ಗೋಣಿಕೊಪ್ಪಲು: ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ಅವರ ಕನಸುಗಳು ಮತ್ತು ಸಂವಿಧಾನದಲ್ಲಿರುವ ಆಶಯಗಳು ಹಾಗೂ ಉದ್ದೇಶಗಳನ್ನು ಪೂರ್ಣ ಗೊಳಿಸಲು ಪ್ರತಿಯೊಬ್ಬರು ಕಡ್ಡಾಯವಾಗಿ ಮತದಾನದ ಹಕ್ಕನ್ನು ಚಲಾಯಿಸಬೇಕು ಎಂದು ಲೋಕೋಪಯೋಗಿ ಮಾಜಿ ಸಚಿವ ಎಚ್.ಸಿ.ಮಹದೇವಪ್ಪ ಕರೆ ನೀಡಿದರು. ಮೈತ್ರಿ ಪಕ್ಷದ ವತಿಯಿಂದ ಗೋಣಿ ಕೊಪ್ಪ ಸ್ವಾತಂತ್ರ್ಯ ಹೋರಾಟಗಾರರ ಭವ ನದಲ್ಲಿ ಆಯೋಜಿಸಿದ್ದ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗಗಳ ಪ್ರಚಾರ ಸಭೆ ಯಲ್ಲಿ ಮಾತನಾಡಿದ ಅವರು, ಸಂವಿ ಧಾನದ ಅಡಿಯಲ್ಲಿ ಆಡಳಿತ ನಡೆಸಲು ಎಲ್ಲರಿಗೂ ಮುಕ್ತ ಅವಕಾಶವಿದೆ. ಆದರೆ…
ನೆರೆ ಸಂತ್ರಸ್ತ ಕಾಲೂರು ಮಹಿಳೆಯರ ಛಲ ಶ್ಲಾಘನೀಯ
April 14, 2019ಮಡಿಕೇರಿ: ಪ್ರಕೃತಿ ವಿಕೋಪ ದಿಂದ ಸಂಕಷ್ಟ ಎದುರಿಸಿದ ಕೊಡಗಿನ ಗ್ರಾಮೀಣ ಪ್ರದೇಶದ ಜನತೆ, ಸಂಘಸಂಸ್ಥೆ ಗಳ ನೆರವಿನೊಂದಿಗೆ ಮತ್ತೆ ಸ್ವಾವಲಂಭಿ ಜೀವನಕ್ಕೆ ಮರಳುತ್ತಾರೆ ಎಂಬ ವಿಶ್ವಾಸವನ್ನು ದಕ್ಷಿಣ ಕನ್ನಡ ಕನ್ನಡಿಗರ ಸಂಘದ ಅಧ್ಯಕ್ಷ ರಾಮಚಂದ್ರ ಉಪಾಧ್ಯಾಯ ವ್ಯಕ್ತಪಡಿಸಿದ್ದಾರೆ. ಮಡಿಕೇರಿಯ ಶಿಶುಕಲ್ಯಾಣ ಸಂಸ್ಥೆಯ ಮುಂಬದಿ ಭಾರತೀಯ ವಿದ್ಯಾಭವನದ ಪ್ರಾಜೆಕ್ಟ್ ಕೂರ್ಗ್ನ ಯಶಸ್ವಿನಿ ಯೋಜನೆ ಯಡಿ ಕಾಲೂರು ಗ್ರಾಮದ ಮಹಿಳೆ ಯರು ತಯಾರಿಸಿದ ಮಸಾಲಾ ಪದಾರ್ಥ ಗಳ ಎರಡನೇ ಮಾರಾಟ ಮಳಿಗೆಯನ್ನು ಉದ್ಘಾಟಿಸಿ ಮಾತನಾಡಿದ ರಾಮಚಂದ್ರ ಉಪಾಧ್ಯಾಯ, ಕಾಲೂರು ಗ್ರಾಮದ…
ಸಿಎನ್ಸಿಯಿಂದ ಎಡಮ್ಯಾರ್ ಹೊಸ ವರ್ಷಾಚರಣೆ
April 14, 2019ಕುಶಾಲನಗರ: ಸಮೀಪದ ಚಿಕ್ಕ ಬೆಟ್ಟಗೇರಿ ಗ್ರಾಮದಲ್ಲಿ ಭಾನುವಾರ ಕೊಡವ ಪಂಚಾಂಗದ ಹೊಸವರ್ಷ ಎಡಮ್ಯಾರ್ ಅಂಗವಾಗಿ ಸಿಎನ್ಸಿ ಸಂಘಟನೆಯ ಆಶ್ರಯ ದಲ್ಲಿ ಭೂಮಿತಾಯಿ ಹಾಗೂ ಜಾನುವಾರು ಗಳಿಗೆ ಪೂಜೆ ಸಲ್ಲಿಸುವ ಮೂಲಕ ಜೋಡಿ ಎತ್ತುಗಳ ಮೂಲಕ ಗದ್ದೆಯಲ್ಲಿ ಉಳುಮೆ ಮಾಡಿ ಕೃಷಿಚಟುವಟಿಕೆಗೆ ಚಾಲನೆ ನೀಡಲಾಯಿತು. ಚಿಕ್ಕಬೆಟ್ಟಗೇರಿ ಗ್ರಾಮದ ನಂದಿನೆರವಂಡ ಉತ್ತಪ್ಪನವರ ಭತ್ತದ ಗದ್ದೆಯಲ್ಲಿ ಇಂದು ಬೆಳಿಗ್ಗೆ ಸಿಎನ್ಸಿ ಮುಖ್ಯಸ್ಥ ಎನ್.