ದೇವೇಗೌಡರೇ, ಒಳ್ಳೆ ಬೆಲೆ ಬಂದರೆ ಕುಮಾರಸ್ವಾಮಿ ನಿಮ್ಮನ್ನೂ ಮಾರ್ತಾರೆ!
ಮೈಸೂರು

ದೇವೇಗೌಡರೇ, ಒಳ್ಳೆ ಬೆಲೆ ಬಂದರೆ ಕುಮಾರಸ್ವಾಮಿ ನಿಮ್ಮನ್ನೂ ಮಾರ್ತಾರೆ!

December 10, 2020

ಬೆಂಗಳೂರು, ಡಿ.9-`ದೇವೇಗೌಡರೇ, ಒಳ್ಳೇ ಬೆಲೆ ಬಂದರೆ ನಿಮ್ಮನ್ನೂ ಕೂಡ ಮಾರಾಟ ಮಾಡಿಬಿಡು ತ್ತಾರೆ. ನೀವು ಹಿರಿಯರಿದ್ದೀರಿ. ಹುಷಾ ರಾಗಿರಿ’… ಮಾಜಿ ಮುಖ್ಯ ಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ವಿರುದ್ಧ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಹರಿಹಾಯ್ದದ್ದು ಹೀಗೆ. ವಿಧಾನ ಪರಿಷತ್‍ನಲ್ಲಿ ಭೂ ಸುಧಾ ರಣೆ ಕಾಯ್ದೆ ತಿದ್ದುಪಡಿಗೆ ಜೆಡಿಎಸ್ ಬೆಂಬಲ ನೀಡಿದ ಹಿನ್ನೆಲೆ ಯಲ್ಲಿ ಕೆಂಡಾಮಂಡಲವಾದ ಕೋಡಿಹಳ್ಳಿ ಚಂದ್ರಶೇಖರ್, ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ಧ
ಆಕ್ರೋಶ ವ್ಯಕ್ತಪಡಿಸಿದರು. ಬಾರುಕೋಲು ಚಳವಳಿಯಲ್ಲಿ ಭಾಗಿಯಾಗಿದ್ದ ಅವರು, ಮಾಧ್ಯಮಗಳೊಂದಿಗೆ ಮಾತನಾಡಿದರು. ಕುಮಾರಸ್ವಾಮಿಯವರೇ, ಯಡಿಯೂರಪ್ಪ ನವರ ಜೊತೆ ನಿಮ್ಮ ಡೀಲ್ ಎಷ್ಟಕ್ಕೆ? ಇನ್ನೂ ಎಷ್ಟು ಜನರನ್ನು ಮಾರಾಟಕ್ಕಿಟ್ಟೀದ್ದೀರಿ? ಎಂದು ಪ್ರಶ್ನಿಸಿದ ಅವರು, ಇದು ನೂರಕ್ಕೆ ನೂರು ಡೀಲ್ ಆದ ಕಾರಣ, ಕುಮಾರಸ್ವಾಮಿ ಇರೋದೇ ಪುಟ್‍ಗೋಸಿ ರಾಜಕಾರಣ ಮಾಡೋಕ್ಕೆ. ಅವರು ಒಬ್ಬ `ಡೀಲ್ ಮಾಸ್ಟರ್’ ಎಂದು ಕಿಡಿಕಾರಿದರು. ಕುಮಾರಸ್ವಾಮಿ ರೈತರ ಹೆಸರು ಹೇಳಿಕೊಂಡು ಅಚ್ಚುಕಟ್ಟಾಗಿ ಅಧಿಕಾರ ಅನುಭವಿಸಿದ್ದಾರೆ. ದೇವೇಗೌಡರಾದರೂ ಮಗನನ್ನು ಕರೆದು ಬುದ್ಧಿ ಹೇಳಬೇಕಾಗಿತ್ತು ಎಂದ ಅವರು, ಕುಮಾರಸ್ವಾಮಿ ರೈತರ ಬಾಯಿಗೆ ಮಣ್ಣು ಹಾಕಿದ್ದಾರೆ. ಇದು ಅವರ ಕೊನೆಯ ರಾಜಕಾರಣ ಎಂದರು. ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ರೈತರ ಸಾಲ ಮನ್ನಾ ಅವರ ಕಮಿಟ್‍ಮೆಂಟ್. ಅದನ್ನು ಮಾಡಬೇಕಾಗಿತ್ತು, ಮಾಡಿದ್ದಾರೆ ಅಷ್ಟೇ ಎಂದರು.

Translate »