ಆರೋಗ್ಯ ರಕ್ಷಣೆ ವಿಷನ್ ಗ್ರೂಪ್‍ನಿಂದ ‘ಆರೋಗ್ಯ ಕರ್ನಾಟಕ’
ಮೈಸೂರು

ಆರೋಗ್ಯ ರಕ್ಷಣೆ ವಿಷನ್ ಗ್ರೂಪ್‍ನಿಂದ ‘ಆರೋಗ್ಯ ಕರ್ನಾಟಕ’

January 4, 2021

ಅಧ್ಯಯನ ವರದಿಗೆ 6 ತಿಂಗಳ ಕಾಲಾವಕಾಶ: ಆರೋಗ್ಯ ಸಚಿವ ಡಾ. ಕೆ. ಸುಧಾಕರ್

ಬೆಂಗಳೂರು,ಜ.3-ರಾಜ್ಯದ ಜನರ ಸಮಗ್ರ ಆರೋಗ್ಯ ರಕ್ಷಣೆಯೇ ರಕ್ಷಣೆ ವಿಷನ್ ಗ್ರೂಪ್‍ನ ಪ್ರಮುಖ ಗುರಿಯಾಗಿದೆ. ವಿಷನ್ ಗ್ರೂಪ್‍ಗೆ ಆರೋಗ್ಯ ಕರ್ನಾಟಕ ನಿರ್ಮಿಸಲು ವರದಿ ರೂಪಿಸಲು 6 ತಿಂಗಳು ಸಮಯ ನೀಡಲಾಗಿದೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ.

ಸರ್ಕಾರಿ ವೈದ್ಯಕೀಯ ಕಾಲೇಜುಗಳ ಬ್ರ್ಯಾಂಡಿಂಗ್, ಆಸ್ಪತ್ರೆಗಳಲ್ಲಿ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಬಳಕೆ, ಡಿಜಿಟಲ್ ದಾಖಲಾತಿ, ಜನಸಾಮಾನ್ಯರಿಗೆ ಅತ್ಯುತ್ತಮ ಆರೋಗ್ಯ ಸೇವೆ ಒದಗಿಸುವ ಬಗ್ಗೆ ಆರೋಗ್ಯ ವಿಷನ್ ಗ್ರೂಪ್ ತನ್ನ ಮೊದಲ ಸಭೆಯಲ್ಲಿ ಚರ್ಚೆ ನಡೆಸಿತು. ವಿಧಾನಸೌಧದಲ್ಲಿ ನಡೆದ ಈ ಸಭೆಯಲ್ಲಿ ಸಚಿವ ಸುಧಾಕರ್ ಸೇರಿದಂತೆ ಆರೋಗ್ಯ ವಲಯದ ಖ್ಯಾತನಾಮ ತಜ್ಞರು ಪಾಲ್ಗೊಂಡಿದ್ದರು.

ಈ ವೇಳೆ ಮಾತನಾಡಿದ ಸಚಿವ ಸುಧಾಕರ್, ‘ಆರೋಗ್ಯ ಕ್ಷೇತ್ರದಲ್ಲಿ ಸಮಗ್ರ ಸುಧಾರಣೆ ತರಲು ರಚಿಸಿರುವ ವಿಷನ್ ಗ್ರೂಪ್ ಆರು ತಿಂಗಳಲ್ಲಿ ವರದಿ ನೀಡಲಿದೆ. 2017ರ ಆರೋಗ್ಯ ನೀತಿ ನಮ್ಮಲ್ಲಿದೆ. ಇದರ ಜೊತೆಗೆ ರಾಜ್ಯದ ಜನರಿಗೆ ಸುಲಭ ವಾಗಿ ಪರಿಣಾಮಕಾರಿ ಆರೋಗ್ಯ ಸೇವೆ ಒದಗಿಸಲು, ಆರೋಗ್ಯ ಕ್ಷೇತ್ರದ ಸಮಗ್ರ ಬದಲಾವಣೆ ಕುರಿತು ಚರ್ಚೆ ನಡೆಸಲಾಯಿತು ಎಂದು ಹೇಳಿದರು.

