ಅಭಿವೃದ್ಧಿ ದೇಶಗಳಿಂದ ಪರಿಸರಕ್ಕೆ ದೊಡ್ಡ ಹಾನಿ: ಪ್ರಧಾನಿ
ಮೈಸೂರು

ಅಭಿವೃದ್ಧಿ ದೇಶಗಳಿಂದ ಪರಿಸರಕ್ಕೆ ದೊಡ್ಡ ಹಾನಿ: ಪ್ರಧಾನಿ

June 6, 2022

ದೆಹಲಿ, ಜೂ.೫- ವಿಶ್ವ ಪರಿಸರ ದಿನದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಭಾನುವಾರ `ಮಣ್ಣು ಉಳಿಸಿ ಅಭಿಯಾನ’ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈಶಾ ಫೌಂಡೇಶನ್‌ನ ಸಂಸ್ಥಾಪಕರಾದ ಸದ್ಗುರುಗಳು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ, ವಿಶ್ವ ಪರಿಸರ ದಿನದಂದು ಇಡೀ ವಿಶ್ವದ ಜನರಿಗೆ ಶುಭಾಶಯಗಳನ್ನು ತಿಳಿಸಿದರು. ಇಂದು ದೇಶ ೭೫ನೇ ಸ್ವಾತಂತ್ರೊ÷್ಯÃತ್ಸವ ವನ್ನು ಆಚರಿಸುತ್ತಿರುವ ಸಂದರ್ಭದಲ್ಲಿ ಈ ಅಮೃತ ಕಾಲದಲ್ಲಿ ಹೊಸ ಸಂಕಲ್ಪಗಳನ್ನು ಕೈಗೊಳ್ಳುತ್ತಿದೆ. ಹಾಗಾಗಿ ಈ ರೀತಿಯ ಸಾರ್ವಜನಿಕ ಅಭಿಯಾನ ಬಹಳ ಮುಖ್ಯ ವಾಗುತ್ತದೆ. ಕಳೆದ ೮ ವರ್ಷಗಳಿಂದ ದೇಶ ದಲ್ಲಿ ನಡೆಯುತ್ತಿರುವ ಎಲ್ಲಾ ಯೋಜನೆಗಳು ಒಂದಲ್ಲ ಒಂದು ರೀತಿಯಲ್ಲಿ ಪರಿಸರವನ್ನು ಸಂರಕ್ಷಿಸುವ ಹಂಬಲವನ್ನು ಹೊಂದಿವೆ ಎಂಬ ತೃಪ್ತಿ ನನಗಿದೆ ಎಂದರು. ಸ್ವಚ್ಛ ಭಾರತ್ ಮಿಷನ್,ತ್ಯಾಜ್ಯವನ್ನು ಸಂಪತ್ತಾಗಿಸುವ ಕಾರ್ಯಕ್ರಮಗಳು, ಅಮೃತ್ ಮಿಷನ್ ಅಡಿ ನಗರಗಳಲ್ಲಿ ಆಧುನಿಕ ಒಳಚರಂಡಿ ಸಂಸ್ಕರಣಾ ಘಟಕಗಳ ನಿರ್ಮಾಣ, ಸಿಂಗಲ್ ಯೂಸ್ ಪ್ಲಾಸ್ಟಿಕ್ ಗಳನ್ನು ಬಳಸಿ ಪರಿಸರವನ್ನು ರಕ್ಷಿಸುವ ಭಾರತದ ಬಹು ಆಯಾಮಗಳಾಗಿವೆ ಎಂದರು.

