ಮೈಸೂರು,ಫೆ.13(ವೈಡಿಎಸ್)-ಮೈಸೂರು ಜಿಲ್ಲೆಯಲ್ಲಿ ಶನಿವಾರ 22 ಮಂದಿಗೆ ಕೊರೊನಾ ಸೋಂಕು ತಗುಲಿದೆ. 14 ಸೋಂಕಿ ತರು ಗುಣವಾಗಿದ್ದು, ವಿವಿಧ ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ. ಇಂದು ಕೊರೊನಾದಿಂದ ಒಂದೂ ಸಾವಿನ ಪ್ರಕರಣ ವರದಿ ಯಾಗಿಲ್ಲ. ಜಿಲ್ಲೆಯಲ್ಲಿ ಈವರೆಗೆ ಒಟ್ಟು 53,762 ಮಂದಿಗೆ ಸೋಂಕು ತಗುಲಿದಂತಾಗಿದೆ. 52,504 ಸೋಂಕಿತರು ಗುಣಮುಖರಾಗಿದ್ದಾರೆ. ಒಟ್ಟು 1,027 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ. ಜಿಲ್ಲೆಯ ಲ್ಲಿನ್ನೂ 231 ಮಂದಿ ಚಿಕಿತ್ಸೆ ಪಡೆಯುತ್ತಿದ್ದು, ಅವರಲ್ಲಿ 82 ಮಂದಿ ಮನೆಯಲ್ಲೇ ಶುಶ್ರೂಷೆ ಪಡೆಯುತ್ತಿದ್ದಾರೆ. ಸರ್ಕಾರಿ ಆಸ್ಪತ್ರೆ-ನಿಗಾ ಕೇಂದ್ರಗಳಲ್ಲಿ 25, ಖಾಸಗಿ…
ಮೈಸೂರು ಜಿಲ್ಲೆಯಲ್ಲಿ ಬುಧವಾರ 1090 ಮಂದಿಗೆ ಲಸಿಕೆ
February 11, 2021ಕಳೆದ 4 ದಿನಗಳಲ್ಲಿ 7500 ಕೊರೊನಾ ವಾರಿಯರ್ಸ್ಗೆ ಲಸಿಕೆ ನೀಡುವಿಕೆ ಯಶಸ್ವಿ ಮೈಸೂರು, ಫೆ.10(ವೈಡಿಎಸ್)- ಮುಂಚೂಣಿ ಕೊರೊನಾ ವಾರಿಯರ್ಸ್ಗೆ ಲಸಿಕೆ ನೀಡುವ ಅಭಿಯಾನವನ್ನು ಮೈಸೂರಿ ನಲ್ಲಿ ಜಿಲ್ಲಾಡಳಿತ ಮುಂದುವರಿಸಿದ್ದು, ಬುಧವಾರ ಮೈಸೂರು ಉಪವಿಭಾಗದ ಸಹಾಯಕ ಆಯುಕ್ತ ವೆಂಕಟರಾಜು ಮೇಟಗಳ್ಳಿಯಲ್ಲಿ ರುವ ಜಿಲ್ಲಾಸ್ಪತ್ರೆಯಲ್ಲಿ ಲಸಿಕೆ ಪಡೆದರು. ಜತೆಗೆ ಕಂದಾಯ, ಪೊಲೀಸ್, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗಳು ಹಾಗೂ ಸ್ಥಳೀಯ ಸಂಸ್ಥೆಗಳ ಹಲವು ನೌಕರರು ಸೇರಿ ದಂತೆ ಜಿಲ್ಲೆಯಲ್ಲಿಂದು 1090 ಮಂದಿ ಲಸಿಕೆ ಪಡೆದುಕೊಂಡರು. ಪ್ರಸ್ತುತ ಮೈಸೂರು ಜಿಲ್ಲೆಯಲ್ಲಿ…
ಮೈಸೂರಲ್ಲಿ ಸೋಮವಾರ 40 ಮಂದಿಗೆ ಸೋಂಕು; 53 ಮಂದಿ ಗುಣಮುಖ
