Tag: Hassan

ರಾಜ್ಯೋತ್ಸವಕ್ಕೆ ಗೈರಾದರೆ ಶಿಸ್ತು ಕ್ರಮ
ಹಾಸನ

ರಾಜ್ಯೋತ್ಸವಕ್ಕೆ ಗೈರಾದರೆ ಶಿಸ್ತು ಕ್ರಮ

October 28, 2018

ಹೊಳೆನರಸೀಪುರ: ಈ ಬಾರಿಯ 53ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಗೈರಾಗುವ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸುವಂತೆ ಜಿಲ್ಲಾಧಿಕಾರಿ ಹಾಗೂ ಉಪವಿಭಾಗಾಧಿಕಾರಿ ಅಧ್ಯಕ್ಷತೆ ಯಲ್ಲಿ ನಡೆದ ತಾಲೂಕು ಮಟ್ಟದ ಅಧಿ ಕಾರಿಗಳ ಸಭೆಯಲ್ಲಿ ತೀರ್ಮಾನಿಸ ಲಾಗಿದೆ ಎಂದು ತಹಶೀಲ್ದಾರ್ ವೈ. ಎಂ.ರೇಣುಕುಮಾರ್ ಹೇಳಿದರು. ತಾಲೂಕು ರಾಷ್ಟ್ರೀಯ ಹಬ್ಬಗಳ ಆಚ ರಣಾ ಸಮಿತಿ ತಾಲೂಕು ಕಚೇರಿ ಸಭಾಂಗಣ ದಲ್ಲಿ 53ನೇ ಕನ್ನಡ ರಾಜ್ಯೋತ್ಸವ ಪೂರ್ವ ಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿಗಳ ಸೂಚನೆಯಂತೆ ನ.1ರಂದು…

ಕಿತ್ತೂರು ರಾಣಿ ಚೆನ್ನಮ್ಮ ಸ್ವಾಭಿಮಾನದ ಸಂಕೇತ
ಹಾಸನ

ಕಿತ್ತೂರು ರಾಣಿ ಚೆನ್ನಮ್ಮ ಸ್ವಾಭಿಮಾನದ ಸಂಕೇತ

October 24, 2018

ಹಾಸನ: ಕಿತ್ತೂರು ರಾಣಿ ಚೆನ್ನಮ್ಮ ಸ್ತ್ರೀ ಶಕ್ತಿ ಮತ್ತು ಸ್ವಾಭಿಮಾನದ ಸಂಕೇತ ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಶ್ವೇತಾ ದೇವರಾಜ್ ಅಭಿಪ್ರಾಯಪಟ್ಟರು. ನಗರದ ಡಿಸಿ ಕಚೇರಿ ಸಭಾಂಗಣ ದಲ್ಲಿಂದು ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ನಡೆದ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ ಕಾರ್ಯ ಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ರಾಣಿ ಚೆನ್ನಮ್ಮ ತಮ್ಮ ಸಾಮ್ರಾಜ್ಯದ ಐಕ್ಯತೆಯನ್ನು ಕಾಯ್ದುಕೊಂಡು ಬ್ರಿಟಿಷರ ವಿರುದ್ಧ ಹೋರಾಡುವ ಮೂಲಕ ಸ್ವಾತಂತ್ರ್ಯ ಚಳವಳಿಗೆ ತನ್ನದೇ ಆದ ಕೊಡುಗೆಯನ್ನು ನೀಡಿದ್ದಾರೆ. ಅಲ್ಲದೆ…

ಸಮಾಜದಲ್ಲಿ ಪೊಲೀಸರ ಅವಶ್ಯಕತೆ ಹೆಚ್ಚು
ಹಾಸನ

ಸಮಾಜದಲ್ಲಿ ಪೊಲೀಸರ ಅವಶ್ಯಕತೆ ಹೆಚ್ಚು

October 22, 2018

ಹಾಸನ:  ನಾಗರಿಕ ಸಮಾಜದಲ್ಲಿ ಪೊಲೀಸರ ಅವಶ್ಯಕತೆ ಹೆಚ್ಚಾಗಿದ್ದು, ಕರ್ತ ವ್ಯದ ಸಮಯದಲ್ಲಿ ತಮ್ಮ ಪ್ರಾಣ ಲೆಕ್ಕಿಸದೇ ಸೇವೆ ಸಲ್ಲಿಸುತ್ತಿದ್ದಾರೆ ಎಂದು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಕೆ.ಎಸ್.ತಿಮ್ಮ ಣ್ಣಾಚಾರ್ ಅಭಿಪ್ರಾಯಪಟ್ಟರು. ನಗರದ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಇಂದು ಹಮ್ಮಿಕೊಂಡಿದ್ದ ಪೊಲೀಸ್ ಹುತಾತ್ಮರ ದಿನಾಚರಣೆ ಕಾರ್ಯ ಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತ ನಾಡಿದರು. ಎಲ್ಲಿ ಏನೇ ಘಟನೆ ನಡೆದರೂ ಪೊಲೀಸರ ಸೇವೆ ಅವಶ್ಯಕವಾಗಿದೆ. ಪ್ರತಿ ದಿನ ಒತ್ತಡದಲ್ಲಿ ಇರುವ ಪೊಲೀಸರು ಆರೋಗ್ಯದಲ್ಲಿ ಏರುಪೇರಾದರೂ ಕರ್ತವ್ಯಕ್ಕೆ…

ಆಡಳಿತ ವೈದ್ಯಾಧಿಕಾರಿ ನಿರ್ಲಕ್ಷ್ಯಕ್ಕೆ ಆಕ್ರೋಶ
ಹಾಸನ

ಆಡಳಿತ ವೈದ್ಯಾಧಿಕಾರಿ ನಿರ್ಲಕ್ಷ್ಯಕ್ಕೆ ಆಕ್ರೋಶ

October 22, 2018

ಅರಸೀಕೆರೆ: ತಾಲೂಕಿನಲ್ಲಿ ಹೆಚ್1ಎನ್1 2 ಪ್ರಕರಣಗಳು ಪತ್ತೆಯಾಗಿದ್ದು, ತಾಲೂಕು ಆಡಳಿತ ವೈದ್ಯಾಧಿಕಾರಿಗಳು ರೋಗದ ಬಗ್ಗೆ ಜಾಗೃತಿ ಮೂಡಿಸದೇ ನಿರ್ಲಕ್ಷ್ಯ ವಹಿಸಿರುವುದಕ್ಕೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಇತ್ತೀಚೆಗೆ ಡಿಸಿ ರೋಹಿಣಿ ಸಿಂಧೂರಿ ಹಾಸನದಲ್ಲಿ ಜಿಲ್ಲಾ ಮಟ್ಟದ ವಿವಿಧ ಇಲಾಖೆ ಅಧಿಕಾರಿಗಳ ಸಭೆ ನಡೆಸಿ ಜಿಲ್ಲೆಯಲ್ಲಿ ಹೆಚ್1ಎನ್1 ರೋಗದ ಬಗ್ಗೆ ಜಾಗೃತಿ ಮೂಡಿಸಲು ತಾಲೂಕು ಮಟ್ಟದ ಅಂತರ ಇಲಾಖೆಗಳ ಸಮನ್ವಯ ಸಮಿತಿ ಸಭೆ ನಡೆಸಲು ಸೂಚಿಸಿದ್ದರು. ಜಿಲ್ಲಾಧಿಕಾರಿ ಅದೇಶದ ಮೇರೆಗೆ ಆ.16ರಂದು ನಗರದ ಸರ್ಕಾರಿ ಜಯಚಾಮರಾಜೇಂದ್ರ ಆಸ್ಪತ್ರೆಯಲ್ಲಿರುವ…

