ಬೆಂಕಿ ಕೆನ್ನಾಲಿಗೆ ಮಾವಿನ ಫಸಲು ಭಸ್ಮ
ಮೈಸೂರು ಗ್ರಾಮಾಂತರ

ಬೆಂಕಿ ಕೆನ್ನಾಲಿಗೆ ಮಾವಿನ ಫಸಲು ಭಸ್ಮ

April 3, 2020

ಹುಣಸೂರು, ಏ.2(ಕೆಕೆ)-ಸಮೀಪದ ಜಮೀನಿನ ರೈತರು ಕಳೆ ನಿಯಂತ್ರಣಕ್ಕೆ ತೆವರಿಗೆ ಇಟ್ಟ ಬೆಂಕಿಗೆ ರೈತರೊಬ್ಬರ ಮಾವಿನ ಫಸಲು ಭಸ್ಮವಾಗಿರುವ ಘಟನೆ ತಾಲೂಕಿನ ಮಾದಹಳ್ಳಿಕೊಪ್ಪಲು ಗ್ರಾಮದಲ್ಲಿ ನಡೆದಿದೆ. ಗ್ರಾಮ ಸ್ವಾಮಿನಾಯಕ ಅವರ ಮಾವಿನ ತೋಟದಲ್ಲಿ ಘಟನೆ ನಡೆದಿದ್ದು, ಪಕ್ಕದ ಜಮೀನಿನ ರೈತರು ಕಳೆ ನಿಯಂತ್ರಣಕ್ಕಾಗಿ ಜಮೀನಿನ ತೆವರಿಗೆ ಬೆಂಕಿ ಇಟ್ಟದ್ದರು ಎನ್ನಲಾಗಿದೆ. ಗಾಳಿಗೆ ಹರಡಿದ ಬೆಂಕಿ ಸ್ವಾಮಿನಾಯಕ ಅವರ ಮಾವಿನ ಮರಗಳಿಗೆ ವ್ಯಾಪಿಸಿ ಮರಗಳು ಸೇರಿದಂತೆ ಫಸಲು ಬೆಂಕಿಗಾಹುತಿಯಾಗಿದೆ. ಇದರಿಂದ ಸ್ವಾಮಿನಾಯಕರಿಗೆ ಅಪಾರ ಪ್ರಮಾಣದ ನಷ್ಟ ಸಂಭವಿಸಿದೆ. ಈ ಸಂಬಂಧ ಬಿಳಿಕೆರೆ ಠಾಣೆಯಲ್ಲಿ ದೂರು ದಾಖಲಾಗಿದೆ.

Translate »