ಹೃದಯಾಘಾತದಿಂದ ಖೈದಿ ಸಾವು
ಮೈಸೂರು

ಹೃದಯಾಘಾತದಿಂದ ಖೈದಿ ಸಾವು

November 21, 2018

ಮೈಸೂರು: ಮೈಸೂರಿನ ಕೇಂದ್ರ ಕಾರಾಗೃಹದ ಖೈದಿಯೊಬ್ಬರು, ಹೃದಯಾಘಾತದಿಂದ ಕೆ.ಆರ್.ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.ವರದಕ್ಷಿಣೆ ಕಿರುಕುಳ ಹಾಗೂ ಹತ್ಯೆ ಪ್ರಕರಣದಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿದ್ದ ವಿದ್ಯಾರಣ್ಯಪುರಂ ನಿವಾಸಿ ಮಲ್ಲೇಶ್(50) ಮೃತ ಖೈದಿ. ಸೋಮವಾರ ರಾತ್ರಿ ಸುಮಾರು 9.15ರ ವೇಳೆಗೆ ವಾಂತಿ ಮಾಡಿಕೊಂಡ ಮಲ್ಲೇಶ್‍ನನ್ನು ಕಾರಾಗೃಹದ ಆವರಣದ ಲ್ಲಿರುವ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಕೆಲ ಹೊತ್ತಿನಲ್ಲೇ ಎದೆನೋವು ಎಂದು ಹೇಳಿದ್ದರಿಂದ ಕೂಡಲೇ ಕೆ.ಆರ್.ಆಸ್ಪತ್ರೆಗೆ ಕರೆದುಕೊಂಡು ಹೋದೆವು. ಪರೀಕ್ಷಿಸಿದ ವೈದ್ಯರು, ಹೃದಯಾಘಾತವಾಗಿದೆ ಎಂದು ಹೇಳಿದರು. ಆದರೆ ಚಿಕಿತ್ಸೆ ಫಲಕಾರಿಯಾ ಗದೆ ಮಲ್ಲೇಶ್ ಮೃತಪಟ್ಟರೆಂದು ಕಾರಾಗೃಹ ಅಧಿಕಾರಿಗಳು ತಿಳಿಸಿದ್ದಾರೆ.

ವಿಷಯ ತಿಳಿದು ಕೆ.ಆರ್.ಆಸ್ಪತ್ರೆಗೆ ಧಾವಿಸಿದ ಮಲ್ಲೇಶ್ ಅವರ ಸಂಬಂಧಿಕರು, ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿ, ಕೆಲಕಾಲ ಪ್ರತಿಭಟನೆ ನಡೆಸಿದರು ಎನ್ನಲಾಗಿದೆ. ಜ್ಯುಡಿ ಷಿಯಲ್ ಮ್ಯಾಜಿಸ್ಟ್ರೇಟ್ ಅವರು ಪ್ರಾಥಮಿಕ ವಿಚಾರಣೆ ನಡೆಸಿದ ಬಳಿಕ ಮಂಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವೈದ್ಯ ಕೀಯ ಪರೀಕ್ಷೆ ನಡೆಸಿದ ನಂತರ ಮಲ್ಲೇಶ್ ಮೃತದೇಹವನ್ನು ವಾರಸುದಾರರಿಗೆ ಒಪ್ಪಿಸ ಲಾಯಿತು. ಶವ ಪರೀಕ್ಷೆಯ ವರದಿ ನಂತರ ಸಾವಿಗೆ ನಿಖರ ಕಾರಣ ತಿಳಿಯಲಿದೆ. ಮೃತ ಮಲ್ಲೇಶ್‍ಗೆ ವಿಧಿಸಿದ್ದ ಒಟ್ಟು 14 ವರ್ಷ ಜೈಲು ಶಿಕ್ಷೆಯಲ್ಲಿ 8 ವರ್ಷ ಪೂರ್ಣಗೊಳಿಸಿದ್ದರು.

Translate »