ರಾಮನ ಪರ ವಾದಿಸಿದ ಕೆ.ಎನ್.ಭಟ್, ಚಾಮುಂಡೇಶ್ವರಿ ಮೂರ್ತಿ ರೂಪಿಸಿದ ಜನಾರ್ಧನಮೂರ್ತಿ, ಯೋಗ ವೈದ್ಯ ಡಾ.ಚಂದ್ರಶೇಖರ್, ಸಾಹಿತಿ ಸಿದ್ದಾಶ್ರಮ ಸೇರಿ 65 ಮಂದಿಗೆ ರಾಜ್ಯೋತ್ಸವ ಪ್ರಶಸ್ತಿ
ಮೈಸೂರು

ರಾಮನ ಪರ ವಾದಿಸಿದ ಕೆ.ಎನ್.ಭಟ್, ಚಾಮುಂಡೇಶ್ವರಿ ಮೂರ್ತಿ ರೂಪಿಸಿದ ಜನಾರ್ಧನಮೂರ್ತಿ, ಯೋಗ ವೈದ್ಯ ಡಾ.ಚಂದ್ರಶೇಖರ್, ಸಾಹಿತಿ ಸಿದ್ದಾಶ್ರಮ ಸೇರಿ 65 ಮಂದಿಗೆ ರಾಜ್ಯೋತ್ಸವ ಪ್ರಶಸ್ತಿ

October 29, 2020

ಬೆಂಗಳೂರು, ಅ.28(ಕೆಎಂಶಿ)- ರಾಮಜನ್ಮ ಭೂಮಿ ಯಲ್ಲಿ ರಾಮದೇಗುಲ ನಿರ್ಮಿಸಲು ಅಲಹಾಬಾದ್ ಮತ್ತು ಸುಪ್ರೀಂಕೋರ್ಟ್‍ನಲ್ಲಿ ಸತತವಾಗಿ ವಾದ ಮಾಡಿದ ಹಿರಿಯ ವಕೀಲ ಕೆ.ಎನ್.ಭಟ್, ಚಾಮುಂಡೇಶ್ವರಿ ಮೂರ್ತಿ ರೂಪಿಸಿದ ಕಲಾವಿದ ಜನಾರ್ಧನಮೂರ್ತಿ, ಯೋಗ-ವೈದ್ಯ ಡಾ.ಚಂದ್ರಶೇಖರ್, ಚಿತ್ರ ನಿರ್ದೇಶಕ ಎ.ಟಿ. ರಘು, ಸಾಹಿತಿ ಪ್ರೊ.ಸಿ.ಪಿ.ಸಿದ್ದಾಶ್ರಮ, ಪತ್ರಕರ್ತರಾದ ಟಿ.ವೆಂಕಟೇಶ್, ಮಹೇಶ್ವರನ್, ಹಿರಿಯ ವೈದ್ಯ ಡಾ.ವೆಂಕಟಪ್ಪ ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ಗಣನೀಯವಾಗಿ ಸೇವೆ ಸಲ್ಲಿಸಿದ 65 ಮಂದಿ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಧ್ಯಕ್ಷತೆ ಯಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಈ ಗಣ್ಯರನ್ನು ಆಯ್ಕೆ ಮಾಡಿದ್ದು, ನವೆಂಬರ್ 7ರಂದು ರವೀಂದ್ರ ಕಲಾ ಕ್ಷೇತ್ರದಲ್ಲಿ ನಡೆಯಲಿರುವ ಸರಳ ಸಮಾರಂಭದಲ್ಲಿ ವಿಜೇತರಿಗೆ ಪ್ರಶಸ್ತಿ ಪ್ರದಾನ ಮಾಡ ಲಾಗುವುದು. ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಕನ್ನಡ ಮತ್ತು ಸಂಸ್ಕøತಿ ಸಚಿವ ಸಿ.ಟಿ.ರವಿ, ಈ ಬಾರಿ ಕನ್ನಡ ರಾಜ್ಯೋತ್ಸವವನ್ನು ಸರಳವಾಗಿ ಆಚರಿಸಲು ತೀರ್ಮಾ ನಿಸಲಾಗಿದೆ. ಪ್ರಸಕ್ತ ಸಾಲಿನ ರಾಜ್ಯೋತ್ಸವ ಪ್ರಶಸ್ತಿಗೆ ವಿವಿಧ ಜಿಲ್ಲೆಗಳಿಂದ ಒಟ್ಟು 1780 ಅರ್ಜಿ ಗಳು ಸ್ವೀಕೃತವಾಗಿದ್ದವು. ಇದರಲ್ಲಿ 130 ಅರ್ಜಿಗಳನ್ನು ಮಾತ್ರ ಅಂತಿಮ ಗೊಳಿಸಿ ಅದರಲ್ಲಿ ನಾಡು, ನುಡಿ, ಕೃಷಿ, ಕ್ರೀಡೆ, ಚಲನಚಿತ್ರ, ಯಕ್ಷಗಾನ, ಮಾಧ್ಯಮ ಸೇರಿದಂತೆ ವಿವಿಧ ಕ್ಷೇತ್ರ ಗಳಲ್ಲಿ ಸೇವೆ ಸಲ್ಲಿಸಿದ 65 ಸಾಧಕ ರನ್ನು ಅಂತಿಮಗೊಳಿಸಲಾಯಿತು ಎಂದರು. ಯಾವುದೇ ಒತ್ತಡ, ಶಿಫಾರಸು ಇಲ್ಲದೆ, ಎಲೆಮರೆಕಾಯಿಯಂತೆ ಸೇವೆ ಸಲ್ಲಿಸಿ ದವರು, ಅರ್ಜಿಯನ್ನೇ ಹಾಕದವರನ್ನೂ ಗುರುತಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಸಾಮಾಜಿಕ ಮತ್ತು ಪ್ರಾದೇಶಿಕತೆಗೂ ಆದ್ಯತೆ ನೀಡಲಾಗಿದೆ. ಕೆಲವರಿಗೆ ಪ್ರಶಸ್ತಿ ಬಾರದಿದ್ದರೆ ನಿರಾಶೆಗೊಳಗಾಗಬಾರದು. ಸರ್ಕಾರ ನಿಮ್ಮ ಸೇವೆಯನ್ನು ಪರಿಗಣಿಸಲಿದೆ ಎಂಬ ಭರವಸೆ ನೀಡಿದರು.

