ಗುಜರಾತ್‍ನ ಮೋಧೇರಾ ಭಾರತದ  ಮೊದಲ ಸೌರಶಕ್ತಿ ಚಾಲಿತ ಗ್ರಾಮ
News

ಗುಜರಾತ್‍ನ ಮೋಧೇರಾ ಭಾರತದ ಮೊದಲ ಸೌರಶಕ್ತಿ ಚಾಲಿತ ಗ್ರಾಮ

October 10, 2022

ಮೋಧೇರಾ(ಗುಜರಾತ್), ಅ.9-ಗುಜರಾತ್‍ನ ಮೆಹ್ಸಾನಾ ಜಿಲ್ಲೆಯ ಮೋಧೇರಾ ಗ್ರಾಮವನ್ನು ಭಾರತದ ಮೊದಲ 24ಘಿ7 ಸೌರಶಕ್ತಿ ಚಾಲಿತ ಗ್ರಾಮ ಎಂದು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ.

ಪ್ರಧಾನಿ ಮೋದಿ ಭಾನುವಾರ ಮೋಧೇರಾದಲ್ಲಿ ಅನೇಕ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ಮಾಡಿದ್ದಾರೆ. ಇದಾದ ನಂತರ ಮೆಹ್ಸಾನಾದ ಮೋಧೇರಾ ದಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾ ಡಿದ ಅವರು, ಸೂರ್ಯ ದೇವಾಲಯದೊಂದಿಗೆ ಸಂಬಂಧ ಹೊಂದಿರುವ ಮೋಧೇರಾ ಸೌರಶಕ್ತಿಯ ದಾಪುಗಾಲು ಗಳಿಗೂ ಹೆಸರುವಾಸಿಯಾಗಿದೆ. ಸೌರಶಕ್ತಿಯನ್ನು ಬಳಸಿ ಕೊಳ್ಳುವತ್ತ ದೊಡ್ಡ ಹೆಜ್ಜೆ ಇಟ್ಟಿರುವುದರಿಂದ ಮೋಧೇರಾಗೆ ಇದು ವಿಶೇಷ ದಿನ. ಉದ್ಘಾಟನೆಗೊಂಡ ಯೋಜನೆಗಳು ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತವೆ. ಡೈರಿ ಕ್ಷೇತ್ರ ಮತ್ತು ಪಾರಂಪರಿಕ ಪ್ರವಾಸೋದ್ಯಮಕ್ಕೆ ಉತ್ತೇ ಜನ ಸಿಗುತ್ತದೆ ಎಂದರು. ಇಂದು ಶರದ್ ಪೂರ್ಣಿಮೆ ಮತ್ತು ಮಹರ್ಷಿ ವಾಲ್ಮೀಕಿ ಜಯಂತಿ ನಡೆಯುತ್ತಿರು ವುದು ಕಾಕತಾಳೀಯವಾಗಿದೆ ಎಂದು ಹೇಳಿದರು.
ಕಳೆದ ಕೆಲವು ದಿನಗಳಿಂದ ದೇಶಾದ್ಯಂತ ‘ಮೋಧೇರಾ ಮಾದರಿ’ ಬಗ್ಗೆ ಚರ್ಚೆಯಾಗುತ್ತಿದೆ. ಹಿಂದೆ, ಸೂರ್ಯ ದೇವಾಲಯದಿಂದಾಗಿ ಜಗತ್ತು ಮೋಧೇರಾವನ್ನು ತಿಳಿ ದಿತ್ತು. ಆದರೆ ಇನ್ನು ಮುಂದೆ ಇದನ್ನು `ಸೂರ್ಯಗ್ರಾಮ’ ಎಂದೂ ಕರೆಯಲಾಗುವುದು ಎಂದು ಮೋದಿ ಹೇಳಿದ್ದಾರೆ. ಈ ದೇವಾಲಯವನ್ನು ನಾಶಮಾಡಲು ಹಲವಾರು ಪ್ರಯತ್ನ ಗಳನ್ನು ಮಾಡಲಾಯಿತು. ಇಂದು ಸೂರ್ಯ ದೇವಾ ಲಯ ಇಡೀ ವಿಶ್ವಕ್ಕೆ ಮಾದರಿಯಾಗಿದೆ. ಜಗತ್ತಿನಲ್ಲಿ ಸೌರ ಶಕ್ತಿಯ ಕುರಿತು ಜನರು ಚರ್ಚಿಸಿದಾಗ ಲೆಲ್ಲಾ, ಮೋಧೇರಾ ಅವರ ಚರ್ಚೆಯಲ್ಲಿ ಬರುತ್ತದೆ ಇಂತಹ ಯಶಸ್ವಿ ಪ್ರಯತ್ನಗಳು ದೇಶದಾದ್ಯಂತ ಹೆಚ್ಚಾಗಬೇಕು ಎಂದರು.