December 22, 2020ರಾಜ್ಯದಲ್ಲೂ ಸೋಂಕು ಇಳಿಮುಖ ಮತ್ತೊಂದೆಡೆ ಎರಡನೇ ಅಲೆ ಭೀತಿ ಮೈಸೂರು, ಡಿ.21(ಎಸ್ಬಿಡಿ)- ಮೈಸೂರು ಜಿಲ್ಲೆಯಲ್ಲಿ ಸೋಮವಾರ ಕೊರೊನಾ ದೃಢಪಟ್ಟವರ ಸಂಖ್ಯೆಗಿಂತ ಹೆಚ್ಚು ಸೋಂಕಿತರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಸೋಮವಾರ 40 ಮಂದಿಗೆ ಸೋಂಕು ದೃಢಪಟ್ಟಿದ್ದು, 53 ಮಂದಿ ಸೋಂಕು ಮುಕ್ತರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಈ ಮೂಲಕ ಒಟ್ಟು ಸೋಂಕು ಬಾಧಿತರಲ್ಲಿ (51,847) 50,426 ಮಂದಿ ಗುಣಮುಖರಾದಂತಾಗಿದೆ. ಸದ್ಯ 6 ದಿನಗಳಿಂದ ಸೋಂಕಿತರ ಸಾವು ಸಂಭವಿಸಿಲ್ಲ. ಗುಣಮುಖವಾಗಿ ಡಿಸ್ಚಾರ್ಜ್ ಆದವರು ಹಾಗೂ ಒಟ್ಟು ಸಾವಿನ ಸಂಖ್ಯೆ(1,006) ಹೊರತುಪಡಿಸಿ ಜಿಲ್ಲೆಯಲ್ಲಿನ್ನು…
ದೇಶದ 30 ಕೋಟಿ ಜನರಿಗೆ ಮೊದಲಿಗೆ ಕೋವಿಡ್ ಲಸಿಕೆ
December 9, 2020ನವದೆಹಲಿ: ಆರೋಗ್ಯ ಸಿಬ್ಬಂದಿ, ಮುಂಚೂಣಿ ಕಾರ್ಯಕರ್ತರು ಸೇರಿದಂತೆ ದೇಶದ ಸುಮಾರು 30 ಕೋಟಿ ಜನರು ಮೊದಲಿಗೆ ಲಸಿಕೆ ಪಡೆಯಲಿದ್ದಾರೆ ಎಂದು ಕೊರೊನಾ ಲಸಿಕೆ ಕಾರ್ಯತಂತ್ರದ ಬಗ್ಗೆ ಮೊದಲ ಬಾರಿಗೆ ಅಧಿಕೃತ ಮಾಹಿತಿ ಯನ್ನು ಕೇಂದ್ರ ಸರ್ಕಾರ ಹಂಚಿಕೊಂಡಿದೆ. ಅಗತ್ಯವಿರುವ ಪ್ರತಿಯೊಬ್ಬ ಜನರಿಗೂ ಲಸಿಕೆ ಹಾಕುವಂತೆ ಕೋವಿಡ್-19 ಲಸಿಕೆ ಆಡಳಿತದ ರಾಷ್ಟ್ರೀಯ ತಜ್ಞರ ಗುಂಪು ಶಿಫಾರಸು ಮಾಡಿದೆ ಎಂದು ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಗೋಷ್ಠಿಯಲ್ಲಿ ತಿಳಿಸಿದರು. ಲಸಿಕೆ ಅಗತ್ಯವಿರುವ ಗುಂಪುಗಳನ್ನು ಆದ್ಯತೆ ಮೇರೆಗೆ ವಿಂಗಡಿಸಲಾಗುವುದು. ಸರ್ಕಾರಿ…
‘ಕೊರೊನಾ’ ರಾಜ್ಯ ಸರ್ಕಾರಕ್ಕೆ ಹಣ ಮಾಡುವ ಹಬ್ಬ
