ಅರಸೀಕೆರೆ: ಶಿವಮೊಗ್ಗ-ಯಶವಂತಪುರ ನಡುವೆ ನಿತ್ಯ ಸಂಚರಿಸು ತ್ತಿರುವ ಜನಶತಾಬ್ದಿ ರೈಲುಗಾಡಿಗೆ ನಗರದಲ್ಲಿ ನಿಲುಗಡೆ ನೀಡಬೇಕು ಮತ್ತು ರೈಲು ನಿಲ್ದಾಣದಲ್ಲಿನ ಅಭಿವೃದ್ಧಿ ಕಾಮ ಗಾರಿ ಬೇಗ ಪೂರ್ಣಗೊಳಿಸಬೇಕು ಎಂದು ಆಗ್ರಹಿಸಿ ಜಿಲ್ಲಾ ರೈತ ಸಂಘದ ಸಂಚಾಲಕ ಕನಕೆಂಚೇನಹಳ್ಳಿ ಪ್ರಸನ್ನಕುಮಾರ್ ಅರಸೀ ಕೆರೆ ರೈಲು ನಿಲ್ದಾಣ ವ್ಯವಸ್ಥಾಪಕರಿಗೆ ಮಂಗಳವಾರ ಮನವಿಪತ್ರ ಸಲ್ಲಿಸಿದರು. ಈ ಸಂದರ್ಭ ಮಾತನಾಡಿದ ಅವರು, ರೈಲ್ವೆ ಇಲಾಖೆ ಕೆಲ ವಿಚಾರಗಳಲ್ಲಿ ಮಲ ತಾಯಿ ಧೋರಣೆ ಅನುಸರಿಸುತ್ತಿದೆ. ಶಿವಮೊಗ್ಗ-ಯಶವಂತಪುರ ನಡುವೆ ಸಂಚರಿಸುವ ಜನಶತಾಬ್ದಿ ರೈಲಿಗೆ ಅರಸೀ ಕೆರೆ ಜಂಕ್ಷನ್ನಲ್ಲಿ…
ಅರಸೀಕೆರೆಯಲ್ಲಿಯೂ ಅವಾಂತರ ಸೃಷ್ಟಿಸಿರುವ ಮಳೆರಾಯ!
May 26, 2019ಅರಸೀಕೆರೆ: ತಾಲೂಕಿನ ವಿವಿಧೆಡೆ ಶುಕ್ರವಾರ ಆಲಿಕಲ್ಲು ಸಹಿತ ಬಿದ್ದ ಮಳೆ, ಗಾಳಿಗೆ ಮರಗಳು ಧರೆಗೆ ಉರುಳಿದರೆ ಕಟ್ಟಡಗಳ ಛಾವಣಿಗಳು ಗಾಳಿಗೆ ಹಾರಿ ಹೋದ ಘಟನೆ ನಡೆದಿದೆ. ತೀವ್ರ ಬರಗಾಲದಿಂದ ತತ್ತರಿಸುತ್ತಿರುವ ಅರಸೀಕೆರೆ ತಾಲೂಕಿಗೆ ಕಳದೆರಡು ದಿನಗಳಿಂದ ಸಂಜೆ ಸಮಯದಲ್ಲಿ ಸುರಿಯುತ್ತಿರುವ ಗುಡುಗು ಸಿಡಿಲುಗಳ ಆಲಿಕಲ್ಲುಗಳ ಸಹಿತ ಮಳೆ ತಂಪನ್ನೆರೆಯುತ್ತಿದ್ದರೆ ಮತ್ತೊಂದೆಡೆ ಇದೇ ಮಳೆಯು ವಿದ್ಯುತ್ ಕಂಬ ಹಾಗೂ ಮರಗಳನ್ನು ಧರೆಗುರುಳಿಸಿದೆ. ನಗರದ ವಾಚನಾಲಯ ರಸ್ತೆ, ಸಾಯಿನಾಥ ರಸ್ತೆ, ಗರುಡನಗಿರಿ, ಚೌಡೇಶ್ವರಿ ನಗರ, ಮಲ್ಲೇಶ್ವರನಗರ, ಶಿವಾಲಯ ಬಡಾವಣೆ, ಶ್ರೀನಿವಾಸ…
ಶ್ರೀ ಗುರುಬಸವೇಶ್ವರಸ್ವಾಮಿ ದೇಗುಲ ಕಳಶಾರೋಹಣ
