ಗುಂಡ್ಲುಪೇಟೆ: ಪಟ್ಟಣದ ಹೊರ ವಲಯದಲ್ಲಿರುವ ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಂಗಣದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಿದ್ದರೂ ಸಹ ಕುಡಿಯಲು ನೀರು ದೊರ ಕುತ್ತಿಲ್ಲ ಹಾಗೂ ಶುಚಿತ್ವ ಕಾಪಾಡುತ್ತಿಲ್ಲ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಳೆದ ವರ್ಷ ಮಾರುಕಟ್ಟೆ ಪ್ರಾಂಗಣದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ತೆರೆಯಲಾಯಿತು. ಇಲ್ಲಿಗೆ ಬರುವ ಕಾರ್ಮಿ ಕರು, ರೈತರು, ವರ್ತಕರು ಹಾಗೂ ವಾಹನ ಗಳ ಚಾಲಕರು ಇಲ್ಲಿ ತಮ್ಮ ದಾಹ ತಣಿಸಿ ಕೊಳ್ಳಲು ಸಾಧ್ಯವಾಗಿತ್ತು. ಆದರೆ ಇದನ್ನು ಸರಿಯಾಗಿ ನಿರ್ವಹಣೆ ಮಾಡದ…
ಗುಂಡ್ಲುಪೇಟೆ ಸಾರಿಗೆ ಬಸ್ ನಿಲ್ದಾಣದಲ್ಲಿ ಕೊಳಚೆ ನೀರಿನ ಕಿರಿಕಿರಿ
July 4, 2018ಗುಂಡ್ಲುಪೇಟೆ: ಪಟ್ಟಣದ ವಿವಿಧ ಬಡಾವಣೆಗಳ ಒಳ ಚರಂಡಿಯ ಕೊಳಚೆ ನೀರು ಸಾರಿಗೆ ಬಸ್ ನಿಲ್ದಾಣ ದೊಳಗೆ ಹರಿದು ಬಂದು ಪ್ರಯಾಣಿಕರು ಕಿರಿಕಿರಿಯನ್ನು ಅನುಭವಿಸುವಂತಾಗಿದೆ. ಪಟ್ಟಣದಲ್ಲಿ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಕಾಮಗಾರಿ ನಡೆಸುವಾಗ ಚರಂಡಿ ಗಳನ್ನು ನಿರ್ಮಿಸದ ಪರಿಣಾಮ ಸ್ವಲ್ಪ ಮಳೆ ಬಿದ್ದರೂ ಒಳಚರಂಡಿಯ ನೀರೆಲ್ಲಾ ತಗ್ಗು ಪ್ರದೇಶದಲ್ಲಿರುವ ಸಾರಿಗೆ ಬಸ್ ನಿಲ್ದಾಣದೊಳಗೆ ಹರಿದುಬರುತ್ತಿದೆ. ಆದರೂ ಸಹ ಸಂಬಂಧಪಟ್ಟವರು ಯಾವುದೇ ಕ್ರಮ ಕೈಗೊಳ್ಳದ ಬಗ್ಗೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇತ್ತೀಚೆಗೆ ಶ್ವೇತಾದ್ರಿಗಿರಿ ಬಡಾವಣೆಯ ಚರಂಡಿ ನೀರು ಹೆದ್ದಾರಿ…