Rajyotsava Awards announced

ಸಾಹಿತ್ಯ ಕ್ಷೇತ್ರ: ಧಾರವಾಡ ಜಿಲ್ಲೆಯ ಪ್ರೊ. ಸಿ.ಪಿ.ಸಿದ್ದಾ ಶ್ರಮ, ಕೋಲಾರ ಜಿಲ್ಲೆಯ ವಿ.ಮುನಿವೆಂಕಟಪ್ಪ, ಗದಗ ಜಿಲ್ಲೆಯ ರಾಮಣ್ಣ ಬ್ಯಾಟಿ (ವಿಶೇಷ ಚೇತನ), ದಕ್ಷಿಣ ಕನ್ನಡ ಜಿಲ್ಲೆಯ ವಲೇರಿಯನ್ ಡಿಸೋಜ (ವಲ್ಲಿವಗ್ಗ), ಯಾದಗಿರಿ ಜಿಲ್ಲೆಯ ಡಿ.ಎನ್.ಅಕ್ಕಿ. ಸಂಗೀತ ಕ್ಷೇತ್ರ: ರಾಯಚೂರು ಜಿಲ್ಲೆಯ ಹಂಬಯ್ಯ ನೂಲಿ, ಬೆಳಗಾವಿ ಜಿಲ್ಲೆಯ ಅನಂತ ತೇರದಾಳ, ಬೆಂಗಳೂರು ನಗರದ ಬಿ.ವಿ.ಶ್ರೀನಿವಾಸ್, ಗಿರಿಜಾ ನಾರಾಯಣ, ದಕ್ಷಿಣ ಕನ್ನಡದ ಕೆ.ಲಿಂಗಪ್ಪ ಶೇರಿಗಾರ ಕಟೀಲು.ನ್ಯಾಯಾಂಗ: ಬೆಂಗಳೂರಿನ ಕೆ.ಎನ್.ಭಟ್, ಉಡುಪಿಯ ಎಂ.ಕೆ. ವಿಜಯಕುಮಾರ್. ಮಾಧ್ಯಮ: ಮೈಸೂರಿನ ಸಿ.ಮಹೇಶ್ವರನ್, ಬೆಂಗಳೂರಿನ ಟಿ.ವೆಂಕಟೇಶ್ (ಈ ಸಂಜೆ ಪತ್ರಿಕೆಯ ಸಂಪಾದಕರು). ಯೋಗ: ಮೈಸೂರಿನ ಡಾ.ಎ.ಎಸ್.ಚಂದ್ರಶೇಖರ್. ಶಿಕ್ಷಣ: ಚಿಕ್ಕಮಗಳೂರು ಜಿಲ್ಲೆಯ ಎಂ.ಎನ್.ಷಡಕ್ಷರಿ, ಚಾಮರಾಜನಗರದ ಡಾ.ಆರ್.ರಾಮಕೃಷ್ಣ, ದಾವಣಗೆರೆಯ ಡಾ. ಎಂ.ಜಿ.ಈಶ್ವರಪ್ಪ, ಮೈಸೂರಿನ ಡಾ.ಪುಟ್ಟಸಿದ್ದಯ್ಯ, ಬೆಳಗಾವಿಯ ಅಶೋಕ್ ಶೆಟ್ಟರ್, ಗದಗ ಜಿಲ್ಲೆಯ ಡಿ.ಎಸ್.ದಂಡಿನ್. ಹೊರನಾಡು ಕನ್ನಡಿಗ: ದಕ್ಷಿಣ ಕನ್ನಡ ಜಿಲ್ಲೆ ಮೂಲದ ಕುಸುಮೋದರದೇರಣ್ಣ ಶೆಟ್ಟಿ ಕೇಲ್ತಡ್ಕ, ಮುಂಬೈನ ಮುಲುಂಡದ ವಿದ್ಯಾ ಸಿಂಹಾಚಾರ್ಯ ಮಾಹುಲಿ. ಕ್ರೀಡೆ: ತುಮಕೂರು ಜಿಲ್ಲೆಯ ಎಚ್.ಬಿ.