ಜೆಡಿಎಸ್ ಟಾರ್ಗೆಟ್  ಮಿಷನ್-123
News

ಜೆಡಿಎಸ್ ಟಾರ್ಗೆಟ್ ಮಿಷನ್-123

August 13, 2021

ಬೆಂಗಳೂರು, ಆ.12- 2023ರಲ್ಲಿ ನಡೆಯ ಲಿರುವ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್‍ನ ಟಾರ್ಗೆಟ್ `ಮಿಷನ್-123’ ಎಂದು ಹೇಳಿದ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ, ಆ ಗುರಿಯನ್ನು ಹೇಗೆ ಮುಟ್ಟು ತ್ತೇವೆ ಎಂಬುದನ್ನು ಕಾದು ನೋಡಿ ಎಂದು ಮಾರ್ಮಿಕವಾಗಿ ನುಡಿದರು.

ಪಕ್ಷದ ಕಚೇರಿ ಜೆ.ಪಿ.ಭವನದಲ್ಲಿ ಸುದ್ದಿಗಾರ ರೊಂದಿಗೆ ಮಾತನಾಡಿದ ಅವರು, ಕರ್ನಾ ಟಕದಲ್ಲಿ ಜೆಡಿಎಸ್ ಅನ್ನು ಮುಗಿಸೇ ಬಿಟ್ಟಿ ದ್ದೇವೆ ಎಂದವರು ಈಗ ಜೆಡಿಎಸ್ ನೆರಳಿ ನಲ್ಲೇ ರಾಜಕಾರಣ ಮಾಡಬೇಕಾದಂತಹ ಅನಿವಾರ್ಯ ಎದುರಾಗಿದೆ. ನಮ್ಮ ಪಕ್ಷವನ್ನು ನೋಡಿ ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರಿಗೆ ಭೀತಿ ಶುರುವಾಗಿದೆ ಎಂದರು.

ಬಿಜೆಪಿ ನಾಯಕರು ಸರ್ಕಾರದ ರಕ್ಷಣೆಗಾಗಿ ಜೆಡಿಎಸ್‍ನ ಹೆಸರು ಹೇಳುತ್ತಿದ್ದಾರೆ. ಜೆಡಿಎಸ್‍ನ ಗುಮ್ಮವನ್ನು ಮುಂದೆ ಬಿಟ್ಟು ಸರ್ಕಾರ ಉಳಿಸಿ ಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎಂದರು. ಈಗ ಬಿಜೆಪಿಯಲ್ಲಿ ನಡೆಯುತ್ತಿರುವುದು ಮಕ್ಕಳ ಆಟ. ಶಿಸ್ತುಬದ್ಧವೆಂದು ಹೇಳಿಕೊಳ್ಳುವ ಬಿಜೆಪಿಯಲ್ಲಿ ಅಪಹಾಸ್ಯಕ್ಕೊಳಗಾಗುವ ಪರಿಸ್ಥಿತಿ ನಿರ್ಮಾಣ ವಾಗಿದೆ. ಕುಮಾರಣ್ಣರ ಕಾಲದಲ್ಲಿ ಕೆಲಸಗಳಾ ಗುತ್ತಿದ್ದವು. ನಮಗೆ ಗೌರವವೂ ಸಿಗುತ್ತಿತ್ತು. ಆದರೆ ನಮ್ಮದೇ ಸರ್ಕಾರದಲ್ಲಿ ಕೆಲಸಗಳಾಗುತ್ತಿಲ್ಲ ಎಂದು ಬಿಜೆಪಿ ಶಾಸಕ ಎಂ.ಪಿ.ಕುಮಾರಸ್ವಾಮಿ ಹೇಳಿದಂತೆ ಬಿಜೆಪಿಯ ಬಹುತೇಕ ಶಾಸಕರ ಆಂತರಿಕ ಭಾವನೆಯು ಅದೇ ಆಗಿದೆ ಎಂದು ಹೇಳಿದರು.

Translate »