ಮೋಧೇರಾದ ಜನರು ವಿದ್ಯುತ್ ಗ್ರಾಹಕರು ಮತ್ತು ಉತ್ಪಾ ದಕರು. ಸರ್ಕಾರ ಹೆಚ್ಚುವರಿಯಾಗಿ ಉತ್ಪಾದಿಸಿದ ವಿದ್ಯುತ್ ಖರೀದಿಸುತ್ತಿದೆ. ಈಗ ನಾವು ವಿದ್ಯುತ್‍ಗೆ ಹಣ ಪಾವತಿ ಸುವುದಿಲ್ಲ. ಆದರೆ ಅದನ್ನು ಮಾರಾಟ ಮಾಡಲು ಪ್ರಾರಂ ಭಿಸುತ್ತೇವೆ ಮತ್ತು ಅದರಿಂದ ಸಂಪಾದಿಸಲು ಪ್ರಾರಂಭಿಸುತ್ತೇವೆ. ಸ್ವಲ್ಪ ಸಮಯದ ಹಿಂದೆ, ಸರ್ಕಾರವು ನಾಗರಿಕರಿಗೆ ವಿದ್ಯುತ್ ಸರಬರಾಜು ಮಾಡುತ್ತಿತ್ತು ಆದರೆ ಈಗ, ಸೋಲಾರ್ ಪ್ಯಾನಲ್‍ಗಳನ್ನು ಅಳವಡಿಸುವುದರೊಂದಿಗೆ, ನಾಗರಿಕರು ತಮ್ಮ ಸ್ವಂತ ವಿದ್ಯುತ್ ಅನ್ನು ಉತ್ಪಾದಿಸುತ್ತಾರೆ.

ಇಲ್ಲಿಯವರೆಗೆ, ಸರ್ಕಾರವು ವಿದ್ಯುತ್ ಉತ್ಪಾದಿಸುತ್ತಿತ್ತು ಮತ್ತು ಜನರು ವಿದ್ಯುತ್ ಖರೀದಿಸು ತ್ತಿದ್ದರು. ಆದರೆ ಕೇಂದ್ರ ಸರ್ಕಾರ ಜನರೇ ವಿದ್ಯುತ್ ಉತ್ಪಾದಕರಾಗಲು ಶ್ರಮಿಸುತ್ತಿದೆ. ಮೆಹ್ಸಾನಾ ಜಿಲ್ಲೆ ಯಾವ ರೀತಿಯ ಸಮಯವನ್ನು ಎದುರಿಸಿದೆ ಎಂದು ತಿಳಿದಿಲ್ಲದ ಅನೇಕ ಯುವಕರು ಇಲ್ಲಿದ್ದಾರೆ. ವಿದ್ಯುಚ್ಛಕ್ತಿ ದೊಡ್ಡ ಸಮಸ್ಯೆಯಾಗಿತ್ತು. ನಮ್ಮ ತಾಯಂದಿರು ಮತ್ತು ಸಹೋದರಿಯರು ನೀರು ತರಲು ಮೂರು ಕಿಲೋಮೀಟರ್ ನಡೆಯಬೇಕಿತ್ತು. ಮೊನ್ನೆಯಷ್ಟೇ ಕಾನೂನು ಸುವ್ಯವಸ್ಥೆ ಹದಗೆಟ್ಟಿತ್ತು, ಅಹಮದಾಬಾದ್‍ನಲ್ಲಿ ಪರಿಸ್ಥಿತಿ ಸರಿಯಿದೆಯೇ ಎಂದು ಮೆಹ್ಸಾನಾದ ಜನರು ತಮ್ಮ ಪರಿಚಯಸ್ಥರಿಗೆ ಕರೆ ಮಾಡಿ ಕೇಳಬೇಕಾಗಿತ್ತು. ಇಂದು ನಮ್ಮ ಮಕ್ಕಳು ಕರ್ಫ್ಯೂ ಎಂಬ ಪದವನ್ನು ಕೇಳಿಲ್ಲ. ನಮ್ಮ ಸರ್ಕಾರಗಳು ಕೃಷಿ ಬೆಳವಣಿಗೆ, ಕೈಗಾರಿಕಾ ಚಟುವಟಿಕೆ ಮತ್ತು ಪ್ರವಾಸೋದ್ಯಮಕ್ಕೆ ಹೆಚ್ಚಿನ ಒತ್ತು ನೀಡಿವೆ. ಜ್ಯೋತಿ ಗ್ರಾಮ ಯೋಜನೆಯು ಉಂಜಾದಿಂದ ಪ್ರಾರಂಭವಾಯಿತು. ಪ್ರಧಾನಿಯಾದ ನಂತರ ಅಲ್ಲಿ 18,000 ಹಳ್ಳಿಗಳು ವಿದ್ಯುತ್ ರಹಿತವಾಗಿವೆ ಎಂದರು.

Translate »