ಅಂತೆಯೇ ರಾಜ್ಯದಲ್ಲಿ ಪ್ರಾಥಮಿಕ, ಸಮುದಾಯ ಮತ್ತು ಜಿಲ್ಲಾ ಮಟ್ಟದ್ದು ಎಂಬ ಮೂರು ಹಂತಗಳ ಆರೋಗ್ಯ ಸೇವೆ ಲಭ್ಯವಿದೆ. ಜೊತೆಗೆ ವೈದ್ಯಕೀಯ ಕಾಲೇಜು ಗಳಿವೆ. ಇವುಗಳನ್ನು ಒಂದಕ್ಕೊಂದು ಸಂಪರ್ಕ ಕಲ್ಪಿಸಿ ಜನರಿಗೆ ಗುಣಮಟ್ಟದ ಆರೋಗ್ಯ ಸೇವೆ ನೀಡಬೇಕಿದೆ. ರೋಗ ಬರದಂತೆ ತಡೆಯುವ ಕ್ರಮಕ್ಕೆ ಹೆಚ್ಚು ಒತ್ತು ನೀಡಲು ಉದ್ದೇಶಿಸಲಾಗಿದೆ. ಇವೆಲ್ಲ ಅಂಶಗಳು ಸೇರಿದಂತೆ `ಆರೋಗ್ಯ ಕರ್ನಾಟಕ’ ನಿರ್ಮಿ ಸಲು ವರದಿ ರೂಪಿಸಲು ಆರು ತಿಂಗಳ ಸಮಯ ನೀಡಲಾಗಿದೆ. ಈ ಗ್ರೂಪ್‍ನಲ್ಲಿ ಉಪಸಮಿತಿಗಳನ್ನು ರಚಿಸಿ, ತಜ್ಞರ ಸಲಹೆ ಪಡೆದು ವರದಿ ರೂಪಿಸಲಾಗುತ್ತದೆ. ಈ ಗ್ರೂಪ್‍ನಲ್ಲಿ ಅಲೋಪತಿ ಹಾಗೂ ಆಯುಷ್ ತಜ್ಞರನ್ನೂ ಸೇರಿಸಲಾಗಿದೆ ಎಂದು ಸುಧಾಕರ್ ಹೇಳಿದರು. ಅಂತೆಯೇ ಈ ಗ್ರೂಪ್‍ಗೆ ನಿಮ್ಹಾನ್ಸ್ ಸಂಸ್ಥೆಯ ಮಾಜಿ ನಿರ್ದೇಶಕ ಖ್ಯಾತ ವೈದ್ಯ ಡಾ. ಜಿ.ಜಿ.ಗುರುರಾಜ್ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು. ಈ ಗ್ರೂಪ್ ರೋಗಗಳನ್ನು ತಡೆಗಟ್ಟುವ ಮತ್ತು ಮುನ್ಸೂಚಕ ಔಷಧದ ಮೇಲೂ ಗಮನ ಹರಿಸಲಿದೆ. ಪ್ರಮುಖವಾಗಿ 35 ವರ್ಷಕ್ಕಿಂತ ಮೇಲ್ಪಟ್ಟವರಿಗೆ ವಾರ್ಷಿಕ ಆರೋಗ್ಯ ತಪಾಸಣೆ ನಡೆಸಲಾಗುವುದು. ಇದರಲ್ಲಿ ರಕ್ತ ಪರೀಕ್ಷೆ, ಲಿಪಿಡ್ ಪೆÇ್ರಫೈಲ್ ಮತ್ತು ಸಾಂಕ್ರಾಮಿಕವಲ್ಲದ ಕಾಯಿಲೆಗಳಿಗೆ ತಪಾಸಣೆ ಒಳಗೊಂಡಿರುತ್ತದೆ. ತಪಾಸಣೆಯ ನಂತರ ಜೀವನಶೈಲಿಯ ಬದಲಾವಣೆಗಳು ಮತ್ತು ಪೆÇೀಷಣೆಗೆ ಚಿಕಿತ್ಸೆ ಮತ್ತು ಸಲಹೆಯನ್ನು ನೀಡಲಾಗುವುದು ಎಂದು ಹೇಳಿದರು.

ತಜ್ಞರ ಶಿಫಾರಸುಗಳು:

