`ನಮ್ಮೂರ ತಿಂಡಿ’ ಆಹಾರ ಮೇಳಕ್ಕೆ ಸಚಿವ ಜಿ.ಟಿ.ದೇವೇಗೌಡರಿಂದ ಚಾಲನೆ
ಮೈಸೂರು

`ನಮ್ಮೂರ ತಿಂಡಿ’ ಆಹಾರ ಮೇಳಕ್ಕೆ ಸಚಿವ ಜಿ.ಟಿ.ದೇವೇಗೌಡರಿಂದ ಚಾಲನೆ

November 24, 2018

ಮೈಸೂರು:  ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಭಾಗ್ಯ ಲಕ್ಷ್ಮಿ ಫುಡ್ಸ್ ವತಿಯಿಂದ ಏರ್ಪಡಿಸಿರುವ ನಾಲ್ಕು ದಿನಗಳ `ನಮ್ಮೂರ ತಿಂಡಿ’ ಆಹಾರ ಮೇಳಕ್ಕೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇ ಗೌಡ ಶುಕ್ರವಾರ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಚಾಮರಾಜ ಕ್ಷೇತ್ರ ಶಾಸಕ ಎಲ್.ನಾಗೇಂದ್ರ, ಸಂಸದ ಪ್ರತಾಪ ಸಿಂಹ ಅವರ ಪತ್ನಿ ಅರ್ಪಿತಾ ಪ್ರತಾಪಸಿಂಹ, ಸಂಸ್ಥೆಯ ತನಯ್ ಬೈಸಾನಿ, ಮೂರ್ತಿ ಇನ್ನಿತರರು ಉಪಸ್ಥಿತರಿದ್ದರು.ಮಹಿಳೆಯರಲ್ಲಿನ ಅಡುಗೆ ಕೌಶಲ್ಯವನ್ನು ಗುರ್ತಿಸಿ, ಪ್ರೋತ್ಸಾಹಿಸುವ ಸಲುವಾಗಿ ಆಯೋಜಿಸಿರುವ ಮೇಳದಲ್ಲಿ 150 ವಿವಿಧ ಬಗೆಯ ಖಾದ್ಯಗಳ ಸ್ಟಾಲ್‍ಗಳಿವೆ.

ಇಂದು ಕರ್ನಾಟಕದ ಉತ್ತರ, ದಕ್ಷಿಣ, ಮಧ್ಯ ಕರ್ನಾಟಕದ ಜೊತೆಗೆ ಉತ್ತರ ಮತ್ತು ದಕ್ಷಿಣ ಭಾರತದ ನಾನಾ ರೀತಿಯ ತಿನಿಸುಗಳು ಇಲ್ಲಿ ಲಭ್ಯವಿದೆ. ಅಲ್ಲದೆ ಫ್ಯಾನ್ಸಿ ವಸ್ತುಗಳ ಮಾರಾಟವೂ ಇಲ್ಲಿದೆ.

ಆಹಾರವನ್ನು ಸವಿದು ಸಂಭ್ರಮಿಸುವ ಜೊತೆಗೆ ಮನರಂಜನೆಗೂ ಇಲ್ಲಿ ಅವಕಾಶ ವಿದ್ದು, ಪ್ರತಿ ದಿನ ಮಹಿಳೆಯರಿಗೆ ಅಡುಗೆ ಸ್ಪರ್ಧೆ, ಸಖತ್ ಜೋಡಿ, ಮಕ್ಕಳಿಗೆ ಮುದ್ದು ಮಗು, ಚಿತ್ರಕಲೆ, ಅಲಂಕಾರಿಕ ಉಡುಪು, ನೃತ್ಯ ಇತ್ಯಾದಿ ಸ್ಪರ್ಧೆಗಳಿವೆ.
24ರಂದು ಸಂಜೆ 7 ಗಂಟೆಗೆ ವಿಜಯ್ ಪ್ರಕಾಶ್ ಮತ್ತು ಅನುರಾಧಾ ಭಟ್ ಸಂಗೀತ ಸಂಜೆ, 25ರಂದು ಸಂಜೆ 6.30 ಗಂಟೆಗೆ ಬೀಟ್ ಗುರೂಸ್ ಬೀಟ್ಸ್ ಮೇಳ, 26ರಂದು ಮಧ್ಯಾಹ್ನ 3.30 ಗಂಟೆಗೆ ಸಿಹಿಕಹಿ ಚಂದ್ರು ಅಡುಗೆ, 6.30 ಗಂಟೆಗೆ ಮಿಮಿಕ್ರಿ ಗೋಪಿ ಅವರ ಮಿಮಿಕ್ರಿ ಇನ್ನಿತರ ಕಾರ್ಯಕ್ರಮಗಳಿವೆ. ಪ್ರತಿ ದಿನ ಬೆಳಿಗ್ಗೆ 10ರಿಂದ ರಾತ್ರಿ 9.30 ಗಂಟೆ ಯವರೆಗೆ ಮೇಳಕ್ಕೆ ಭೇಟಿ ನೀಡಬಹುದಾಗಿದೆ.

Translate »