ಮೈಸೂರು ಪಾಲಿಕೆ ಒಳಚರಂಡಿ ಕಾರ್ಮಿಕರ ಪ್ರತಿಭಟನೆ
ಮೈಸೂರು

ಮೈಸೂರು ಪಾಲಿಕೆ ಒಳಚರಂಡಿ ಕಾರ್ಮಿಕರ ಪ್ರತಿಭಟನೆ

June 26, 2020

ಮೈಸೂರು, ಜೂ.25(ಪಿಎಂ)- ಪೌರ ಕಾರ್ಮಿಕರು ಎಂದು ಪರಿಗಣಿಸಿ, ಪೌರ ಕಾರ್ಮಿಕರಿಗೆ ದೊರೆಯುವ ಎಲ್ಲಾ ಸೌಲಭ್ಯ ಗಳನ್ನು ಒದಗಿಸಬೇಕು. ಗುತ್ತಿಗೆ ರದ್ದುಗೊಳಿಸಿ ಖಾಯಂಗೊಳಿಸಬೇಕು ಎಂದು ಆಗ್ರಹಿಸಿ ಮೈಸೂರು ಮಹಾನಗರ ಪಾಲಿಕೆಯ ಎಲ್ಲಾ 231 ಒಳಚರಂಡಿ ಕಾರ್ಮಿಕರು ಗುರುವಾರ ಕೆಲಸ ಸ್ಥಗಿತಗೊಳಿಸಿ ಮುಷ್ಕರ ನಡೆಸಿದರು. ಬಳಿಕ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಕರ್ನಾಟಕ ರಾಜ್ಯ ನಗರ ಪಾಲಿಕೆ, ನಗರ ಸಭೆ, ಪುರಸಭೆಗಳ ಪೌರಕಾರ್ಮಿಕರ ಮಹಾ ಸಂಘ, ಮೈಸೂರು ಮಹಾನಗರ ಪಾಲಿಕೆ ಖಾಯಂ ಹಾಗೂ ಗುತ್ತಿಗೆ ಪೌರಕಾರ್ಮಿ ಕರ ಸಂಘ, ಮೈಸೂರು ಮಹಾನಗರ ಪಾಲಿಕೆ ಒಳಚರಂಡಿ ಕಾರ್ಮಿಕರ ಸಂಘದ ಜಂಟಿ ಆಶ್ರಯದಲ್ಲಿ, ಪೌರಕಾರ್ಮಿಕರ ಮಹಾ ಸಂಘದ ಅಧ್ಯಕ್ಷರೂ ಆದ ಮಾಜಿ ಮೇಯರ್ ನಾರಾಯಣ ನೇತೃತ್ವದಲ್ಲಿ ಒಳಚರಂಡಿ ಕಾರ್ಮಿಕರು ಪ್ರತಿಭಟಿಸಿದರು.

ಹಿಂದೆ ಒಳಚರಂಡಿ ಕಾರ್ಮಿಕರನ್ನೂ ಪೌರಕಾರ್ಮಿಕರೆಂದೇ ಪರಿಗಣಿಸಲಾಗಿತ್ತು. ನಾಲ್ಕೈದು ವರ್ಷಗಳ ಹಿಂದೆ ಸರ್ಕಾರ ನಮ್ಮನ್ನು `ಒಳಚರಂಡಿ ಹೆಲ್ಪರ್’ ಎಂದು ವಿಂಗಡಿ ಸಿತು. ನಾವು ಪೌರಕಾರ್ಮಿಕರಿಗಿಂತ ಕಠಿಣ ವಾದ ಕೆಲಸ ಮಾಡುತ್ತಿದ್ದೇವೆ. ಆದರೆ ನಮಗೆ ಪೌರಕಾರ್ಮಿಕರಿಗೆ ದೊರೆಯುತ್ತಿರುವ ಯಾವುದೇ ಸೌಲಭ್ಯ ದೊರೆಯುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮೈಸೂರು ಪಾಲಿಕೆಯಲ್ಲಿ 560 ಮಂದಿ ಖಾಯಂ ಪೌರಕಾರ್ಮಿಕರು, 1,800 ಗುತ್ತಿಗೆ ಪೌರಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಇವರಿಗೆ ಸರ್ಕಾರದಿಂದ ಹಲವು ಸೌಲಭ್ಯ ಗಳು ದೊರೆಯುತ್ತಿವೆ. ಆದರೆ ಪೌರಕಾರ್ಮಿ ಕರು ಎಂದು ಪರಿಗಣಿಸದ ಹಿನ್ನೆಲೆ ಒಳ ಚರಂಡಿ ಕಾರ್ಮಿಕರು ಎಲ್ಲಾ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದೇವೆ. ಉದಾಹರಣೆಗೆ ಪೌರಕಾರ್ಮಿಕರಿಗೆ 3 ವರ್ಷಗಳ ಬೆಳಗಿನ ಉಪಾಹಾರದ ಭತ್ಯೆ ಬಾಕಿ ಉಳಿಸಿಕೊಳ್ಳ ಲಾಗಿತ್ತು. ಹೋರಾಟದ ಫಲವಾಗಿ ಇದೀಗ ಈ ಬಾಕಿ ಭತ್ಯೆ ಒಟ್ಟು 5 ಕೋಟಿ 60 ಲಕ್ಷ ರೂ. ಬಿಡುಗಡೆಯಾಯಿತು. ಇದರಿಂದ ಪಾಲಿಕೆ ಪೌರಕಾರ್ಮಿಕರಿಗೆ ತಲಾ 25 ಸಾವಿರ ರೂ. ಭತ್ಯೆ ದೊರೆಯಲಿದೆ. ಆದರೆ ಒಳಚರಂಡಿ ಕಾರ್ಮಿಕರಿಗೆ ಈ ಸೌಲಭ್ಯ ಇಲ್ಲವಾಗಿದೆ. ನಮಗೂ ತಲಾ 25 ಸಾವಿರ ಭತ್ಯೆ ನೀಡಬೇಕು ಎಂದು ಒತ್ತಾಯಿಸಿದರು.