ಕನಕ ಭವನ ಕಾಮಗಾರಿ ಅಪೂರ್ಣ: ಗ್ರಾಮಸ್ಥರ ಪ್ರತಿಭಟನೆ
July 4, 2018ಗುಂಡ್ಲುಪೇಟೆ: ತಾಲೂಕಿನ ಮಲ್ಲಯ್ಯನ ಪುರ ಗ್ರಾಮದಲ್ಲಿ ಆರು ವರ್ಷಗಳಿಂದಲೂ ಪ್ರಗತಿಯಲ್ಲಿರುವ ಕನಕಭವನ ಕಾಮಗಾರಿಯನ್ನು ಪೂರ್ಣಗೊಳಿಸದೇ ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಆರೋಪಿಸಿದ ಕುರುಬರ ಸಂಘದ ಪದಾಧಿಕಾರಿಗಳು ಪಟ್ಟಣದ ಕೆಆರ್ಎಡಿಎಲ್ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. 2012ರಲ್ಲಿ ಮಲ್ಲಯ್ಯನಪುರ ಗ್ರಾಮವನ್ನು ಸುವರ್ಣ ಗ್ರಾಮವಾಗಿ ಅಭಿವೃದ್ಧಿಪಡಿಸಲಾಗಿತ್ತು. ಈ ಸಂದರ್ಭದಲ್ಲಿ 12ಲಕ್ಷ ರೂಪಾಯಿ ವೆಚ್ಚದಲ್ಲಿ ಕನಕ ಭವನ ನಿರ್ಮಾಣ ಕಾಮಗಾರಿ ಪ್ರಾರಂಭಿಸಿ ದ್ದರೂ ಸಹ ಅದು ಇನ್ನೂ ಪೂರ್ಣಗೊಂಡಿಲ್ಲ. ಜತೆಗೆ, ಈಗಾಗಲೇ, ಮಾಡಿರುವ ಕಾಮಗಾರಿಯೂ ಸಹ ಕಳಪೆಯಾಗಿದ್ದು, ಸ್ಥಳಕ್ಕೆ ಅಧಿಕಾರಿಗಳು…
ಕಾನೂನಿನ ಬಗ್ಗೆ ಅರಿವಿದ್ದರೆ ಒಳಿತು: ನ್ಯಾಯಾಧೀಶ ಚಂದ್ರಶೇಖರ ಪಿ.ದಿಡ್ಡಿ ಅಭಿಮತ
July 4, 2018ಗುಂಡ್ಲುಪೇಟೆ: ಪ್ರತಿನಿತ್ಯದ ವ್ಯವಹಾರಗಳಿಗೆ ಶ್ರೀಸಾಮಾ ನ್ಯನು ಕಾನೂನುಗಳ ಬಗ್ಗೆ ಕನಿಷ್ಟ ಅರಿವು ಹೊಂದುವ ಮೂಲಕ ಪ್ರತಿಯೊಬ್ಬರಿಗೂ ಎದುರಾಗುವ ತೊಂದರೆಗಳನ್ನು ತಪ್ಪಿಸಿ ಕೊಳ್ಳಬಹುದು ಎಂದು ಪಟ್ಟಣದ ಹಿರಿಯ ಸಿವಿಲ್ ಹಾಗೂ ಜೆಎಂಎಫ್ಸಿ ನ್ಯಾಯಾ ಧೀಶ ಚಂದ್ರಶೇಖರ ಪಿ.ದಿಡ್ಡಿ ಹೇಳಿದರು. ತಾಲೂಕಿನ ಬನ್ನಿತಾಳಪುರ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ತಾಲೂಕು ಕಾನೂನು ಸೇವಾ ಸಮಿತಿ ಹಾಗೂ ವಕೀಲರ ಸಂಘವು ಆಯೋಜಿಸಿದ್ದ ಮೂಲ ಕಾನೂನುಗಳ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಮಗು ಹುಟ್ಟಿದಾಗ ಜನನ ಹಾಗೂ ಕುಟುಂಬದ ಸದಸ್ಯರು…
