ನೂತನ ತಹಶೀಲ್ದಾರ್ ಶ್ರೀನಿವಾಸಯ್ಯ ಅಧಿಕಾರ ಸ್ವೀಕಾರ
ಹಾಸನ

ನೂತನ ತಹಶೀಲ್ದಾರ್ ಶ್ರೀನಿವಾಸಯ್ಯ ಅಧಿಕಾರ ಸ್ವೀಕಾರ

February 1, 2019

ಹಾಸನ: ಹಾಸನ ತಾಲೂಕು ತಹಸೀಲ್ದಾರ್ ಹಾಗೂ ತಾಲೂಕು ದಂಡಾಧಿಕಾರಿಗಳಾದ ಶ್ರೀನಿ ವಾಸಯ್ಯ ಅವರು ಇತ್ತೀಚೆಗೆ ಅಧಿಕಾರ ಸ್ವೀಕರಿಸಿದ್ದಾರೆ. ಇವರು 2014ನೇ ಸಾಲಿನ ಕೆ.ಎ.ಎಸ್ ಬ್ಯಾಚ್‍ನವ ರಾಗಿದ್ದು, ಈ ಹಿಂದೆ ತುಮಕೂರಿನ ಜಿಲ್ಲಾಧಿಕಾರಿ ಯವರ ಕಚೇರಿಯಲ್ಲಿ ಚುನಾವಣಾ ತಹಸೀಲ್ದಾರ್ ಆಗಿ ಕರ್ತವ್ಯ ನಿರ್ವಹಿಸಿದ್ದಾರೆ.

ಶ್ರೀನಿವಾಸಯ್ಯ ಅವರು ಸರ್ಕಾರಿ ಸೇವೆಗೆ ಸೇರುವ ಮುನ್ನ 16 ವರ್ಷಗಳ ಕಾಲ ಸಾಫ್ಟ್‍ವೇರ್ ಇಂಜಿನಿಯರ್ ಆಗಿ ಕೆಲಸ ಮಾಡಿದ್ದಾರೆ.

ಜಿಲ್ಲೆಯ 7 ತಾಲೂಕುಗಳಲ್ಲಿ ಹೊಸ ತಹಶೀಲ್ದಾರ್‍ರು ಅಧಿಕಾರ ಸ್ವೀಕರಿಸಿದ್ದಾರೆ. ಅರಸೀಕೆರೆ ಹೊರತು ಪಡಿಸಿ 7 ತಾಲೂಕುಗಳಿಗೆ ಹೊಸ ತಹಶೀಲ್ದಾರ್‍ರು ಆಗಮಿಸಿದ್ದಾರೆ.

ಹಾಸನ ತಾಲೂಕು ತಹಶೀಲ್ದಾರ್ ಹಾಗೂ ತಾಲೂಕು ದಂಡಾಧಿಕಾರಿಗಳಾದ ಶ್ರೀನಿವಾಸಯ್ಯ ಇತ್ತೀಚೆಗೆ ಅಧಿಕಾರ ಸ್ವೀಕರಿಸಿದ್ದಾರೆ ಅದೇ ರೀತಿ ಬೇಲೂರು ತಾಲೂ ಕಿನಲ್ಲಿ ಮೇಘನಾ, ಹೊಳೆನರಸೀಪುರ ತಾಲೂಕಿನಲ್ಲಿ ಶ್ರೀನಿವಾಸ್ ಕೆ.ಆರ್, ಚನ್ನರಾಯ ಪಟ್ಟಣ ತಾಲೂಕಿನಲ್ಲಿ ಮಾರುತಿ, ಆಲೂರು ತಾಲ್ಲೂಕಿನಲ್ಲಿ ಶಿರಾನ್ ತಾಜ್, ಸಕಲೇಶಪುರು ತಾಲೂಕಿನಲ್ಲಿ ರಕ್ಷಿತ್ ಕೆ.ಆರ್ ಹಾಗೂ ಅರಕಲಗೂಡು ತಾಲೂಕಿನಲ್ಲಿ ಶಿವರಾಜ್ ಅಧಿಕಾರ ಸ್ವೀಕರಿಸಿದ್ದಾರೆ.

Translate »