ಗುಂಡ್ಲುಪೇಟೆ: ತಾಲೂಕು ಪರಿಶಿಷ್ಟ ಜಾತಿ ಪ್ರಗತಿ ಪತ್ತಿನ ಸಹಕಾರ ಸಂಘಕ್ಕೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಪಿ.ಪುಟ್ಟಸ್ವಾಮಿ ಮತ್ತು ಉಪಾಧ್ಯಕ್ಷರಾಗಿ ಅಣ್ಣಯ್ಯಸ್ವಾಮಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಮುಂದಿನ ಐದು ವರ್ಷಗಳ ಅವಧಿಗೆ ನಡೆದ ಚುನಾವಣೆಯಲ್ಲಿ ಖಾಲಿ ಇದ್ದ ಒಂದು ಮಹಿಳಾ ಮೀಸಲು ಸ್ಥಾನವನ್ನು ಹೊರತುಪಡಿಸಿ ಉಳಿದ ಸ್ಥಾನಗಳಿಗೆ ಪದಾಧಿಕಾರಿಗಳನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಪಡಗೂರು ಪಿ.ಪುಟ್ಟಸ್ವಾಮಿ, ಉಪಾ ಧ್ಯಕ್ಷರಾಗಿ ಪಟ್ಟಣದ ಅಣ್ಣಯ್ಯಸ್ವಾಮಿ ಮತ್ತು ನಿರ್ದೇಶಕರಾಗಿ ಟಿ.ಆಂಜನೇಯ, ಎಂ.ಸುರೇಶ್, ಬಿ.ಕೆ.ಬೊಮ್ಮಯ್ಯ, ಎ.ಸಿದ್ದರಾಜು, ಕೆ.ಸಿ.ಸಿದ್ದರಾಜು, ಮಲಿದಾಸಯ್ಯ, ಎ.ಸೋಮಶೇಖರಮೂರ್ತಿ, ವಿಷಕಂಠಮೂರ್ತಿ, ಎಂ.ಯಶವಂತ್, ಆರ್.ಶ್ರೀನಿವಾಸ್,…
ಪೊಲೀಸ್ ಕರ್ತವ್ಯಕ್ಕೆ ಅಡ್ಡಿ: ಪತ್ರಕರ್ತನ ಬಂಧನ
September 1, 2018ಗುಂಡ್ಲುಪೇಟೆ: ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಹಿನ್ನೆಲೆಯಲ್ಲಿ ಪತ್ರಕರ್ತರಿಬ್ಬರ ಮೇಲೆ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾ ಗಿದ್ದು, ಓರ್ವನನ್ನು ಬಂಧಿಸಲಾಗಿದೆ. ಪಟ್ಟಣದ ಖಾಸಗಿ ಸುದ್ದಿ ವಾಹಿನಿಯ ವರದಿಗಾರರಾದ ಮಹಾದೇವಪ್ರಸಾದ್ ಅಲಿಯಾಸ್ ಸತೀಶ್ ಮತ್ತು ವೀರೇಂದ್ರ ಎಂಬುವರ ಮೇಲೆ ಪೆÇಲೀಸರ ಕರ್ತ ವ್ಯಕ್ಕೆ ಅಡ್ಡಿ ಪಡಿಸಿದ ಹಿನ್ನೆಲೆಯಲ್ಲಿ ದೂರು ದಾಖಲಾಗಿದೆ. ತಾಲೂಕಿನ ಬಂಡೀಪುರ ಪೊಲೀಸ್ ಉಪ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪೆÇಲೀಸ್ ಕಾನ್ಸ್ಟೇಬಲ್ ಕೇಶವನಾಯಕ್ ಅವರ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಹಿನ್ನೆಲೆಯಲ್ಲಿ ಕೇಶವನಾಯಕ್ ನೀಡಿದ ದೂರಿನನ್ವಯ ಪಟ್ಟಣ ಠಾಣೆ…
ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಬದ್ಧ: ಶಾಸಕ ನಿರಂಜನಕುಮಾರ್
September 1, 2018ಗುಂಡ್ಲುಪೇಟೆ: ಕ್ಷೇತ್ರದ ಅಭಿವೃದ್ಧಿ ಬಗ್ಗೆ ನನ್ನಲ್ಲಿ ಅನೇಕ ಕಲ್ಪನೆಗಳಿದ್ದು, ನೂತನ ಸರ್ಕಾರ ಅಧಿ ಕಾರಕ್ಕೆ ಬಂದ ನಂತರ ಮಳೆಯಿಂದ ಹಾನಿ ಗೊಳಗಾದ ಕೊಡಗು ಜಿಲ್ಲೆಯ ಪರಿಸ್ಥಿತಿ ಸುಧಾರಿಸಲು ಗಮನಹರಿಸಿದ್ದರಿಂದ ಇನ್ನೂ ಶಾಸಕರಿಗೆ ಅನುದಾನ ಬಿಡುಗಡೆ ಮಾಡಿಲ್ಲ. ಅದು ಬಂದ ನಂತರ ಅಭಿವೃದ್ಧಿ ಪರ್ವ ಶುರುವಾಗಲಿದೆ ಎಂದು ಶಾಸಕ ಸಿ.ಎಸ್. ನಿರಂಜನಕುಮಾರ್ ಹೇಳಿದರು. ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರೆ ದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆ.24ರಂದು ಕಾಂಗ್ರೆಸ್ ಮುಖಂ ಡರು ಶಾಸಕರು ಆಯ್ಕೆಯಾಗಿ 100 ದಿನ ಕಳೆದರೂ ಯಾವುದೇ…
ನೇಣು ಬಿಗಿದ ಸ್ಥಿತಿಯಲ್ಲಿ ಚಾಲಕನ ಶವ ಪತ್ತೆ
August 31, 2018ಕುಟುಂಬಸ್ಥರಿಂದ ಕೊಲೆ ಶಂಕೆ; ದೂರು ದಾಖಲು ಗುಂಡ್ಲುಪೇಟೆ: ಇಲ್ಲಿನ ಪುರಸಭೆಯ ವಾಣಿಜ್ಯ ಸಂಕೀರ್ಣದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಲಾರಿ ಚಾಲಕನ ಶವ ಪತ್ತೆಯಾಗಿದೆ. ಪುರಸಭೆ ಕಚೇರಿ ಸಮೀಪವಿರುವ ವಾಣಿಜ್ಯ ಸಂಕೀರ್ಣದ ಮೆಟ್ಟಿಲುಗಳ ಬಳಿ ನೇಣು ಬಿಗಿದ ಸ್ಥಿತಿಯಲ್ಲಿ ತಾಲೂಕಿನ ಮಲ್ಲಯ್ಯನಪುರ ಗ್ರಾಮದ ಮಹದೇವ(40) ಎಂಬಾತನ ಶವ ಕಂಡು ಬಂದಿದೆ. ವಿಷಯ ತಿಳಿದ ಪೆÇಲೀಸರು ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಪಟ್ಟ ಣದ ಸಾರ್ವಜನಿಕ ಆಸ್ಪತ್ರೆಗೆ ಸಾಗಿಸಿದ್ದಾರೆ. ಈ ಬಗ್ಗೆ ಮೃತನ ಪತ್ನಿ ಸುವರ್ಣಮ್ಮ ತನ್ನ ಗಂಡ ಆತ್ಮಹತ್ಯೆ ಮಾಡಿಕೊಂಡಿಲ್ಲ….
ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಹೇಳಿಕೆ ಹಾಕಿದರೆ ಪ್ರಕರಣ ದಾಖಲು: ಗುಂಡ್ಲುಪೇಟೆ ಪಟ್ಟಣ ಪೊಲೀಸರಿಂದ ಎಚ್ಚರಿಕೆ
August 28, 2018ಗುಂಡ್ಲುಪೇಟೆ: ಸಾಮಾಜಿಕ ಜಾಲತಾಣಗಳಲ್ಲಿ ರಾಜಕೀಯ ವ್ಯಕ್ತಿಗಳ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿ ಹಾಗೂ ಪ್ರಚೋದನ ಕಾರಿ ಪೋಸ್ಟ್ ಮಾಡುವವರ ವಿರುದ್ಧ ಪ್ರಕರಣ ದಾಖಲಿಸಿ ಅವರನ್ನು ಬಂಧಿಸಲಾ ಗುವುದು ಎಂದು ಪಟ್ಟಣದ ಪೊಲೀಸರು ಪ್ರಕಟಣೆಯಲ್ಲಿ ಎಚ್ಚರಿಕೆ ನೀಡಿದ್ದಾರೆ. ಇತ್ತೀಚಿಗೆ ಕಾಂಗ್ರೆಸ್ ಮುಖಂಡ ಗಣೇಶ್ ಪ್ರಸಾದ್ ಹಾಗೂ ಅವರ ಕುಟುಂಬದ ಸದಸ್ಯರ ವಿರುದ್ದ ಮಾನಹಾನಿಕರ ಪೋಸ್ಟ್ ಹಾಕಿರುವ ಬಗ್ಗೆ ಆ. 26ರಂದು ಕಾಂಗ್ರೆಸ್ ಕಾರ್ಯಕರ್ತರು ದೂರು ನೀಡಿದ್ದರು. ಈ ಬಗ್ಗೆ ಪ್ರಕರಣ ದಾಖಲಾಗಿದೆ. ಬಳಿಕ ಪ್ರಧಾನಿ ನರೇಂದ್ರಮೋದಿ, ಮಾಜಿ ಮುಖ್ಯಮಂತ್ರಿ…
ಕೇರಳದ ಆಸ್ಪತ್ರೆ ತ್ಯಾಜ್ಯಕ್ಕೆ ತೊಟ್ಟಿಯಾದ ಗುಂಡ್ಲುಪೇಟೆ ಲಾರಿ ವಶ: ಒಬ್ಬನ ಬಂಧನ
August 27, 2018ಗುಂಡ್ಲುಪೇಟೆ: ಸಾರ್ವಜನಿಕರ ಆರೋಗ್ಯದ ಮೇಲೆ ಗಂಭೀರ ವಾದ ಪರಿಣಾಮವನ್ನು ಬೀರುವ ಮತ್ತು ಸಾಂಕ್ರಾಮಿಕ ರೋಗಗಳಿಗೆ ಕಾರಣವಾಗುವ ಕೇರಳದ ಆಸ್ಪತ್ರೆಯ ತ್ಯಾಜ್ಯಗಳನ್ನು ಪಟ್ಟ ಣದ ಕಲ್ಯಾಣಿಕೊಳದ ಸಮೀಪದ ದೇವಾಲಯದ ಮುಂಭಾಗದಲ್ಲಿರುವ ಜಮೀನಿನಲ್ಲಿ ಸುರಿಯುತ್ತಿದ್ದ ದಂಧೆಯನ್ನು ಪತ್ತೆ ಹಚ್ಚಿದ ಕರವೇ ಕಾರ್ಯಕರ್ತರು ಲಾರಿ ಯೊಂದನ್ನು ಪೆÇಲೀಸರ ವಶಕ್ಕೆ ನೀಡಿ ರುವ ಘಟನೆ ನಡೆದಿದೆ. ಆ.26ರ ಮುಂಜಾನೆ 6 ಗಂಟೆಗೆ ಕೇರಳ ಗಡಿಯಲ್ಲಿರುವ ಮೂಲೆಹೊಳೆ ಅರಣ್ಯ ಇಲಾಖೆಯ ಚೆಕ್ಪೆÇೀಸ್ಟ್ ಮೂಲಕ ವೇಗ ವಾಗಿ ಸಾಗಿ ಬಂದ ಲಾರಿ ದುರ್ವಾಸನೆ ಬೀರುತ್ತಿದ್ದುದನ್ನು ಗಮನಿಸಿದ…
