ಶಿಂಧೆ ಸುಪ್ರೀಂ ಮೊರೆ
News

ಶಿಂಧೆ ಸುಪ್ರೀಂ ಮೊರೆ

June 27, 2022

ನವದೆಹಲಿ, ಜೂ.26- ಮಹಾರಾಷ್ಟ್ರರಾಜಕೀಯ ಬಿಕ್ಕಟ್ಟುಕ್ಷಣಕ್ಕೊಂದುತಿರುವು ಪಡೆಯುತ್ತಿದ್ದು, ಎಂವಿಎ ಮೈತ್ರಿ ಸರ್ಕಾರದ ಭವಿಷ್ಯ ಸುಪ್ರೀಂಕೋರ್ಟ್ ಮೆಟ್ಟಿ ಲೇರಿದೆ. ಬಂಡಾಯ ನಾಯಕಏಕನಾಥ್ ಶಿಂಧೆ ಅವರುತಾವು ಸೇರಿದಂತೆಇತರ 15 ಶಾಸಕರನ್ನು ಅನರ್ಹಗೊಳಿಸುವ ಶಿವಸೇನೆಯ ಕ್ರಮವನ್ನು ಸುಪ್ರೀಂಕೋರ್ಟ್‍ನಲ್ಲಿ ಪ್ರಶ್ನಿಸಿದ್ದಾರೆ. ಈ ಪ್ರಕರಣದ ವಿಚಾರಣೆ ನಾಳೆ (ಸೋಮವಾರ) ನಡೆಯಲಿದೆ.

ಉಪಸಭಾಪತಿ ನರಹರಿಜಿರ್ವಾಲ್ ವಿರುದ್ಧದ ಅವಿಶ್ವಾಸ ನಿರ್ಣಯವನ್ನು ತಿರಸ್ಕರಿಸಿ ಅಜಯ್‍ಚೌಧರಿ ಅವ ರನ್ನು ಶಿವಸೇನೆ ಶಾಸಕಾಂಗ ಪಕ್ಷದ ನಾಯಕರನ್ನಾಗಿ ನೇಮಿಸಿರುವುದನ್ನು ಏಕನಾಥ್ ಶಿಂಧೆ ಪ್ರಶ್ನಿಸಿದ್ದಾರೆ.

ತಮ್ಮನ್ನು ಪದಚ್ಯುತಗೊಳಿಸುವ ವಿಷಯ ನಿರ್ಧಾರ ವಾಗುವವರೆಗೆಅನರ್ಹತೆಅರ್ಜಿಯ ಬಗ್ಗೆ ಯಾವುದೇಕ್ರಮ ಕೈಗೊಳ್ಳದಂತೆ ಉಪ ಸ್ಪೀಕರ್‍ಗೆ ಆದೇಶ ನೀಡು ವಂತೆ ಬಂಡುಕೋರರು ಸುಪ್ರೀಂಕೋರ್ಟ್‍ಗೆ ಮನವಿ ಮಾಡಿದ್ದಾರೆ. ಅಲ್ಲದೆತಮ್ಮ ಕುಟುಂಬಗಳಿಗೆ ಭದ್ರತೆಒದಗಿಸುವಂತೆ ಮಹಾರಾಷ್ಟ್ರ ಸರ್ಕಾರಕ್ಕೆ ನಿರ್ದೇಶನ ನೀಡುವಂತೆಯೂ ನ್ಯಾಯಾಲಯವನ್ನುಕೋರಿದ್ದಾರೆ.

ಈ ವಾರದಆರಂಭದಲ್ಲಿ 16 ಬಂಡಾಯ ಶಾಸಕರನ್ನು ಅನರ್ಹಗೊಳಿಸುವಂತೆ ಶಿವಸೇನೆ ಉಪ ಸ್ಪೀಕರ್‍ಗೆ ಮನವಿ ಸಲ್ಲಿಸಿದೆ. ಏಕನಾಥ ಶಿಂಧೆ ಪಾಳಯವು ಈ ಕ್ರಮವನ್ನು ಕಾನೂನು ಬಾಹಿರಎಂದು ಪ್ರತಿಪಾದಿಸಿದೆ. ಏಕೆಂದರೆಅನರ್ಹತೆಯುಅಸ್ತ್ರ ವಿಧಾನಸಭೆಯಲ್ಲಿನ ವಿಷಯಗಳಿಗೆ ಮಾತ್ರ ಸಂಬಂಧಿಸಿದ್ದು, ಪಕ್ಷದ ಸಭೆಗಲ್ಲಎಂದಿದೆ. ಬಂಡಾಯ ಸಚಿವರ ವಿರುದ್ಧಇತರ ಕ್ರಮಗಳನ್ನು ತೆಗೆದುಕೊಳ್ಳುವ ಬಗ್ಗೆ ಸಹ ಶಿವಸೇನೆ ಯೋಜಿಸುತ್ತಿದೆ. ಬಂಡಾಯ ನಾಯಕಏಕನಾಥ್ ಶಿಂಧೆ, ಗುಲಾಬ್ರಾವ್ ಪಾಟೀಲ್ ಮತ್ತುದಾದಾ ಭೂಸೆಅವರುತಮ್ಮ ಖಾತೆಗಳನ್ನು ಕಳೆದುಕೊಳ್ಳುವ ಸಾಧ್ಯತೆಯಿದೆಎಂದು ಮೂಲಗಳು ತಿಳಿಸಿವೆ. ಅಬ್ದುಲ್ ಸತ್ತಾರ್ ಮತ್ತು ಶಂಬುರಾಜೇದೇಸಾಯಿಕೂಡಕ್ರಮಎದುರಿಸುವ ಸಾಧ್ಯತೆಇದೆ.

ಮುಖ್ಯಮಂತ್ರಿಉದ್ಧವ್‍ಠಾಕ್ರೆಅವರಆಪ್ತರಾಗಿರುವ ಶಿವಸೇನೆಯ ಸಂಜಯ್‍ರಾವತ್‍ಅವರು ಭಾನುವಾರ ಬಂಡುಕೋರರ ವಿರುದ್ಧ ವಾಗ್ದಾಳಿ ನಡೆಸಿದ್ದು, ಬಾಳಾ ಸಾಹೇಬ್‍ಗೆದ್ರೋಹ ಬಗೆದವನು ಕಳೆದುಹೋಗಿದ್ದಾನೆ. ಇನ್ನು ಮುಂದೆಯಾರನ್ನು ನಂಬಬೇಕೆಂದು ನಾವು ನಿರ್ಧರಿಸಬೇಕುಎಂದು ಹೇಳಿದ್ದಾರೆ. ಶಿಂಧೆ ಅವರೊಂದಿಗೆ ಬೀಡುಬಿಟ್ಟಿರುವ ಶಾಸಕರಲ್ಲಿ ಕನಿಷ್ಠ 20 ಶಾಸಕರು ಮುಖ್ಯಮಂತ್ರಿಉದ್ಧವ್‍ಠಾಕ್ರೆಅವರೊಂದಿಗೆ ಸಂಪರ್ಕದಲ್ಲಿದ್ದಾರೆಎಂದು ಸೇನಾ ಮೂಲಗಳು ಹೇಳಿವೆ. ಅವರಲ್ಲಿ ಕೆಲವರು ಬಿಜೆಪಿ ವಿಲೀನಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆನ್ನಲಾಗಿದೆ.

Translate »