ಬೇಗೂರು: ಗುಂಡ್ಲು ಪೇಟೆ ತಾಲೂಕಿನ ಬೇಗೂರು ಹೋಬಳಿ ಸಮೀಪದ ಕೂಡ್ಲೂರು ಗ್ರಾಮದ ಮಹದೇವಶೆಟ್ಟಿ ಎಂಬುವವರ ಜಮೀನಿನಲ್ಲಿ ಎತ್ತಿನ ಮೇಲೆ ಹುಲಿ ದಾಳಿ ನಡೆಸಿ ಎತ್ತಿನ ಕುತ್ತಿಗೆಯ ಭಾಗವನ್ನು ತಿಂದು ಹಾಕಿದೆ. ಸ್ಥಳಕ್ಕೆ ಓಂಕಾರ್ ವಲಯದ ಆರ್ಎಫ್ಓ ನವೀನಕುಮಾರ್ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದ್ದರು.
ಬೈಕ್ ಕಳ್ಳನ ಬಂಧನ
June 16, 2018ಗುಂಡ್ಲುಪೇಟೆ: ಕದ್ದ ಬೈಕಿನ ನಂಬರ್ ಪ್ಲೇಟ್ ಬದ ಲಿಸಿ ಓಡಿಸುತ್ತಿದ್ದವನನ್ನು ತಾಲೂಕಿನ ತೆರಕಣಾಂಬಿ ಪೆÇಲೀಸರು ಬಂಧಿಸಿದ್ದಾರೆ. ಘಟನೆ ವಿವರ: ಚಾಮರಾಜನಗರ ತಾಲೂಕಿನ ಕೊತ್ತಲವಾಡಿ ಗ್ರಾಮದ ಬಸವರಾಜಪ್ಪ ಎಂಬುವರು ತಮ್ಮ ಹೀರೊ ಹೋಂಡಾ ಬೈಕನ್ನು 2017 ಡಿಸೆಂಬರ್ನಲ್ಲಿ ತೆರಕಣಾಂಬಿ ಗ್ರಾಮದ ಸಂತೇಮಾಳದಲ್ಲಿ ನಿಲ್ಲಿಸಿದ್ದಾಗ ಕಳ್ಳ ತನವಾಗಿತ್ತು. ಈ ಬಗ್ಗೆ ತೆರಕಣಾಂಬಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಎಂದಿನಂತೆ ತೆರಕಣಾಂಬಿ ಪೆÇಲೀಸ್ ಠಾಣೆಯ ಪಿಎಸ್ಐ ರವಿಕಿರಣ್, ಸಿಬ್ಬಂದಿಗಳಾದ ಮಲ್ಲೇಶ್, ಅಸಾದುಲ್ಲಾ ಅವರು ವಾಹನಗಳ ದಾಖಲಾತಿ ತಪಾಸಣೆ ಮಾಡು ವಾಗ ತೆರಕಣಾಂಬಿಹುಂಡಿ…
ಗುಂಡ್ಲುಪೇಟೆಯಲ್ಲಿ ಜಿಟಿ ಜಿಟಿ ಮಳೆ: ಕೆಸರು ಗದ್ದೆಯಾದ ರಸ್ತೆಗಳು
June 15, 2018ಗುಂಡ್ಲುಪೇಟೆ: ಪಟ್ಟಣದಲ್ಲಿ ಕಳೆದೆರಡು ದಿನಗಳಿಂದ ಬೀಳುತ್ತಿರುವ ಜಿಟಿ ಜಿಟಿ ಮಳೆಗೆ ಪಟ್ಟಣದ ಬಹುತೇಕ ಬಡಾವಣೆಗಳ ರಸ್ತೆಗಳು ಕೆಸರು ಗದ್ದೆ ಯಂತಾಗಿದ್ದು, ವಾಹನ ಮತ್ತು ಜನ ಸಂಚಾರ ಸಂಪೂರ್ಣ ಅಸ್ತವ್ಯಸ್ಥವಾಗಿದೆ. ಪಟ್ಟಣದ ಬಹುತೇಕ ಬಡಾವಣೆಗಳಲ್ಲಿ ಸಮರ್ಪಕವಾದ ರಸ್ತೆಗಳಿಲ್ಲದ ಹಿನ್ನೆಲೆ ಯಲ್ಲಿ ಮಳೆ ನೀರು ನಿಂತು ಸಂಚಾರಕ್ಕೆ ಅಡ್ಡಿ ಯಾಗಿದ್ದರೂ ಸಂಬಂಧಪಟ್ಟವರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸಾರ್ವಜನಿ ಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪಟ್ಟಣದ ದ.ರಾ.ಬೇಂದ್ರೆ ನಗರ, ಕೆ.ಎಸ್. ನಾಗರತ್ನಮ್ಮ ಬಡಾವಣೆ, ಹೊಸೂರು ಬಡಾ ವಣೆ, ಅಶ್ವಿನಿ ಬಡಾವಣೆ, ಜನತಾ…
ಗುಂಡ್ಲುಪೇಟೆ ವಿವಿಧೆಡೆ ಹಾಡಹಗಲೇ ಚಿರತೆ ಹಾವಳಿ
June 14, 2018ಗುಂಡ್ಲುಪೇಟೆ: ತಾಲೂಕಿನ ವಿವಿಧೆಡೆ ಹಾಡಹಗಲೇ ಚಿರತೆಗಳು ಕಾಣಿಸಿಕೊಂಡು ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿವೆ. ತಾಲೂಕಿನ ಕೊಡಸೋಗೆ ಗ್ರಾಮದ ಮದ್ದಾನಪ್ಪ ಎಂಬುವರ ಜಮೀ ನಿನ ಬಳಿ ಬುಧವಾರ ಮಧ್ಯಾಹ್ನ 2 ಗಂಟೆ ವೇಳೆಗೆ ಚಿರತೆಯೊಂದು ಕಾಣಿಸಿಕೊಂಡಿದೆ. ಈ ವೇಳೆ ಜಮೀ ನಿನಲ್ಲಿದ್ದ ಮಾಲೀಕರ ಮಗ ಸ್ವಾಮಿ ಎಂಬುವರು ಚಿರತೆಯನ್ನು ನೋಡಿ ಸಮೀಪದ ಮರದ ಮರೆಯಲ್ಲಿ ಅಡಗಿಕೊಂಡಿದ್ದಾರೆ. ನಂತರ ಚಿರತೆಯು ರಸ್ತೆಯಲ್ಲಿ ವಾಹನಗಳ ಶಬ್ದ ಕೇಳಿ ಪೆÇದೆಗಳತ್ತ ನುಸುಳಿದೆ. ಇತ್ತೀಚೆಗೆ ಚಿರತೆಯ ಹಾವಳಿಯಿಂದ ಹೊಸಬಡಾವಣೆಯ ಹಲವು ನಾಯಿಗಳು ಕಣ್ಮರೆಯಾಗುತ್ತಿವೆ. ಕೆಲವು ದಿನಗಳ…
ಸೌಹಾರ್ದಯುತವಾಗಿ ರಂಜಾನ್ ಆಚರಣೆಗೆ ಮನವಿ