ಗುಂಡ್ಲುಪೇಟೆ ಸಮಗ್ರ ಅಭಿವೃದ್ಧಿಗೆ ಯೋಜನೆ
July 2, 2018ಗುಂಡ್ಲುಪೇಟೆ: ಪಟ್ಟಣದ ಸಮಗ್ರ ಅಭಿವೃದ್ಧಿಗೆ ಯೋಜ ನೆಗಳನ್ನು ರೂಪಿಸಲಾಗುತ್ತಿದ್ದು, ಸ್ಪಲ್ಪ ಸಮಯ ಕೊಟ್ಟು ನೋಡಿ ಪಟ್ಟಣವನ್ನು ಮಾದರಿ ಯನ್ನಾಗಿಸುತ್ತೇನೆ ಎಂದು ಶಾಸಕ ಸಿ.ಎಸ್. ನಿರಂಜನಕುಮಾರ್ ಹೇಳಿದರು. ಪಟ್ಟಣದ ದ.ರಾ.ಬೇಂದ್ರೆ ನಗರದಲ್ಲಿ ನಿವಾಸಿಗಳಿಂದ ಏರ್ಪಡಿಸಲಾಗಿದ್ದ ಸನ್ಮಾನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತ ನಾಡಿ, ನಾನು ಸಹ ದ.ರಾ.ಬೇಂದ್ರೆ ಬಡಾ ವಣೆಯ ನಿವಾಸಿಯಾಗಿ ಬಡಾವಣೆಯ ಮೂಲ ಸೌಕರ್ಯದ ಕೊರತೆಯನ್ನು ಅರಿತಿದ್ದೇನೆ. ಆದ್ದರಿಂದ ಮೊದಲ ಹಂತವಾಗಿ ಬಡಾವಣೆಯ ಪ್ರಮುಖ ಎರಡು ರಸ್ತೆ ಗಳನ್ನು ಸುಮಾರು 40 ಲಕ್ಷ ರೂಪಾಯಿ ಗಳ ಅಂದಾಜು…
ಕಾಡುಹಂದಿ ದಾಳಿಗೆ ಸಾವಿರಾರು ರೂ. ಮೌಲ್ಯದ ಬೆಳೆ ನಾಶ
June 29, 2018ಗುಂಡ್ಲುಪೇಟೆ: ತಾಲೂಕಿನ ದೇವರಹಳ್ಳಿ ಗ್ರಾಮದ ಕಾಡಂಚಿನ ಜಮೀನುಗಳಲ್ಲಿ ಕಾಡುಹಂದಿ ಗಳ ದಾಳಿಯಿಂದ ರೈತರ ಸಾವಿರಾರು ರೂಪಾಯಿಗಳ ಮೌಲ್ಯದ ಬೆಳೆ ನಷ್ಟವಾಗಿದೆ. ಬಂಡೀಪುರ ಹುಲಿ ಯೋಜನೆಯ ವ್ಯಾಪ್ತಿ ಗೊಳಪಡುವ ಗೋಪಾಲಸ್ವಾಮಿ ಬೆಟ್ಟ ವಲಯದ ಕಾಡಂಚಿನ ದೇವರಹಳ್ಳಿ ಗ್ರಾಮದ ಸಿದ್ದಪ್ಪ, ಮಹದೇವಪ್ಪ, ರಾಜಪ್ಪ, ಕೆಂಪಣ್ಣ, ಗಿರೀಶ್ ಎಂಬುವರ ಜಮೀ ನುಗಳಿಗೆ ದಾಳಿ ನಡೆಸಿದ ಕಾಡುಹಂದಿ ಗಳು ಅಲ್ಲಿ ಬೆಳೆದಿದ್ದ ಜೋಳ ಹಾಗೂ ಸೂರ್ಯಕಾಂತಿ ಬೆಳೆಗಳನ್ನು ಸಂಪೂರ್ಣ ನಾಶಗೊಳಿಸಿವೆ. ಈ ಬಗ್ಗೆ ಸ್ಥಳ ಪರಿಶೀಲನೆ ನಡೆಸಿದ ಅರಣ್ಯಾಧಿಕಾರಿಗಳು ಹಂದಿಯಿಂದಾದ ಬೆಳೆ ನಷ್ಟಕ್ಕೆ…
