ನಡೆದಾಡುವ ದೇವರ ಪುಣ್ಯಸ್ಮರಣೆ ದಿನವನ್ನು `ದಾಸೋಹ ದಿನ’ವಾಗಿ ಆಚರಿಸಲು ಶೀಘ್ರ ಆದೇಶ
ಮೈಸೂರು

ನಡೆದಾಡುವ ದೇವರ ಪುಣ್ಯಸ್ಮರಣೆ ದಿನವನ್ನು `ದಾಸೋಹ ದಿನ’ವಾಗಿ ಆಚರಿಸಲು ಶೀಘ್ರ ಆದೇಶ

January 22, 2021

ಸಿದ್ದಗಂಗೆ(ತುಮಕೂರು), ಜ.21- ಭಕ್ತರ ಪಾಲಿಗೆ ನಡೆದಾಡುವ ದೇವರೆನಿಸಿದ್ದ ಸಿದ್ದಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿಗಳ ಪುಣ್ಯಸ್ಮರಣೆಯ ದಿನವನ್ನು `ದಾಸೋಹ ದಿನ’ವಾಗಿ ಆಚರಿಸಲು ರಾಜ್ಯ ಸರ್ಕಾರ ಶೀಘ್ರವೇ ಆದೇಶ ಹೊರಡಿಸಲಿದೆ ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ಘೋಷಿಸಿದರು.

ಶಿವಕುಮಾರ ಶ್ರೀಗಳ ಅಂತರಂಗದ ಶಿಷ್ಯ ಬಿಎಸ್‍ವೈ ಎಂದು ಸಿದ್ಧಗಂಗಾ ಮಠಾಧ್ಯಕ್ಷ ಶ್ರೀ ಸಿದ್ದಲಿಂಗ ಸ್ವಾಮೀಜಿ ಹೇಳಿದರು. ಸಿದ್ಧಗಂಗಾ ಮಠದಲ್ಲಿ ಶಿವ ಕುಮಾರ ಶ್ರೀಗಳ ದ್ವಿತೀಯ ಪುಣ್ಯಸಂಸ್ಮರಣೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, ಯಡಿ ಯೂರಪ್ಪನವರ ಮುಖ ನೋಡಿದರೆ ಶಿವಕುಮಾರ ಶ್ರೀಗಳ ಮುಖ ಅರಳುತ್ತಿತ್ತು ಎಂದು ಸ್ಮರಿಸಿದರು.

ಸಿದ್ದಗಂಗೆಯಲ್ಲಿ ಗುರುವಾರ ಪುಣ್ಯಸಂಸ್ಮರಣೋ ತ್ಸವ ಸಮಾರಂಭ ಉದ್ಘಾಟಿಸಿದ ಬಿಎಸ್‍ವೈ, ಅನ್ನ ದಾಸೋಹದ ಜತೆಗೆ ಅಕ್ಷರ ಕಲಿಸಿದ ಸಿದ್ಧಗಂಗಾಶ್ರೀ ಗಳು ಪ್ರಾತಃಸ್ಮರಣೀಯರು. ಶಿವಕುಮಾರ ಶ್ರೀಗಳ ಬದುಕು, ಸಾಧನೆ ಸಾರುವ ಉದ್ದೇಶದಿಂದ ಪೂಜ್ಯರ ಹುಟ್ಟೂರಿನಲ್ಲಿ 111 ಅಡಿ ಎತ್ತರದ ಪ್ರತಿಮೆ ನಿರ್ಮಿಸಲಾಗುವುದು. ಗ್ರಾಮದ ಅಭಿವೃದ್ಧಿಗೆ 25 ಕೋಟಿ ರೂ.ಗಳನ್ನೂ ಈಗಾಗಲೇ ಬಿಡುಗಡೆ ಮಾಡಲಾಗಿದೆ. ವೀರಾಪುರ ಗ್ರಾಮ ತೀರ್ಥಕ್ಷೇತ್ರ ಆಗಬೇಕು ಎಂದು ಹೇಳಿದರು.

ಮಾಗಡಿ ತಾಲೂಕು ವೀರಾಪುರದಲ್ಲಿ ನಿರ್ಮಾಣಗೊಳ್ಳ ಲಿರುವ ಶ್ರೀಗಳ 111 ಅಡಿ ಎತ್ತರದ ಪ್ರತಿಮೆ ಹಾಗೂ ಗ್ರಾಮದ ಸಮಗ್ರ ಅಭಿವೃದ್ಧಿಯ 3ಡಿ ನೀಲನಕ್ಷೆಯನ್ನು ಸಿಎಂ ಬಿಡುಗಡೆಗೊಳಿಸಿದರು. ಇದಕ್ಕೂ ಮುನ್ನ ಮಾತನಾಡಿದ ಹರಿಹರ ಪಂಚ ಸಾಲಿ ಗುರುಪೀಠ ವಚನಾನಂದ ಶ್ರೀಗಳು, ನಾಡಿನ ಲಕ್ಷಾಂತರ ಜನರ ಆರಾಧ್ಯದೈವ ಶಿವಕುಮಾರ ಶ್ರೀಗಳ ಪುಣ್ಯಸ್ಮರಣೆ ದಿನವನ್ನು ದಾಸೋಹದಿನವನ್ನಾಗಿ ಘೋಷಣೆ ಮಾಡಲಿ ಎಂದು ಆಗ್ರಹಿಸಿದರು.

ಮಠಾಧ್ಯಕ್ಷ ಸಿದ್ದಲಿಂಗ ಶ್ರೀಗಳು ಸಾನ್ನಿಧ್ಯ ವಹಿಸಿ ದ್ದರು. ದೇಗುಲಮಠದ ಶ್ರೀಗಳು, ಕೇಂದ್ರ ಸಚಿವ ಪ್ರತಾಪ್ ಚಂದ್ರ ಸಾರಂಗಿ, ಡಿಸಿಎಂ ಡಾ.ಸಿ.ಎನ್. ಅಶ್ವತ್ಥ ನಾರಾಯಣ್, ವೀರಶೈವ ಅಭಿವೃದ್ಧಿ ನಿಗಮದ ಬಿ.ಎಸ್. ಪರಮಶಿವಯ್ಯ, ಸಂಸದ ಜಿ.ಎಸ್.ಬಸವರಾಜು, ಶಾಸಕ ಜ್ಯೋತಿಗಣೇಶ್ ಮತ್ತಿತರರು ಉಪಸ್ಥಿತರಿದ್ದರು.

ಸಚಿವ ಗೈರು: ಖಾತೆ ಬದಲಾವಣೆಯಿಂದ ಅಸಮಾ ಧಾನಗೊಂಡಿರುವ ಸಚಿವ ಮಾಧುಸ್ವಾಮಿ ತುಮ ಕೂರಿನಲ್ಲೇ ಇದ್ದರೂ ಸಿದ್ದಗಂಗೆಗೆ ಆಗಮಿಸಲಿಲ್ಲ. ಮುಖ್ಯ ಮಂತ್ರಿಗಳು ಭಾಗವಹಿಸಿದ್ದ ಕಾರ್ಯಕ್ರಮದಿಂದ ದೂರವೇ ಉಳಿದಿದ್ದು, ಅಚ್ಚರಿಗೆ ಕಾರಣವಾಯಿತು.

Translate »