June 14, 2018ಗುಂಡ್ಲುಪೇಟೆ: ರಂಜಾನ್ ಹಬ್ಬವನ್ನು ಶಾಂತಿ ಸೌಹಾರ್ದಯುತವಾಗಿ ಆಚರಿಸಲು ಪಟ್ಟಣದ ಜನತೆಗೆ ಸಹಕರಿಸಬೇಕು ಎಂದು ಸರ್ಕಲ್ ಇನ್ಸ್ಪೆಕ್ಟರ್ ಜಗದೀಶ್ ಹೇಳಿದರು. ಪಟ್ಟಣದಲ್ಲಿ ಹಿಂದಿನಿಂದಲೂ ಕೋಮು ಸೌಹಾರ್ದತೆ ಕಾಪಾಡಿಕೊಂಡು ಬಂದಿರು ವುದು ಉತ್ತಮವಾದ ಬೆಳವಣಿಗೆಯಾಗಿದ್ದು, ರಂಜಾನ್ ಹಬ್ಬದಂದು ಪಟ್ಟಣದಲ್ಲಿ ವಿಶೇಷ ಬಂದೋಬಸ್ತ್ ಮಾಡಲಾಗುವುದು. ಸಾರ್ವಜನಿಕರ ಸಹಕಾರ ಇದ್ದಾಗ ಕಾನೂನು ಸುವ್ಯವಸ್ಥೆ ಕಾಪಾಡುವುದು ಸುಲಭ. ಈ ನಿಟ್ಟಿನಲ್ಲಿ ಜನತೆ ಸಹಕರಿಸಬೇಕು ಎಂದು ಮನವಿ ಮಾಡಿದರು. ಹಬ್ಬವನ್ನು ಹಬ್ಬವಾಗಿ ಆಚರಿಸಬೇಕು. ಇದಕ್ಕೆ ಪೆÇಲೀಸ್ ಇಲಾ ಖೆಯು ಎಲ್ಲಾ ರೀತಿಯ ಸಹಕಾರವನ್ನು ನೀಡಲಿದೆ ಎಂದರು….
ಕಳಗಸಾಪುರಕ್ಕೆ ಶಾಸಕ ನಿರಂಜನ್ ಕುಮಾರ್ ಭೇಟಿ
June 13, 2018ಗುಂಡ್ಲುಪೇಟೆ: ಕ್ಷೇತ್ರದ ಶಾಸಕ ಸಿ.ಎಸ್. ನಿರಂಜನಕುಮಾರ್ ತಾಲೂಕಿನ ಬಂಡೀಪುರ ಹುಲಿ ಯೋಜನೆಯ ಅರಣ್ಯ ಪ್ರದೇಶದೊಳಗಿರುವ ಶ್ರೀ ಕಳಗಸಾಪುರ ಮಾರಮ್ಮನವರ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿ ಕಾಡಂಚಿನ ಗ್ರಾಮಗಳ ಜನರಿಂದ ಕುಂದು ಕೊರತೆಗಳ ಬಗ್ಗೆ ಮಾಹಿತಿ ಪಡೆದರು. ಹುಲಿ ಯೋಜನೆಯ ಓಂಕಾರ್ ವಲಯದ ಅರಣ್ಯ ಪ್ರದೇಶ ದಲ್ಲಿರುವ ಶ್ರೀ ಕಳಗಸಾಪುರ ಮಾರಮ್ಮನವರ ದೇವಸ್ಥಾನದ ಸುತ್ತಲಿನ ಬರಗಿ, ದೇಶೀಪುರ, ಮಂಚಹಳ್ಳಿ, ಆಲತ್ತೂರು, ಹಸಗೂಲಿ, ಹೆಗ್ಗಡಹಳ್ಳಿ ಮುಂತಾದ ಹಲವಾರು ಗ್ರಾಮಗಳ ಜನರ ಆರಾಧ್ಯ ದೇವತೆಯಾಗಿದ್ದು, ಇಲ್ಲಿಗೆ ಪ್ರತಿ ವರ್ಷವೂ ಎಲ್ಲಾ ಗ್ರಾಮಗಳ…
ಸರ್ಕಾರಗಳಿಂದ ಬ್ರಾಹ್ಮಣ ಸಮಾಜ ಕಡೆಗಣನೆ: ಆಚಾರ್ಯತ್ರಯರ ಜಯಂತಿಯಲ್ಲಿ ಸಮಾಜದ ಜಿಲ್ಲಾಧ್ಯಕ್ಷ ಜಿ.ಎಂ.ಹೆಗಡೆ ವಿಷಾದ