ಯು. ನಾಚಪ್ಪ ನೇತೃತ್ವದಲ್ಲಿ ಸಂಘಟನೆಯ ಕಾರ್ಯ ಕರ್ತರು ಕೊಡವರ ಸಂಪ್ರಾದಾಯಿಕದಂತೆ ಉಡುಗೆ ತೊಡುಗೆ ಧರಿಸಿ ಹೊಸ ವರ್ಷ ವನ್ನು…
ಚುನಾವಣಾ ಅಕ್ರಮಗಳಿಗೆ ಕಡಿವಾಣ ಹಾಕಲು ಸಿ-ವಿಜಿಲ್ ಆ್ಯಪ್ ಬಳಸಲು ಸಲಹೆ
April 11, 2019ಮಡಿಕೇರಿ: ಸಿ-ವಿಜಿಲ್ ಮೊಬೈಲ್ ಆ್ಯಪ್ ಸದ್ಬಳಕೆ ಮಾಡಿ ಕೊಂಡು ಚುನಾವಣಾ ಅಕ್ರಮಗಳಿಗೆ ಕಡಿವಾಣ ಹಾಕಲು ಸಾರ್ವಜನಿಕರು ಸಹ ಕರಿಸುವಂತೆ ಸ್ವೀಪ್ ಸಮಿತಿ ಅಧ್ಯಕ್ಷರಾದ ಕೆ.ಲಕ್ಷ್ಮಿಪ್ರಿಯಾ ಕೋರಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಹಣ, ಮದ್ಯ ಮತ್ತಿತರ ವಸ್ತುಗಳನ್ನು ಹಂಚಿ ಮತ ದಾರರಿಗೆ ಆಮಿಷ ಒಡ್ಡುವ ಪ್ರಕರಣಗಳನ್ನು ನಿಯಂತ್ರಿಸಲು ಚುನಾವಣಾ ಆಯೋಗ ಸಾರ್ವಜನಿಕ ಸ್ನೇಹಿ ಆ್ಯಪ್ ರೂಪಿಸಿದ್ದು, ಇದನ್ನು ಸದ್ಬಳಕೆ ಮಾಡಿಕೊಳ್ಳುವಂತಾಗ ಬೇಕು ಎಂದು ಅವರು ಹೇಳಿದರು. ಸಿ-ವಿಜಿಲ್ ಆ್ಯಪ್ನ ಮೂಲಕ ಚುನಾವಣಾ ಅಕ್ರಮಗಳ ಬಗ್ಗೆ ದೂರು ನೀಡಿದರೆ ಅಂಥ ವರ…
ಶಂಕಿತ ನಕ್ಸಲ್ ಮುಖಂಡ ರೂಪೇಶ್ ಕೋರ್ಟ್ಗೆ ಹಾಜರು
April 11, 2019ಮಡಿಕೇರಿ: ನಿಷೇಧಿತ ನಕ್ಸಲ್ ಸಂಘಟನೆಯ ಶಂಕಿತ ನಕ್ಸಲ್ ಮುಖಂಡ ರೂಪೇಶ್ನನ್ನು ಮಡಿಕೇರಿಯ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಹಾಜ ರುಪಡಿಸಲಾಯಿತು. ಮಡಿಕೇರಿ ಜಿಲ್ಲಾ ಕೇಂದ್ರ ಕಾರಾಗೃಹ ದಲ್ಲಿದ್ದ ರೂಪೇಶ್ನನ್ನು ಕೇರಳ ಭಯೋ ತ್ಪಾದಕ ನಿಗ್ರಹ ದಳ, ಕೇರಳ ಪೊಲೀಸರು ಮತ್ತು ಕೊಡಗು ಪೊಲೀಸ್ ಕಮಾಂ ಡೊಗಳು ಶಸ್ತ್ರಸಜ್ಜಿತರಾಗಿ ಬಿಗಿ ಭದ್ರತೆ ಯಲ್ಲಿ ನ್ಯಾಯಾಲಯಕ್ಕೆ ಕರೆತಂದರು. ಪೊಲೀಸ್ ವಾಹನದಿಂದ ಕೆಳಗಿಳಿಯುತ್ತಿ ದ್ದಂತೆಯೇ ನಕ್ಸಲ್ ಪರ ಘೋಷಣೆ ಕೂಗಿದ ರೂಪೇಶ್, ಲೋಕಸಭಾ ಚುನಾವಣೆಯನ್ನು ಬಹಿಷ್ಕರಿಸುವಂತೆ ಘೋಷಣೆ ಮೊಳಗಿಸಿ, ನ್ಯಾಯಾಲಯ ಆವರಣ…
