ಕಿರುಸಾಲ ಸೌಲಭ್ಯ: ಸಫಾಯಿ ಕರ್ಮಚಾರಿಗಳ ಸಮೀಕ್ಷೆ ಕುರಿತಂತೆ ಡಿಸಿ ಪ್ರಗತಿ ಪರಿಶೀಲನಾ ಸಭೆ
ಮೈಸೂರು

ಕಿರುಸಾಲ ಸೌಲಭ್ಯ: ಸಫಾಯಿ ಕರ್ಮಚಾರಿಗಳ ಸಮೀಕ್ಷೆ ಕುರಿತಂತೆ ಡಿಸಿ ಪ್ರಗತಿ ಪರಿಶೀಲನಾ ಸಭೆ

February 10, 2021

ಮೈಸೂರು,ಫೆ.8- ಪ್ರಧಾನ ಮಂತ್ರಿ ಆವಾಸ್ ಯೋಜನೆ ನಗರ, ಪಿಎಂ ಸ್ವನಿಧಿ ಬೀದಿ ಬದಿ ವ್ಯಾಪಾರಿಗಳ ಕಿರು ಸಾಲ ಸೌಲಭ್ಯ ಯೋಜನೆ ಹಾಗೂ ಸಫಾಯಿ ಕರ್ಮಚಾರಿಗಳ ಸಮೀಕ್ಷೆ ಕುರಿತಂತೆ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅಧ್ಯಕ್ಷತೆ ಯಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಪ್ರಗತಿ ಪರಿಶೀಲನಾ ಸಭೆ ಜರುಗಿತು. ಈ ವೇಳೆ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು ಮಾತನಾಡಿ, ಜಿಲ್ಲೆಯಲ್ಲಿ ಪ್ರಧಾನಮಂತ್ರಿ ಆವಾಸ್ ಯೋಜನೆ ಯಲ್ಲಿ ಫೆಬ್ರವರಿ ತಿಂಗಳೊಳಗಾಗಿ ಗರಿಷ್ಠ ಗುರಿಯನ್ನು ಸಾಧಿಸ ಬೇಕು ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿ ದರು. ಕೋವಿಡ್-19 ಸೋಂಕಿನಿಂದಾಗಿ ಬೀದಿಬದಿ ವ್ಯಾಪಾರಿ ಗಳ ಜೀವನ ಸಂಕಷ್ಟಕ್ಕೆ ಸಿಲುಕಿದೆ. ಹೀಗಾಗಿ ಬೀದಿಬದಿ ವ್ಯಾಪಾರಿ ಗಳ ಆರ್ಥಿಕ ಸಬಲೀಕರಣಕ್ಕಾಗಿ ಪ್ರಧಾನಮಂತ್ರಿ ಸ್ವನಿಧಿ ಯೋಜನೆಯಡಿ ಸಿಗುವಂಥ ವಿಶೇಷ ಕಿರು ಸಾಲ ಸೌಲಭ್ಯವನ್ನು ನಿಗ ದಿತ ಅವಧಿಯಲ್ಲಿ ನೀಡುವಂತೆ ಬ್ಯಾಂಕ್ ಅಧಿಕಾರಿಗಳಿಗೆ ತಿಳಿಸಿದರು. ಜಿಲ್ಲೆಯಲ್ಲಿ ಸಫಾಯಿ ಕರ್ಮಚಾರಿ ವೃತ್ತಿಯಲ್ಲಿ ತೊಡಗಿಕೊಂಡಿ ರುವವರಿಗೆ ಸಿಗುವಂತಹ ಸೌಲಭ್ಯ ದೊರಕಿಸುವ ಸಲುವಾಗಿ ಸಮೀಕ್ಷಾ ಕಾರ್ಯ ಈಗಾಗಲೇ ನಡೆದಿದ್ದು, ಸಮೀಕ್ಷೆಯನ್ನು ಮತ್ತೊಮ್ಮೆ ಪರಿಶೀ ಲಿಸಿ ಕಚೇರಿಗೆ ಸಲ್ಲಿಸಿ ಎಂದರು. ಸಮೀಕ್ಷೆ ಕುರಿತಂತೆ ಮೊದಲಿಗೆ ಬನ್ನೂರು, ತಿ.ನರಸೀಪುರ ಆದ ಬಳಿಕ ಮೈಸೂರು ಪಾಲಿಕೆ ಮುಗಿದ ನಂತರ ನಂಜನಗೂಡಿನಲ್ಲಿ ಸಮೀಕ್ಷಾ ಕಾರ್ಯ ಪ್ರಾರಂಭಿಸಿ ಎಂದು ಅಧಿಕಾರಿಗಳಿಗೆ ಹೇಳಿದರು. ಸಭೆಯಲ್ಲಿ ಪಾಲಿಕೆ ಆಯುಕ್ತ ಗುರುದತ್ ಹೆಗಡೆ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಅಷಾದ್ ಷರೀಫ್, ಎನ್‍ಎಸ್ ಕೆಎಫ್‍ಡಿ ಜಿಲ್ಲಾ ಸಂಯೋಜಕಿ ಪುಷ್ಪಲತಾ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.

 

Translate »