September 1, 2020ಮೈಸೂರು, ಆ.31(ಪಿಎಂ)-ರಾಜ್ಯ ಬಿಜೆಪಿ ಸರ್ಕಾ ರಕ್ಕೆ `ಕೊರೊನಾ’ ಹಣ ಮಾಡುವ ಹಬ್ಬದಂತಾಗಿದೆ. ಇದು ಸುಖಾಸುಮ್ಮನೆ ಮಾಡುತ್ತಿರುವ ಆರೋಪ ವಲ್ಲ. ಈ ಸಂಬಂಧ ಕಾಂಗ್ರೆಸ್ ಬಳಿ ದಾಖಲೆಗಳಿವೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಮೈಸೂರು ಜಿಲ್ಲೆ ಅನಾಥವಾಗಿದ್ದು, ಇಲ್ಲಿ ಕೊರೊನಾ ಮಿತಿ ಮೀರುತ್ತಿ ದ್ದರೂ ನಿಯಂತ್ರಣಕ್ಕೆ ಸೂಕ್ತ ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದು ಬೆಂಗಳೂರು ಶಿವಾಜಿನಗರದ ಕಾಂಗ್ರೆಸ್ ಶಾಸಕ ರಿಜ್ವಾನ್ ಅರ್ಷದ್ ಆರೋಪಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸೋಮ ವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊರೊನಾ ನಿಯಂತ್ರಣ ಸಂಬಂಧ ವೈದ್ಯಕೀಯ…
1-2 ತಿಂಗಳಲ್ಲಿ ಪ್ರತಿ ದಿನ 10 ಲಕ್ಷ ಕೋವಿಡ್-19 ಟೆಸ್ಟ್
July 31, 2020ನವದೆಹಲಿ, ಜು.30- ಒಂದೆರಡು ತಿಂಗಳುಗಳಲ್ಲಿ ಪ್ರತಿ ದಿನ 10 ಲಕ್ಷ ಕೋವಿಡ್-19 ಸೋಂಕು ಪರೀಕ್ಷೆಗಳನ್ನು ನಡೆಸಲಾಗುವುದು ಎಂದು ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್ ತಿಳಿಸಿದ್ದಾರೆ. ಭಾರತದಲ್ಲಿ ಈಗ ದಿನಂಪ್ರತಿ 5 ಲಕ್ಷ ಸೋಂಕು ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ಮುಂದಿನ ಒಂದು ಅಥವಾ ಎರಡು ತಿಂಗಳಲ್ಲಿ ಈ ಸಂಖ್ಯೆ ಯನ್ನು ದುಪ್ಪಟ್ಟು ಮಾಡುವ ಗುರಿ ಹೊಂದಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ. ಕೋವಿಡ್-19ಗೆ ಸಂಬಂಧಿಸಿದ ವೈಜ್ಞಾನಿಕ ಮತ್ತು ಕೈಗಾ ರಿಕಾ ಸಂಶೋಧನೆ ತಂತ್ರಜ್ಞಾನಗಳ (ಸಿಎಸ್ಐಆರ್) ಸಂಗ್ರಹವನ್ನು ಬಿಡುಗಡೆ ಮಾಡಿ ಮಾತನಾಡಿರುವ ಹರ್ಷವರ್ಧನ್,…