ಹಕ್ಕಲಾಪುರದಲ್ಲಿ ಹುಲಿ ದಾಳಿಗೆ ಕರು ಬಲಿ
June 29, 2018ಗುಂಡ್ಲುಪೇಟೆ: ಕಾಡಿನಿಂದ ಆಹಾರ ಅರಸಿ ಬಂದ ಹುಲಿಯ ದಾಳಿಗೆ ಕರುವೊಂದು ಬಲಿ ಯಾಗಿರುವ ಘಟನೆ ತಾಲೂಕಿನ ಹಕ್ಕ ಲಾಪುರ ಗ್ರಾಮದಲ್ಲಿ ನಡೆದಿದೆ. ಬಂಡೀಪುರ ಹುಲಿ ಯೋಜನೆಯ ವ್ಯಾಪ್ತಿಯಲ್ಲಿ ಬರುವ ಓಂಕಾರ್ ಅರಣ್ಯ ವಲಯದಿಂದ ಹೊರಬಂದ ಹುಲಿ ಯೊಂದು ಹಕ್ಕಲಾಪುರ ಗ್ರಾಮದ ಸುರೇಶ್ ಎಂಬುವರ ಜಮೀನಿನಿಂದ ಗುರುವಾರ ಬೆಳಿಗ್ಗೆ ಕರುವನ್ನು ಸಮೀಪದ ಹಳ್ಳಕ್ಕೆ ಎಳೆದೊಯ್ದು ತಿಂದು ಹಾಕಿದೆ. ಹಕ್ಕಲಾಪುರದ ಸುರೇಶ್ ಜಮೀನಿನ ಮನೆಯ ಆವರಣದಲ್ಲಿ ಹಸುಗಳನ್ನು ಕಟ್ಟಿ ಹಾಕಲಾಗಿತ್ತು ಬೆಳಿಗ್ಗೆ ಸುಮಾರು 8.30ರ ವೇಳೆಯಲ್ಲಿ ಸುರೇಶ್ ಹಾಗೂ ಅವರ…
ಜನರ ಆರೋಗ್ಯ ಸಮಸ್ಯೆಗೆ ಸ್ಪಂದಿಸಲು ಶಾಸಕರ ತಾಕೀತು
June 28, 2018ಗುಂಡ್ಲುಪೇಟೆ: ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಹಾಗೂ ಗ್ರಾಮಾಂತರ ಪ್ರದೇಶಗಳ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸಾರ್ವಜನಿಕರಿಗೆ ಸಮರ್ಪಕ ಆರೋಗ್ಯ ಸೇವೆ ಕಡ್ಡಾಯ ವಾಗಿ ದೊರಕುವಂತಾಗಬೇಕು ಎಂದು ಶಾಸಕ ಸಿ.ಎಸ್.ನಿರಂಜನಕುಮಾರ್ ತಾಲೂಕು ಆರೋಗ್ಯಾಧಿಕಾರಿಗಳಿಗೆ ತಾಕೀತು ಮಾಡಿದರು. ಪಟ್ಟಣದ ತಾಲೂಕು ಕಚೇರಿಯಲ್ಲಿ ಆಯೋ ಜಿಸಿದ್ದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಆರೋಗ್ಯ ಇಲಾಖೆಯ ಕುಂದುಕೊರತೆಗಳ ಬಗ್ಗೆ ವಿವರ ಪಡೆದು ಅವರು ಮಾತನಾಡಿದರು. ತಾಲೂಕಿನ ಎಲ್ಲಾ ಆಸ್ಪತ್ರೆಗಳಲ್ಲಿಯೂ ಏನು ಸಮಸ್ಯೆ ಗಳಿವೆ ಎಂಬುದು ನನಗೆ ಗೊತ್ತಿದೆ. ಯಾವುದೇ ವೈದ್ಯರೂ ಸಕಾಲಕ್ಕೆ ಬಾರದೆ ರೋಗಿಗಳು…
