ಅಂಬೇಡ್ಕರ್ ಪ್ರತಿಮೆ ಸ್ಥಾಪಿಸಲು ದಸಂಸ ಆಗ್ರಹ
ಮೈಸೂರು

ಅಂಬೇಡ್ಕರ್ ಪ್ರತಿಮೆ ಸ್ಥಾಪಿಸಲು ದಸಂಸ ಆಗ್ರಹ

November 21, 2018

ತಿ.ನರಸೀಪುರ – ಪಟ್ಟಣದ ಮಿನಿ ವಿಧಾನಸೌಧದ ಮುಂಭಾಗದಲ್ಲಿ ಸಂವಿ ಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ ಪ್ರತಿಮೆ ಸ್ಥಾಪಿಸಲು ಕ್ರಮಕೈಗೊಳ್ಳುವಂತೆ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಕಾರ್ಯಕರ್ತರು ತಾಲೂಕು ಕಚೇರಿ ಎದುರು ಪ್ರತಿಭಟಿಸಿದರು.

ಸಮಿತಿಯ ಜಿಲ್ಲಾ ಸಂಚಾಲಕ ಬನ್ನ ಹಳ್ಳಿ ಸೋಮಣ್ಣ ಮಾತನಾಡಿ, ಕಳೆದ ಸರ್ಕಾರದ ಅವಧಿಯಲ್ಲಿ ಅಂಬೇಡ್ಕರ್ ಪ್ರತಿಮೆ ನಿರ್ಮಿಸಲು 35 ಲಕ್ಷ ರೂ. ಅನು ದಾನ ನೀಡಲಾಗಿತ್ತು. ಆದರೆ ಪ್ರತಿಮೆಯ ಕೆಲಸ ಪೂರ್ಣಗೊಂಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರಲ್ಲದೆ, ತಾಲೂಕು ಕಚೇರಿ ಹಾಗೂ ತಾಪಂ ಕಚೇರಿಗಳಲ್ಲಿ ಸಾರ್ವ ಜನಿಕರಿಗೆ ಶೌಚಾಲಯ ಸೇರಿದಂತೆ ಸೂಕ್ತ ಮೂಲ ಸೌಕರ್ಯವಿಲ್ಲದೆ, ಪರದಾಡು ವಂತಾಗಿದೆ. ಕೂಡಲೇ ಅಗತ್ಯ ಕ್ರಮ ಕೈ ಗೊಳ್ಳುವಂತೆ ಇದೇ ವೇಳೆ ಆಗ್ರಹಿಸಿದರು. ಪ್ರತಿಭಟನೆಯಲ್ಲಿ ಸಮಿತಿಯ ತಾಲೂಕು ಸಂಚಾಲಕ ಬನ್ನಹಳ್ಳಿ ಚಂದ್ರ ಶೇಖರ್, ಹೊಸಕೋಟೆ ಕುಮಾರ್, ಬನ್ನ ಹಳ್ಳಿ ಬಸವರಾಜು, ತೇಜಸ್, ಸಿದ್ದರಾಜು, ಮುದ್ದು ರಾಜು ಮಾದಿಗಹಳ್ಳಿ, ನೆರಗಾತನ ಹಳ್ಳಿ ಶೇಖರ್, ರಾಮು, ಹಕ್ಕೂರು ಮಹ ದೇವ್, ಮಹದೇವಸ್ವಾಮಿ, ಮತ್ತಿತರರಿದ್ದರು.

Translate »