ಹಾರಂಗಿ ನೀರು ಬಳಕೆದಾರರ ಮಹಾಮಂಡಲಕ್ಕೆ ಆಯ್ಕೆ
April 11, 2019ಕುಶಾಲನಗರ:ಕೊಡಗು, ಮೈಸೂರು ಹಾಗೂ ಹಾಸನ ಜಿಲ್ಲಾ ವ್ಯಾಪ್ತಿಯನ್ನು ಒಳಗೊಂಡಿರುವ ಹಾರಂಗಿ ಯೋಜನಾ ಮಟ್ಟದ ನೀರು ಬಳಕೆದಾರರ ಸಹಕಾರ ಸಂಘಗಳ ಮಹಾ ಮಂಡಳಿ ಮುಂದಿನ 5 ವರ್ಷಗಳ ಅವಧಿಗೆ ನೂತನ ಅಧ್ಯಕ್ಷ ರಾಗಿ 3ನೇ ಬಾರಿಗೆ ಅರಕಲಗೂಡು ತಾಲ್ಲೂಕಿನ ಸರಗೂರು ನೀರು ಬಳಕೆದಾರರ ಸಂಘದ ಪ್ರತಿನಿಧಿ ಎಸ್.ಸಿ.ಚೌಡೇಗೌಡ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇಲ್ಲಿನ ಹಾರಂಗಿ ಯೋಜನಾಮಟ್ಟದ ನೀರು ಬಳಕೆದಾರರ ಸಹಕಾರ ಸಂಘದ ಕಚೇರಿಯಲ್ಲಿ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಸರಗೂರು ನೀರು ಬಳಕೆದಾರರ ಸಂಘದ ಪ್ರತಿನಿಧಿ ಚೌಡೇಗೌಡ…
ಕೆಸರಿನಲ್ಲಿ ಸಿಲುಕಿದ ಗಜಪಡೆ ಪರದಾಟ
April 11, 2019ವಿರಾಜಪೇಟೆ: ವೀರಾಜಪೇಟೆ ಸಮೀಪದ ಪಾಲಂಗಾಲ ಗ್ರಾಮದಲ್ಲಿ ಮತ್ತೆ ಮರಿಯಾನೆ ಸೇರಿ ಒಟ್ಟು ಐದು ಕಾಡಾನೆ ಗಳು ಕೆರೆಯಲ್ಲಿ ಸಿಲುಕಿ ಪರಿತಪಿಸಿದ ಬಗ್ಗೆ ವರದಿಯಾಗಿದೆ. ಗ್ರಾಮದ ಕರಿನೆರವಂಡ ಅಯ್ಯಪ್ಪ ಅವರ ತೋಟದ ಕೆರೆ ನೀರು ಕುಡಿಯಲು ಬಂದ ಗಜಪಡೆ ಕೆಸರಿನಲ್ಲಿ ಸಿಲುಕಿ, ಮೇಲೆ ಬರಲಾಗದೆ ಒದ್ದಾಡು ವಂತಾಗಿತ್ತು. ಸುದ್ದಿ ತಿಳಿದು ಸ್ಥಳಕ್ಕಾಗಮಿ ಸಿದ ಅರಣ್ಯ ಇಲಾಖೆಯ ವಲಯಾಧಿ ಕಾರಿ ಗೋಪಾಲ್ ಹಾಗೂ ವನಪಾಲಕರು ಗಳು ಕೆರೆಯಿಂದ ಆನೆಯನ್ನು ಜೆಸಿಬಿ ಯಂತ್ರದ ಮೂಲಕ ಮೇಲೆ ತಂದರು. ಈ ವೇಳೆ ಗ್ರಾಮಸ್ಥರು…
ಲೋಕಸಭಾ ಚುನಾವಣೆಗೆ ಅಗತ್ಯ ಸಿದ್ಧತೆ
April 10, 2019ಮಡಿಕೇರಿ: ಏ.18 ರಂದು ನಡೆ ಯುವ ಲೋಕಸಭಾ ಚುನಾವಣೆಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾ ಧಿಕಾರಿ ಅನೀಸ್ ಕಣ್ಮಣಿ ಜಾಯ್ ತಿಳಿಸಿದ್ದಾರೆ. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂ ಗಣದಲ್ಲಿ ಮಂಗಳವಾರ ಜತೆ ನಡೆದ ಸುದ್ದಿ ಗೋಷ್ಠಿಯಲ್ಲಿ ಅವರು ಮಾತನಾಡಿದರು. ಕೊಡಗು ಜಿಲ್ಲೆಯ ಎರಡು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು 4,41,041 ಮತ ದಾರರಿದ್ದು, ಇವರಲ್ಲಿ 2,18,994 ಪುರು ಷರು ಮತ್ತು 2,22,025 ಮಹಿಳಾ ಮತ ದಾರರು ಹಾಗೂ 22 ಇತರೆ ಮತದಾರರು ಇದ್ದಾರೆ. ಹಾಗೆಯೇ 1,361…
ಗ್ರಾಮ ಪಂಚಾಯಿತಿ ನೌಕರರ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯ
April 10, 2019ಇಂದಿನಿಂದ ಅನಿರ್ಧಿಷ್ಟ ಕಾಲ ಧರಣಿ ಸಿದ್ದಾಪುರ: ತೆರಿಗೆ ಸಂಗ್ರಹದಲ್ಲಿ ಗ್ರಾಮ ಪಂಚಾಯಿತಿ ಸಿಬ್ಬಂದಿಗಳಿಗೆ ವೇತನ ಪಾವತಿ ಹಾಗೂ ಸರ್ಕಾರದ ಆದೇಶ ಗಳನ್ನು ಜಾರಿ ಮಾಡಲು ಒತ್ತಾಯಿಸಿ ನಾಳೆ(ಏ.10)ಯಿಂದ ಅನಿರ್ಧಿಷ್ಟ ಕಾಲ ಧರಣಿ ಸತ್ಯಾಗ್ರಹ ನಡೆಸುವುದಾಗಿ ಪಂಚಾಯತ್ ನೌಕರರ ಸಂಘದ ಜಿಲ್ಲಾ ಧ್ಯಕ್ಷ ಪಿ.ಆರ್.ಭರತ್ ತಿಳಿಸಿದ್ದಾರೆ. ಸಿದ್ದಾಪುರದಲ್ಲಿ ಕರೆದ ಪತ್ರಿಕಾಗೋಷ್ಠಿ ಯಲ್ಲಿ ಮಾತನಾಡಿ, ಗ್ರಾಮ ಪಂಚಾಯಿ ತಿಗಳಲ್ಲಿ ದುಡಿಯುತ್ತಿರುವ ನೌಕರರಿಗೆ ಮೂಲ ಸೌಕರ್ಯಗಳೊಂದಿಗೆ ಸರ್ಕಾರ ಆದೇಶಿಸಿದ ವೇತನವನ್ನು ನೀಡಬೇಕೆಂದು ಒತ್ತಾಯಿಸಿ ರಾಜ್ಯಾದ್ಯಂತ ಅನಿರ್ಧಿಷ್ಟ ಕಾಲ ಸತ್ಯಾಗ್ರಹ ನಡೆಯಲಿದ್ದು, ಜಿಲ್ಲೆಯ…
ಗೊಂದಿಬಸವನಹಳ್ಳಿಯಲ್ಲಿ ಜಲ ಜಾಗೃತಿ ಆಂದೋಲನ
April 10, 2019ಕುಶಾಲನಗರ: ಬೆಳಗಾವಿ ತಾಂತ್ರಿಕ ವಿಶ್ವೇಶ್ವರಯ್ಯ ವಿಶ್ವವಿದ್ಯಾನಿಲಯ ಹಾಗೂ ಕುಶಾಲನಗರ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ವತಿಯಿಂದ ‘ಸದೃಢ ಭಾರತಕ್ಕಾಗಿ ಆರೋಗ್ಯ ವಂತ ಯುವಜನತೆ’ ಎಂಬ ಕೇಂದ್ರ ವಿಷಯ ದಡಿ ಇಲ್ಲಿಗೆ ಸಮೀಪದ ಗೊಂದಿ ಬಸವನ ಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಯಲ್ಲಿ ಏರ್ಪಡಿಸಿದ್ದ ಎನ್.ಎಸ್.ಎಸ್. ವಾರ್ಷಿಕ ವಿಶೇಷ ಶಿಬಿರದಲ್ಲಿ ಶಾಲೆಯ ಇಕೋ ಕ್ಲಬ್ ಆಶ್ರಯದಲ್ಲಿ ಜಲ ವರ್ಷಾ ಚರಣೆ ಹಾಗೂ ವಿಶ್ವ ಜಲ ದಿನದ ಅಂಗ ವಾಗಿ (Theme of Water day…