ಉತ್ತಮ ಇಳುವರಿ ನಿರೀಕ್ಷೆಯಲ್ಲಿ ಅನ್ನದಾತ
ಹಾಸನ

ಉತ್ತಮ ಇಳುವರಿ ನಿರೀಕ್ಷೆಯಲ್ಲಿ ಅನ್ನದಾತ

October 21, 2018

ರಾಮನಾಥಪುರ: ಕೃಷ್ಣರಾಜ ಅಣೆಕಟ್ಟೆಯ ಕಟ್ಟೇಪುರ ನಾಲೆ ಹಂತ, ಹಾರಂಗಿ, ಹೇಮಾವತಿ ನಾಲಾ ಹಂತದ ಬಯಲಲ್ಲಿ ಈ ಬಾರಿ ಭತ್ತದ ಬೆಳೆ ನಳ ನಳಿಸುತ್ತಿದ್ದು, ಅನ್ನದಾತರು ಉತ್ತಮ ಇಳುವರಿಯ ನಿರೀಕ್ಷೆಯಲ್ಲಿದ್ದಾರೆ. ಕಳೆದ ಮೂರು ವರ್ಷದಿಂದ ಮಳೆ ಇಲ್ಲದೇ ಬರದಿಂದ ಪರಿತಪಿಸುತ್ತಿದ್ದ ನಾಲಾ ವ್ಯಾಪ್ತಿಯ ಪ್ರದೇಶಗಳಲ್ಲಿ ಭತ್ತ ಬೆಳೆಯದೆ ಗದ್ದೆ ಪಾಳು ಬಿದ್ದಿತ್ತು. ಸದ್ಯ ಈ ಬಾರಿ ವರುಣನ ಕೃಪೆಯಿಂದ ಜಲಾಶಯಗಳು ಭರ್ತಿಯಾಗಿ ಕೆರೆ-ಕಟ್ಟೆಗಳು ಮತ್ತು ನಾಲೆ ಗಳಲ್ಲಿ ನೀರು ಸಮೃದ್ಧವಾಗಿ ಹರಿಯು ತ್ತಿದ್ದು, ಮೂರು ವರ್ಷಗಳಿಂದ ಬರಡಾಗಿದ್ದ ವಿಸ್ತಾರವಾದ…

ಚನ್ನಕೇಶವಸ್ವಾಮಿ ದಾಸೋಹ ಭವನ ಪುನಾರಂಭ
ಹಾಸನ

ಚನ್ನಕೇಶವಸ್ವಾಮಿ ದಾಸೋಹ ಭವನ ಪುನಾರಂಭ

October 21, 2018

ಬೇಲೂರು:ತಾತ್ಕಾಲಿಕವಾಗಿ ಸ್ಥಗಿತಗೊಂಡಿದ್ದ ಶ್ರೀಚನ್ನಕೇಶವಸ್ವಾಮಿ ದೇಗುಲದ ದಾಸೋಹ ಭವನ 80 ಲಕ್ಷ ರೂ. ವೆಚ್ಚದಲ್ಲಿ ಜೀರ್ಣೋದ್ಧಾರಗೊಂಡಿದ್ದು, ಭಕ್ತರ ಸೇವೆಗೆ ಮುಕ್ತವಾಗಿದೆ. ಪಟ್ಟಣದ ಪ್ರಸಿದ್ಧ ಶ್ರೀಚನ್ನಕೇಶವಸ್ವಾಮಿ ದೇಗುಲದ ದಾಸೋಹ ಭವನವನ್ನು ಸುಮಾರು 80 ಲಕ್ಷ ರೂ. ವೆಚ್ಚದಲ್ಲಿ ಜೀರ್ಣೋದ್ಧಾರಗೊಳಿಸಿದ್ದು, ದಾಸೋಹದ ಕೊಠಡಿ ಸೇರಿದಂತೆ ಇನ್ನಿತರ ಹಲವು ಅಭಿ ವೃದ್ಧಿ ಕೆಲಸಗಳನ್ನು ಮಾಡಿದ್ದು, ವಿಜಯ ದಶಮಿಯಂದು ಶಾಸಕ ಕೆ.ಎಸ್.ಲಿಂಗೇಶ್ ವಿದ್ಯುಕ್ತವಾಗಿ ಚಾಲನೆ ನೀಡಿ ಮಾತನಾಡಿ ದರು. 2008ರಿಂದ ಪ್ರತಿನಿತ್ಯ ದಾಸೋಹ ನಡೆಯುತ್ತಿದೆ. ಆದರೆ ಅಗತ್ಯ ಸ್ಥಳಾವಕಾಶ ಇರದ ಕಾರಣ ದಾಸೋಹಕ್ಕೆ ಹೆಚ್ಚು…