ಅಭಿವೃದ್ಧಿ ದೇಶಗಳಿಂದ ಪರಿಸರಕ್ಕೆ ದೊಡ್ಡ ಹಾನಿ: ಹವಾಮಾನ ಬದಲಾವಣೆಯಲ್ಲಿ ಭಾರತದ ಪಾತ್ರ ನಗಣ್ಯವಾಗಿರುವ ಸಂದರ್ಭದಲ್ಲಿ ಭಾರತ ಈ ಪ್ರಯತ್ನ ಮಾಡುತ್ತಿದೆ. ಪ್ರಪಂಚದ ಅಭಿವೃದ್ಧಿ ಹೊಂದಿದ ಆಧುನಿಕ ದೇಶಗಳು ಗರಿಷ್ಠ ಪ್ರಮಾಣದಲ್ಲಿ ಇಂಗಾಲದ ಹೊರಸೂಸುವಿಕೆಗೆ ಅವರೇ ಹೊಣೆ ಎಂದು ಪ್ರಧಾನಿ ದೂರಿದರು.

ಅಂತಾರಾಷ್ಟಿçÃಯ ಮಟ್ಟದ ಸೌರ ಒಕ್ಕೂಟ: ಸಿಡಿಆರ್‌ಐ ಮತ್ತು ಅಂತಾರಾಷ್ಟಿçÃಯ ಸೌರ ಒಕ್ಕೂಟ ರಚನೆಗೆ ಭಾರತ ನೇತೃತ್ವ ವಹಿಸಿದೆ. ಕಳೆದ ವರ್ಷ, ಭಾರತವು ೨೦೭೦ರ ವೇಳೆಗೆ ನಿವ್ವಳ ಶೂನ್ಯ ಗುರಿಯನ್ನು ಸಾಧಿಸುವ ಬಗ್ಗೆ ಸಂಕಲ್ಪ ಮಾಡಿದೆ. ಇಂದು ನಮ್ಮ ಸೌರಶಕ್ತಿ ಸಾಮರ್ಥ್ಯ ಸುಮಾರು ೧೮ ಪಟ್ಟು ಹೆಚ್ಚಾಗಿದೆ. ಅದು ಹೈಡ್ರೋ ಜನ್ ಮಿಷನ್ ಆಗಿರಲಿ ಅಥವಾ ಸರ್ಕೂ್ಯಲರ್ ಆರ್ಥಿಕ ನೀತಿಯ ವಿಷಯವಾಗಿರಲಿ, ಇದು ಪರಿಸರವನ್ನು ರಕ್ಷಿಸುವ ನಮ್ಮ ಬದ್ಧತೆಯ ಫಲಿತಾಂಶವಾಗಿದೆ ಎಂದರು..

ಮಣ್ಣನ್ನು ಜೀವಂತವಾಗಿರಿಸಲು ೫ ಮಂತ್ರ: ಮಣ್ಣನ್ನು ಜೀವಂತವಾಗಿಡಲು ದೇಶವು ನಿರಂತರವಾಗಿ ಶ್ರಮಿಸುತ್ತಿದೆ. ಮಣ್ಣನ್ನು ಉಳಿಸಲು, ಐದು ಮುಖ್ಯ ವಿಷಯಗಳ ಮೇಲೆ ಕೇಂದ್ರೀಕರಿಸಿದ್ದೇವೆ ಎಂದ ಪ್ರಧಾನಿ, ಮೊದಲನೆಯದಾಗಿ ಮಣ್ಣನ್ನು ರಾಸಾಯ ನಿಕ ಮುಕ್ತವನ್ನಾಗಿ ಮಾಡುವುದು ಹೇಗೆ? ಎರಡನೆಯದು ಮಣ ್ಣನಲ್ಲಿ ವಾಸಿಸುವ ಜೀವಿ ಗಳನ್ನು ಹೇಗೆ ಉಳಿಸುವುದು?, ಇದನ್ನು ತಾಂತ್ರಿಕ ಭಾಷೆಯಲ್ಲಿ ಮಣ ್ಣನ ಸಾವಯವ ವಸ್ತು ಎಂದು ಕರೆಯುತ್ತೀರಿ. ಮೂರನೆಯದು ಮಣ ್ಣನ ತೇವಾಂಶವನ್ನು ಹೇಗೆ ಕಾಪಾಡಿ ಕೊಳ್ಳುವುದು? ನಾಲ್ಕನೆಯದಾಗಿ ಕಡಿಮೆ ಅಂತರ್ಜಲದಿAದ ಮಣ ್ಣಗೆ ಆಗುತ್ತಿರುವ ಹಾನಿಯನ್ನು ಹೇಗೆ ತಡೆಯುವುದು ಮತ್ತು ಐದನೆಯದಾಗಿ, ಅರಣ್ಯದ ವ್ಯಾಪ್ತಿಯ ಕಡಿತದಿಂದ ಮಣ ್ಣನ ನಿರಂತರ ಸವೆತವನ್ನು ಹೇಗೆ ನಿಲ್ಲಿಸುವುದು ಹೇಗೆ ಅನ್ನೋದರ ಬಗ್ಗೆ ಕೇಂದ್ರ ಸರಕಾರ ತನ್ನ ದೃಷ್ಟಿಯನ್ನು ಕೇಂದ್ರೀಕರಿಸಿದೆ ಎಂದು ಪ್ರಧಾನಿ ತಿಳಿಸಿದರು.

