ಗುಂಡ್ಲುಪೇಟೆಯಲ್ಲಿ ಜ್ಞಾನ ಸೂರ್ಯ ಆಧ್ಯಾತ್ಮಿಕ ಭವನ ಲೋಕಾರ್ಪಣೆ
ಚಾಮರಾಜನಗರ

ಗುಂಡ್ಲುಪೇಟೆಯಲ್ಲಿ ಜ್ಞಾನ ಸೂರ್ಯ ಆಧ್ಯಾತ್ಮಿಕ ಭವನ ಲೋಕಾರ್ಪಣೆ

November 4, 2020

ಗುಂಡ್ಲುಪೇಟೆ, ನ.3- ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿಯಾ ವಿಶ್ವವಿದ್ಯಾಲಯ ಆಧ್ಯಾತ್ಮಿಕ ಸೇವಾ ಕೇಂದ್ರದ ವತಿಯಿಂದ ಗುಂಡ್ಲುಪೇಟೆ ಪಟ್ಟಣದ ಶ್ವೇತಾದ್ರಿ ಲೇಔಟ್ ನಲ್ಲಿ ನಿರ್ಮಿಸÀಲಾಗಿರುವ ಜ್ಞಾನ ಸೂರ್ಯ ಆಧ್ಯಾತ್ಮಿಕ ಭವನವನ್ನು ಮೈಸೂರು ಉಪವಲಯ ಪ್ರಜಾಪಿತ ಬ್ರಹ್ಮ ಕುಮಾರಿ ಈಶ್ವರಿಯಾ ವಿಶ್ವವಿದ್ಯಾಲಯದ ಮುಖ್ಯ ಸಂಚಾ ಲಕರಾದ ರಾಜಯೋಗಿನಿ ಬಿ.ಕೆ.ಲಕ್ಷ್ಮೀಜಿ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು, ಆಧ್ಯಾತ್ಮಿಕ ಮಾರ್ಗವು ಮನುಷ್ಯನನ್ನು ಜೀವನದ ಪರಮ ಗುರಿಯತ್ತ ಕೊಂಡೊ ಯ್ಯಲು ಇರುವಂತಹ ಉತ್ತಮ ದಾರಿಯಾಗಿದೆ. ಭೂಮಿ ಯಲ್ಲಿ ನಾವು ಜನಿಸಿರುವುದು ಮನುಷ್ಯರಾಗಲು ಎನ್ನುವ ದಾರ್ಶನಿಕರ ವಾಣಿಯಂತೆ ಸಾರ್ಥಕ ಜೀವನಕ್ಕೆ ಉತ್ತಮ ಸೇವಾ ಕಾರ್ಯಗಳು ಅಡಿಪಾಯವಾಗಿದ್ದು, ಸ್ನೇಹ, ವಿಶ್ವಾಸ, ಸತ್ಯ, ನಂಬಿಕೆ, ಪ್ರಾಮಾಣಿಕತೆಗಳಂತಹ ಸಾರ್ವಕಾಲಿಕ ಮೌಲ್ಯಗಳನ್ನು ಆಧ್ಯಾತ್ಮಿಕ ಸಾಧನದ ಮೂಲಕ ಸಾಧಿಸಬಹುದಾಗಿದೆ ಎಂದು ತಿಳಿಸಿದರು.