ಬಹುಮಹಡಿ ಕಟ್ಟಡಕ್ಕೆ ಬಿತ್ತು ಬೀಗ ಮುದ್ರೆ
ಹಾಸನ

ಬಹುಮಹಡಿ ಕಟ್ಟಡಕ್ಕೆ ಬಿತ್ತು ಬೀಗ ಮುದ್ರೆ

October 18, 2018

ಹಾಸನ: ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ನಗರದ ಕೆ.ಆರ್.ಪುರಂ ಬಳಿ ಕುವೆಂಪು ನಗರದಲ್ಲಿ ಸರ್ಕಾರಿ ಜಾಗ ಒತ್ತುವರಿ ಮಾಡಿಕೊಂಡು ನಿರ್ಮಿಸಲಾಗಿದ್ದ ಬಹುಮಹಡಿ ಕಟ್ಟಡಕ್ಕೆ ಕೊನೆಗೆ ಬೀಗ ಮುದ್ರೆ ಬಿದ್ದಿದ್ದು, ಕಟ್ಟಡ ಮಾಲೀ ಕರಿಗೆ ಎಚ್ಚರಿಕೆ ಗಂಟೆ ಶುರುವಾಗಿದೆ. ಇಂದು ಮುಂಬೈ ಉದ್ದೆಮಿ ಬೇಲೂರೇ ಗೌಡ ಅವರ ಐಶ್ವರ್ಯ ಹೊಟೇಲ್ ಕಟ್ಟಡ ಒತ್ತುವರಿ ತೆರವು ಹಿನ್ನೆಲೆ ನಗರಸಭೆ ಆಯುಕ್ತ ಪರಮೇಶ್, ಸಿಬ್ಬಂದಿಯೊಂದಿಗೆ ತೆರಳಿ ಕಟ್ಟಡದ ತೆರವಾಗಬೇಕಾದ ಜಾಗ ಗುರುತು ಮಾಡಿದರು. ಹೊಟೇಲ್ ಕಟ್ಟಡ ನಿರ್ಮಾಣ ವೇಳೆ ನಗರಸಭೆಯಿಂದ 1,700 ಚದರ…

ಪಂಚಲೋಹದ ಜಿನಮೂರ್ತಿಗಳ ಕಳವು
ಹಾಸನ

ಪಂಚಲೋಹದ ಜಿನಮೂರ್ತಿಗಳ ಕಳವು

October 18, 2018

ಶ್ರವಣಬೆಳಗೊಳ: ಸಮೀಪದ ಜಿನನಾಥಪುರ ಗ್ರಾಮದ ಬಸದಿಯಲ್ಲಿ ಅಮೂಲ್ಯವಾದ ಪಂಚಲೋಹದ ಜಿನ ಮೂರ್ತಿಗಳ ಕಳವಾಗಿರುವ ಘಟನೆ ಸೋಮವಾರ ರಾತ್ರಿ ನಡೆದಿದೆ. ಚಂದ್ರಗಿರಿಯ ಚಿಕ್ಕಬೆಟ್ಟದ ಹಿಂಭಾಗ ದಲ್ಲಿರುವ ಜಿನನಾಥಪುರ ಗ್ರಾಮದಲ್ಲಿ ಗಂಗರ ಕಾಲದ ಪ್ರಾಚೀನ ಅರೆಗಲ್ ಪಾಶ್ರ್ವ ನಾಥ ಬಸದಿಯಲ್ಲಿ ಕಳ್ಳತನ ನಡೆದಿದ್ದು, ಕಿಟಕಿ ಕತ್ತರಿಸಿ ಒಳ ನುಗ್ಗಿರುವ ಕಳ್ಳರು ಜಿನಬಿಂಬಗಳನ್ನು ಕದ್ದೊಯ್ದಿದ್ದಾರೆ. 3 ಇಂಚಿನಿಂದ 24 ಇಂಚಿನವರೆಗಿನ ವಿವಿಧ ಅಳತೆಯ ಸುಮಾರು 22 ಮೂರ್ತಿ ಗಳ ಕಳ್ಳತನವಾಗಿದ್ದು, ಅವುಗಳಲ್ಲಿ ಪಾಶ್ರ್ವ ನಾಥಸ್ವಾಮಿ, ಅನಂತನಾಥಸ್ವಾಮಿ, 24 ತೀರ್ಥಂಕರರ ಪ್ರಭಾವಳಿಯಲ್ಲಿ ಇರಿಸಲಾ…

