ರಂಗ ಸಾಧಕಿ ಅನಿತಾ ಕಾರ್ಯಪ್ಪಗೆ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ ಪ್ರದಾನ
ಮೈಸೂರು

ರಂಗ ಸಾಧಕಿ ಅನಿತಾ ಕಾರ್ಯಪ್ಪಗೆ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ ಪ್ರದಾನ

March 10, 2020

ಬೆಂಗಳೂರು,ಮಾ.9-ಕೊಡಗು ಜಿಲ್ಲೆಯ ರಂಗ ಭೂಮಿ ಸಾಧಕಿ ಶ್ರೀಮತಿ ಅನಿತಾ ಕಾರ್ಯಪ್ಪ ಅವರು ಭಾನುವಾರ ಬೆಂಗಳೂರು ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ಸಮಾರಂಭದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶ್ರೀಮತಿ ಶಶಿಕಲಾ ಜೊಲ್ಲೆ ಅವ ರಿಂದ `ಕಿತ್ತೂರು ರಾಣಿ ಚೆನ್ನಮ್ಮ’ ಪ್ರಶಸ್ತಿ ಸ್ವೀಕರಿಸಿದರು.

Kittur Rani Chennamma Award presented to Ranga Sadakhi Anita Cariappa-1

ಕೊಡಗಿನಲ್ಲಿ ಕನ್ನಡ ಮತ್ತು ಕೊಡವ ಭಾಷೆಯ ಬಾಂಧವ್ಯ ವೃದ್ಧಿಯ ಕೊಂಡಿಯಾಗಿ 40 ವರ್ಷಗಳ ರಂಗಭೂಮಿ ಸೇವೆಗೆ ಇವರು ಈ ಪ್ರಶಸ್ತಿಗೆ ಭಾಜನ ರಾಗಿದ್ದಾರೆ. ಪ್ರಶಸ್ತಿ 25 ಸಾವಿರ ನಗದು, ಸ್ಮರಣಿಕೆ ಒಳಗೊಂಡಿದೆ. ಇವರು ಸೇರಿದಂತೆ ರಾಜ್ಯದ 22 ಜನ ಮಹಿಳಾ ಸಾಧಕಿಯರಿಗೆ ವಿಶ್ವ ಮಹಿಳಾ ದಿನಾಚರಣೆ ಸಂದರ್ಭ `ಕಿತ್ತೂರು ರಾಣಿ ಚೆನ್ನಮ್ಮ’ ಪ್ರಶಸ್ತಿ ನೀಡಿ, ಪುರಸ್ಕರಿಸಲಾಯಿತು. ಅನಿತಾ ಕಾರ್ಯಪ್ಪ ಅವರನ್ನು ಸಮಾರಂಭ ಮುಕ್ತಾಯದ ನಂತರ ಸಚಿವೆ ಶಶಿಕಲಾ ಜೊಲ್ಲೆ ಆತ್ಮೀಯವಾಗಿ ಅಭಿನಂದಿಸಿದರು. ಶ್ರೀಮತಿ ಅನಿತಾ ಅವರು ಹಿರಿಯ ರಂಗಕರ್ಮಿ ಹಾಗೂ ಮೈಸೂರು ರಂಗಾಯಣ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ ಅವರ ಪತ್ನಿ.

Translate »