June 12, 2018ಗುಂಡ್ಲುಪೇಟೆ: ‘ಬ್ರಾಹ್ಮಣ ಸಮಾಜದಲ್ಲಿ ಆರ್ಥಿಕವಾಗಿ ಹಿಂದುಳಿದ ಕುಟುಂಬದವರಿದ್ದಾರೆ. ಆದರೆ, ಇದುವರೆಗೆ ರಾಜ್ಯವನ್ನು ಆಳಿದ ಸರ್ಕಾರಗಳಿಗೆ ಸಮಾಜದವರು ಕಣ್ಣಿಗೆ ಬೀಳದಿರುವುದು ಶೋಚನೀಯ ಸಂಗತಿಯಾಗಿದೆ’ ಎಂದು ಜಿಲ್ಲಾ ಬ್ರಾಹ್ಮಣ ಸಮಾಜ ಅಧ್ಯಕ್ಷ ಜಿ.ಎಂ.ಹೆಗಡೆ ವಿಷಾದಿಸಿದರು. ಪಟ್ಟಣದ ಶ್ರೀರಾಮ ಮಂದಿರದಲ್ಲಿ ತಾಲ್ಲೂಕು ಬ್ರಾಹ್ಮಣ ಸಭಾ ಹಾಗೂ ಕೌಂಡಿನ್ಯ ವಿಪ್ರ ಬಳಗದ ವತಿಯಿಂದ ನಡೆದ ಆಚಾರ್ಯತ್ರಯರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ರಾಜ್ಯ ಸಂಘಟನಾ ಕಾರ್ಯದರ್ಶಿ ಶ್ರೀಕಂಠ ಕುಮಾರ್ ಮಾತನಾಡಿ, ಮಹಾಸಭಾದ ಕಾರ್ಯಚಟುವಟಿಕೆ ತಿಳಿಸಿದರು. ಬ್ರಾಹ್ಮಣ…
ರಾಘವಾಪುರದಲ್ಲಿ ಹುಲಿ ಪ್ರತ್ಯಕ್ಷ: ಗ್ರಾಮಸ್ಥರಲ್ಲಿ ಆತಂಕ
June 11, 2018ಗುಂಡ್ಲುಪೇಟೆ: ತಾಲೂಕಿನ ರಾಘವಾಪುರ ಜಮೀನೊಂದ ರಲ್ಲಿ ಭಾನುವಾರ ಮುಂಜಾನೆ ಹುಲಿ ಕಾಣ ಸಿ ಕೊಂಡಿದ್ದು, ರೈತರು ಮತ್ತು ಗ್ರಾಮಸ್ಥರಲ್ಲಿ ಭಯದ ವಾತಾವರಣ ಸೃಷ್ಟಿ ಮಾಡಿದೆ. ಬೆಳಿಗ್ಗೆ ಗ್ರಾಮದ ಹೊರವಲಯದ ಕೆರೆಯ ಸಮೀಪದ ಜಮೀನಿನಲ್ಲಿನ ರೈತರಿಗೆ ಹುಲಿ ಕಾಣ ಸಿಕೊಂಡಿದೆ. ಹುಲಿ ಯನ್ನು ಪ್ರತ್ಯಕ್ಷವಾಗಿ ಕಂಡ ರೈತರೊಬ್ಬರು ಜೋರಾಗಿ ಕೂಗಿ ಕೊಂಡಿದ್ದಾರೆ. ಈ ವೇಳೆ ಹುಲಿಯು ಸಮೀಪದ ಬಾಳೆ ತೋಟದತ್ತ ತೆರಳಿದೆ ಎನ್ನಲಾಗಿದೆ. ಮಳೆ ಬಿದ್ದಿರುವುದರಿಂದ ಜಮೀನು ಗಳಲ್ಲಿ ಸಾಗಿದ ಮಾರ್ಗದಲ್ಲಿ ಹುಲಿ ಹೆಜ್ಜೆಯ ಗುರುತುಗಳು ಕಂಡು ಬಂದಿದೆ….