ಲಾರಿ ಟೈರ್ ಸಿಡಿದು ಮಹಿಳೆ ಸಾವು
August 26, 2018ಗುಂಡ್ಲುಪೇಟೆ: ವೇಗವಾಗಿ ಚಲಿಸುತ್ತಿದ್ದ ಲಾರಿಯ ಹಿಂಬದಿಯ ಟೈರ್ ಸಿಡಿದ ಪರಿಣಾಮ ಲಾರಿ ಸಮೀಪ ಬೈಕಿನಲ್ಲಿ ಹಿಂಬದಿ ಕುಳಿತು ಪ್ರಯಾಣ ಮಾಡುತ್ತಿದ್ದ ಮಹಿಳೆಯೊಬ್ಬರು ಸಾವನ್ನಪ್ಪಿರುವ ಘಟನೆ ಪಟ್ಟಣದ ಹೊರವಲಯದಲ್ಲಿ ಶನಿವಾರ ನಡೆದಿದೆ. ಪಟ್ಟಣದ ನಿವಾಸಿ ಮಂಜುಳಾ(35) ಸಾವನ್ನಪ್ಪಿದವರು. ಘಟನೆಯ ವಿವರ: ಪಟ್ಟಣದ ನಿವಾಸಿಗಳಾದ ರೇಷ್ಮಾ ಮತ್ತು ಮಂಜುಳಾ ಅವರು ಬೈಕ್ನಲ್ಲಿ ಪಟ್ಟಣಕ್ಕೆ ಬರುತ್ತಿದ್ದ ವೇಳೆ, ಅವರ ಮುಂದೆ ಹೋಗುತ್ತಿದ್ದ ಸರಕು ಸಾಗಣೆ ಲಾರಿಯ ಟೈರ್ ಸಿಡಿದಿದೆ. ಇದರ ಪರಿಣಾಮ ಟೈರ್ನ ಚೂರು ಬೈಕ್ನ ಹಿಂಬದಿಯಲ್ಲಿ ಕುಳಿತಿದ್ದ ಮಂಜುಳ ಅವರಿಗೆ…
ಅಭಿವೃದ್ಧಿ ಮರೆತು ವರ್ಗಾವಣೆಯಲ್ಲಿ ನಿರತರಾಗಿರುವ ಶಾಸಕ
August 25, 2018ಗುಂಡ್ಲುಪೇಟೆ: ಕೇವಲ ಸನ್ಮಾನ ಸ್ವೀಕರಿಸುವುದು ಮತ್ತು ವರ್ಗಾವಣೆ ದಂಧೆಯನ್ನು ನಡೆಸುವುದರ ಲ್ಲಿಯೇ ಶಾಸಕ ಸಿ.ಎಸ್.ನಿರಂಜನಕುಮಾರ್ ಕಾಲ ಕಳೆಯುತ್ತಿದ್ದಾರೆ ಎಂದು ಯುವ ಕಾಂಗ್ರೆಸ್ ಮುಖಂಡ ಎಚ್.ಎಂ.ಗಣೇಶ್ ಪ್ರಸಾದ್ ಹೇಳಿದರು. ಪಟ್ಟಣದ ಖಾಸಗಿ ಹೋಟೆಲ್ನಲ್ಲಿ ಸುದ್ದಿ ಗೋಷ್ಠಿ ನಡೆಸಿದ ಕಾಂಗ್ರೆಸ್ ಮುಖಂಡರು ನೂತನ ಶಾಸಕ ಸಿ.ಎಸ್.ನಿರಂಜನಕುಮಾರ್ ನಿಷ್ಟ್ರೀಯತೆ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು. ಕ್ಷೇತ್ರದ ಶಾಸಕರಾಗಿ ಆಯ್ಕೆಯಾದ ಸಿ.ಎಸ್.ನಿರಂಜನಕುಮಾರ್ 100 ದಿನಗಳಾ ದರೂ ಸನ್ಮಾನ ಸ್ವೀಕರಿಸುತ್ತಲೇ ಕಾಲ ಕಳೆಯು ತ್ತಿದ್ದಾರೆ. ಕೇವಲ ಅಧಿಕಾರಿಗಳ ವರ್ಗಾ ವಣೆ ಬಿಟ್ಟರೆ ಬೇರಾವುದೇ ಕಾರ್ಯಗಳೂ ಆಗುತ್ತಿಲ್ಲ…