May 26, 2019ಅರಸೀಕೆರೆ: ತಾಲೂಕಿನ ಕಣಕಟ್ಟೆ ಹೋಬಳಿ ಯರಿಗೇನಹಳ್ಳಿಯಲ್ಲಿ ಶ್ರೀ ಗುರುಬಸವೇಶ್ವರಸ್ವಾಮಿ ದೇವಸ್ಥಾನ ಜೀರ್ಣೋದ್ಧಾರವಾಗಿದ್ದು, ಕಳಶಾರೋ ಹಣ ಹಾಗೂ ವೀರಭದ್ರೇಶ್ವರ ಸ್ವಾಮಿಯ ಕೆಂಡೋತ್ಸವ ಕಾರ್ಯಕ್ರಮ ಬಲು ಭಕ್ತಿಭಾವದೊಂದಿಗೆ ಜರುಗಿತು. ಸಮಾರಂಭದಲ್ಲಿ ಆಶೀರ್ವಚನ ನೀಡಿದ ಪಾಂಡೋಮಟ್ಟಿಯ ವಿರಕ್ತ ಮಠದ ಶ್ರೀ ಗುರುಬಸವ ಸ್ವಾಮೀಜಿ, ಆಧ್ಯಾತ್ಮಿಕ ಚಿಂತನೆಯ ತಳಹದಿಯಲ್ಲಿ ಮಠ ಮಂದಿರ ಗಳನ್ನು ನಿರ್ಮಿಸಲಾಗುತ್ತಿದೆ. ಇವುಗಳು ಧಾರ್ಮಿಕ ಶ್ರದ್ಧಾ ಕೇಂದ್ರಗಳಾಗಬೇಕೇ ಹೊರತು, ಸಂಘರ್ಷದ ಕಿಡಿ ಹೊತ್ತಿಸುವ ತಾಣಗಳಾಗಬಾರದು ಎಂದರು. ಸಮಾಜಮುಖಿ ಕಾರ್ಯಗಳನ್ನು ಮಾಡು ವಾಗ ಸ್ವಾರ್ಥ ಹಾಗೂ ಸಂಕುಚಿತ ಬುದ್ಧಿ ಮೊದಲು ತೊಲಗಬೇಕು….
ನಗರಸಭೆ ಸೌಲಭ್ಯ ದುರ್ಬಳಕೆ: ತಪ್ಪಿತಸ್ಥರ ವಿರುದ್ಧ ಕ್ರಮ
May 21, 2019ಅರಸೀಕೆರೆ: ನಗರಸಭೆ ವ್ಯಾಪ್ತಿ ಯಲ್ಲಿ ಪ್ರಭಾವಿ ವ್ಯಕ್ತಿಗಳ ಹಿಂಬಾಲಕರ ಹೆಸರಿನಲ್ಲಿ ನಿರ್ಮಾಣ ಮಾಡಿರುವ ಖಾಸಗಿ ವಸತಿ ನಿವೇಶನಗಳ ಲೇಔಟ್ಗಳಲ್ಲಿ ನಗರ ಸಭೆಯ ನಾಗರಿಕ ಮೂಲ ಸೌಲಭ್ಯಗ ಳಾದ ರಸ್ತೆ, ಒಳಚರಂಡಿ ಮತ್ತು ಕುಡಿ ಯುವ ನೀರು ಯೋಜನೆಗಳನ್ನು ದುರು ಪಯೋಗ ಮಾಡಿಕೊಳ್ಳಲಾಗಿದ್ದು, ಇದರ ಹಿಂದೆ ಶಾಮೀಲಾಗಿರುವ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಲು ಸರ್ಕಾರಕ್ಕೆ ವರದಿ ಸಲ್ಲಿಸ ಲಾಗುವುದು ಎಂದು ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಹೇಳಿದರು. ಅರಸೀಕೆರೆ ನಗರಸಭೆ ಸಭಾಂಗಣದಲ್ಲಿ ಸೋಮವಾರ ಅಧಿಕಾರಿಗಳ ಸಭೆ…
ಶ್ರದ್ಧಾ ಭಕ್ತಿಯ ಬಸವ ಜಯಂತಿ ಆಚರಣೆ
