ಒಂದು ದೇಶ ಒಂದು ಪಡಿತರ ಕಾರ್ಡ್; ಕರ್ನಾಟಕ ಸೇರಿ 9 ರಾಜ್ಯಗಳಲ್ಲಿ ಅನುಷ್ಠಾನ
ಮೈಸೂರು

ಒಂದು ದೇಶ ಒಂದು ಪಡಿತರ ಕಾರ್ಡ್; ಕರ್ನಾಟಕ ಸೇರಿ 9 ರಾಜ್ಯಗಳಲ್ಲಿ ಅನುಷ್ಠಾನ

December 10, 2020

ನವದೆಹಲಿ,ಡಿ.9-ಕರ್ನಾಟಕ ಸೇರಿ ದಂತೆ 9 ರಾಜ್ಯ ಗಳು `ಒಂದು ದೇಶ ಒಂದು ಪಡಿತರ ಕಾರ್ಡ್’ ವ್ಯವಸ್ಥೆಯನ್ನು ಅನುಷ್ಠಾನಗೊಳಿಸಿದ್ದು, ಈ ರಾಜ್ಯಗಳಿಗೆ ಒಟ್ಟು 23,523 ಕೋಟಿ ರೂ.ಗಳನ್ನು ಸಾಲವಾಗಿ ಪಡೆಯುವ ಅವಕಾಶವನ್ನು ನೀಡಲಾಗಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯ ತಿಳಿಸಿದೆ.

ಕರ್ನಾಟಕ, ಆಂಧ್ರಪ್ರದೇಶ, ಗೋವಾ, ಗುಜರಾತ್, ಹರಿಯಾಣ, ಕೇರಳ, ತೆಲಂ ಗಾಣ, ತ್ರಿಪುರ ಹಾಗೂ ಉತ್ತರ ಪ್ರದೇಶ ದಲ್ಲಿ ಸಾರ್ವಜನಿಕ ವಿತರಣಾ ವ್ಯವಸ್ಥೆ (ಪಿಡಿಎಸ್) ಸುಧಾರಣೆ ಪೂರ್ಣಗೊಂ ಡಿದೆ. ಉತ್ತರ ಪ್ರದೇಶವು ಇದರ ಅತೀ ದೊಡ್ಡ ಫಲಾನುಭವಿಯಾಗಿದ್ದು, 4,851 ಕೋಟಿ ರೂ. ಹೆಚ್ಚುವರಿ ಸಾಲ ಪಡೆ ಯುವ ಅವಕಾಶ ಹೊಂದಿದೆ. ನಂತರ ದಲ್ಲಿ ಕರ್ನಾಟಕ 4,509 ಕೋಟಿ ರೂ., ಗುಜರಾತ್ 4,352 ಕೋಟಿ ರೂ. ಹೆಚ್ಚು ವರಿ ಸಾಲ ಪಡೆಯಬಹುದಾಗಿದೆ. ಇದೇ ಡಿ.31ರೊಳಗಾಗಿ ಈ ಪ್ರಕ್ರಿಯೆ ಪೂರ್ಣ ಗೊಳಿಸಿದಲ್ಲಿ ಇತರೆ ರಾಜ್ಯಗಳು ಹೆಚ್ಚು ವರಿ ಸಾಲ ಪಡೆಯಲು ಅರ್ಹವಾಗ ಲಿವೆ. ಈ ಅವಧಿಯೊಳಗೆ ಇನ್ನಷ್ಟು ರಾಜ್ಯ ಗಳು ಈ ಯೋಜನೆ ಅನುಷ್ಠಾನಗೊಳಿ ಸಲಿವೆ ಎಂದು
ಹಣಕಾಸು ಸಚಿವಾಲಯ ತಿಳಿಸಿದೆ. ಈ ಯೋಜನೆಯಡಿ ಎಲ್ಲ ಪಡಿತರ ಚೀಟಿಗಳಿಗೂ ಆಧಾರ್ ಜೋಡಣೆ, ಫಲಾನುಭವಿಗಳ ಬಯೋಮೆಟ್ರಿಕ್ ಹಾಗೂ ಎಲ್ಲ ಪಡಿತರ ಅಂಗಡಿಗಳ ಯಾಂತ್ರೀಕರಣ(ಅಟೊಮೇಷನ್) ಮುಂತಾದ ಸುಧಾರಣಾ ಕ್ರಮಗಳ ಮೂಲಕ ನಕಲಿ ಪಡಿತರ ಚೀಟಿಗಳಿಗೆ ಕಡಿವಾಣ ಹಾಕಲು ಹಾಗೂ ಪಡಿತರ ಧಾನ್ಯಗಳ ಸೋರಿಕೆಗೆ ತಡೆ ಹಾಕುವ ಉದ್ದೇಶ ಹೊಂದಲಾಗಿದೆ.

ಕೋವಿಡ್-19 ಸಂದರ್ಭ ರಾಜ್ಯಗಳ ಹಣಕಾಸು ವ್ಯವಸ್ಥೆ ಸದೃಢಗೊಳಿಸುವ ಉದ್ದೇಶದಿಂದ 2020-21ರಲ್ಲಿ ರಾಜ್ಯದ ಒಟ್ಟು ಆಂತರಿಕ ಉತ್ಪನ್ನದ (ಜಿಎಸ್‍ಡಿಪಿ) ಶೇ.2ರಷ್ಟನ್ನು ಹೆಚ್ಚುವರಿ ಸಾಲವಾಗಿ ಪಡೆಯಲು ಕೇಂದ್ರ ಸರ್ಕಾರ ಒಪ್ಪಿಗೆ ನೀಡಿತ್ತು. ಈ ಶೇ.2ರಲ್ಲಿ, ಶೇ.0.25ರಷ್ಟನ್ನು `ಒಂದು ದೇಶ ಒಂದು ಪಡಿತರ ಕಾರ್ಡ್’ ಅನುಷ್ಠಾನಕ್ಕೆ ತರಲು ಮೀಸಲಿಡಲಾಗಿತ್ತು. ಇದರಿಂದ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ ಫಲಾನುಭವಿಗಳಿಗೆ ದೇಶದ ಯಾವುದೇ ಪಡಿತರ ಅಂಗಡಿಯಿಂದಲೂ ಪಡಿತರ ಪಡೆಯಲು ಸಾಧ್ಯವಾಗಬೇಕು ಎನ್ನುವುದು ಈ ಯೋಜನೆಯ ಪ್ರಮುಖ ಉದ್ದೇಶ.

 

 

Translate »