ರಕ್ತದಾನ ಮಹತ್ವದ ಅರಿವು ಅಗತ್ಯ; ಕೆ.ಜಿ.ಬೋಪಯ್ಯ
ಕೊಡಗು

ರಕ್ತದಾನ ಮಹತ್ವದ ಅರಿವು ಅಗತ್ಯ; ಕೆ.ಜಿ.ಬೋಪಯ್ಯ

December 26, 2018

ಮಡಿಕೇರಿ:  ರಕ್ತದಾನದ ಮಹತ್ವ ವನ್ನು ತಿಳಿದುಕೊಳ್ಳುವ ಮೂಲಕ ಪ್ರತಿಯೊ ಬ್ಬರು ಜೀವ ರಕ್ಷಣೆಯ ಮಹತ್ಕಾರ್ಯಕ್ಕೆ ಮುಂದಾಗಬೇಕೆಂದು ವಿರಾಜಪೇಟೆ ವಿಧಾ ನಸಭಾ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಕರೆ ನೀಡಿದ್ದಾರೆ.

ಮೇಕೇರಿ ಸರ್ಕಾರಿ ಮಾದರಿ ಪ್ರಾಥ ಮಿಕ ಶಾಲೆ ಆವರಣದಲ್ಲಿ ನಡೆದ ಸ್ವಾಗತ ಯುವಕ ಸಂಘ ಮತ್ತು ವಿವಿಧ ಸಂಘ, ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಸಂಕಲ್ಪಸೇ ಸಿದ್ಧಿ ನವಭಾರತಕ್ಕಾಗಿ ಯುವ ಸಬಲೀಕರಣ ಮತ್ತು ರಾಷ್ಟ್ರೀಯ ಉತ್ತಮ ಆಡಳಿತ ದಿನದ ಪ್ರಯುಕ್ತ 7ನೇ ವರ್ಷದ ಗ್ರಾಮೀಣ ಮಟ್ಟದ ಸ್ವಯಂಪ್ರೇರಿತ ರಕ್ತದಾನ ಶಿಬಿರ ಹಾಗೂ ನೋಂದಾಯಿತ ಕಟ್ಟಡ ಕಾರ್ಮಿಕರಿಗೆ ಗುರು ತಿನ ಚೀಟಿ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಶಾಸಕ ಕೆ.ಜಿ. ಬೋಪಯ್ಯ, ರಕ್ತದಾನ ಮಹಾ ದಾನವಾಗಿದ್ದು, ಪ್ರತಿಯೊಬ್ಬರಿಗೂ ಇದರ ಬಗ್ಗೆ ಅರಿವಿರಬೇಕೆಂದರು. ದೇಶದ ಮಹಾನ್ ನಾಯಕ, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನದ ಸಂದರ್ಭ ದಲ್ಲಿ ರಕ್ತದಾನ ಶಿಬಿರ ಮತ್ತು ಕಾರ್ಮಿ ಕರಿಗೆ ಗುರುತಿನ ಚೀಟಿ ವಿತರಣಾ ಕಾರ್ಯ ಕ್ರಮವನ್ನು ಆಯೋಜಿಸಿರುವುದು ಅರ್ಥ ಪೂರ್ಣವಾಗಿದೆ ಎಂದು ಮೆಚ್ಚುಗೆ ವ್ಯಕ್ತ ಪಡಿಸಿದರು. ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಜಿಪಂ ಅಧ್ಯಕ್ಷ ಬಿ.ಎ. ಹರೀಶ್, ರಕ್ತದಾನಕ್ಕೆ ಒಂದು ಜೀವವನ್ನು ಉಳಿಸುವ ಶಕ್ತಿಯಿದ್ದು, ರೋಗಿಗಳು ಸಂಕ ಷ್ಟದಲ್ಲಿದ್ದಾಗ ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಲು ಪ್ರತಿಯೊಬ್ಬರು ಮುಂದಾಗಬೇ ಕೆಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಮಡಿಕೇರಿ ತಾಲೂಕು ಯುವ ಒಕ್ಕೂಟದ ಅಧ್ಯಕ್ಷ ನವೀನ್ ದೇರಳ, ಯುವ ಸಮೂಹ ಸಮಾಜಮುಖಿ ಕಾರ್ಯಗಳೊಂ ದಿಗೆÀ ಆರೋಗ್ಯ ಸಂಬಂಧಿತ ಕಾರ್ಯಕ್ರಮ ಗಳಿಗೂ ಒತ್ತು ನೀಡಬೇಕೆಂದರು. ರಕ್ತ ನಿಧಿ ಕೇಂದ್ರದ ಡಾ.ಶಾಲಿನಿ ರಕ್ತದಾನದ ಮಹತ್ವದ ಕುರಿತು ಮಾಹಿತಿ ನೀಡಿದರು.

ಕಾರ್ಮಿಕ ನಿರೀಕ್ಷಕರಾದ ಯತ್ನಿಠ ಮಾತ ನಾಡಿ, ಗುರುತಿನ ಚೀಟಿ ಹೊಂದಿದ ಕಾರ್ಮಿ ಕರಿಗೆ ರಾಜ್ಯ ಸರ್ಕಾರದಿಂದ ಕಾರ್ಮಿಕ ಇಲಾಖೆ ಮೂಲಕ ಸಿಗುವ 12 ಪ್ರಮುಖ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು. ಅಲ್ಲದೆ ಗುರುತಿನ ಚೀಟಿ ಹೊಂದುವುದರಿಂದ ಆಗಬಹುದಾದ ಲಾಭದ ಬಗ್ಗೆ ವಿವರಿಸಿದರು.
ರೋಟರಿ ಮಿಸ್ಟಿಹಿಲ್ಸ್‍ನ ಅಧ್ಯಕ್ಷ ರವಿಶಂಕರ್ ರೋಟರಿಯಿಂದ ಕಾರ್ಮಿಕ ಸಮುದಾಯ ದವರಿಗೆ ಇರುವ ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡಿದರು. ಭಾರತೀಯ ಮಜ್ದೂರ್ ಸಂಘದ ಅಧ್ಯಕ್ಷÀ ಸೂದನ ಸತೀಶ್, ಮೇಕೇರಿ ಗ್ರಾಪಂ ಅಧ್ಯಕ್ಷರಾದ ಕೆ.ಕೆ. ಜಯಂತಿ, ಉಪಾಧ್ಯಕ್ಷ ಕೆ.ಎಸ್.ಭೀಮಯ್ಯ, ಸದಸ್ಯರಾದ ಅನುಸೂಯ, ಅರ್ಪಿತ ಸಂಧ್ಯಾ, ಪಿ.ಯು.ರಕ್ಷಿತ್, ಪುಷ್ಪ, ನಾಣಯ್ಯ, ಇಂದಿರಾ ರೈ ಮತ್ತಿತರರು ಉಪಸ್ಥಿತರಿದ್ದರು. ಸಂಘದ ವತಿಯಿಂದ ಸುಮಾರು 100 ಕಾರ್ಮಿಕರಿಗೆ ಗುರುತಿನ ಚೀಟಿಗಳನ್ನು ವಿತರಿಸಲಾಯಿತು.

Translate »