ಅಕ್ರಮ ಸಂಬಂಧ : ಮಗು ಸಾಯಿಸಿ, ತಾಯಿ ನೇಣಿಗೆ ಶರಣು
ಮೈಸೂರು

ಅಕ್ರಮ ಸಂಬಂಧ : ಮಗು ಸಾಯಿಸಿ, ತಾಯಿ ನೇಣಿಗೆ ಶರಣು

November 21, 2018

ಹಂಪಾಪುರ: ಅಕ್ರಮ ಸಂಬಂಧ ಹೊಂದಿದ್ದು ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಗೃಹಿಣಿಯೊಬ್ಬರು ಮಗು ಸಾಯಿಸಿ, ತಾನೂ ನೇಣಿಗೆ ಶರಣಾದ ಘಟನೆ ಎಚ್.ಡಿ. ಕೋಟೆ ತಾಲೂಕು ಕುಣಿಗಲು ಗ್ರಾಮದಲ್ಲಿ ಸಂಭವಿಸಿದೆ.

ಗ್ರಾಮದ ರಾಜೇಶ್ವರಿ (23) ಹಾಗೂ ಮಾನ್ವಿತ (2) ಸಾವನ್ನಪ್ಪಿದವರು. ಹೆಚ್.ಡಿ.ಕೋಟೆ ತಾಲೂಕಿನ ಕೂಡಗಿ ಗ್ರಾಮದ ಸೋಮಣ್ಣ ಅವರು ಕುನ್ನೆಗಾಲ ಗ್ರಾಮದ ರಾಜೇಶ್ವರಿ ಅವರನ್ನು ಆರು ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದರು. ಇವರಿಗೆ ಒಂದು ಹೆಣ್ಣು ಹಾಗೂ ಒಂದು ಗಂಡು ಮಗು ಇದೆ. ಕೂಡಗಿ ಗ್ರಾಮದ ವಿನೋದ ಜೊತೆ ರಾಜೇಶ್ವರಿ ಎರಡು ವರ್ಷದಿಂದ ಅಕ್ರಮ ಸಂಬಂಧ ಹೊಂದಿದ್ದರು ಎನ್ನಲಾಗಿದೆ.

ಇದನ್ನು ತಿಳಿದ ಗಂಡ ಸೋಮಣ್ಣ ತಂದೆಯ ಮನೆಗೆ ಅವಳನ್ನು ಬಿಟ್ಟು ಬಂದಿದ್ದರು. ಹಲವಾರು ಬಾರಿ ರಾಜೀ ಪಂಚಾಯಿತಿ ಮಾಡಿದ್ದರು. ಆದರೂ ಸಂಬಂಧ ಮುಂದುವರೆದಿತ್ತು. ಇತ್ತೀಚೆಗೆ ಗಂಡನಿಗೆ ಸಿಕ್ಕಿ ಬಿದ್ದ ಹಿನ್ನೆಲೆಯಲ್ಲಿ ಪತಿ ಸೋಮಣ್ಣ, ರಾಜೇಶ್ವರಿಯನ್ನು ತರಾಟೆಗೆ ತೆಗೆದುಕೊಂಡಿದ್ದರು. ನಂತರ ರಾತ್ರಿ ರಾಜೇಶ್ವರಿ ಮೊದಲು ಮಗುವನ್ನು ನೇಣಿಗೆ ಹಾಕಿ ತಾನೂ ನೇಣಿಗೆ ಶರಣಾಗಿದ್ದಾಳೆ. ಈ ಸಂಬಂಧ ಸರಗೂರು ಪೆÇಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ತನಿಖೆ ಮುಂದುವರೆದಿದೆ.

Translate »