ನಟ ಭಯಂಕರನ ಸಮಾಜಸೇವೆ
ಸಿನಿಮಾ

ನಟ ಭಯಂಕರನ ಸಮಾಜಸೇವೆ

June 19, 2020

ಇಡೀ ದೇಶವೇ ಕೊರೊನಾ ಸೋಂಕಿನ ಕಾರಣದಿಂದ ಸಾಕಷ್ಟು ತೊಂದರೆ ಅನುಭವಿಸು ತ್ತಿದೆ. ಚಿತ್ರರಂಗವೂ ಇದಕ್ಕೆ ಹೊರತಾಗಿಲ್ಲ. ಆದರೂ ಕೆಲ ನಟ, ನಟಿಯರು ಅತಂತ್ರ ಸ್ಥಿತಿಯಲ್ಲಿರುವ ಕಾರ್ಮಿಕ ವರ್ಗಕ್ಕೆ ತಮ್ಮ ಸಹಾಯ ಹಸ್ತ ಚಾಚಿದ್ದಾರೆ. ರಾಜ್ಯದಲ್ಲಿ ಲಾಕ್‍ಡೌನ್ ಆರಂಭವಾದಾಗಿನಿಂದಲೂ ಸಂಕಷ್ಟದಲ್ಲಿರುವ ಜನರಿಗೆ ಸಹಾಯ ಮಾಡುತ್ತಲೇ ಬಂದಿರುವ ನಾಯಕ ನಟ ಪ್ರಥಮï, ಮೊನ್ನೆ ಚಿತ್ರರಂಗದ ಕೆಲ ತಂತ್ರಜ್ಞರಿಗೆ ದಿನಸಿ ಕಿಟ್‍ಗಳನ್ನು ವಿತರಣೆ ಮಾಡಿದರು.

ಈ ಹಿಂದೆ ನಟ ಭಯಂಕರ ಚಿತ್ರದ ನಿರ್ಮಾ ಪಕರ ಸಹಕಾರದೊಂದಿಗೆ ತುಮಕೂರು, ದಾವಣಗೆರೆ ಮುಂತಾದೆಡೆ ಸಂಚರಿಸಿ ಜನರಿಗೆ ದಿನಸಿ ಹಾಗೂ ತರಕಾರಿಗಳನ್ನು ವಿತರಣೆ ಮಾಡಿದ್ದ ಪ್ರಥಮ್, ಈಗ ಚಿತ್ರರಂಗದ ಸ್ಟಿಲ್‍ಕ್ಯಾಮೆರಾಮನ್ ಮತ್ತು ಸಹಾಯಕ ತಂತ್ರಜ್ಞರಿಗೆ ದಿನಸಿ ಕಿಟ್ ಗಳನ್ನು ವಿತರಿಸಿz್ದÁರೆ. ಇದಕ್ಕೆ ಮಾಜಿ ಸಚಿನ ಶಾಸಕ ಸಾ.ರಾ.ಮಹೇಶ್ ಸಹಾಯ ಮಾಡಿz್ದÁರೆ. ಸಚಿವರಲ್ಲಿ ದಿನಸಿ ಕಿಟ್‍ಗಾಗಿ ಪ್ರಥಮ್ ಮಾಡಿದ ಒಂದೇ ಮನವಿಗೆ ಕೂಡಲೇ ಸ್ಪಂದಿಸಿದ ಸಾ.ರಾ. ಮಹೇಶ್ ನೂರಕ್ಕೂ ಹೆಚ್ಚು ದಿನಸಿ ಕಿಟ್‍ಗಳನ್ನು ನೀಡಿz್ದÁರೆ.

ಈಗಾಗಲೇ ನಟಭಯಂಕರ ಚಿತ್ರವನ್ನು ಬಿಡುಗಡೆಯ ಹಂತಕ್ಕೆ ತಂದಿರುವ ನಟ, ನಿರ್ದೇಶಕ ಪ್ರಥಮ್, ಸಿನಿಮಾ ಪಿಆರ್‍ಓಗಳಿಗೆ, ಮೇಕಪ್ ಕಲಾವಿದರಿಗೆ ಅಲ್ಲದೆ ಮಂಗಳಮುಖಿ ಯರಿಗೂ ಸಹ ಪ್ರತಿನಿತ್ಯದ ರೇಷನ್ ಕಿಟ್‍ಗಳನ್ನು ವಿತರಿಸಿz್ದÁರೆ. ಸಂಕಷ್ಟದಲ್ಲಿ ರುವವರಿಗೆ ಸ್ಪಂದಿಸುತ್ತಿರುವ ನಟಭಯಂಕರ ಚಿತ್ರತಂಡ ಕೊರೊನಾ ಸಮಯದಲ್ಲಿ ಸಾಕಷ್ಟು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿದೆ. ಪ್ರಥಮ್ ಅವರೇ ನಿರ್ದೇಶಿಸುವುದರೊಂದಿಗೆ ನಾಯಕನಾಗಿಯೂ ಕಾಣಿಸಿಕೊಂಡಿರುವ ನಟಭಯಂಕರ ಚಿತ್ರ ಲಾಕ್‍ಡೌನ್ ಮುಗಿದ ನಂತರ ತೆರೆಗೆ ಬರಲಿದೆ.

Translate »