ವಿಶ್ವಸಂಸ್ಥೆ ಮಾನದಂಡಗಳ ಪ್ರಕಾರ ನಿರ್ವಹಿಸಬೇಕಾದ ಆರೋಗ್ಯ ರಕ್ಷಣೆಯ ಗುಣಮಟ್ಟ ಅತ್ಯುತ್ತಮ ಮೂಲಸೌಕರ್ಯಗಳ ಮತ್ತು ಸರ್ಕಾರಿ ಆಸ್ಪತ್ರೆಗಳಲ್ಲಿ ಸಿಬ್ಬಂದಿಯನ್ನು ಹೆಚ್ಚಿಸುವುದು ಪ್ರಾಥಮಿಕ ಹಂತಗಳಲ್ಲಿ ತುರ್ತು ಪರಿಸ್ಥಿತಿಗಳನ್ನು ನಿಭಾಯಿಸಲು ವೈದ್ಯರು ಮತ್ತು ದಾದಿಯರಿಗೆ ವಿಶೇಷವಾಗಿ ತರಬೇತಿ ನೀಡಬೇಕು ಎಲ್ಲಾ ಪಿಎಚ್‍ಸಿಗಳಲ್ಲಿ ಆಯುಷ್ ಕೇಂದ್ರಗಳನ್ನು ತೆರೆಯುವುದು ಪ್ರತಿ ಆಸ್ಪತ್ರೆಯಲ್ಲಿ ಟೆಲಿ-ಐಸಿಯು ಮಾದರಿಯನ್ನು ಅಳವಡಿಸಿಕೊಳ್ಳಬೇಕು ಸರ್ಕಾರಿ ವೈದ್ಯಕೀಯ ಕಾಲೇಜುಗಳನ್ನು ಬ್ರಾಂಡ್ ಮಾಡುವುದು ಐಎಎಸ್ ಮತ್ತು ಕೆಎಎಸ್ ಮಾದರಿಯಲ್ಲಿ ಐಎಂಎಸ್ ಮತ್ತು ಕೆಎಂಎಸ್ ಕೇಡರ್ ಜೆರಿಯಾಟ್ರಿಕ್ ವಯೋವೃದ್ಧರ ಆರೈಕೆಗಾಗಿ ವಿಶೇಷ ಸಿಬ್ಬಂದಿ ನೇಮಕ ಸರ್ಕಾರಿ ಆಸ್ಪತ್ರೆಗಳಲ್ಲಿ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಮೂಲಕ ಆರೋಗ್ಯ ಸೇವೆಗಳನ್ನು ಪಡೆಯುವುದು ಪ್ರತಿ 50 ಕಿ.ಮೀ.ಗೆ ಒಂದರಂತೆ ಅಥವಾ ಜಿಲ್ಲಾ ಮಟ್ಟದಲ್ಲಿ ಒಂದು ಟ್ರಾಮಾ ಕೇರ್ ಸೆಂಟರ್ ನಿರ್ಮಿಸಬೇಕು. ಇದರಿಂದ ಅಪಘಾತಕ್ಕೊಳಗಾದವರ ಜೀವ ರಕ್ಷಣೆ ಸಾಧ್ಯ. ಮಕ್ಕಳ ಆರೋಗ್ಯ ಕಾಪಾಡಲು ಟೆಲಿಮೆಡಿಸಿನ್, ಸಾರ್ವಜನಿಕರ ಆರೋಗ್ಯ ಮಾಹಿತಿಯ ಡಿಜಿಟಲ್ ದಾಖಲಾತಿ, ಶುಚಿತ್ವ, ಕೈಗೆಟಕುವ ದರದಲ್ಲಿ ಚಿಕಿತ್ಸೆ ಕುರಿತು ಹೊಣೆಗಾರಿಕೆ ನಿಗದಿಪಡಿಸುವುದು, ಇದರಿಂದ ಆಸ್ಪತ್ರೆಗಳಲ್ಲಿ ಗುಣಮಟ್ಟ ಸುಧಾರಣೆ ಆಗಲಿದೆ.  ಪ್ರತಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲೂ ಆಯುಷ್ ಕೇಂದ್ರ ಆರಂಭಿಸುವುದು. ಒಂದು ರೋಗದ ಚಿಕಿತ್ಸೆಗೆ ರೋಗಿಗಳು ಇರುವ ಸ್ಥಳದಲ್ಲಿಯೇ ಲಭ್ಯವಿರುವ ಆಸ್ಪತ್ರೆಗಳಲ್ಲಿ ಪ್ರಾಥಮಿಕ ಚಿಕಿತ್ಸೆ ಪಡೆದು ಮುಂದುವರೆದ ಚಿಕಿತ್ಸೆಗೆ ವಿಶೇಷ ಆಸ್ಪತ್ರೆ (ಹಬ್)ಗೆ ಸಂಪರ್ಕಿಸಲು ಟೆಲಿ ಐಸಿಯು ಮಾದರಿಯನ್ನು ಅಳವಡಿಸುವುದು. ಸರ್ಕಾರಿ ವೈದ್ಯಕೀಯ ಕಾಲೇಜುಗಳಿಗೆ ಬ್ರ್ಯಾಂಡಿಂಗ್ ಮಾಡುವುದು. ಜೀವರಕ್ಷಕ ಔಷಧಿಗಳ ನಿರಂತರ ಪೂರೈಕೆ, ಅಂಗಾಂಗ ಕಸಿ ಕಾಯ್ದೆಯ ಪರಿಷ್ಕರಣೆ.

 

 

Translate »