಲ್ಲಾ ವಾರ್ಸಿ, ಮೌಲಾನಾ ವಜೀರ್ ಅಲಿ, ಮಿರ್ಜಾ ಜಂಷೀದ್ ಬೇಗ್ ಅಶ್ರಫಿ ಮತ್ತು ಇತರೆ ಉಲ್ಮಾಗಳು ಮೆರವಣಿಗೆ ಯಲ್ಲಿ ಭಾಗವಹಿಸಿದ್ದರು.

ಎಬಿಎಸ್ ಗ್ರೂಪ್ ಅಧ್ಯಕ್ಷರಾದ ಸೈಯದ್ ಅಬ್ಬಾಸ್ ಮತ್ತು ಸೈಯದ್ ಉಮರ್, ಮಿಷನ್ ಆಸ್ಪತ್ರೆಯ ಬಳಿ ಜಮೀಲ್ ಅಹಮದ್ ಅಶ್ರಫಿ ಅವರನ್ನು ಸನ್ಮಾನಿಸಿ ದರು. ಜಮೀಲ್ ಅಹಮದ್ ಅಶ್ರಫಿ ಅವರು 2000 ಹಣ್ಣಿನ ಪ್ಯಾಕೆಟ್‍ಗಳನ್ನು ಮೆರವಣಿಗೆ ಯಲ್ಲಿ ಭಾಗವಹಿಸಿದವರು ಹಾಗೂ ಅರೇಬಿಕ್ ಕಾಲೇಜು, ಅಜûಮ್ ಅರೇ ಬಿಕ್ ಕಾಲೇಜು ವಿದ್ಯಾರ್ಥಿಗಳಿಗೆ ವಿತರಿಸಿದರು. ಮೆರವಣಿಗೆಯ ಮಾರ್ಗ ಮಧ್ಯೆ ಅಂಗಡಿ ಮಾಲೀಕರು ಹಣ್ಣಿನ ಜ್ಯೂಸ್, ಗುಲಾಬಿ ವಿತರಿಸಿದರು. ಮುಸ್ಲಿಂ ರುದ್ರಭೂಮಿಯಲ್ಲಿ ಪಾತೆಹಾಖಾನಿ ನೆರವೇರಿ ಸಲಾಯಿತು. ಮೆರವಣಿಗೆಯು ಮಸೀದಿ-ಇ-ಅಜûಮ್‍ಗೆ ಹಿಂತಿರುಗಿತು.

Translate »