ತೆರಕಣಾಂಬಿ ಆರೋಗ್ಯ ಕೇಂದ್ರಕ್ಕೆ ಶಾಸಕರ ಭೇಟಿ
June 26, 2018ಗುಂಡ್ಲುಪೇಟೆ: ತಾಲೂಕಿನ ತೆರಕಣಾಂಬಿ ಗ್ರಾಮದ ಪ್ರಾಥ ಮಿಕ ಆರೋಗ್ಯ ಕೇಂದ್ರಕ್ಕೆ ಸೋಮವಾರ ಶಾಸಕ ಸಿ.ಎಸ್.ನಿರಂಜನಕುಮಾರ್ ಭೇಟಿ ನೀಡಿ ಪರಿಶೀಲಿಸಿದರು. ಕೇಂದ್ರದಲ್ಲಿ ಕೇವಲ ಒಬ್ಬರೇ ವೈದ್ಯರು ಮಾತ್ರ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಮಹಿಳಾ ವೈದ್ಯರು, ತಾಂತ್ರಿಕ ಸಿಬ್ಬಂದಿ ಹಾಗೂ ಶುಶ್ರೂಷಕಿಯರ ಕೊರತೆಯಿಂದ ರೋಗಿಗಳು ಪರದಾಡುವಂತಾಗಿದೆ. ಇದ ರಿಂದ ರೋಗಿಗಳು ಖಾಸಗಿ ಲ್ಯಾಬ್ ಹಾಗೂ ಖಾಸಗಿ ಆಸ್ಪತ್ರೆಯ ಮೋರೆ ಹೋಗುವ ಅನಿವಾರ್ಯತೆ ಎದುರಾಗಿದೆ. ಹೋಬಳಿಯ ಸುತ್ತಲು ಕಾಡಂಚಿನ ಗ್ರಾಮಗಳಿದ್ದು, ವನ್ಯಜೀವಿ ದಾಳಿ ಅಥವಾ ಅಪಘಾತಗಳಿಂದ ಗಾಯಗೊಂಡವರಿಗೆ ಸಕಾಲದಲ್ಲಿ ಚಿಕಿತ್ಸೆ ದೊರಕುತ್ತಿಲ್ಲ. ಹಾಗಾಗಿ,…
ಕೆ.ಎಸ್.ಆರ್.ಟಿ.ಸಿ ಬಸ್ ಮೇಲೆ ಆನೆ ದಾಳಿ
June 26, 2018ಬಂಡೀಪುರ ಅರಣ್ಯದ ಮದ್ದೂರು ರೇಂಜ್ನಲ್ಲಿ ಘಟನೆ ಮರಿಯಾನೆ ರಕ್ಷಿಸಲು ದಾಳಿಗೆ ಮುಂದಾದ ತಾಯಿ ಆನೆ ಗುಂಡ್ಲುಪೇಟೆ: ಮರಿ ಯೊಂದಿಗೆ ಆನೆಗಳ ಹಿಂಡೊಂದು ರಸ್ತೆ ದಾಟುವ ವೇಳೆ ಬಂದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸೊಂದನ್ನು ತಾಯಿ ಆನೆ ಅಟ್ಟಾಡಿಸಿ ದಾಳಿ ನಡೆಸಲು ಮುಂದಾದ ಘಟನೆ ಮೈಸೂರು-ಸುಲ್ತಾನ್ ಬತೇರಿ ಮುಖ್ಯ ರಸ್ತೆಯ ಬಂಡೀಪುರ ಅರಣ್ಯದಲ್ಲಿ ನಡೆದಿದೆ. ಕೇರಳದ ಕ್ಯಾಲಿಕಟ್ನಿಂದ ಗುಂಡ್ಲು ಪೇಟೆ, ಮೈಸೂರು ಮಾರ್ಗವಾಗಿ ಚಿಕ್ಕ ಮಗಳೂರಿಗೆ ತೆರಳುತ್ತಿದ್ದ ಕರ್ನಾಟಕ ಸಾರಿಗೆ ಸಂಸ್ಥೆಯ ಬಸ್ ಭಾನುವಾರ ಸಂಜೆ…