May 7, 2019ಅರಸೀಕೆರೆ: ತಾಲೂಕು ಆಡಳಿತ ಸೇರಿದಂತೆ ಬಸವೇಶ್ವರ ಯುವಕ ಸಂಘ ಹಾಗೂ ಬಸವ ತತ್ವ ಅನುಯಾಯಿಗಳಿಂದ ತಾಲೂಕಿನ ವಿವಿಧೆಡೆ ಜಗಜ್ಯೋತಿ ಬಸವೇಶ್ವರರ ಜಯಂತಿ ಯನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ನಗರದ ಶ್ಯಾನುಭೋಗರ ಬೀದಿಯಲ್ಲಿರುವ ಬಸವಣ್ಣ ದೇವಾ ಲಯದಲ್ಲಿ ವಿಶೇಷ ಪೂಜೆಗಳು ನಡೆದವು. ಬ್ರಾಹ್ಮೀ ಮಹೂರ್ತ ದಲ್ಲಿ ಬಸವಣ್ಣನ ಮೂಲ ವಿಗ್ರಹಕ್ಕೆ ಜಲ ಕ್ಷೀರ ಸೇರಿದಂತೆ ವಿವಿಧ ಅಭಿಷೇಕಗಳು ಹಾಗೂ ಅರ್ಚನೆಗಳು ಧಾರ್ಮಿಕ ವಿಧಿವಿಧಾನ ಗಳೊಂದಿಗೆ ನೆರವೇರಿತು. ದೇವಾಲಯಕ್ಕೆ ಆಗಮಿಸಿದ ಭಕ್ತರು ಸರದಿ ಸಾಲಿನಲ್ಲಿ ನಿಂತು ನಂದಿ ರೂಪದಲ್ಲಿರುವ ಬಸವಣ್ಣನಿಗೆ ಪೂಜೆ…
ಅರಸೀಕೆರೆಯಲ್ಲಿ ಅಯ್ಯಪ್ಪ ಸ್ವಾಮಿ ಮಂಡಲ ಪೂಜೆ
December 27, 2018ಅರಸೀಕೆರೆ: ನಗರದ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಮಂಡಲ ಪೂಜಾ ಕಾರ್ಯಕ್ರಮದ ಪ್ರಯುಕ್ತ ಅಯ್ಯಪ್ಪ ಸ್ವಾಮಿ ಉತ್ಸವ, ಭಗವತಿ ಸೇವೆಗಳೊಂದಿಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ವಿಜೃಂಭಣೆಯಿಂದ ನಡೆಸಲಾಯಿತು. ಮಂಡಳಿ ಅಧ್ಯಕ್ಷ ಪುರುಷೋತ್ತಮ್ ಮಾತನಾಡಿ, ಶ್ರೀ ಕ್ಷೇತ್ರದ ತಂತ್ರಿ ವಿಷ್ಣು ಭಟ್ಟ ದ್ರಿಪದ್ ಅವರ ಮಾರ್ಗದರ್ಶನದಲ್ಲಿ ಕಳೆದ ಮೂರು ದಿನಗಳಿಂದ ಅಯ್ಯಪ್ಪ ಸ್ವಾಮಿ ಉತ್ಸವ, ಭಗವತಿ ಸೇವೆಯನ್ನು ನಡೆಸಲಾಯಿತು. ಮೂರನೇ ದಿನದ ಪ್ರಯುಕ್ತ ಭಕ್ತರಿಗೆ ಅನ್ನ ಸಂತರ್ಪಣೆಯನ್ನು ಹಮ್ಮಿಕೊಳ್ಳುವುದರ ಮೂಲಕ ದೇವ ಸ್ಥಾನದಲ್ಲಿ ವರ್ಷವಿಡೀ ನಿತ್ಯ ಪೂಜೆ, ಗಣ ಪತಿ…
ಶಿಕ್ಷಕರಿಗೆ ಸಹಪಠ್ಯ ಚಟುವಟಿಕೆ ಸ್ಪರ್ಧೆ