ಇನ್ನು ಲಾಕ್ಡೌನ್ ಪ್ರಸ್ತಾಪ ಕೈಬಿಟ್ಟು ಕೊರೊನಾ ಜೊತೆಗೆ ಬದುಕುವ ಕೌಶಲ್ಯ ಕಲಿಯೊಣ
July 28, 2020ಮೈಸೂರು, ಜು.27(ಪಿಎಂ)- ಇನ್ನು ಲಾಕ್ಡೌನ್ ಪ್ರಸ್ತಾಪ ಕೈಬಿಟ್ಟು ಕೊರೊನಾ ಜೊತೆಗೆ ಬದುಕುವ ಕೌಶಲ್ಯ ಕಲಿತು ರಾಜ್ಯದ ಅಭಿವೃದ್ಧಿಗೆ ನಾಂದಿ ಹಾಡಬೇಕಿದೆ ಎಂದು ಮುಖ್ಯ ಮಂತ್ರಿ ಬಿ.ಎಸ್.ಯಡಿಯೂರಪ್ಪ ಅಭಿಪ್ರಾಯಪಟ್ಟರು. ಬೆಂಗಳೂರಿನ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ರಾಜ್ಯ ಬಿಜೆಪಿ ಸರ್ಕಾರ ವರ್ಷ ಪೂರೈಸಿರುವ ಅಂಗವಾಗಿ ಸೋಮವಾರ ಹಮ್ಮಿಕೊಂಡಿದ್ದ `ಸವಾಲುಗಳ 1 ವರ್ಷ ಪರಿ ಹಾರದ ಸ್ಪರ್ಶ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ರಾಜ್ಯದ ಜನತೆಯ ಋಣ ತೀರಿಸಬೇಕಿದ್ದು, ಹೀಗಾಗಿ ಮಾಡಬೇಕಿರುವ ಕೆಲಸ ಸರ್ಕಾರದ…
`ಕೋವಿಡ್ ದೃಢಪಟ್ಟರೆ ಆಸ್ಪತ್ರೆಗೆ ಹೋಗಲು ಅಂಜದಿರಿ’
July 28, 2020ಮೈಸೂರು, ಜು.27(ವೈಡಿಎಸ್)- `ಕೋವಿಡ್-19 ಭಯಪಡ ಬೇಕಾದ ರೋಗವಲ್ಲ. ಇದಕ್ಕೆ ಇನ್ನೂ ಔಷಧ ಕಂಡು ಹಿಡಿದಿಲ್ಲ. ಹಾಗಾಗಿ ಮುನ್ನೆಚ್ಚರಿಕೆಯಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಪೌಷ್ಟಿಕ ಆಹಾರ ಸೇವಿಸ ಬೇಕು. ನಾನು ಬಹುಬೇಗ ಗುಣಮುಖವಾಗಲು ನನ್ನಲ್ಲಿನ ಧೈರ್ಯ, ವಿಶ್ವಾಸವೇ ಮದ್ದಾಗಿತ್ತು’… ಇದು ಮಂಡಿಮೊಹಲ್ಲಾ ನಿವಾಸಿ ಶಹಾಬುದ್ದೀನ್ ಅವರ ಭರವಸೆಯ ನುಡಿಗಳು. `ನಾನು ದುಬೈನಲ್ಲಿ ಕೆಲಸ ಮಾಡುತ್ತಿದ್ದೆ. ಕೊರೊನಾ ವಿಶ್ವದೆಲ್ಲೆಡೆ ಹರಡುತ್ತಿದ್ದುದರಿಂದ ಮೈಸೂರಿಗೆ ಬಂದೆ. ನಂತರದಲ್ಲಿ ಸ್ವತಃ ಕ್ವಾರಂಟೈನ್ಗೆ ಒಳಗಾದೆ. ಕೆಲ ದಿನಗಳ ನಂತರ ವಿಪರೀತ ಕೆಮ್ಮು ಕಾಣಿಸಿಕೊಂಡಿತು. ಜ್ವರ ಇರಲಿಲ್ಲ….