ಮಾಧ್ಯಮದವರೊಂದಿಗೆ ಮಾತನಾಡಿದ ನಾರಾಯಣ, ಒಳಚರಂಡಿ ಕಾರ್ಮಿಕರು ಪೌರಕಾರ್ಮಿಕರಿಗಿಂತಲೂ ಕಠಿಣವಾದ ಕೆಲಸ ಮಾಡುತ್ತಾರೆ. ಗಟಾರದ (ಮ್ಯಾನ್ ಹೋಲ್) ದುರ್ವಾಸನೆಯಿಂದ ಅನೇಕ ಕಾಯಿಲೆಗಳು ಇವರನ್ನು ಆವರಿಸುತ್ತವೆ. ಇವರ ಸೇವೆಗೆ ಸರ್ಕಾರ ಸೂಕ್ತ ಸೌಲಭ್ಯ ನೀಡಬೇಕು. ಇವರನ್ನು ಪೌರಕಾರ್ಮಿಕರು ಎಂದು ಪರಿಗಣಿಸಬೇಕು. 231 ಒಳಚರಂಡಿ ಕಾರ್ಮಿಕರನ್ನು ಖಾಯಂಗೊಳಿಸಬೇಕು. 15 ದಿನಗಳೊಳಗೆ ಬೇಡಿಕೆ ಈಡೇರಿಸದಿ ದ್ದರೆ ಪಾಲಿಕೆಯ ಎಲ್ಲಾ (ಖಾಯಂ ಹಾಗೂ ಗುತ್ತಿಗೆ) ಪೌರಕಾರ್ಮಿಕರು ಕೆಲಸ ಸ್ಥಗಿತ ಗೊಳಿಸಿ ಅನಿರ್ದಿಷ್ಟಾವಧಿ ಹೋರಾಟ ನಡೆ ಸಲಿದ್ದಾರೆ ಎಂದು ಎಚ್ಚರಿಕೆ ನೀಡಿದರು.

ಒಳಚರಂಡಿ ಸ್ವಚ್ಛಗೊಳಿಸುವ ಯಂತ್ರ ವೊಂದನ್ನು ಸ್ಥಳದಲ್ಲಿಟ್ಟು ಪ್ರತಿಭಟನೆ ನಡೆ ಸುವ ಮೂಲಕ ಗಮನ ಸೆಳೆದರು. ಕೊರೊನಾ ಹಿನ್ನೆಲೆ ಸ್ಥಳಕ್ಕಾಗಮಿಸಿದ್ದ ಬಹುತೇಕ ಎಲ್ಲಾ ಒಳಚರಂಡಿ ಕಾರ್ಮಿಕರೂ ಪ್ರತಿಭಟನೆ ಯಲ್ಲಿ ಪಾಲ್ಗೊಳ್ಳಲು ಅವಕಾಶ ನಿರಾಕರಿಸಿ, 20 ಮಂದಿಗೆ ಮಾತ್ರವೇ ಅವಕಾಶ ನೀಡ ಲಾಯಿತು. ಹೀಗಾಗಿ ಬಹುತೇಕ ಕಾರ್ಮಿ ಕರು ಡಿಸಿ ಕಚೇರಿ ಎದುರಿನ ಉದ್ಯಾನವನ ದಲ್ಲಿದ್ದರು. ಪೌರಕಾರ್ಮಿಕ ಮುಖಂಡ ಎನ್. ಮಾರ, ಪಾಲಿಕೆ ಒಳಚರಂಡಿ ಕಾರ್ಮಿಕರ ಸಂಘದ ಅಧ್ಯಕ್ಷ ಪಳನಿ, ಕಾರ್ಯಾಧ್ಯಕ್ಷ ಕುಮಾರಸ್ವಾಮಿ, ಉಪಾಧ್ಯಕ್ಷ ಮಹದೇವ ಮತ್ತಿತರರು ಪ್ರತಿಭಟನೆಯಲ್ಲಿದ್ದರು.

Translate »