ಕಣ್ಮರೆಯಾಗಿದ್ದ ನಿಜಾಮುದ್ದೀನ್ ಮರ್ಕಾಜ್ ಮುಖ್ಯಸ್ಥ ಮೌಲಾನಾ ಸಾದ್ ಪತ್ತೆ
ಮೈಸೂರು

ಕಣ್ಮರೆಯಾಗಿದ್ದ ನಿಜಾಮುದ್ದೀನ್ ಮರ್ಕಾಜ್ ಮುಖ್ಯಸ್ಥ ಮೌಲಾನಾ ಸಾದ್ ಪತ್ತೆ

April 9, 2020

ನವದೆಹಲಿ,ಏ.8-ಕೊರೊನಾ ವಿವಾದದ ಬಳಿಕ ತಲೆಮರೆಸಿ ಕೊಂಡಿದ್ದ ತಬ್ಲಿಘಿ ಜಮಾತ್‍ನ ನಿಜಾಮುದ್ದೀನ್ ಮರ್ಕಾಜ್ ಮುಖ್ಯಸ್ಥ ಮೌಲಾನಾ ಸಾದ್ ನೆಲೆಯನ್ನು ದೆಹಲಿಯ ಜಾಕೀರ್ ನಗರದಲ್ಲಿ ಪೆÇಲೀಸರು ಬುಧವಾರ ಪತ್ತೆಹಚ್ಚಿದ್ದಾರೆ. ಇಸ್ಲಾ ಮಿಕ್ ಸಂಘಟನೆಗೆ ಸೇರಿದ್ದ ನಿಜಾಮುದ್ದೀನ್ ಕಾಂಪ್ಲೆಕ್ಸ್‍ನಲ್ಲಿ ತಬ್ಲಿಘಿ ಜಮಾತ್ ಧಾರ್ಮಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು. ಇದಾದ ಬಳಿಕ ತಬ್ಲಿಘಿ ಜಮಾತ್ ಕೊರೊನಾ ಹಾಟ್‍ಸ್ಪಾಟ್ ಆಗಿ ಹೊರಹೊಮ್ಮಿ ವಿವಾದಕ್ಕೆ ಗುರಿಯಾಗಿತ್ತು. ದೇಶವ್ಯಾಪಿ ತೀವ್ರ ಟೀಕೆ ವ್ಯಕ್ತವಾಗುತ್ತಿದ್ದಂತೆ ಮೌಲಾನಾ ಸಾದ್ ನಾಪತ್ತೆಯಾಗಿ ದ್ದರು. 600ಕ್ಕೂ ಹೆಚ್ಚು ಕರೊನಾ ಪ್ರಕರಣಗಳು ತಬ್ಲಿಘಿ ಜಮಾತ್‍ನಿಂದ ವರದಿಯಾಗಿವೆ. ಸದ್ಯ ಪೆÇಲೀಸರು ಕೈಗೆ ಸಿಕ್ಕಿಬಿದ್ದಿರುವ ಮೌಲಾನಾ ಸಾದ್, ನಾನು ಸ್ವಯಂ ಪ್ರತ್ಯೇಕವಾಗಿದ್ದೇನೆ. ಹೀಗಾಗಿ ಪೆÇಲೀಸ್ ತನಿಖೆ ಎದುರಿಸಲು ಸಾಧ್ಯವಾಗಲಿಲ್ಲ ಎಂದು ತಿಳಿಸಿದ್ದಾರೆ. ಮೌಲಾನಾ ಸಾದ್ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಪೆÇಲೀಸರು ಕೆಲ ದಾಖಲಾತಿಗಳು ಹಾಗೂ ಆತನ ಬಳಿಯಿರುವ ಎಲೆಕ್ಟ್ರಾನಿಕ್ ಸಾಧನಗಳನ್ನು ಒಪ್ಪಿಸುವಂತೆ ಕೇಳಿದ್ದಾರೆ. ಆದರೆ, ಲಾಕ್‍ಡೌನ್‍ನಿಂದಾಗಿ ದಾಖಲಾತಿಗಳನ್ನು ಸಲ್ಲಿಸಲು ಸಾಧ್ಯವಿಲ್ಲ ಎಂದು ಸಾದ್ ಪರ ವಕೀಲರು ಸಮಾಜಾಯಿಷಿ ನೀಡಿದ್ದಾರೆ. 14 ದಿನಗಳ ಕ್ವಾರಂಟೈನ್ ಬಳಿಕ ತನಿಖೆಗೆ ಸಹಕರಿಸುವಂತೆ ದೆಹಲಿ ಪೆÇಲೀಸರು ಮೌಲಾನಾ ಸಾದ್‍ಗೆ ತಿಳಿಸಿದ್ದಾರೆ.

Translate »