ಪರಿಸರ ಉಳಿವಿಗೆ ಗಿಡ, ಮರ ಬೆಳೆಸಿ
June 10, 2018ಗುಂಡ್ಲುಪೇಟೆ:- ‘ಪ್ರಸ್ತುತ ದಿನಗಳಲ್ಲಿ ವಾಯುಮಾಲಿನ್ಯ ಹೆಚ್ಚಾಗುತ್ತಿದ್ದು, ಪರಿಸರವನ್ನು ಉಳಿಸಬೇಕಾದರೆ ಹೆಚ್ಚು ಗಿಡ-ಮರಗಳನ್ನು ಬೆಳಸಬೇಕು’ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾಲೂಕು ಯೋಜನಾಧಿಕಾರಿ ಶಿವಪ್ರಸಾದ್ ಹೇಳಿದರು. ತಾಲೂಕಿನ ಶಿವಪುರ ಗ್ರಾಮದ ಜೆಎಸ್ಎಸ್ ಪ್ರೌಢಶಾಲೆಯಲ್ಲಿ ಶನಿವಾರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ನಡೆದ ಪರಿಸರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಆಧುನಿಕ ಜೀವನ ಶೈಲಿಯೊಂದಿಗೆ ಪರಿಸರ ಅವನತಿಯ ಅಂಚಿಗೆ ಬಂದಿದೆ. ಇಂದಿನ ಮಕ್ಕಳು ಪರಿಸರವನ್ನು ಉಳಿಸುವುದು ಅನಿವಾರ್ಯವಾಗಿದೆ. ಪರಿಸರ ದಿನಾಚರಣೆಯಲ್ಲಿ ಮಾತ್ರ ಗಿಡ ನೆಡುವುದನ್ನು ಬಿಟ್ಟು, ಸದಾ ಕಾಲ…
ಸಾವಿನಲ್ಲೂ ಕಾಂಗ್ರೆಸ್ ರಾಜಕೀಯ
June 8, 2018ಗುಂಡ್ಲುಪೇಟೆ: ಅಪಘಾತದಲ್ಲಿ ಮೃತನಾದ ಕಾಂಗ್ರೆಸ್ ಕಾರ್ಯ ಕರ್ತ ಶಿವಮೂರ್ತಿ ಸಾವಿಗೂ, ಬಿಜೆಪಿ ಮುಖಂಡರಿಗೂ ಯಾವುದೇ ಸಂಬಂಧ ವಿಲ್ಲ. ಕಾಂಗ್ರೆಸ್ ಮುಖಂಡರು ವಿನಾಕಾರಣ ಸಾವಿನಲ್ಲೂ ರಾಜಕೀಯ ಮಾಡುತ್ತಿದ್ದಾರೆ ಎಂದು ಬಿಜೆಪಿ ಮುಖಂಡ ಎನ್. ಮಲ್ಲೇಶ್ ಆಕ್ರೋಶ ವ್ಯಕ್ತಪಡಿಸಿದರು. ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಕರೆ ದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾಲೂಕಿನ ಹಿಂದುಳಿದ ವರ್ಗದ ಮತದಾರರು ಈ ಬಾರಿ ಬಿಜೆಪಿಯನ್ನು ಬೆಂಬ ಲಿಸಿದ್ದು, ಇವರನ್ನು ಭೀತಿಗೊಳಿಸುವ ಸಲು ವಾಗಿ ಕಾಂಗ್ರೆಸ್ ಮುಖಂಡರು ನಿರಾ ಧಾರ ಆರೋಪ ಮಾಡುವ ಮೂಲಕ ತಮ್ಮ…