ಗಣೇಶ್ ನಿಲುವಾಗಿಲು ಅವರ ಕವನ ಸಂಕಲನ ಬಿಡುಗಡೆ
ಮೈಸೂರು

ಗಣೇಶ್ ನಿಲುವಾಗಿಲು ಅವರ ಕವನ ಸಂಕಲನ ಬಿಡುಗಡೆ

July 8, 2021

ಮೈಸೂರು, ಜು.7(ಆರ್‍ಕೆಬಿ)- ಬರಹ ಗಾರ ಗಣೇಶ್ ನಿಲುವಾಗಿಲು ಅವರ ಹಳ್ಳಿಗಾಡಿನ ಹೈದ ಆತ್ಮ ಚರಿತ್ರೆ ಹಾಗೂ ಬದುಕು ನೆನಪಿನ ಕವಿತೆ ಕವನ ಸಂಕ ಲನವನ್ನು ಮೈಸೂರು ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಶಿವಕುಮಾರ್ ಆರ್.ದಂಡಿನ ಬುಧವಾರ ಮೈಸೂರು ಪತ್ರಕರ್ತರ ಭವನದಲ್ಲಿ ಬಿಡುಗಡೆ ಮಾಡಿ ದರು. ನಂತರ ಮಾತನಾಡಿದ ಅವರು, ಸಾಂಸ್ಕøತಿಕ ನಗರ ಮೈಸೂರು ಮತ್ತು ಜಿಲ್ಲೆಯ ಮಣ್ಣಿನ ಗುಣವೇ ಅಂಥದ್ದು. ಇಲ್ಲಿನವರು ಒಂದಲ್ಲ ಒಂದು ಸಾಂಸ್ಕøತಿಕ, ಸಾಹಿತ್ಯಿಕ ಕ್ಷೇತ್ರಗಳಲ್ಲಿ ಸಾಧನೆ ಮಾಡಿ ದವರಿದ್ದಾರೆ. ಅದೇ ರೀತಿ ಗಣೇಶ್ ನಿಲುವಾಗಿಲು ಅವರ ಕವನಗಳು ಅವರ ಸುತ್ತಮುತ್ತಲಿನ, ಪರಿಸರ, ತಂದೆ-ತಾಯಿ, ಲಕ್ಷ್ಮಣತೀರ್ಥ ಹಾಗೂ ಅವರ ಬಾಲ್ಯದ ಅನುಭವವನ್ನು ನಿರೂಪಿಸುವಂತಿವೆ ಎಂದರು. ಸಾಹಿತಿಗಳಾದ ಬನ್ನೂರು ಕೆ.ರಾಜು, ಡಿ.ಪಿ.ಚಿಕ್ಕಣ್ಣ ದಾಪುಚಿ, ರಂಗಭೂಮಿ ಕಲಾವಿದ ಕುಮಾರ್ ಅರಸೇ ಗೌಡ, ಕುಳ್ಳೇಗೌಡ ಇನ್ನಿತರರು ಕಾರ್ಯ ಕ್ರಮದಲ್ಲಿ ಉಪಸ್ಥಿತರಿದ್ದರು.

Translate »