ಕಮಲದ ಹೂವು ಕೀಳಲು ಹೋದ ವ್ಯಕ್ತಿ ಸಾವು
August 23, 2018ಗುಂಡ್ಲುಪೇಟೆ,: ವರಮಹಾಲಕ್ಷ್ಮಿ ಹಬ್ಬಕ್ಕಾಗಿ ಕಮಲದ ಹೂವುಗಳನ್ನು ಕೀಳಲು ಕೆರೆಗೆ ಇಳಿದಿದ್ದ ವ್ಯಕ್ತಿಯೊಬ್ಬ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಸಾವಿಗೀಡಾಗಿರುವ ಘಟನೆ ತಾಲೂಕಿನ ಮದ್ದೂರು ಕಾಲೋನಿ ಬಳಿ ಇರುವ ಕೆರೆಯಲ್ಲಿ ಬುಧವಾರ ನಡೆದಿದೆ. ತಾಲೂಕಿನ ಹಸಗೂಲಿ ಗ್ರಾಮದ ನಾಗಶೆಟ್ಟಿ (36) ಎಂಬಾತನೇ ಸಾವಿಗೀ ಡಾದ ವ್ಯಕ್ತಿ. ಈತ ತಮ್ಮ ಮನೆಯಲ್ಲಿ ವರಮಹಾಲಕ್ಮ್ಷಿ ಪೂಜೆಯ ನಿಮಿತ್ತ ವಾಗಿ ಮದ್ದೂರು ಕಾಲೋನಿ ಬಳಿ ಇರುವ ಕೆರೆಯಲ್ಲಿ ಅರಳಿದ್ದ ಕಮಲದ ಹೂವು ಗಳನ್ನು ಕೀಳಲು ಹೋಗಿದ್ದಾಗ ಕೆಸರಿ ನಲ್ಲಿ ಕಾಲು ಜಾರಿ ಬಿದ್ದು ನೀರಿನಲ್ಲಿ…
ಜವಹರ್ ಎಜುಕೇಷನ್ ಟ್ರಸ್ಟ್ನಿಂದ ಸ್ವಾತಂತ್ರೋತ್ಸವ
August 18, 2018ಗುಂಡ್ಲುಪೇಟೆ: ಪಟ್ಟಣದಲ್ಲಿರುವ ಜವಹರ್ ಎಜುಕೇಷನ್ ಟ್ರಸ್ಟ್ ವತಿಯಿಂದ 72ನೇ ಸ್ವಾತಂತ್ರ ದಿನಾಚರಣೆಯನ್ನು ಸಡಗರದಿಂದ ಆಚರಿಸಲಾಯಿತು. ಸಂಸ್ಥೆಯ ಅಧ್ಯಕ್ಷ ಪಟೇಲ್ ಶಾಂತಪ್ಪ ಧ್ವಜಾರೋಹಣ ಮಾಡುವುದರೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ತ್ಯಾಗ ಬಲಿದಾನಗಳ ಮೂಲಕ ಹಿರಿ ಯರು ತಂದು ಕೊಟ್ಟ ಸ್ವಾತಂ್ರತ್ಯವನ್ನು ನೆನಪಿಸಿಕೊಳ್ಳಬೇಕು. ದೇಶದ ಏಳಿಗೆಗಾಗಿ ಸದಾ ಸಿದ್ಧರಾಗಿರುವಂತೆ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಸಂಸ್ಥೆಯ ಗೌರವ ಕಾರ್ಯದರ್ಶಿ ಎಂ.ಪಿ.ಸುನಿಲ್ ಮಾತ ನಾಡಿ, ದೇಶಕ್ಕಾಗಿ ಹೋರಾಟ ನಡೆಸಿದ ಮಹನೀಯರನ್ನು ನೆನೆದುಕೊಂಡು ದೇಶದ ಅಭಿವೃದ್ಧಿ ಮತ್ತು ದೇಶದ…