November 17, 2018ಅರಸೀಕೆರೆ: ಎಲ್ಲ ಶಿಕ್ಷಕರೂ ಪಾಂಡಿತ್ಯ ಹೊಂದಿರುವುದಿಲ್ಲ.ಅವರ ಅನುಭವ ಮತ್ತು ಬೋಧನೆಗಳೊಂದಿಗೆ ಹೊಸ ಹೊಸ ಅವಿಷ್ಕಾರಗಳು ಸಾಹಿತ್ಯ ಪಾಂಡಿತ್ಯಕ್ಕೆ ಮಾರ್ಗ ಮಾಡಿಕೊಡುತ್ತದೆ ಎಂದು ಬಿಸಿಯೂಟ ಯೋಜನೆ ಸಹಾಯಕ ನಿರ್ದೇಶಕ ಡಾ.ಜಗದೀಶ್ ನಾಯಕ್ ಹೇಳಿದರು. ನಗರದ ಶ್ರೀಕನ್ನಿಕಾ ಆಂಗ್ಲ ಶಾಲೆಯಲ್ಲಿ ಶಿಕ್ಷಣ ಇಲಾಖೆ ಆಯೋಜಿಸಿದ್ದ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರಿಗೆ ಸಹಪಠ್ಯ ಚಟುವಟಿಕೆಗಳ ಸ್ಪರ್ಧಾ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಶಾಲಾ ಮಕ್ಕಳಿಗೆ ಸಾಂಸ್ಕøತಿಕ ಕಾರ್ಯ ಕ್ರಮಗಳಿಗೆ ಸಿದ್ದಗೊಳಿಸುತ್ತಲೇ ತಾವೂ ಪಠ್ಯೇತರ ಚಟುವಟಿಕೆಯಲ್ಲಿ ಶಿಕ್ಷಕರು ಪ್ರತಿಭೆ ಗಳಿಸುತ್ತಾರೆ. ಅಲ್ಲದೆ…
ಬ್ರಾಹ್ಮಣ ಸಂಘಟನೆಗಳಿಂದ ಅನಂತಕುಮಾರ್ ಅವರಿಗೆ ಶ್ರದ್ಧಾಂಜಲಿ
November 15, 2018ಅರಸೀಕೆರೆ: ಕೇಂದ್ರ ಸಚಿವ ಅನಂತಕುಮಾರ್ ಇವರು ಸರ್ವ ಜನಾಂಗೀಯ ಶಾಂತೀಯ ತೋಟ ಎನ್ನುವಂತೆ ಎಲ್ಲ ರನ್ನೂ ಒಗ್ಗೂಡಿಸಿಕೊಂಡ ವಿಶ್ವಾಸಪೂರ್ಣ ರಾಜಕಾರಣಿ ಎನಿಸಿಕೊಂಡರು. ಇಂತಹ ಮಹಾನ್ ಚೇತನ ನಮ್ಮ ಬ್ರಾಹ್ಮಣ ಸಮುಧಾಯಕ್ಕೆ ಗೌರವ ತಂದು ಕಣ್ಮರೆಯಾಗಿದ್ದು ಬಹು ದೊಡ್ಡ ಆಘಾತ ಎಂದು ತಾಲೂಕು ಬ್ರಾಹ್ಮಣ ಸಂಘದ ಅಧ್ಯಕ್ಷ ಕೆ.ಆರ್.ಎಂ.ರಮೇಶ್ ಹೇಳಿದರು. ನಗರದ ಸೀತಾರಾಮ ಕಲ್ಯಾಣ ಮಂದಿರದಲ್ಲಿ ತಾಲ್ಲೂಕು ಬ್ರಾಹ್ಮಣ ಸಂಘ, ಸೀತಾ ಮಹಿಳಾ ಸಂಘ, ಯುವಕ ಸಂಘ ಮತ್ತು ಗಾಯಿತ್ರಿ ಪತ್ತಿನ ಸಹಕಾರ ಸಂಘ ಸಂಯುಕ್ತಾಶ್ರಯದಲ್ಲಿ ನಡೆದ ಶ್ರದ್ಧಾಂ…
ಅರಸೀಕೆರೆಯಲ್ಲಿ ಅನಧಿಕೃತ ಕಟ್ಟಡ, ಅನೈರ್ಮಲ್ಯದ ಕಿರಿಕಿರಿ..!
