ಕಲಬುರಗಿ ಜಲ ಪ್ರವಾಹ: 73 ಗ್ರಾಮಗಳ 27,278 ಜನರ ರಕ್ಷಣೆ
ಮೈಸೂರು

ಕಲಬುರಗಿ ಜಲ ಪ್ರವಾಹ: 73 ಗ್ರಾಮಗಳ 27,278 ಜನರ ರಕ್ಷಣೆ

October 20, 2020

ಕಲಬುರಗಿ, ಅ.19- ಭೀಮಾ ನದಿಯ ಪ್ರವಾಹದಿಂದ ತತ್ತರಿಸಿರುವ ಜಿಲ್ಲೆಯ 73 ಗ್ರಾಮಗಳ 27278 ಜನ ರನ್ನು ರಕ್ಷಿಸಲಾಗಿದೆ ಎಂದು ಜಿಲ್ಲಾಧಿಕಾರಿ ವಿ.ವಿ. ಜೋತ್ಸ್ನಾ ತಿಳಿಸಿದ್ದಾರೆ. ಜಿಲ್ಲೆಯಲ್ಲಿ ಇದೂವರೆಗೆ 162 ಕಾಳಜಿ ಕೇಂದ್ರ ಗಳನ್ನು ತೆರೆದು 28637 ಜನರಿಗೆ ಅಲ್ಲಿ ಆಶ್ರಯ ಕಲ್ಪಿಸಿ ಅವರಿಗೆ ಊಟೋ ಪಚಾರದ ಜೊತೆಗೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ನೀಡಲಾಗಿದೆ ಎಂದು ತಿಳಿಸಿದ್ದಾರೆ. ಸಂತ್ರ ಸ್ತರ ರಕ್ಷಣೆಗೆ 98 ಸದಸ್ಯರ ಆರ್ಮಿ ಸೇನಾ ಪಡೆ, 57 ಸದಸ್ಯರ 3 ಎನ್‍ಡಿಆರ್‍ಎಫ್ ತಂಡಗಳು, 44 ಸದಸ್ಯರ ಎಸ್‍ಡಿಆರ್‍ಎಫ್ ತಂಡ, 80 ಸದಸ್ಯರ ಅಗ್ನಿಶಾಮಕ ದಳದ ತಂಡ ಸೇರಿದಂತೆ ಕಂದಾಯ ಇಲಾಖೆಯ ಸಿಬ್ಬಂದಿಗಳು ಮತ್ತು ಸ್ವಯಂ ಸೇವಕರು ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಪ್ರವಾಹಕ್ಕೆ 573 ಜಾನುವಾರುಗಳ ಜೀವ ಹಾನಿ ಯಾಗಿದ್ದು, ಯಾವುದೇ ಮಾನವ ಹಾನಿಯಾಗಿಲ್ಲ. 1266 ಮನೆಗಳು ಭಾಗಶಃ ಹಾನಿಗೆ ಒಳಗಾಗಿದ್ದು, 10150 ಮನೆಗಳಿಗೆ ಪ್ರವಾಹದ ನೀರು ನುಗ್ಗಿದ ಪರಿಣಾಮ ಬಟ್ಟೆ ಮತ್ತು ಪಾತ್ರೆಗಳಿಗೆ ಹಾನಿಯಾಗಿವೆ. ಭೀಕರ ಪ್ರವಾಹದಿಂದ ಹಾನಿಗೊಳಗಾದ ಕೃಷಿ ಮತ್ತು ತೋಟಗಾರಿಕೆ ಬೆಳೆಗಳ ಸಮೀಕ್ಷೆ ಕಾರ್ಯ ಪ್ರಗತಿಯಲ್ಲಿದೆ. ಸಂತ್ರಸ್ತರ ನೆರವಿಗೆ ಆ್ಯಂಬುಲೆನ್ಸ್ ಸೇವೆ ಸಹ ಸಿದ್ಧವಿಡಲಾಗಿದೆ ಎಂದು ಹೇಳಿದ್ದಾರೆ. ಜಿಲ್ಲಾಧಿಕಾರಿ ವಿ.ವಿ.ಜೋತ್ಸ್ನಾ ಇಂದು ಅಫಜಲಪೂರ ತಾಲೂಕಿನ ಬಂದರವಾಡ, ಗಾಣಗಾಪೂರ, ಕರಜಗಿ ಗ್ರಾಮಗಳಲ್ಲಿನ ಕಾಳಜಿ ಕೇಂದ್ರಗಳಿಗೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಬಳ್ಳಾರಿ ಗೃಹರಕ್ಷಕ ರಕ್ಷಣಾ ತಂಡದ ಡಿ.ಉಮೇಶ್ ಮೆಟಲ್ ಸಂಖ್ಯೆ 57, ಬಸವರಾಜ ಮೆಟಲ್ ಸಂಖ್ಯೆ 94, ಕೆ.ಎನ್. ಮಹಾಂತೇಶ ಮೆಟಲ್ ಸಂಖ್ಯೆ 322, ಕೆ. ಆನಂದ್ ಮೆಟಲ್ ಸಂಖ್ಯೆ 318 ಮತ್ತು ಕುಡುತಿನಿ ಗೃಹರಕ್ಷಕದಳ ಘಟಕದ ಕೆ.ಸುರೇಶ್ ಮೆಟಲ್ ಸಂಖ್ಯೆ 2002 ಸದಸ್ಯರನ್ನು ಕಾರ್ಯಾ ಚರಣೆಯಲ್ಲಿ ಭಾಗವಹಿಸಿ ಸಂತ್ರಸ್ತರನ್ನು ರಕ್ಷಿಸುತ್ತಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Translate »