ನೋಟುಗಳಲ್ಲಿ ಕಲಾಂ, ಠಾಗೋರ್ ಚಿತ್ರಗಳು
ಮೈಸೂರು

ನೋಟುಗಳಲ್ಲಿ ಕಲಾಂ, ಠಾಗೋರ್ ಚಿತ್ರಗಳು

June 6, 2022

ನವದೆಹಲಿ, ಜೂ.೫- ಪಶ್ಚಿಮಬಂಗಾಳದ ಶ್ರೇಷ್ಠ ಗಣ್ಯ ವ್ಯಕ್ತಿಗಳಲ್ಲಿ ಒಬ್ಬರಾದ ರವೀಂದ್ರನಾಥ ಠಾಗೋರ್ ಮತ್ತು ಭಾರತದ ೧೧ನೇ ರಾಷ್ಟçಪತಿ, ಮಿಸೈಲ್ ಮ್ಯಾನ್ ಎಂದು ಕರೆಯಲ್ಪಡುವ ಡಾ.ಎಪಿಜೆ ಅಬ್ದುಲ್ ಕಲಾಂ ಅವರ ಭಾವಚಿತ್ರಗಳನ್ನು ಮಹಾತ್ಮ ಗಾಂಧಿಯವರ ಹಾಗೆ ದೇಶದ ನೋಟುಗಳಲ್ಲಿ ಮುದ್ರಣಗೊಳ್ಳುವ ಸಾಧ್ಯತೆ ಯಿದೆ ಎಂದು ವರದಿಯಾಗಿದೆ.

ಭಾರತೀಯ ಕರೆನ್ಸಿ ನೋಟುಗಳಲ್ಲಿ ದೇಶದ ಪಿತಾಮಹ ಮಹಾತ್ಮ ಗಾಂಧಿಯವರ ಭಾವ ಚಿತ್ರ ಇರುವುದು ಸಾಮಾನ್ಯ. ಆದಾಗ್ಯೂ, ಹಣಕಾಸು ಸಚಿವಾಲಯ ಮತ್ತು ಭಾರ ತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಕೆಲವು ಮುಖಬೆಲೆಯ ಹೊಸ ಸರಣ ಯ ನೋಟುಗಳಲ್ಲಿ ಠಾಗೋರ್ ಮತ್ತು ಕಲಾಂ ಅವರ ಚಿತ್ರಗಳನ್ನು ಬಳ ಸಲು ಪರಿಗಣ ಸುತ್ತಿದೆ ಎಂದು ವರದಿಯಾಗಿದೆ.