November 14, 2018ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸಾರ್ವಜನಿಕರ ಆಕ್ರೋಶ ಎಲ್ಲೆಂದರಲ್ಲಿ ಬಿದ್ದಿರುವ ಕಸದ ರಾಶಿ: ಸಾಂಕ್ರಾಮಿಕ ಕಾಯಿಲೆಗಳ ಭೀತಿ ಅರಸೀಕೆರೆ: ಪ್ರತಿಯೊಂದು ಕಟ್ಟಡದ ನಿರ್ಮಾಣ ಸರ್ಕಾರದ ಕಾನೂನಿ ನನ್ವಯ ನಡೆಯಬೇಕು. ಅಧಿಕೃತವಾಗಿ ಸರ್ಕಾರಿ ನಿಯಮಗಳ ಪಾಲನೆಯಾದಾಗ ಕಾನೂನುಗಳಿಗೆ ಮಾನ್ಯತೆ ನೀಡಿದಂತಾ ಗುತ್ತದೆ. ಆದರೆ, ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿ ಅರಸೀಕೆರೆಯಲ್ಲಿ ಅನಧಿಕೃತ ಕಟ್ಟಡಗಳು ತಲೆ ಎತ್ತುತ್ತಿದೆ. ಜೊತೆಗೆ, ನಗರದಲ್ಲಿ ಅನೈರ್ಮಲ್ಯ ತಾಂಡವಾಡು ತ್ತಿದ್ದು, ಸಾರ್ವಜನಿಕರಿಗೆ ಆತಂಕ ಉಂಟು ಮಾಡಿದೆ. ನಗರದ ನಗರಸಭೆಯಲ್ಲಿ ಚುನಾಯಿತ ಜನಪ್ರತಿನಿಧಿಗಳಿಗೆ ಅಧ್ಯಕ್ಷ, ಉಪಾಧ್ಯಕ್ಷ ಸೇರಿದಂತೆ ವಿವಿಧ ಜವಾಬ್ದಾರಿಯುತ…
ಮಕ್ಕಳ ಹಕ್ಕು ರಕ್ಷಣೆ ಪೋಷಕರ ಆದ್ಯ ಕರ್ತವ್ಯ
November 1, 2018ಅರಸೀಕೆರೆ: ಮಕ್ಕಳ ಹಕ್ಕುಗಳನ್ನು ಮತ್ತು ರಕ್ಷಣೆ ನೀಡುವುದು ಪೋಷಕರ ಆದ್ಯ ಕರ್ತವ್ಯವಾಗಿದೆ. ಸಾಕಲು ಅಗುವು ದಿಲ್ಲವೆಂದು ನೆಪವೊಡ್ಡಿ ಮಕ್ಕಳನ್ನು ಮಾರಾಟ ಮಾಡುವುದು, ಜೀವ ಹಾನಿ ಮಾಡಿ ದಲ್ಲಿ ಕಾನೂನಿನ ಪ್ರಕಾರ ಉಗ್ರ ಶಿಕ್ಷೆಗೆ ಒಳ ಗಾಗುತ್ತಾರೆ ಎಂದು ಜಿಲ್ಲಾ ಮಕ್ಕಳ ಸಹಾಯವಾಣಿ ಕೇಂದ್ರದ ಅಧಿಕಾರಿ ಕಾಂತರಾಜ್ ಹೇಳಿದರು. ನಗರದ ವನಿತಾ ಜ್ಯೋತಿ ಮಹಿಳಾ ಸಂಘ, ಪ್ರಚೋದನಾ ಸಂಸ್ಥೆ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಸಂಸ್ಥೆ ಸಂಯುಕ್ತಾಶ್ರಯ ದಲ್ಲಿ ಚರ್ಚ್ ಕಾಲೋನಿಯಲ್ಲಿ ಏರ್ಪಡಿಸಿದ್ದ ‘ತೆರೆದ ಮನೆ’ ಕಾರ್ಯಕ್ರಮದಲ್ಲಿ ಮಕ್ಕಳ…