ಪೆಟ್ರೋಲ್‌ನಲ್ಲಿ ೧೦% ಎಥೆನಾಲ್ ಮಿಶ್ರಣ: ಈ ಎಲ್ಲ ಪ್ರಯತ್ನಗಳ ನಡುವೆ, ಭಾರತವು ಇಂದು ಪರಿಸರ ದಿನದಂದು ಮತ್ತೊಂದು ಐತಿಹಾಸಿ ಸಾಧನೆಯನ್ನು ಮಾಡಿದೆ ಎಂದ ಪ್ರಧಾನಿ, ಇಂದು ಭಾರತವು ಪೆಟ್ರೋಲ್‌ನಲ್ಲಿ ಶೇ.೧೦ರಷ್ಟು ಎಥೆನಾಲ್ ಮಿಶ್ರಣ ಮಾಡುವ ಗುರಿಯನ್ನು ಸಾಧಿಸಿದೆ. ನಿಗದಿತ ಅವಧಿಗಿಂತ ೫ ತಿಂಗಳ ಮೊದಲೇ ಭಾರತ ಈ ಗುರಿಯನ್ನು ತಲುಪಿದೆ ಎಂದು ಪ್ರಧಾನಿ ಹೇಳಿದರು.

ಮಣ್ಣು ಆರೋಗ್ಯ ಕಾರ್ಡ್ ರೈತರಿಗೆ ಅನುಕೂಲ
ಈ ಹಿಂದೆ ನಮ್ಮ ದೇಶದ ರೈತನಿಗೆ ಯಾವ ರೀತಿಯ ಮಣ್ಣು, ಅವನ ಮಣ ್ಣನ ಕೊರತೆ ಏನು, ಎಷ್ಟು ಇದೆ ಎಂಬ ಮಾಹಿತಿ ಕೊರತೆ ಇತ್ತು. ಈ ಸಮಸ್ಯೆಯನ್ನು ಹೋಗಲಾ ಡಿಸಲು, ದೇಶದ ರೈತರಿಗೆ ಮಣ ್ಣನ ಆರೋಗ್ಯ ಕಾರ್ಡ್ ನೀಡಲು ಬೃಹತ್ ಅಭಿಯಾನ ಪ್ರಾರಂಭಿಸಲಾಯಿತು. ದೇಶಾದ್ಯಂತ ೨೨ ಕೋಟಿಗೂ ಹೆಚ್ಚು ಮಣ ್ಣನ ಆರೋಗ್ಯ ಕಾರ್ಡ್ಗಳನ್ನು ರೈತರಿಗೆ ನೀಡಲಾಗಿದೆ. ಇದರಿಂದ ಶೇ.೮ ರಿಂದ ೧೦ರಷ್ಟು ವೆಚ್ಚ ಉಳಿತಾಯ ವಾಗಿದ್ದು, ಇಳುವರಿಯಲ್ಲಿ ಶೇ.೫ರಿಂದ ೬ರಷ್ಟು ಹೆಚ್ಚಳವಾಗಿದೆ. -ಪ್ರಧಾನಿ

Translate »