ಗುಂಡ್ಲುಪೇಟೆ ಪಟ್ಟಣದಲ್ಲಿ ಕಳೆದ 25 ವರ್ಷಗಳಿಂದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿಯಾ ವಿಶ್ವವಿದ್ಯಾಲಯವು ಸಾರ್ವಜನಿಕವಾಗಿ ಸಹಜ ಆಧ್ಯಾತ್ಮಿಕ ಜ್ಞಾನ ಹಾಗೂ ರಾಜಯೋಗ ಶಿಕ್ಷಣ, ಜೀವನ ಮೌಲ್ಯ, ಮಾನಸಿಕ ಆರೋಗ್ಯ ಸೇರಿದಂತೆ ಹಲವು ವಿಚಾರಗಳನ್ನು ಸಾಮಾನ್ಯ ಜನರಲ್ಲಿ ಜಾಗೃತಿ ಮೂಡಿಸುವ ಮೂಲಕ ನಿರಂತರ ಸೇವೆಯನ್ನು ಬಾಡಿಗೆ ಕಟ್ಟಡದಲ್ಲಿ ನಿರ್ವಹಿಸುತ್ತಿತ್ತು. ನಮ್ಮ ಈ ಸೇವೆ ಯನ್ನು ಪರಿಗಣಿಸಿದ ಗುಂಡ್ಲುಪೇಟೆ ಪುರಸಭೆ ಮಾಜಿ ಅಧ್ಯಕ್ಷರಾದ ಪುಟ್ಟರಂಗನಾಯಕರು ಉದಾರ ಮನಸ್ಸಿನಿಂದ ದಾನವಾಗಿ ನಿವೇಶನ ನೀಡಿದರು. ಈ ನಿವೇಶನದಲ್ಲಿ ಸ್ಥಳೀಯ ಹಾಗೂ ಜಿಲ್ಲೆಯ ರಾಜಯೋಗ ವಿದ್ಯಾರ್ಥಿಗಳ ಸಹಕಾರದಿಂದ ಇಂದು ಸುಸಜ್ಜಿತವಾಗಿ ಜ್ಞಾನ ಸೂರ್ಯ ಭವನ ಉದ್ಘಾಟನೆಗೊಂಡಿದೆ ಎಂದು ತಿಳಿಸಿದರು.

ಭವನದಲ್ಲಿ 200 ಜನರು ಒಟ್ಟಿಗೆ ಕುಳಿತು ರಾಜ ಯೋಗ ಶಿಕ್ಷಣದ ತರಬೇತಿ ಪಡೆಯಲು ಸಹಕಾರಿಯಾಗಿದ್ದು ಧ್ಯಾನ ಅಭ್ಯಾಸ ಮಾಡಲು ಧ್ವನಿ ಮತ್ತು ಬೆಳಕಿನ ವ್ಯವಸ್ಥೆ ಕಲ್ಪಿಸಲಾಗಿದೆ. ಪ್ರತಿ ದಿನ ಬೆಳಗ್ಗೆ 6ರಿಂದ ಮಧ್ಯಾಹ್ನ 12ರವರೆಗೆ ಹಾಗೂ ಸಂಜೆ 4ರಿಂದ ರಾತ್ರಿ 8ರವರೆಗೆ ಉಚಿತವಾಗಿ ರಾಜಯೋಗ ಶಿಕ್ಷಣ ನೀಡಲು ತೆರೆದಿರುತ್ತದೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಕಬ್ಬಿಣ ಕೋಲೇ ಶ್ವರ ಮಠಾಧ್ಯಕ್ಷ ಶ್ರೀ ಇಮ್ಮಡಿ ಗುರುಮಲ್ಲ ಸ್ವಾಮೀಜಿ, ತಹಶೀಲ್ದಾರ್ ನಂಜುಂಡಯ್ಯ, ಆಧ್ಯಾತ್ಮಿಕ ಸೇವಾ ಕೇಂದ್ರದ ಮುಖ್ಯ ಸಂಚಾಲಕಿ ರಾಜಯೋಗಿನಿ ಬಿ.ಕೆ.ವೀಣಾಜೀ, ಮಂಡ್ಯ ಜಿಲ್ಲೆ ಸಂಚಾಲಕಿ ಶಾರದಾಜೀ, ಕೊಳ್ಳೇಗಾಲದ ಪ್ರಭಾ ಮಣಿಜೀ, ಚಾಮರಾಜನಗರದ ದಾನೇಶ್ವರಿಜೀ, ವೀಣಾಜಿ, ಬಿ.ಕೆ. ಸರೋಜಾಜೀ, ಶೋಭಾಜೀ, ಲಲಿತಾ ಮಣಿಜಿ, ರತ್ನಾಜೀ, ರಮಾಜೀ, ರಾಧಾಜೀ, ಬಿ.ಕೆ.ಆರಾಧ್ಯ ಇದ್ದರು.

Translate »