ನಂಜೇ ಗೌಡ, ಬೆಂಗಳೂರು ನಗರದ ಉಷಾರಾಣಿ. ಸಂಕೀರ್ಣ: ಕೋಲಾರ ಜಿಲ್ಲೆಯ ಡಾ.ಕೆ.ವಿ. ರಾಜು, ಹಾಸನದ ನಂ.ವೆಂಕೋಬರಾವ್, ಮಂಡ್ಯದ ಡಾ.ಕೆ.ಎಸ್.ರಾಜಣ್ಣ (ವಿಶೇಷ ಚೇತನ) ಹಾಗೂ ಮಂಡ್ಯದ ವಿ.ಲಕ್ಷ್ಮೀನಾರಾಯಣ (ನಿರ್ಮಾಣ್). ಸಂಘ-ಸಂಸ್ಥೆ: ಬೆಂಗಳೂರು ನಗರದ ಯೂತ್ ಫಾರ್ ಸೇವಾ ಹಾಗೂ ಬೆಟರ್ ಇಂಡಿಯಾ, ಬಳ್ಳಾರಿಯ ದೇವದಾಸಿ ಸ್ವಾವಲಂಬನ ಕೇಂದ್ರ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಯುವ ಬ್ರಿಗೇಡ್, ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳದ ಧರ್ಮೋತ್ಥಾನ ಟ್ರಸ್ಟ್. ಸಮಾಜ ಸೇವೆ: ಉತ್ತರ ಕನ್ನಡ ಜಿಲ್ಲೆಯ ಎನ್.ಎಸ್.(ಕುಂದರಗಿ)ಹೆಗಡೆ, ಚಿಕ್ಕಮಗಳೂರಿನ ಪ್ರೇಮಾ ಕೋದಂಡ ರಾಮ ಶ್ರೇಷ್ಠಿ ಹಾಗೂ ಮೋಹಿನಿ ಸಿದ್ದೇಗೌಡ, ಉಡುಪಿಯ ಮಣೆಗಾರ್ ಮೀರಾನ್ ಸಾಹೇಬ್. ವೈದ್ಯಕೀಯ ಕ್ಷೇತ್ರ: ಬಾಗಲಕೋಟೆ ಜಿಲ್ಲೆಯ ಡಾ.ಅಶೋಕ್ ಸೊನ್ನದ್, ಶಿವಮೊಗ್ಗದ ಡಾ.ಬಿ.ಎಸ್.ಶ್ರೀನಾಥ್, ಬಳ್ಳಾರಿಯ ಡಾ.ಎ.ನಾಗರತ್ನ, ರಾಮನಗರದ ಡಾ.ವೆಂಕಟಪ್ಪ. ಕೃಷಿ: ಬೀದರ್ ಜಿಲ್ಲೆಯ ಸುರತ್ ಸಿಂಗ್ ಕನೂರ್ ಸಿಂಗ್ ರಜಪುತ್, ಚಿತ್ರದುರ್ಗದ ಎಸ್.ವಿ.ಸುಮಂಗಲಮ್ಮ ವೀರಭದ್ರಪ್ಪ, ಕಲಬುರಗಿಯ ಡಾ.ಸಿದ್ದರಾಮಪ್ಪ ಬಸವಂತರಾವ್ ಪಾಟೀಲ್. ಪರಿಸರ ಕ್ಷೇತ್ರ: ಚಿಕ್ಕಬಳ್ಳಾಪುರ ಜಿಲ್ಲೆಯ ಅಮರನಾರಾ ಯಣ, ವಿಜಯಪುರದ ಎನ್.ಡಿ.