ಅಕ್ರಮ ಸಾಗಣೆ: ಇಬ್ಬರ ಬಂಧನ, 11 ಜಾನುವಾರಗಳ ರಕ್ಷಣೆ
ಹಾಸನ

ಅಕ್ರಮ ಸಾಗಣೆ: ಇಬ್ಬರ ಬಂಧನ, 11 ಜಾನುವಾರಗಳ ರಕ್ಷಣೆ

October 17, 2018

ಅರಸೀಕೆರೆ: ತಾಲೂಕಿನ ಕೆರೆಕೋಡಿಹಳ್ಳಿ ಬಳಿ ಟಾಟಾ ಗೂಡ್ಸ್ ವಾಹನದಲ್ಲಿ ಅಕ್ರಮವಾಗಿ ಕಸಾಯಿಖಾನೆಗೆ ಸಾಗಿಸುತ್ತಿದ್ದ ಜಾನುವಾರುಗಳನ್ನು ರಕ್ಷಿಸಿದ ಕಸಬಾ ಗ್ರಾಮಾಂತರ ಪೊಲೀಸರು ಇಬ್ಬರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಬೆಂಗಳೂರು ಮೂಲದ ಹಳೇಗುಡ್ಡದಹಳ್ಳಿಯ ಯೂಸೋಫ್ ಖಾನ್(32), ಆಲೀಫ್ ಖಾನ್(55) ಬಂಧಿತರು. ಈ ಇಬ್ಬರು ಸೋಮವಾರ ರಾತ್ರಿ 10.30ರಲ್ಲಿ ಚಿಕ್ಕಮಗಳೂರು ಜಿಲ್ಲೆ ಅಜ್ಜಂಪುರದ ವಾರದ ಸಂತೆಯಲ್ಲಿ ಹಸು-ಕರುಗಳು ಸೇರಿದಂತೆ ಒಟ್ಟು 11 ಜಾನುವಾರುಗಳನ್ನು ಖರೀದಿಸಿ ಬೆಂಗಳೂರಿಗೆ ಗೂಡ್ಸ್ ವಾಹನದಲ್ಲಿ ಸಾಗಿಸುತ್ತಿದ್ದರು. ಖಚಿತ ಮಾಹಿತಿ ಮೇರೆಗೆ ಕಸಬಾ ಗ್ರಾಮಾಂತರ ಪೊಲೀಸ್ ಠಾಣೆ…

ಮೋದಿ ಸ್ಪರ್ಧೆಯಿಂದ ರಾಜ್ಯ ಅಭಿವೃದ್ಧಿ ಆಗುತ್ತಾ?
ಹಾಸನ

ಮೋದಿ ಸ್ಪರ್ಧೆಯಿಂದ ರಾಜ್ಯ ಅಭಿವೃದ್ಧಿ ಆಗುತ್ತಾ?

October 14, 2018

ಅರಕಲಗೂಡು: ಕಳೆದ 4 ವರ್ಷಗಳಲ್ಲಿ ಕೇಂದ್ರದಿಂದ ಯಾವುದೇ ಅಭಿವೃದ್ಧಿ ಕಾಣದ ಕರ್ನಾಟಕ ರಾಜ್ಯ ಮೋದಿ ಸ್ಪರ್ಧೆಯಿಂದಾದರೂ ಅಭಿವೃದ್ಧಿ ಆಗುತ್ತಾ ನೋಡೋಣ ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಲೇವಡಿ ಮಾಡಿದ್ದಾರೆ. ಪಟ್ಟಣದ ದಸರಾ ಉದ್ಘಾಟನಾ ಕಾರ್ಯ ಕ್ರಮಕ್ಕೆ ಆಗಮಿಸಿದ ಸಂದರ್ಭದಲ್ಲಿ ರಾಜ್ಯದಿಂದ ಪ್ರಧಾನಿ ನರೇಂದ್ರ ಮೋದಿ ಸ್ಪರ್ಧೆ ವದಂತಿಗೆ ಪ್ರತಿಕ್ರಿಯಿಸಿ ಅವರು ಮಾತನಾಡಿದರು. ರಾಜ್ಯದ ಅಭಿವೃದ್ಧಿಯ ಬಗ್ಗೆ ಹಲವು ಬಾರಿ ಪ್ರಧಾನಿ ಮೋದಿ ಅವರಲ್ಲಿ ಮನವಿ ಮಾಡಲಾಗಿದೆ. ಆದರೆ ಯಾವುದೇ ಅಭಿವೃದ್ಧಿ ಕಾರ್ಯಗಳನ್ನೂ ಅವರು ಕೈಗೊಳ್ಳುತ್ತಿಲ್ಲ. ಅವರು ಲೋಕಸಭೆಗೆ…

1 75 76 77 78 79 103
Translate »