ಕರ್ನಾಟಕ ಜೀವರಕ್ಷಕರ ಮಸೂದೆಗೆ ರಾಷ್ಟ್ರಪತಿ ಅಂಕಿತ
ಮೈಸೂರು

ಕರ್ನಾಟಕ ಜೀವರಕ್ಷಕರ ಮಸೂದೆಗೆ ರಾಷ್ಟ್ರಪತಿ ಅಂಕಿತ

October 1, 2018

ನವದೆಹಲಿ:  ದೇಶ ದಲ್ಲಿಯೇ ಪ್ರಥಮ ಬಾರಿಗೆ ಜಾರಿ ಗೊಳ್ಳಲಿರುವ ಕರ್ನಾಟಕ ಜೀವ ರಕ್ಷಕರ ಕಾನೂನು ರಕ್ಷಣಾ ಮಸೂದೆಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅಂಕಿತ ಹಾಕಿದ್ದಾರೆ. ಇದರಿಂದಾಗಿ ಕರ್ನಾಟಕದಲ್ಲಿ ರಸ್ತೆ ಅಪಘಾತಕ್ಕೀಡಾದ ಗಾಯಾಳುಗಳನ್ನು ರಕ್ಷಿಸುವ ಜೀವರಕ್ಷಕ ರಿಗೆ ಇನ್ನು ಮುಂದೆ ಕಾನೂನಿನ ರಕ್ಷಣೆ ದೊರೆಯಲಿದೆ.

ಜೀವರಕ್ಷಕರಿಗೆ ಕಾನೂನು ರಕ್ಷಣೆ ಒದಗಿಸಿದ ದೇಶದ ಮೊದಲ ರಾಜ್ಯ ಕರ್ನಾಟಕವಾಗಿದೆ. ಇತ್ತೀಚಿನ ದಿನಗಳಲ್ಲಿ ಭಾರತದಲ್ಲಿ ರಸ್ತೆ ಅಪಘಾತದಲ್ಲಿ ಸಾವನ್ನಪ್ಪುವವರ ಸಂಖ್ಯೆ ಹೆಚ್ಚುತ್ತಲಿದೆ. 2016ರಲ್ಲಿ 1,50,785 ಜನರು ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ.

ಕರ್ನಾಟಕ ಜೀವ ರಕ್ಷಕರು ಹಾಗೂ ವೈದ್ಯಕೀಯ ವೃತ್ತಿಪರರಿಗೆ (ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ರಕ್ಷಣೆ ಮತ್ತು ನಿಯಂ ತ್ರಣ) ಮಸೂದೆ 2016ಕ್ಕೆ ರಾಷ್ಟ್ರಪತಿಗಳು ಅಂಕಿತ ಹಾಕಿ ದ್ದಾರೆ ಎಂದು ಗೃಹ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

ಈ ಮಸೂದೆಯಿಂದ ಯಾವುದೇ ಅಪಘಾತಕ್ಕೀಡಾದ ವ್ಯಕ್ತಿಯನ್ನು ತಕ್ಷಣ ಚಿಕಿತ್ಸೆಗೆ ದಾಖಲಿಸುವವರಿಗಾಗಲಿ, ಚಿಕಿತ್ಸೆ ನೀಡುವವರಿಗಾಗಲಿ ಪೆÇಲೀಸ್ ತನಿಖೆಯ ಭಯವಿರುವುದಿಲ್ಲ. ವೈದ್ಯಕೀಯ ನಿಘಂಟಿನಲ್ಲಿ “ಗೋಲ್ಡನ್ ಅವರ್” ಎಂದರೆ ಅಪಘಾತವಾದ ಕೆಲವೇ ನಿಮಿಷಗಳಲ್ಲಿ ತುರ್ತು ಚಿಕಿತ್ಸೆ ನೀಡಬೇಕಾಗಿರುವ ಅವಧಿಯಾಗಿದೆ. ಈ ಹೊಸ ಮಸೂದೆ ಜಾರಿಯಿಂದ “ಗೋಲ್ಡನ್ ಅವರ್” ನಲ್ಲಿ ಯಾವುದೇ ಜೀವರಕ್ಷಕರು, ವೈದ್ಯರು ಪೊಲೀಸರ ಕಿರುಕುಳ, ತನಿಖೆಯ ಭಯವಿಲ್ಲದೆ ತುರ್ತು ಚಿಕಿತ್ಸೆ ನೀಡಬಹುದು. ಹೊಸ ಕಾನೂನಿನಡಿಯಲ್ಲಿ ಕರ್ನಾಟಕ ಸರ್ಕಾರ ಜೀವ ರಕ್ಷಕರಿಗೆ ಹಣದ ನೆರವನ್ನು ಒದಗಿಸಲಿದೆ.ಅಲ್ಲದೆ ನ್ಯಾಯಾಲಯ, ಪೊಲೀಸ್ ಠಾಣೆಗೆ ಅವರು ಹಾಜರಾಗು ವುದರಿಂದ ವಿನಾಯಿತಿ ದೊರೆಯುತ್ತದೆ. ಇಷ್ಟಕ್ಕೂ ಅವರು ನ್ಯಾಯಾಲಯ ಅಥವಾ ಪೊಲೀಸ್ ಠಾಣೆಗೆ ಹಾಜರಾಗುವುದು ತೀರಾ ಅಗತ್ಯವಾಗಿದ್ದರೆ ಅಂತಹಾ ವೇಳೆ ಅವರ ಪ್ರಯಾಣ ಹಾಗೂ ಇತರೆ ವೆಚ್ಚಗಳನ್ನು ಜೀವ ರಕ್ಷಕರ ನಿಧಿಯ ಮೂಲಕ ಭರಿಸಲಾಗುವುದು. ಅಪಘಾತಕ್ಕೀಡಾದವರನ್ನು ಯಾವುದೇ ಖಾಸಗಿ ಅಥವಾ ಸರ್ಕಾರಿ ಆಸ್ಪತ್ರೆಗೆ ಸೇರಿಸಿದ ಬಳಿಕ ಜೀವರಕ್ಷಕರು ನಿರುಮ್ಮಳವಾಗಿ ಹಿಂತಿರುಗಲು ಈ ಮಸೂದೆ ಅವಕಾಶ ಕಲ್ಪಿಸುತ್ತದೆ. ಹೊಸ ಕಾನೂನಿನಂತೆ ಜೀವ ರಕ್ಷಕರಿಗೆ ಪೊಲೀಸರು, ಕಾನೂನಿನ ಹೆಸರಲ್ಲಿ ಯಾವ ಕಿರುಕುಳ ನೀಡುವಂತಿಲ್ಲ ಎನ್ನುವ ಸ್ಪಷ್ಟ ಸಂದೇಶವಿದೆ ಎಂದು ಅಧಿಕೃತ ಮಾಹಿತಿ ಹೇಳಿದೆ.

Translate »