ಪಾಟೀಲ್. ವಿಜ್ಞಾನ-ತಂತ್ರಜ್ಞಾನ: ಉಡುಪಿ ಜಿಲ್ಲೆಯ ಉಡುಪಿ ಶ್ರೀನಿವಾಸ, ಶಿವಮೊಗ್ಗದ ಚಿಂದಿ ವಾಸುದೇವಪ್ಪ. ಸಹಕಾರ: ಡಾ.ಸಿ.ಎನ್.ಮಂಚೇ ಗೌಡ ಬಯಲಾಟ: ಬೆಳಗಾವಿ ಜಿಲ್ಲೆಯ ಕೆಂಪವ್ವ ಹರಿಜನ, ಹಾವೇರಿಯ ಚೆನ್ನಬಸಪ್ಪ ಬೆಂಡಿಗೇರಿ. ಯಕ್ಷಗಾನ: ಚಾಮರಾಜನಗರ ಜಿಲ್ಲೆಯ ಬಂಗಾರ್ ಆಚಾರಿ, ಶಿವಮೊಗ್ಗದ ಎಂ.ಕೆ.ರಮೇಶ್ ಆಚಾರ್ಯ. ರಂಗಭೂಮಿ: ಹಾಸನದ ಅನಸೂಯಮ್ಮ, ದಾವಣಗೆರೆಯ ಎಚ್.ಷಡಕ್ಷರಪ್ಪ, ಚಿತ್ರದುರ್ಗದ ತಿಪ್ಪೇಸ್ವಾಮಿ. ಚಲನಚಿತ್ರ: ತುಮಕೂರು ಜಿಲ್ಲೆಯ ಬಿ.ಎಸ್. ಬಸವರಾಜು, ಕೊಡಗಿನ ಅಪಾಡಂಡ ತಿಮ್ಮಯ್ಯ ರಘು (ಎ.ಟಿ.ರಘು). ಚಿತ್ರಕಲೆ: ಧಾರವಾಡ ಜಿಲ್ಲೆಯ ಎಂ.ಜೆ.ವಾಚೇದ್ ಮಠ. ಜಾನಪದ: ಬಾಗಲಕೋಟೆಯ ಗುರುರಾಜ್ ಹೊಸಕೋಟೆ, ಹಾಸನದ ಡಾ.ಹಂಪನಹಳ್ಳಿ ತಿಮ್ಮೇಗೌಡ. ಶಿಲ್ಪಕಲೆ: ಮೈಸೂರಿನ ಎನ್.ಎಸ್.ಜನಾರ್ಧನ ಮೂರ್ತಿ. ನೃತ್ಯ: ನಾಟ್ಯ ವಿದೂಷಿ ಜ್ಯೋತಿ ಪಟ್ಟಾಭಿರಾಮ್. ಜಾನಪದ/ತೊಗಲು ಗೊಂಬೆಯಾಟ: ಕೊಪ್ಪಳದ ಕೇಶಪ್ಪ ಶಿಳ್ಳೆಕ್ಯಾತರ ಅವರಿಗೆ ಪ್ರಶಸ್ತಿಯನ್ನು ಘೋಷಿಸಲಾಗಿದೆ. ಗೋಷ್ಠಿಯಲ್ಲಿ ಸಲಹಾ ಸಮಿತಿ ಸದಸ್ಯರಾದ ಡಾ.ವಾಮನಾಚಾರ್ಯ, ಸಾಹಿತಿ ದೊಡ್ಡರಂಗೇ ಗೌಡ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್.ನಾಗಾಭರಣ, ಇಲಾಖೆ ಕಾರ್ಯದರ್ಶಿ ರಶ್ಮಿ ಮಹೇಶ್, ನಿರ್ದೇಶಕ ರಂಗಪ್ಪ ಸೇರಿದಂತೆ ಮತ್ತಿತರರು ಹಾಜರಿದ್ದರು.

 

 

Translate »