ಇದೇ ಮೊದಲ ಬಾರಿಗೆ ಆರ್‌ಬಿಐ ಮಹಾತ್ಮ ಗಾಂಧಿ ಹೊರತುಪಡಿಸಿ ಇತರ ಪ್ರಸಿದ್ಧ ವ್ಯಕ್ತಿಗಳ ಚಿತ್ರಗಳನ್ನು ನೋಟುಗಳಲ್ಲಿ ಬಳಸಲು ಪರಿಗಣ ಸುತ್ತಿದೆ. ಆರ್‌ಬಿಐ ಮತ್ತು ಹಣಕಾಸು ಸಚಿವಾಲಯದ ಅಧೀನದಲ್ಲಿರುವ ಸೆಕ್ಯುರಿಟಿ ಪ್ರಿಂಟಿAಗ್ ಮತ್ತು ಮಿಂಟಿAಗ್ ಕಾರ್ಪೊರೇಷನ್ ಆಫ್ ಇಂಡಿಯಾ (ಎಸ್‌ಪಿಎಂಸಿಐಎಲ್) ಕಳುಹಿಸಿದೆ ಎಂದು ತಿಳಿದುಬಂದಿದೆ. ಮಹಾತ್ಮಾ ಗಾಂಧಿ, ರವೀಂದ್ರ ನಾಥ್ ಠಾಗೋರ್ ಮತ್ತು ಅಬ್ದುಲ್ ಕಲಾಂ ವಾಟರ್‌ಮಾರ್ಕ್ ಗಳ ಎರಡು ಪ್ರತ್ಯೇಕ ಸೆಟ್ ಮಾದರಿಗಳನ್ನು ಐಐಟಿ-ದೆಹಲಿ ಎಮೆರಿಟಸ್ ಪ್ರೊಫೆಸರ್ ದಿಲೀಪ್ ಟಿ ಶಹಾನಿ ಅವರಿಗೆ ನೀಡಲಾಗಿದೆ, ಅವರು ಎರಡು ಸೆಟ್‌ಗಳಿಂದ ಆಯ್ಕೆ ಮಾಡಲು ಮತ್ತು ಸರ್ಕಾರದಿಂದ ಅಂತಿಮ ಪರಿ ಗಣನೆಗೆ ಕಳುಹಿಸಲು ತಿಳಿಸಲಾಗಿದೆ. ನೋಟುಗಳಲ್ಲಿ ಒಂದು ಅಥವಾ ಎಲ್ಲಾ ೩ ಚಿತ್ರಗಳನ್ನು ಆಯ್ಕೆ ಮಾಡುವ ಕುರಿತು ಅಂತಿಮ ನಿರ್ಧಾರವನ್ನು ಸರ್ಕಾರದ ಉನ್ನತ ಮಟ್ಟದಲ್ಲಿ ತೆಗೆದುಕೊಳ್ಳಲಾಗುವುದು ಎಂದು ಸರ್ಕಾರಿ ಮೂಲಗಳು ತಿಳಿಸಿವೆ. ಮೂಲಗಳ ಪ್ರಕಾರ, ಮೂರು ವಾಟರ್‌ಮಾರ್ಕ್ ಮಾದರಿಗಳನ್ನು ವಿನ್ಯಾಸಗೊಳಿಸಲು ಅಧಿಕೃತ ಅನುಮತಿ ಇತ್ತು. ಇನ್ನೂ ಯಾವುದೇ ದೃಢ ನಿರ್ಧಾರವನ್ನು ತೆಗೆದುಕೊಂಡಿಲ್ಲ.

೨೦೨೧ರಲ್ಲಿ, ಆರ್‌ಬಿಐ ತನ್ನ ಮೈಸೂರು ಮೂಲದ ಭಾರತೀಯ ರಿಸರ್ವ್ ಬ್ಯಾಂಕ್ ನೋಟ್ ಮುದ್ರಣ್ ಪ್ರೆöÊವೇಟ್ ಲಿಮಿಟೆಡ್ ಮತ್ತು ಹೊಶಂಗಾ ಬಾದ್‌ನಲ್ಲಿರುವ ಎಸ್‌ಪಿಎಂಸಿಐಎಲ್‌ನ ಸೆಕ್ಯುರಿಟಿ ಪೇಪರ್ ಮಿಲ್‌ಗೆ ತಮ್ಮದೇ ಆದ ವಾಟರ್‌ಮಾರ್ಕ್ ಮಾದರಿ ಗಳನ್ನು ವಿನ್ಯಾಸಗೊಳಿಸಲು ಸೂಚನೆಗಳನ್ನು ನೀಡಿತು. ಬಳಿಕ ಖಃI ಮತ್ತು SPಒಅIಐ ತಮ್ಮ ಮಾದರಿಗಳನ್ನು ಪರೀಕ್ಷಿಸಲು ಶಹಾನಿಗೆ ಕಳುಹಿಸಿದವು. ಮಾದರಿಗಳ ಸೂಕ್ಷ÷್ಮ ಅಂಶಗಳ ಕುರಿತು ಶಹಾನಿ ಅಧಿಕಾರಿಗಳೊಂದಿಗೆ ಹಲವಾರು ಸುತ್ತಿನ ಚರ್ಚೆಗಳನ್ನು ನಡೆಸಿದ್ದಾರೆ.

Translate »