ಮೈಸೂರಲ್ಲಿ ಕೊರೊನಾ ಸಾವಿನ ಸರಣಿ ಮುಂದುವರಿಕೆ
July 20, 2020ಮೈಸೂರು, ಜು.19(ಎಂಟಿವೈ)-ಮೈಸೂರಿನಲ್ಲಿ ಭಾನುವಾರ ಕೊರೊನಾ ಸಾವಿನ ಸರಣಿ ಮುಂದುವರೆದಿದ್ದು, 11 ಮಂದಿ ಮೃತಪಟ್ಟಿದ್ದಾರೆ. ಇದರೊಂದಿಗೆ ಮೃತರ ಸಂಖ್ಯೆ 70ಕ್ಕೆ ಏರಿಕೆ ಯಾಗಿದೆ. ಹೊಸದಾಗಿ 110 ಮಂದಿಗೆ ಸೋಂಕು ತಗುಲಿದ್ದು, ಸೋಂಕಿತರ ಸಂಖ್ಯೆ 1624ಕ್ಕೆ ಏರಿದೆ. ಹೊಸದಾಗಿ 110 ಪ್ರದೇಶಗಳನ್ನು ಕಂಟೇನ್ಮೆಂಟ್ ಜೋನ್ ಗಳಾಗಿ ಘೋಷಿಸಲಾಗಿದೆ. ಮೈಸೂರಲ್ಲಿ ಕಳೆದ 15 ದಿನಗಳಿಂದ ಕೊರೊನಾ ಸೋಂಕಿತರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗುತ್ತಲೇ ಇದ್ದು, ಜಿಲ್ಲಾಡಳಿತಕ್ಕೆ ತಲೆನೋವಾಗಿ ಪರಿಣಮಿಸಿದೆ. ಅದರಲ್ಲೂ ಕಳೆದ 10 ದಿನಗಳಿಂದ ಪ್ರತಿ ದಿನ ನೂರಕ್ಕೂ ಹೆಚ್ಚು ಮಂದಿಯಲ್ಲಿ…
ಮೈಸೂರಲ್ಲಿ ಹಿಡಿತಕ್ಕೆ ಸಿಗುತ್ತಿಲ್ಲ ಮಹಾಮಾರಿ ಕೊರೊನಾ
July 8, 2020ಮೈಸೂರು, ಜು.7(ಎಸ್ಬಿಡಿ)- ಬೆಂಗಳೂರಿನಲ್ಲಿ ಕೊರೊನಾ ಸೋಂಕು ಎಲ್ಲೆ ಮೀರುತ್ತಿದ್ದು, ನಿತ್ಯ ಸಾವಿರಕ್ಕೂ ಹೆಚ್ಚು ಪ್ರಕ ರಣಗಳು ದಾಖಲಾಗುತ್ತಿವೆ. ಇದರಿಂದ ಆತಂಕಗೊಂಡಿರುವ ಜನ ತಮ್ಮ ಹುಟ್ಟೂರ ಹಾದಿ ಹಿಡಿದಿದ್ದಾರೆ. ಪರಿಣಾಮ ರಾಜ್ಯ ದೆಲ್ಲೆಡೆ `ಬೆಂಗಳೂರು ಭಯ’ ಸೃಷ್ಟಿಯಾ ಗಿದೆ. ಅದರಲ್ಲೂ ಬೆಂಗಳೂರಿನೊಂದಿಗೆ ನಿಕಟ ನಂಟು ಹೊಂದಿರುವ ಮೈಸೂರಿಗೆ ದೊಡ್ಡ ಸವಾಲು ಎದುರಾಗಿದೆ. ಲಾಕ್ಡೌನ್ ಸಂದರ್ಭದಲ್ಲಿ ಸೋಂಕಿತ 94 ಮಂದಿಯೂ ಗುಣಮುಖರಾಗಿದ್ದರು. ಪ್ರಕರಣ ಸಂಖ್ಯೆ ಶೂನ್ಯವಾದಾಗ ಮೈಸೂ ರಿನ ಜನ ನಿಟ್ಟುಸಿರು ಬಿಟ್ಟಿದ್ದರು. ನಂತರ ದಲ್ಲಿ ಲಾಕ್ಡೌನ್ ಸಡಿಲಿಕೆ ಮಾಡಿ,…